<p><strong>ಚಿತ್ತಾಪುರ: </strong>`ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಮಸ್ಥರ ಅನೇಕ ಪಡಿತರ ಚೀಟಿಗಳನ್ನು ತನ್ನ ಬಳಿಯೆ ಇಟ್ಟುಕೊಂಡಿದ್ದಾರೆ. ಪಡಿತರ ಆಹಾರ ಧಾನ್ಯ ಒಂದೇ ದಿನ ವಿತರಣೆ ಮಾಡಿ ಅಂಗಡಿ ಬಂದ್ ಮಾಡುತ್ತಾರೆ. ಇದರಿಂದ ಗ್ರಾಮದ ಜನರಿಗೆ ಸರ್ಕಾರದ ಪಡಿತರ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ~ ಎಂದು ತಾಲ್ಲೂಕಿನ ಕಾಟಮ್ಮದೇವರ ಹಳ್ಳಿ ಗ್ರಾಮಸ್ಥರು ತಹಶೀಲ್ದಾರ್ರನ್ನು ಕಂಡು ದೂರಿದ್ದಾರೆ. <br /> <br /> ಗ್ರಾಮದ ಹೊಲದಲ್ಲಿ ಈಚೆಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಶ್ರೀಮಂತ ದಂಡನಾಯಕ ಅವರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ ಮಾಡಲು ಶುಕ್ರವಾರ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್ ಬಾಲರಾಜ್ ಅವರ ವಾಹನದ ಬಳಿ ಸೇರಿದ್ದ ಗ್ರಾಮಸ್ಥರು, `ಗ್ರಾಮದಲ್ಲಿ ಪಡಿತರ ಸೌಲಭ್ಯ ಸಿಗುತ್ತಿಲ್ಲ, ವ್ಯವಸ್ಥೆ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು.<br /> <br /> `ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದವರು ಗ್ರಾಮದಲ್ಲಿ ಇರುವುದಿಲ್ಲ. ತಿಂಗಳಿಗೆ ಒಂದು ದಿನ ಮಾತ್ರ ಬಂದು ಜನರಿಗೆ ಒಂದೇ ದಿನ ಆಹಾರ ಧಾನ್ಯ ವಿತರಣೆ ಮಾಡಿ ಕೈತೊಳೆದುಕೊಳ್ಳುತ್ತಾರೆ. ಹೀಗಾಗಿ ಜನರಿಗೆ ಪಡಿತರ ಕಾಳುಕಡಿ ಸಿಗುತ್ತಿಲ್ಲ. ಸೀಮೆ ಎಣ್ಣೆಯೂ ದುರ್ಲಭ~ ಎಂದು ಗ್ರಾಮದ ಬಿಜೆಪಿ ಯುವ ಮುಖಂಡ ಮತ್ತು ಪೇಠಶಿರೂರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ ಯಾಗಾಪುರ ಅವರು ತಹಶೀಲ್ದಾರ್ ಅವರ ಗಮನಕ್ಕೆ ತಂದರು.<br /> <br /> `ನ್ಯಾಯಬೆಲೆ ಅಂಗಡಿಯವರನ್ನು ಕೇಳಿದರೆ, ನೀವು ಎಲ್ಲಿ ಬೇಕಾದರೂ ಹೋಗಿ ದೂರು ಕೊಡಿ ಎಂದು ಜನರನ್ನೆ ಹೆದರಿಸುತ್ತಾರೆ. ಪಡಿತರ ಚೀಟಿ ಕೇಳಿದರೆ ಬಂದಿಲ್ಲ ಎನ್ನುತ್ತಾರೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಪಡಿತರ ಚೀಟಿ ಇಲ್ಲದೆ ಜನರು ಸರ್ಕಾರದ ಅನೇಕ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಸೂಕ್ತ ಕ್ರಮ ಕೈಗೊಂಡು ಗ್ರಾಮದ ಜನರಿಗೆ ನ್ಯಾಯ ಒದಗಿಸಬೇಕು~ ಎಂದು ಶಿವಕುಮಾರ ಆಗ್ರಹಿಸಿದರು.</p>.<p><br /> <strong>ಪರವಾನಗಿ ರದ್ದು ಮಾಡುವ ಎಚ್ಚರಿಕೆ:</strong> ಗ್ರಾಮಸ್ಥರ ದೂರನ್ನು ಕೇಳಿದ ತಹಶೀಲ್ದಾರ್ ಬಾಲರಾಜ್ ಅವರು, ದೂರವಾಣಿ ಮೂಲಕ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಸಂಪರ್ಕಿಸಿ, `ನಿಮ್ಮ ವಿರುದ್ಧ ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಬಂದಿವೆ. ಸರ್ಕಾರದ ಪಡಿತರ ಸೌಲಭ್ಯ ಜನರಿಗೆ ಸರಿಯಾಗಿ ತಲುಪಬೇಕು. ಇಲ್ಲದಿದ್ದರೆ ನಿಮ್ಮ ಪರವಾನಗಿ ರದ್ದು ಮಾಡುವಂತೆ ಮೇಲಾಧಿಕಾರಿಗಳಿಗೆ ವರದಿ ಕಳಿಸುತ್ತೇನೆ~ ಎಂದು ಎಚ್ಚರಿಸಿದರು.<br /> ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭಾಗಣ್ಣಗೌಡ, ನಾಗಯ್ಯಾ ಸ್ವಾಮಿ, ಗ್ರಾಮ ಲೇಖಪಾಲಕ ಮನು ವ್ಯಾಸ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ತಾಪುರ: </strong>`ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಮಸ್ಥರ ಅನೇಕ ಪಡಿತರ ಚೀಟಿಗಳನ್ನು ತನ್ನ ಬಳಿಯೆ ಇಟ್ಟುಕೊಂಡಿದ್ದಾರೆ. ಪಡಿತರ ಆಹಾರ ಧಾನ್ಯ ಒಂದೇ ದಿನ ವಿತರಣೆ ಮಾಡಿ ಅಂಗಡಿ ಬಂದ್ ಮಾಡುತ್ತಾರೆ. ಇದರಿಂದ ಗ್ರಾಮದ ಜನರಿಗೆ ಸರ್ಕಾರದ ಪಡಿತರ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ~ ಎಂದು ತಾಲ್ಲೂಕಿನ ಕಾಟಮ್ಮದೇವರ ಹಳ್ಳಿ ಗ್ರಾಮಸ್ಥರು ತಹಶೀಲ್ದಾರ್ರನ್ನು ಕಂಡು ದೂರಿದ್ದಾರೆ. <br /> <br /> ಗ್ರಾಮದ ಹೊಲದಲ್ಲಿ ಈಚೆಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಶ್ರೀಮಂತ ದಂಡನಾಯಕ ಅವರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ ಮಾಡಲು ಶುಕ್ರವಾರ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್ ಬಾಲರಾಜ್ ಅವರ ವಾಹನದ ಬಳಿ ಸೇರಿದ್ದ ಗ್ರಾಮಸ್ಥರು, `ಗ್ರಾಮದಲ್ಲಿ ಪಡಿತರ ಸೌಲಭ್ಯ ಸಿಗುತ್ತಿಲ್ಲ, ವ್ಯವಸ್ಥೆ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದರು.<br /> <br /> `ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದವರು ಗ್ರಾಮದಲ್ಲಿ ಇರುವುದಿಲ್ಲ. ತಿಂಗಳಿಗೆ ಒಂದು ದಿನ ಮಾತ್ರ ಬಂದು ಜನರಿಗೆ ಒಂದೇ ದಿನ ಆಹಾರ ಧಾನ್ಯ ವಿತರಣೆ ಮಾಡಿ ಕೈತೊಳೆದುಕೊಳ್ಳುತ್ತಾರೆ. ಹೀಗಾಗಿ ಜನರಿಗೆ ಪಡಿತರ ಕಾಳುಕಡಿ ಸಿಗುತ್ತಿಲ್ಲ. ಸೀಮೆ ಎಣ್ಣೆಯೂ ದುರ್ಲಭ~ ಎಂದು ಗ್ರಾಮದ ಬಿಜೆಪಿ ಯುವ ಮುಖಂಡ ಮತ್ತು ಪೇಠಶಿರೂರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ ಯಾಗಾಪುರ ಅವರು ತಹಶೀಲ್ದಾರ್ ಅವರ ಗಮನಕ್ಕೆ ತಂದರು.<br /> <br /> `ನ್ಯಾಯಬೆಲೆ ಅಂಗಡಿಯವರನ್ನು ಕೇಳಿದರೆ, ನೀವು ಎಲ್ಲಿ ಬೇಕಾದರೂ ಹೋಗಿ ದೂರು ಕೊಡಿ ಎಂದು ಜನರನ್ನೆ ಹೆದರಿಸುತ್ತಾರೆ. ಪಡಿತರ ಚೀಟಿ ಕೇಳಿದರೆ ಬಂದಿಲ್ಲ ಎನ್ನುತ್ತಾರೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಪಡಿತರ ಚೀಟಿ ಇಲ್ಲದೆ ಜನರು ಸರ್ಕಾರದ ಅನೇಕ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಸೂಕ್ತ ಕ್ರಮ ಕೈಗೊಂಡು ಗ್ರಾಮದ ಜನರಿಗೆ ನ್ಯಾಯ ಒದಗಿಸಬೇಕು~ ಎಂದು ಶಿವಕುಮಾರ ಆಗ್ರಹಿಸಿದರು.</p>.<p><br /> <strong>ಪರವಾನಗಿ ರದ್ದು ಮಾಡುವ ಎಚ್ಚರಿಕೆ:</strong> ಗ್ರಾಮಸ್ಥರ ದೂರನ್ನು ಕೇಳಿದ ತಹಶೀಲ್ದಾರ್ ಬಾಲರಾಜ್ ಅವರು, ದೂರವಾಣಿ ಮೂಲಕ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಸಂಪರ್ಕಿಸಿ, `ನಿಮ್ಮ ವಿರುದ್ಧ ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಬಂದಿವೆ. ಸರ್ಕಾರದ ಪಡಿತರ ಸೌಲಭ್ಯ ಜನರಿಗೆ ಸರಿಯಾಗಿ ತಲುಪಬೇಕು. ಇಲ್ಲದಿದ್ದರೆ ನಿಮ್ಮ ಪರವಾನಗಿ ರದ್ದು ಮಾಡುವಂತೆ ಮೇಲಾಧಿಕಾರಿಗಳಿಗೆ ವರದಿ ಕಳಿಸುತ್ತೇನೆ~ ಎಂದು ಎಚ್ಚರಿಸಿದರು.<br /> ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭಾಗಣ್ಣಗೌಡ, ನಾಗಯ್ಯಾ ಸ್ವಾಮಿ, ಗ್ರಾಮ ಲೇಖಪಾಲಕ ಮನು ವ್ಯಾಸ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>