<p>ಮೇಲುಕೋಟೆ : ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಪಂಚೆ, ತುಳಸಿ ಮಾಲೆಗಳನ್ನೊಳಗೊಂಡ ಶೇಷಪ್ರಸಾದವನ್ನು ಸ್ಥಾನೀಕರಾದ ನಾಗರಾಜ ಅಯ್ಯಂಗಾರ್, ಕರಗಂ ನಾರಾಯಣ ಐಯ್ಯಂಗಾರ್ ಮತ್ತು ಅರ್ಚಕ ಕೃಷ್ಣಸ್ವಾಮಿ ಭಟ್ ಅವರು ಕೊಂಡೊಯ್ದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪಾರ್ಥಿವ ಶರೀರಕ್ಕೆ ವೇದಘೋಷಗಳ ನಡುವೆ ಬುಧವಾರ ಅರ್ಪಿಸಿದರು.<br /> <br /> ಯದುವಂಶದ ಕುಲದೈವ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಮೈಸೂರು ಮಹಾರಾಜರಿಗೆ ಮಾತ್ರ ಸಲ್ಲುವ ಈ ಮಹಾಪ್ರಸಾದವನ್ನು ದೇವಾಲಯದ ವತಿಯಿಂದ ಕಳುಹಿಸಿಕೊಡಲಾಯಿತು.<br /> <br /> ಪಾಂಡವಪುರ ಉಪವಿಭಾಗಧಿಕಾರಿ ವಾಣಿ ಮತ್ತು ತಹಶೀಲ್ದಾರ್ ಶಿವಕುಮಾರಸ್ವಾಮಿ ಸಹ ಈ ವೇಳೆ ಹಾಜರಿದ್ದು, ದೇವಾಲಯದ ಅನೂಚಾನ ಪರಂಪರೆ ಅನುಷ್ಠಾನಕ್ಕೆ ನೇತೃತ್ವ ವಹಿಸಿದ್ದರು. ಶ್ರೀಚೆಲುವನಾರಾಯಣಸ್ವಾಮಿಯ ದೇವಾಲಯದ ಶೇಷವಸ್ತ್ರವನ್ನು ಬೆಳ್ಳಿಪಲ್ಲಕ್ಕಿಯಲ್ಲಿ ಸಾಗಿದ ಅಂತಿಮ ಯಾತ್ರೆಯ ವೇಳೆ ಒಡೆಯರ್ ಪಾರ್ಥಿವ ಶರೀರಕ್ಕೆ ಹೊದಿಸಲಾಗಿತ್ತು. <br /> <br /> ಒಡೆಯರ್ ಹೆಸರಲ್ಲಿ ಪೂಜೆ : ಚೆಲುವನಾರಾಯಣಸ್ವಾಮಿಗೆ ನಡೆದ ಬೆಳಗಿನ ಸಹಸ್ರನಾಮ ಪೂಜೆಯ ವೇಳೆ ಅನೂಚಾನ ಪದ್ಧತಿಯಂತೆ ಮೈಸೂರು ಮಹಾಸಂಸ್ಥಾನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಅವರ ಅಗಲಿಕೆಯ ನೋವು ತಡೆದುಕೊಳ್ಳವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಸಂಕಲ್ಪಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.<br /> <br /> ಈ ಸಂದರ್ಭದಲ್ಲಿ ದೇಗುಲದ ಅರ್ಚಕರಾದ ವಿದ್ವಾನ್ ಆನಂದಾಳ್ವಾರ್, ನಾರಾಯಣಭಟ್ಟರ್, ಪರಿಚಾರಕ ಪಾರ್ಥಸಾರಥಿ, ಸ್ಥಾನೀಕರಾದ ತಿರುನಾದರಾಯಣ ಅಯ್ಯಂಗಾರ್, ಶ್ರೀರಾಮನ್, ಪ್ರಸನ್ನ, ಶ್ರೀನಿವಾಸನರಸಿಂಹನ್ ಮುಂತಾದ ಸಿಬ್ಬಂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೇಲುಕೋಟೆ : ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಪಂಚೆ, ತುಳಸಿ ಮಾಲೆಗಳನ್ನೊಳಗೊಂಡ ಶೇಷಪ್ರಸಾದವನ್ನು ಸ್ಥಾನೀಕರಾದ ನಾಗರಾಜ ಅಯ್ಯಂಗಾರ್, ಕರಗಂ ನಾರಾಯಣ ಐಯ್ಯಂಗಾರ್ ಮತ್ತು ಅರ್ಚಕ ಕೃಷ್ಣಸ್ವಾಮಿ ಭಟ್ ಅವರು ಕೊಂಡೊಯ್ದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪಾರ್ಥಿವ ಶರೀರಕ್ಕೆ ವೇದಘೋಷಗಳ ನಡುವೆ ಬುಧವಾರ ಅರ್ಪಿಸಿದರು.<br /> <br /> ಯದುವಂಶದ ಕುಲದೈವ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಿಂದ ಮೈಸೂರು ಮಹಾರಾಜರಿಗೆ ಮಾತ್ರ ಸಲ್ಲುವ ಈ ಮಹಾಪ್ರಸಾದವನ್ನು ದೇವಾಲಯದ ವತಿಯಿಂದ ಕಳುಹಿಸಿಕೊಡಲಾಯಿತು.<br /> <br /> ಪಾಂಡವಪುರ ಉಪವಿಭಾಗಧಿಕಾರಿ ವಾಣಿ ಮತ್ತು ತಹಶೀಲ್ದಾರ್ ಶಿವಕುಮಾರಸ್ವಾಮಿ ಸಹ ಈ ವೇಳೆ ಹಾಜರಿದ್ದು, ದೇವಾಲಯದ ಅನೂಚಾನ ಪರಂಪರೆ ಅನುಷ್ಠಾನಕ್ಕೆ ನೇತೃತ್ವ ವಹಿಸಿದ್ದರು. ಶ್ರೀಚೆಲುವನಾರಾಯಣಸ್ವಾಮಿಯ ದೇವಾಲಯದ ಶೇಷವಸ್ತ್ರವನ್ನು ಬೆಳ್ಳಿಪಲ್ಲಕ್ಕಿಯಲ್ಲಿ ಸಾಗಿದ ಅಂತಿಮ ಯಾತ್ರೆಯ ವೇಳೆ ಒಡೆಯರ್ ಪಾರ್ಥಿವ ಶರೀರಕ್ಕೆ ಹೊದಿಸಲಾಗಿತ್ತು. <br /> <br /> ಒಡೆಯರ್ ಹೆಸರಲ್ಲಿ ಪೂಜೆ : ಚೆಲುವನಾರಾಯಣಸ್ವಾಮಿಗೆ ನಡೆದ ಬೆಳಗಿನ ಸಹಸ್ರನಾಮ ಪೂಜೆಯ ವೇಳೆ ಅನೂಚಾನ ಪದ್ಧತಿಯಂತೆ ಮೈಸೂರು ಮಹಾಸಂಸ್ಥಾನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಅವರ ಅಗಲಿಕೆಯ ನೋವು ತಡೆದುಕೊಳ್ಳವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಸಂಕಲ್ಪಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.<br /> <br /> ಈ ಸಂದರ್ಭದಲ್ಲಿ ದೇಗುಲದ ಅರ್ಚಕರಾದ ವಿದ್ವಾನ್ ಆನಂದಾಳ್ವಾರ್, ನಾರಾಯಣಭಟ್ಟರ್, ಪರಿಚಾರಕ ಪಾರ್ಥಸಾರಥಿ, ಸ್ಥಾನೀಕರಾದ ತಿರುನಾದರಾಯಣ ಅಯ್ಯಂಗಾರ್, ಶ್ರೀರಾಮನ್, ಪ್ರಸನ್ನ, ಶ್ರೀನಿವಾಸನರಸಿಂಹನ್ ಮುಂತಾದ ಸಿಬ್ಬಂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>