<p><strong>ಶನಿವಾರಸಂತೆ</strong>: ಮಾರುಕಟ್ಟೆಯಲ್ಲಿ ಈಗ ಅತ್ಯಾಧುನಿಕ ವಿದ್ಯುತ್ ಉಪಕರಣಗಳು ಲಗ್ಗೆ ಇಟ್ಟಿವೆ. ಆಕರ್ಷಕ ಮಿಕ್ಸಿ, ಗ್ರೈಂಡರ್ಗಳು ಸ್ಪರ್ಧೆಗಿಳಿದಿವೆ.<br /> <br /> ಈ ಸ್ಪರ್ಧೆಯ ನಡುವೆಯೂ ಶನಿವಾರಸಂತೆಯಲ್ಲಿ 3 ತಿಂಗಳಿನಿಂದ ಒರಳುಕಲ್ಲುಗಳ ವ್ಯಾಪಾರ ಭರದಿಂದ ಸಾಗಿದೆ.<br /> <br /> ಕೇರಳದ ಮಲಪುರಂನಿಂದ ಬಂದಿರುವ ಒರಳುಕಲ್ಲು ಕೆತ್ತನೆಯ ಕುಮಾರ್-ಜಯಾ ದಂಪತಿ ಮೂರು ತಿಂಗಳಿನಿಂದ ಪಟ್ಟಣದಲ್ಲಿ ಟೆಂಟ್ ಕಟ್ಟಿಕೊಂಡು ಜನರ ಬೇಡಿಕೆಗೆ ತಕ್ಕಂತೆ ಕೆತ್ತನೆ ಮಾಡಿ ನೀಡುತ್ತಿದ್ದಾರೆ.<br /> <br /> ಆಧುನಿಕ ಪದ್ಧತಿಗೆ ಜನ ಮಾರು ಹೋಗಿದ್ದರೂ ಮಂದಿ ವಿದ್ಯುತ್ ಕೊರತೆಯ ಸಮಸ್ಯೆಯಿಂದಾಗಿ ಮತ್ತೆ ಹಳೇ ಪದ್ಧತಿಯನ್ನೇ ಅನುಸರಿಸಬೇಕಾದ್ದು ಅನಿವಾರ್ಯವಾಗಿದೆ. ಒರಳುಕಲ್ಲಿನಲ್ಲಿ ರುಬ್ಬಿದ ಹಿಟ್ಟು, ಚಟ್ನಿ, ಖಾರ ಮೊದಲಾದ ಅಡುಗೆ ಬಹಳ ರುಚಿಯಾಗಿರುತ್ತದೆ. ಮನೆಯಲ್ಲೊಂದು ಒರಳುಕಲ್ಲಿದ್ದರೆ ಲಕ್ಷ್ಮಿ ಇದ್ದಂತೆ ಎಂಬ ನಂಬಿಕೆ ಕೆಲವರಲ್ಲಿದೆ.<br /> <br /> ಪಟ್ಟಣದಲ್ಲಿ ಇದನ್ನು ಕೊಳ್ಳುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರ ಬೇಡಿಕೆಗೆ ಅನುಗುಣವಾಗಿ ಕೇರಳದಿಂದ ಕಲ್ಲುಗಳನ್ನು ತರಿಸಲಾಗುತ್ತಿದೆ. ಒಂದು ಲೋಡ್ ಕಲ್ಲು ಲಾರಿಯಲ್ಲಿ ಕೇರಳದಿಂದ ಬರುತ್ತದೆ. 200 ಕಲ್ಲುಗಳಿರುವ ಲೋಡಿಗೆ ರೂ. 30 ಸಾವಿರ ರೂಪಾಯಿ. ತಿಂಗಳಿಗೆ ಈ ದಂಪತಿ 10-15 ಕಲ್ಲುಗಳನ್ನು ಕೆತ್ತುತ್ತಾರೆ. ಔಷಧ ಅರೆಯವ ಪುಟ್ಟ ಕಲ್ಲಿಗೆ ರೂ 350, ದೊಡ್ಡಕಲ್ಲಿಗೆ ರೂ 1,500ರಿಂದ ರೂ 2,500ರವರೆಗೆ ಬೆಲೆ ಇದೆ. ತಿಂಗಳಿಗೆ 10 ಕಲ್ಲಂತೂ ಮಾರಾಟವಾಗುತ್ತದೆ ಎನ್ನುತ್ತಾರೆ ಕುಮಾರ್.<br /> <br /> ಬೇಡಿಕೆ ಅಪಾರವಿದ್ದರೂ ಕಲ್ಲುಗಳನ್ನು ಕೇರಳದಿಂದಲೇ ತರಿಸಬೇಕಾಗುತ್ತದೆ. ಇದರಿಂದ ಖರ್ಚು ಜಾಸ್ತಿಯಾಗುತ್ತದೆ. ಬಂದ ಹಣದಿಂದಲೇ ಕುಮಾರ್-ಜಯಾ ದಂಪತಿಯ ಜೀವನ ನಿರ್ವಹಣೆ ನಡೆಯುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ</strong>: ಮಾರುಕಟ್ಟೆಯಲ್ಲಿ ಈಗ ಅತ್ಯಾಧುನಿಕ ವಿದ್ಯುತ್ ಉಪಕರಣಗಳು ಲಗ್ಗೆ ಇಟ್ಟಿವೆ. ಆಕರ್ಷಕ ಮಿಕ್ಸಿ, ಗ್ರೈಂಡರ್ಗಳು ಸ್ಪರ್ಧೆಗಿಳಿದಿವೆ.<br /> <br /> ಈ ಸ್ಪರ್ಧೆಯ ನಡುವೆಯೂ ಶನಿವಾರಸಂತೆಯಲ್ಲಿ 3 ತಿಂಗಳಿನಿಂದ ಒರಳುಕಲ್ಲುಗಳ ವ್ಯಾಪಾರ ಭರದಿಂದ ಸಾಗಿದೆ.<br /> <br /> ಕೇರಳದ ಮಲಪುರಂನಿಂದ ಬಂದಿರುವ ಒರಳುಕಲ್ಲು ಕೆತ್ತನೆಯ ಕುಮಾರ್-ಜಯಾ ದಂಪತಿ ಮೂರು ತಿಂಗಳಿನಿಂದ ಪಟ್ಟಣದಲ್ಲಿ ಟೆಂಟ್ ಕಟ್ಟಿಕೊಂಡು ಜನರ ಬೇಡಿಕೆಗೆ ತಕ್ಕಂತೆ ಕೆತ್ತನೆ ಮಾಡಿ ನೀಡುತ್ತಿದ್ದಾರೆ.<br /> <br /> ಆಧುನಿಕ ಪದ್ಧತಿಗೆ ಜನ ಮಾರು ಹೋಗಿದ್ದರೂ ಮಂದಿ ವಿದ್ಯುತ್ ಕೊರತೆಯ ಸಮಸ್ಯೆಯಿಂದಾಗಿ ಮತ್ತೆ ಹಳೇ ಪದ್ಧತಿಯನ್ನೇ ಅನುಸರಿಸಬೇಕಾದ್ದು ಅನಿವಾರ್ಯವಾಗಿದೆ. ಒರಳುಕಲ್ಲಿನಲ್ಲಿ ರುಬ್ಬಿದ ಹಿಟ್ಟು, ಚಟ್ನಿ, ಖಾರ ಮೊದಲಾದ ಅಡುಗೆ ಬಹಳ ರುಚಿಯಾಗಿರುತ್ತದೆ. ಮನೆಯಲ್ಲೊಂದು ಒರಳುಕಲ್ಲಿದ್ದರೆ ಲಕ್ಷ್ಮಿ ಇದ್ದಂತೆ ಎಂಬ ನಂಬಿಕೆ ಕೆಲವರಲ್ಲಿದೆ.<br /> <br /> ಪಟ್ಟಣದಲ್ಲಿ ಇದನ್ನು ಕೊಳ್ಳುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರ ಬೇಡಿಕೆಗೆ ಅನುಗುಣವಾಗಿ ಕೇರಳದಿಂದ ಕಲ್ಲುಗಳನ್ನು ತರಿಸಲಾಗುತ್ತಿದೆ. ಒಂದು ಲೋಡ್ ಕಲ್ಲು ಲಾರಿಯಲ್ಲಿ ಕೇರಳದಿಂದ ಬರುತ್ತದೆ. 200 ಕಲ್ಲುಗಳಿರುವ ಲೋಡಿಗೆ ರೂ. 30 ಸಾವಿರ ರೂಪಾಯಿ. ತಿಂಗಳಿಗೆ ಈ ದಂಪತಿ 10-15 ಕಲ್ಲುಗಳನ್ನು ಕೆತ್ತುತ್ತಾರೆ. ಔಷಧ ಅರೆಯವ ಪುಟ್ಟ ಕಲ್ಲಿಗೆ ರೂ 350, ದೊಡ್ಡಕಲ್ಲಿಗೆ ರೂ 1,500ರಿಂದ ರೂ 2,500ರವರೆಗೆ ಬೆಲೆ ಇದೆ. ತಿಂಗಳಿಗೆ 10 ಕಲ್ಲಂತೂ ಮಾರಾಟವಾಗುತ್ತದೆ ಎನ್ನುತ್ತಾರೆ ಕುಮಾರ್.<br /> <br /> ಬೇಡಿಕೆ ಅಪಾರವಿದ್ದರೂ ಕಲ್ಲುಗಳನ್ನು ಕೇರಳದಿಂದಲೇ ತರಿಸಬೇಕಾಗುತ್ತದೆ. ಇದರಿಂದ ಖರ್ಚು ಜಾಸ್ತಿಯಾಗುತ್ತದೆ. ಬಂದ ಹಣದಿಂದಲೇ ಕುಮಾರ್-ಜಯಾ ದಂಪತಿಯ ಜೀವನ ನಿರ್ವಹಣೆ ನಡೆಯುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>