<p><strong>ಮೈಸೂರು:</strong> `ಕವಿಗಳಿಗೆ ಕನಸುಗಳಿವೆ, ಆದರೆ ಅಧಿಕಾರವಿಲ್ಲ. ರಾಜಕಾರಣಿಗಳಿಗೆ ಅಧಿಕಾರವಿದೆ, ಕನಸುಗಳೇ ಇಲ್ಲ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಶನಿವಾರ ಮಾರ್ಮಿಕವಾಗಿ ಹೇಳಿದರು.<br /> <br /> ದಸರಾ ಕವಿಗೋಷ್ಠಿ ಉಪಸಮಿತಿಯು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿದ ಅವರು ಕೊನೆಯಲ್ಲಿ ಸಭಿಕರ ಒತ್ತಾಯದಿಂದಾಗಿ `ಮರತೇನಂದರ ಮರೆಯಲಿ ಹ್ಯಾಂಗ, ಮಾವೋತ್ಸೇತುಂಗ~ ಎನ್ನುವ ತಮ್ಮ ಕವಿತೆಯನ್ನು ಹಾಡುವ ಮುನ್ನ ಪೂಕರವಾಗಿ ಮೇಲಿನ ಮಾತುಗಳನ್ನಾಡಿದರು. ಇದಕ್ಕೆ ಸಭಿಕರಿಂದ ದೊಡ್ಡ ಚಪ್ಪಾಳೆ ಸಿಕ್ಕಿತು. ವೇದಿಕೆಯಲ್ಲಿದ್ದ ರಾಜಕಾರಣಿಗಳು ಮಾತ್ರ ಪೆಚ್ಚು ಮೋರೆ ಹಾಕಿದರು.<br /> <br /> ಮಾತು ಮುಂದುವರಿಸಿದ ಕಂಬಾರರು `ಕವಿಗಳಲ್ಲಿ ಕನಸುಗಳಿವೆ, ಅಧಿಕಾರವಿಲ್ಲ. ಇದರಿಂದ ಕವಿಗಳು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಆದರೆ ರಾಜಕಾರಣಿಗಳ ಬಳಿ ಅಧಿಕಾರವಿದೆ, ಅವರಿಗೆ ಕನಸುಗಳು ಇಲ್ಲದಿರುವುದರಿಂದ ಉಪಯೋಗವಾಗುತ್ತಿಲ್ಲ. ಆದರೆ ಮಾವೋತ್ಸೆತುಂಗ್ನ ಬಳಿ ಕನಸುಗಳೂ ಇದ್ದವು, ಅಧಿಕಾರವೂ ಇತ್ತು. ಆದರೆ ಆತನಿಂದಲೂ ಏನನ್ನೂ ಮಾಡಲಾಗಲಿಲ್ಲ~ ಎಂದರು.<br /> <br /> ಮುಖ್ಯ ಅತಿಥಿಯಾಗಿದ್ದ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಚಂದ್ರಶೇಖರ ಕಂಬಾರರ ಮಾತನ್ನು ಅನುಮೋದಿಸುವಂತೆ ಮಾತನಾಡಿ, `ನಮ್ಮ ಬಹುತೇಕ ರಾಜಕಾರಣಿಗಳು ಕನಸಿನ ಪೂರ್ವ ಸ್ಥಿತಿ (ನಿದ್ರೆ)ಯಲ್ಲಿದ್ದಾರೆ. ಸಭೆ, ಸಮಾರಂಭ, ವಿಧಾನಸಭೆ, ಸಂಸತ್ನಲ್ಲಿ ನಿದ್ರಿಸುತ್ತಿರುತ್ತಾರೆ. ರಾಜಕಾರಣಿಗಳಿಗೆ ಅಲ್ಲಿಯಾದರೂ ಕನಸುಗಳು ಬೀಳಲಿ. ಆ ಕನಸುಗಳು ರಾಜ್ಯ, ದೇಶವನ್ನೂ ತಲುಪಲಿ~ ಎಂದರು.<br /> <br /> ಇದೇ ಸಮಾರಂಭದಲ್ಲಿ ದಸರಾ ಮಹೋತ್ಸವ-2011 ಪರವಾಗಿ ಡಾ.ಚಂದ್ರಶೇಖರ ಕಂಬಾರ, ಪತ್ನಿ ಸತ್ಯಭಾಮ ಕಂಬಾರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> `ಕವಿಗಳಿಗೆ ಕನಸುಗಳಿವೆ, ಆದರೆ ಅಧಿಕಾರವಿಲ್ಲ. ರಾಜಕಾರಣಿಗಳಿಗೆ ಅಧಿಕಾರವಿದೆ, ಕನಸುಗಳೇ ಇಲ್ಲ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಶನಿವಾರ ಮಾರ್ಮಿಕವಾಗಿ ಹೇಳಿದರು.<br /> <br /> ದಸರಾ ಕವಿಗೋಷ್ಠಿ ಉಪಸಮಿತಿಯು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿದ ಅವರು ಕೊನೆಯಲ್ಲಿ ಸಭಿಕರ ಒತ್ತಾಯದಿಂದಾಗಿ `ಮರತೇನಂದರ ಮರೆಯಲಿ ಹ್ಯಾಂಗ, ಮಾವೋತ್ಸೇತುಂಗ~ ಎನ್ನುವ ತಮ್ಮ ಕವಿತೆಯನ್ನು ಹಾಡುವ ಮುನ್ನ ಪೂಕರವಾಗಿ ಮೇಲಿನ ಮಾತುಗಳನ್ನಾಡಿದರು. ಇದಕ್ಕೆ ಸಭಿಕರಿಂದ ದೊಡ್ಡ ಚಪ್ಪಾಳೆ ಸಿಕ್ಕಿತು. ವೇದಿಕೆಯಲ್ಲಿದ್ದ ರಾಜಕಾರಣಿಗಳು ಮಾತ್ರ ಪೆಚ್ಚು ಮೋರೆ ಹಾಕಿದರು.<br /> <br /> ಮಾತು ಮುಂದುವರಿಸಿದ ಕಂಬಾರರು `ಕವಿಗಳಲ್ಲಿ ಕನಸುಗಳಿವೆ, ಅಧಿಕಾರವಿಲ್ಲ. ಇದರಿಂದ ಕವಿಗಳು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಆದರೆ ರಾಜಕಾರಣಿಗಳ ಬಳಿ ಅಧಿಕಾರವಿದೆ, ಅವರಿಗೆ ಕನಸುಗಳು ಇಲ್ಲದಿರುವುದರಿಂದ ಉಪಯೋಗವಾಗುತ್ತಿಲ್ಲ. ಆದರೆ ಮಾವೋತ್ಸೆತುಂಗ್ನ ಬಳಿ ಕನಸುಗಳೂ ಇದ್ದವು, ಅಧಿಕಾರವೂ ಇತ್ತು. ಆದರೆ ಆತನಿಂದಲೂ ಏನನ್ನೂ ಮಾಡಲಾಗಲಿಲ್ಲ~ ಎಂದರು.<br /> <br /> ಮುಖ್ಯ ಅತಿಥಿಯಾಗಿದ್ದ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಚಂದ್ರಶೇಖರ ಕಂಬಾರರ ಮಾತನ್ನು ಅನುಮೋದಿಸುವಂತೆ ಮಾತನಾಡಿ, `ನಮ್ಮ ಬಹುತೇಕ ರಾಜಕಾರಣಿಗಳು ಕನಸಿನ ಪೂರ್ವ ಸ್ಥಿತಿ (ನಿದ್ರೆ)ಯಲ್ಲಿದ್ದಾರೆ. ಸಭೆ, ಸಮಾರಂಭ, ವಿಧಾನಸಭೆ, ಸಂಸತ್ನಲ್ಲಿ ನಿದ್ರಿಸುತ್ತಿರುತ್ತಾರೆ. ರಾಜಕಾರಣಿಗಳಿಗೆ ಅಲ್ಲಿಯಾದರೂ ಕನಸುಗಳು ಬೀಳಲಿ. ಆ ಕನಸುಗಳು ರಾಜ್ಯ, ದೇಶವನ್ನೂ ತಲುಪಲಿ~ ಎಂದರು.<br /> <br /> ಇದೇ ಸಮಾರಂಭದಲ್ಲಿ ದಸರಾ ಮಹೋತ್ಸವ-2011 ಪರವಾಗಿ ಡಾ.ಚಂದ್ರಶೇಖರ ಕಂಬಾರ, ಪತ್ನಿ ಸತ್ಯಭಾಮ ಕಂಬಾರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>