<p>ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವು ಕನಿಮೋಳಿ ಮತ್ತು ಇತರ ನಾಲ್ವರ ಜಾಮೀನು ಅರ್ಜಿ ಕುರಿತ ತನ್ನ ಆದೇಶವನ್ನು ಸೋಮವಾರ ಕಾಯ್ದಿರಿಸಿತು.<br /> <br /> ಕನಿಮೋಳಿ, ಶರದ್ ಕುಮಾರ್, ಅಸಿಫ್ ಬಲ್ವಾ, ರಾಜೀವ್ ಅಗರ್ ವಾಲ್ ಮತ್ತು ಕರೀಂ ಮೊರಾನಿ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ನವೆಂಬರ್ 3ರಂದು ಪಕ್ರಟಿಸುವುದಾಗಿ ವಿಶೇಷ ನ್ಯಾಯಾಧೀಶರು ಪ್ರಕಟಿಸಿದರು.<br /> <br /> ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕನಿಮೋಳಿ ಮತ್ತಿತರರು ಬೆಳಿಗ್ಗೆ ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.<br /> <br /> ದೋಷಾರೋಪ ಹೊರಿಸಿದ ಎರಡು ದಿನಗಳ ಬಳಿಕ ಸಲ್ಲಿಸಲಾದ ಕನಿಮೋಳಿ ಮತ್ತು ಕೆಟಿವಿ ಆಡಳಿತ ನಿರ್ದೇಶಕ ಶರದ್ ಕುಮಾರ್, ಅಸಿಫ್ ಬಲ್ವಾ, ರಾಜೀವ ಅಗರ್ ವಾಲ್ ಮತ್ತು ಕರೀಂ ಮೊರಾನಿ ಅವರ ಜಾಮೀನು ಅರ್ಜಿಗಳನ್ನು ಸಿಬಿಐ ವಿರೋಧಿಸಲಿಲ್ಲ.<br /> <br /> ಆದರೆ ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಬಲ್ವಾ ಮತ್ತು ಎ. ರಾಜಾ ಅವರ ಮಾಜಿ ಖಾಸಗಿ ಕಾರ್ಯದರ್ಶಿ ಆರ್. ಕೆ. ಚಂಡೋಲಿಯ ಅವರ ಜಾಮೀನು ಅರ್ಜಿಗಳನ್ನು ಸಿಬಿಐ ವಿರೋಧಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವು ಕನಿಮೋಳಿ ಮತ್ತು ಇತರ ನಾಲ್ವರ ಜಾಮೀನು ಅರ್ಜಿ ಕುರಿತ ತನ್ನ ಆದೇಶವನ್ನು ಸೋಮವಾರ ಕಾಯ್ದಿರಿಸಿತು.<br /> <br /> ಕನಿಮೋಳಿ, ಶರದ್ ಕುಮಾರ್, ಅಸಿಫ್ ಬಲ್ವಾ, ರಾಜೀವ್ ಅಗರ್ ವಾಲ್ ಮತ್ತು ಕರೀಂ ಮೊರಾನಿ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ನವೆಂಬರ್ 3ರಂದು ಪಕ್ರಟಿಸುವುದಾಗಿ ವಿಶೇಷ ನ್ಯಾಯಾಧೀಶರು ಪ್ರಕಟಿಸಿದರು.<br /> <br /> ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕನಿಮೋಳಿ ಮತ್ತಿತರರು ಬೆಳಿಗ್ಗೆ ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.<br /> <br /> ದೋಷಾರೋಪ ಹೊರಿಸಿದ ಎರಡು ದಿನಗಳ ಬಳಿಕ ಸಲ್ಲಿಸಲಾದ ಕನಿಮೋಳಿ ಮತ್ತು ಕೆಟಿವಿ ಆಡಳಿತ ನಿರ್ದೇಶಕ ಶರದ್ ಕುಮಾರ್, ಅಸಿಫ್ ಬಲ್ವಾ, ರಾಜೀವ ಅಗರ್ ವಾಲ್ ಮತ್ತು ಕರೀಂ ಮೊರಾನಿ ಅವರ ಜಾಮೀನು ಅರ್ಜಿಗಳನ್ನು ಸಿಬಿಐ ವಿರೋಧಿಸಲಿಲ್ಲ.<br /> <br /> ಆದರೆ ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಬಲ್ವಾ ಮತ್ತು ಎ. ರಾಜಾ ಅವರ ಮಾಜಿ ಖಾಸಗಿ ಕಾರ್ಯದರ್ಶಿ ಆರ್. ಕೆ. ಚಂಡೋಲಿಯ ಅವರ ಜಾಮೀನು ಅರ್ಜಿಗಳನ್ನು ಸಿಬಿಐ ವಿರೋಧಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>