<p><strong>ನವದೆಹಲಿ (ಐಎಎನ್ಎಸ್):</strong> ಭೋಪಾಲ್ನ ಶೆಹ್ಲಾ ಮಸೂದ್ ಸೇರಿದಂತೆ ಕನಿಷ್ಠ 12 ಮಾಹಿತಿ ಹಕ್ಕು ಕಾರ್ಯಕರ್ತರು ಕಳೆದ ವರ್ಷದಿಂದೀಚೆಗೆ ಸಾವನ್ನಪ್ಪ್ದ್ದಿದಾರೆ ಎಂದು ವರದಿಯೊಂದು ತಿಳಿಸಿದೆ.<br /> <br /> ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲು ಮತ್ತು ಬದ್ಧತೆ ಕಾಪಾಡುವಲ್ಲಿ ಶ್ರಮಿಸುತ್ತಿದ್ದ ಕನಿಷ್ಠ 12 ಕಾರ್ಯಕರ್ತರು 2010ರ ಜನವರಿಯಿಂದ 2011ರ ಆಗಸ್ಟ್ ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳಿಗಾಗಿನ ಏಷ್ಯಾ ಕೇಂದ್ರದ (ಎಸಿಎಚ್ಆರ್) `ಆರ್ಟಿಐ ಆ್ಯಕ್ಟಿವಿಸ್ಟ್: ಸಿಟ್ಟಿಂಗ್ ಡಕ್ಸ್ ಆಫ್ ಇಂಡಿಯಾ~ ವರದಿ ತಿಳಿಸಿದೆ. <br /> <br /> ಇವರಲ್ಲಿ ಶೆಹ್ಲಾ ಮಸೂದ್ ಕಟ್ಟಕಡೆಯವರಾಗಿದ್ದು, ಆಗಸ್ಟ್ 16ರಂದು ಅವರ ಮನೆಯ ಹೊರಭಾಗದಲ್ಲಿ ಕಾರನ್ನು ಹತ್ತುವ ವೇಳೆ ಅವರ ಕತ್ತಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಮಸೂದ್ ಅವರ ಹತ್ಯೆ ಮಧ್ಯಪ್ರದೇಶದ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬೆಚ್ಚಿ ಬೀಳಿಸಿತ್ತು.<br /> <br /> ಪೊಲೀಸ್ ಸಿಬ್ಬಂದಿಯೂ ಇದರಿಂದ ಹೊರತಾಗಿಲ್ಲ ಎಂದಿರುವ ವರದಿ, ಉತ್ತರ ಪ್ರದೇಶದ ಕಟ್ಗಾರ್ ಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದ ಅನುದಾನದ ಮೊತ್ತದ ವಿನಿಯೋಗ ಕುರಿತು ಮಾಹಿತಿ ಕೇಳಿದ ಗೃಹರಕ್ಷಕ ದಳದ ಸಿಬ್ಬಂದಿ ಬಾಬು ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಿದೆ.</p>.<p><strong>ಶೆಹ್ಲಾ ಹತ್ಯೆ: ಸಿಬಿಐ ತನಿಖೆಗೆ ಅನುಮತಿ</strong><br /> ನವದೆಹಲಿ, (ಪಿಟಿಐ): ಭೋಪಾಲ್ನ ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಅವರ ಹತ್ಯೆ ಕುರಿತು ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> ಭೋಪಾಲ್ನ ಶೆಹ್ಲಾ ಮಸೂದ್ ಸೇರಿದಂತೆ ಕನಿಷ್ಠ 12 ಮಾಹಿತಿ ಹಕ್ಕು ಕಾರ್ಯಕರ್ತರು ಕಳೆದ ವರ್ಷದಿಂದೀಚೆಗೆ ಸಾವನ್ನಪ್ಪ್ದ್ದಿದಾರೆ ಎಂದು ವರದಿಯೊಂದು ತಿಳಿಸಿದೆ.<br /> <br /> ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲು ಮತ್ತು ಬದ್ಧತೆ ಕಾಪಾಡುವಲ್ಲಿ ಶ್ರಮಿಸುತ್ತಿದ್ದ ಕನಿಷ್ಠ 12 ಕಾರ್ಯಕರ್ತರು 2010ರ ಜನವರಿಯಿಂದ 2011ರ ಆಗಸ್ಟ್ ತಿಂಗಳ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳಿಗಾಗಿನ ಏಷ್ಯಾ ಕೇಂದ್ರದ (ಎಸಿಎಚ್ಆರ್) `ಆರ್ಟಿಐ ಆ್ಯಕ್ಟಿವಿಸ್ಟ್: ಸಿಟ್ಟಿಂಗ್ ಡಕ್ಸ್ ಆಫ್ ಇಂಡಿಯಾ~ ವರದಿ ತಿಳಿಸಿದೆ. <br /> <br /> ಇವರಲ್ಲಿ ಶೆಹ್ಲಾ ಮಸೂದ್ ಕಟ್ಟಕಡೆಯವರಾಗಿದ್ದು, ಆಗಸ್ಟ್ 16ರಂದು ಅವರ ಮನೆಯ ಹೊರಭಾಗದಲ್ಲಿ ಕಾರನ್ನು ಹತ್ತುವ ವೇಳೆ ಅವರ ಕತ್ತಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಮಸೂದ್ ಅವರ ಹತ್ಯೆ ಮಧ್ಯಪ್ರದೇಶದ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬೆಚ್ಚಿ ಬೀಳಿಸಿತ್ತು.<br /> <br /> ಪೊಲೀಸ್ ಸಿಬ್ಬಂದಿಯೂ ಇದರಿಂದ ಹೊರತಾಗಿಲ್ಲ ಎಂದಿರುವ ವರದಿ, ಉತ್ತರ ಪ್ರದೇಶದ ಕಟ್ಗಾರ್ ಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದ ಅನುದಾನದ ಮೊತ್ತದ ವಿನಿಯೋಗ ಕುರಿತು ಮಾಹಿತಿ ಕೇಳಿದ ಗೃಹರಕ್ಷಕ ದಳದ ಸಿಬ್ಬಂದಿ ಬಾಬು ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಹೇಳಿದೆ.</p>.<p><strong>ಶೆಹ್ಲಾ ಹತ್ಯೆ: ಸಿಬಿಐ ತನಿಖೆಗೆ ಅನುಮತಿ</strong><br /> ನವದೆಹಲಿ, (ಪಿಟಿಐ): ಭೋಪಾಲ್ನ ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಅವರ ಹತ್ಯೆ ಕುರಿತು ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>