<p><strong>ಬೆಳಗಾವಿ: </strong>ಮರಾಠಿಯಲ್ಲಿ ನೀಡಿದ ಸಭೆಯ ನಡಾವಳಿ ದೋಷಪೂರಿತವಾಗಿದೆ ಎಂದು ಆರೋಪಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಕರ್ನಾಟಕ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಘಟನೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಂಗಳವಾರ ನಡೆಯಿತು. <br /> <br /> ಬೆಳಿಗ್ಗೆ ಸಭೆ ಆರಂಭ ಆಗುತ್ತಿದ್ದಂತೆಯೇ ಎಂಇಎಸ್ ಪರ ಸದಸ್ಯರು, ತಮಗೆ ಮರಾಠಿ ಭಾಷೆಯಲ್ಲಿ ನೀಡಿದ ನೋಟಿಸ್ ಹಾಗೂ ಹಿಂದಿನ ಸಭೆಯ ನಡಾವಳಿಗಳಲ್ಲಿ ಹಲವು ದೋಷಗಳಿವೆ ಎಂದು ಗದ್ದಲ ಎಬ್ಬಿಸಿದರು. ತಾ.ಪಂ. ಅಧಿಕಾರಿಗಳ ವಿರುದ್ಧ ಕೆಲವು ಸದಸ್ಯರು ಹರಿಹಾಯ್ದರು. <br /> <br /> ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಪ್ರತಾಪ ಕುಳೆ, `ನನಗೆ ಕನ್ನಡದಲ್ಲಿ ಸಭೆಯ ನೋಟಿಸ್ ನೀಡಿದ್ದೀರಿ. ಕನ್ನಡ ಭಾಷೆ ಚಕ್ಕುಲಿಯಂತೆ ಕಾಣುತ್ತದೆ. ನಮಗೆ ಈ ಭಾಷೆ ಅರ್ಥವಾಗುವುದಿಲ್ಲ ಎಂದು ಹೇಳಿದರೂ ಮತ್ತೆ ಮತ್ತೆ ಕನ್ನಡದಲ್ಲೇ ನೋಟಿಸ್ ನೀಡಿದ್ದೀರಿ` ಎಂದು ಆಕ್ರೋಶ ವ್ಯಕ್ತಪಡಿಸಿದರು. <br /> <br /> `ಹಿಂದಿನ ಸಭೆಯ ನಡಾವಳಿಯನ್ನು ತಪ್ಪು ತಪ್ಪಾಗಿ ಕೈಯಲ್ಲಿ ಬರೆದು ಸದಸ್ಯರಿಗೆ ನೀಡಿದ್ದೀರಿ. ಟೈಪ್ ಮಾಡಿಸಲು ಕರ್ನಾಟಕ ಸರ್ಕಾರದ ಬಳಿ ಹಣ ಇಲ್ಲವೇ? ರಾಜ್ಯ ಸರ್ಕಾರಕ್ಕೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆಯೇ? ಆ ಸ್ಥಿತಿ ಇದೆ ಎಂದಾದರೆ, ನಮ್ಮ ಸದಸ್ಯರ ಗೌರವಧನವನ್ನು ನೀಡುತ್ತೇವೆ, ಮರಾಠಿಯಲ್ಲೇ ಟೈಪ್ ಮಾಡಿಸಿಕೊಡಿ` ಎಂದು ಪ್ರತಾಪ ಕುಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. <br /> <br /> ಇನ್ನೊಬ್ಬ ಸದಸ್ಯ ಸುರೇಶ ರಾಜುಕರ, `ಹಲವು ವರ್ಷಗಳಿಂದ ಮರಾಠಿಯಲ್ಲೇ ಮಾಹಿತಿ ನೀಡಿ ಎಂದು ನಾವು ಮನವಿ ಮಾಡುತ್ತಿದ್ದರೂ ಪರಿಗಣಿಸುತ್ತಿಲ್ಲ. ಹಿಂದಿನ ಸಭೆಯ ನಡಾವಳಿಯ ಮರಾಠಿ ಅನುವಾದ ತಪ್ಪಾಗಿದೆ. ಕಾಟಾಚಾರಕ್ಕೆ ಮರಾಠಿಗೆ ಅನುವಾದ ಮಾಡಿಸಲಾಗುತ್ತಿದೆ` ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಹಲವು ಎಂಇಎಸ್ ಪರ ಸದಸ್ಯರು ಧ್ವನಿಗೂಡಿಸಿದರು. <br /> <br /> ಆಗ ಮಧ್ಯ ಪ್ರವೇಶಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎ.ಎಂ. ಹುದ್ದಾರ, ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸಿ, 15 ದಿನಗಳಲ್ಲಿ ಎಲ್ಲ ಸದಸ್ಯರಿಗೆ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ನಡಾವಳಿಗಳನ್ನು ತಲುಪಿಸಲಾಗುವುದು ಎಂದರು. <br /> <br /> ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ವಿಜಯಾ ಜೋತ್ಸ್ನಾ, ತಹಶೀಲ್ದಾರ ಎ.ಎಚ್. ಆಲೂರ ಹಾಜರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಮರಾಠಿಯಲ್ಲಿ ನೀಡಿದ ಸಭೆಯ ನಡಾವಳಿ ದೋಷಪೂರಿತವಾಗಿದೆ ಎಂದು ಆರೋಪಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಕರ್ನಾಟಕ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಘಟನೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಂಗಳವಾರ ನಡೆಯಿತು. <br /> <br /> ಬೆಳಿಗ್ಗೆ ಸಭೆ ಆರಂಭ ಆಗುತ್ತಿದ್ದಂತೆಯೇ ಎಂಇಎಸ್ ಪರ ಸದಸ್ಯರು, ತಮಗೆ ಮರಾಠಿ ಭಾಷೆಯಲ್ಲಿ ನೀಡಿದ ನೋಟಿಸ್ ಹಾಗೂ ಹಿಂದಿನ ಸಭೆಯ ನಡಾವಳಿಗಳಲ್ಲಿ ಹಲವು ದೋಷಗಳಿವೆ ಎಂದು ಗದ್ದಲ ಎಬ್ಬಿಸಿದರು. ತಾ.ಪಂ. ಅಧಿಕಾರಿಗಳ ವಿರುದ್ಧ ಕೆಲವು ಸದಸ್ಯರು ಹರಿಹಾಯ್ದರು. <br /> <br /> ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಪ್ರತಾಪ ಕುಳೆ, `ನನಗೆ ಕನ್ನಡದಲ್ಲಿ ಸಭೆಯ ನೋಟಿಸ್ ನೀಡಿದ್ದೀರಿ. ಕನ್ನಡ ಭಾಷೆ ಚಕ್ಕುಲಿಯಂತೆ ಕಾಣುತ್ತದೆ. ನಮಗೆ ಈ ಭಾಷೆ ಅರ್ಥವಾಗುವುದಿಲ್ಲ ಎಂದು ಹೇಳಿದರೂ ಮತ್ತೆ ಮತ್ತೆ ಕನ್ನಡದಲ್ಲೇ ನೋಟಿಸ್ ನೀಡಿದ್ದೀರಿ` ಎಂದು ಆಕ್ರೋಶ ವ್ಯಕ್ತಪಡಿಸಿದರು. <br /> <br /> `ಹಿಂದಿನ ಸಭೆಯ ನಡಾವಳಿಯನ್ನು ತಪ್ಪು ತಪ್ಪಾಗಿ ಕೈಯಲ್ಲಿ ಬರೆದು ಸದಸ್ಯರಿಗೆ ನೀಡಿದ್ದೀರಿ. ಟೈಪ್ ಮಾಡಿಸಲು ಕರ್ನಾಟಕ ಸರ್ಕಾರದ ಬಳಿ ಹಣ ಇಲ್ಲವೇ? ರಾಜ್ಯ ಸರ್ಕಾರಕ್ಕೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆಯೇ? ಆ ಸ್ಥಿತಿ ಇದೆ ಎಂದಾದರೆ, ನಮ್ಮ ಸದಸ್ಯರ ಗೌರವಧನವನ್ನು ನೀಡುತ್ತೇವೆ, ಮರಾಠಿಯಲ್ಲೇ ಟೈಪ್ ಮಾಡಿಸಿಕೊಡಿ` ಎಂದು ಪ್ರತಾಪ ಕುಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. <br /> <br /> ಇನ್ನೊಬ್ಬ ಸದಸ್ಯ ಸುರೇಶ ರಾಜುಕರ, `ಹಲವು ವರ್ಷಗಳಿಂದ ಮರಾಠಿಯಲ್ಲೇ ಮಾಹಿತಿ ನೀಡಿ ಎಂದು ನಾವು ಮನವಿ ಮಾಡುತ್ತಿದ್ದರೂ ಪರಿಗಣಿಸುತ್ತಿಲ್ಲ. ಹಿಂದಿನ ಸಭೆಯ ನಡಾವಳಿಯ ಮರಾಠಿ ಅನುವಾದ ತಪ್ಪಾಗಿದೆ. ಕಾಟಾಚಾರಕ್ಕೆ ಮರಾಠಿಗೆ ಅನುವಾದ ಮಾಡಿಸಲಾಗುತ್ತಿದೆ` ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಹಲವು ಎಂಇಎಸ್ ಪರ ಸದಸ್ಯರು ಧ್ವನಿಗೂಡಿಸಿದರು. <br /> <br /> ಆಗ ಮಧ್ಯ ಪ್ರವೇಶಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎ.ಎಂ. ಹುದ್ದಾರ, ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸಿ, 15 ದಿನಗಳಲ್ಲಿ ಎಲ್ಲ ಸದಸ್ಯರಿಗೆ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ನಡಾವಳಿಗಳನ್ನು ತಲುಪಿಸಲಾಗುವುದು ಎಂದರು. <br /> <br /> ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ವಿಜಯಾ ಜೋತ್ಸ್ನಾ, ತಹಶೀಲ್ದಾರ ಎ.ಎಚ್. ಆಲೂರ ಹಾಜರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>