<p>ಕನ್ನಡವನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನ ಸಾಂಸ್ಕೃತಿಕ ಚಹರೆಗಳನ್ನು ಗುರ್ತಿಸಲು ಹೊರಟರೆ ನಟ್ಟಿರುಳಲ್ಲಿ ದಟ್ಟಡವಿಯಲ್ಲಿ ದಾರಿ ಹುಡುಕಿದಂತಾಗುತ್ತದೆ. ಬೆಂಗಳೂರಿನಲ್ಲಿನ ಕನ್ನಡ ಸಂಸ್ಕೃತಿಯ ಚಹರೆಯಿರಲಿ, ಒಟ್ಟಾರೆ ಕನ್ನಡ ಸಂಸ್ಕೃತಿಯ ಸ್ವರೂಪವನ್ನು ಗುರ್ತಿಸುವುದೇ ಕಷ್ಟದ ಕೆಲಸ.<br /> <br /> `ಹಲವು ಕನ್ನಡಂಗಳ~ ಸಂಸ್ಕೃತಿಯನ್ನು ಒಂದು ಪ್ರಮೇಯದಲ್ಲಿ ಹಿಡಿದಿಡಲು ಪ್ರಯತ್ನಿಸುವುದು ಕನ್ನಡಿಯಲ್ಲಿ ಆನೆಯನ್ನು ತೋರಿಸಿದಂತೆ. ಹೀಗೆ, ಕನ್ನಡ ಸಂಸ್ಕೃತಿಯ ಪರಿಕಲ್ಪನೆಯೇ ಗೋಜಲಾಗಿರುವಾಗ, ರಾಜಧಾನಿಯ ಸಾಂಸ್ಕೃತಿಕ ಸಿಕ್ಕುಗಳನ್ನು ಬಿಡಿಸುವುದು ಇನ್ನೂ ಕಷ್ಟ. ಇಂಥ ಸಂದರ್ಭದಲ್ಲಿ ಕೆಲವು ರೂಪಕಗಳ ಮೂಲಕ ಸಾಂಸ್ಕೃತಿಕ ಚಹರೆಗಳನ್ನು ಸ್ಪಷ್ಟಪಡಿಸುವ ಪ್ರಯತ್ನ ಮಾಡಬಹುದು. ಅಂಥದೊಂದು ರೂಪಕ- ರಾಜಕುಮಾರ್.<br /> <br /> </p>.<table align="right" border="1" cellpadding="1" cellspacing="1" width="200"> <tbody> <tr> <td> <p style="text-align: center"><strong><span style="font-size: medium"><span style="color: #800000">ರಾಜ್ 84ನೇ ಜಯಂತ್ಯುತ್ಸವ</span></span></strong></p> <p><span style="color: #800000"><strong><span style="font-size: small">ಅಖಿಲ ಕರ್ನಾಟಕ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ </span></strong></span><span style="font-size: small">ಮಂಗಳವಾರ ವರನಟ ಡಾ.ರಾಜ್ಕುಮಾರ್ ಅವರ 84ನೇ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದೆ.<br /> <br /> ಪದ್ಮಭೂಷಣ ಡಾ.ರಾಜ್ಕುಮಾರ್ ಅವರ ಜನ್ಮದಿನದ ಅಂಗವಾಗಿ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ತಂಡದಿಂದ ಸಂಗೀತ ರಸಮಂಜರಿ.<br /> ರೋಟರಿ ಬೆಂಗಳೂರು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ರಕ್ತದಾನ ಶಿಬಿರವನ್ನೂ ಆಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾ. ಪ್ರವೀಣ್ ಬರೆದಿರುವ `ಅಣ್ಣಾವ್ರ ಆದರ್ಶ ನಮಗೆ ಪ್ರಶಸ್ತ~ ಪುಸ್ತಕ ಲೋಕಾರ್ಪಣೆ.<br /> <br /> ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಎಚ್.ಡಿ. ಕುಮಾರಸ್ವಾಮಿ, ಸಾರಿಗೆ ಸಚಿವ ಆರ್.ಅಶೋಕ, ವಸತಿ ಸಚಿವ ವಿ.ಸೋಮಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಿಧಾನ ಪರಿಷತ್ ಸದಸ್ಯ, ನಟ ಶ್ರೀನಾಥ್, ನಟ ಅಂಬರೀಷ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಈ ಸಂಜೆ ಸಂಪಾದಕ ಟಿ. ವೆಂಕಟೇಶ್, ಬಿ.ಬಿ.ಎಂ.ಪಿ ಸದಸ್ಯ ಎಂ.ನಾಗರಾಜ್, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಸಾ.ರಾ.ಗೋವಿಂದು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ನೆ.ಲ.ನರೇಂದ್ರಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.<br /> <br /> ಸ್ಥಳ: ಡಾ.ರಾಜ್ ಕುಮಾರ್ ಪುಣ್ಯಭೂಮಿ, ಕಂಠೀರವ ಸ್ಟಡಿಯೋ. </span></p> <p><strong><span style="color: #800000"><span style="font-size: small">ಜ್ಞಾನಜ್ಯೋತಿ ಸಭಾಂಗಣದಲ್ಲಿ...<br /> </span></span></strong><span style="font-size: small">ವಾರ್ತಾ ಇಲಾಖೆಯು ಡಾ.ರಾಜ್ ಜನ್ಮದಿನಾಚರಣೆ ಆಯೋಜಿಸಿದೆ. ಡಿ.ವಿ.ಸದಾನಂದಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ಆಶಯ ನುಡಿ; ಡಾ.ಯು.ಆರ್.ಅನಂತಮೂರ್ತಿ. ಸಚಿವ ಆರ್.ಅಶೋಕ್, ಮೇಯರ್ ಶಾರದಮ್ಮ, ಸಂಸದ ಪಿ.ಸಿ. ಮೋಹನ್, ಪಾರ್ವತಮ್ಮ ರಾಜ್ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಕೆ.ವಿ. ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ, ನಟ ಜಗ್ಗೇಶ್, ಡಾ.ಮುಖ್ಯಮಂತ್ರಿ ಚಂದ್ರು, ವಿಧಾನ ಪರಿಷತ್ ಸದಸ್ಯರಾದ ಶ್ರೀನಾಥ್, ಡಾ.ದೊಡ್ಡರಂಗೇಗೌಡ, ಕಂಠೀರವ ಸ್ಟುಡಿಯೋ ಅಧ್ಯಕ್ಷ ಎಂ. ರುದ್ರೇಶ್, ಅಧ್ಯಕ್ಷತೆ- ಶಾಸಕ ದಿನೇಶ್ ಗುಂಡೂರಾವ್. ನಂತರ ಡಾ.ರಾಜ್ ಅಭಿನಯದ ಚಲನಚಿತ್ರಗಳ ದೃಶ್ಯಾವಳಿ ಪ್ರದರ್ಶನ. ಹಾಗೂ ಗೀತೆಗಳ ಗಾಯನ ಮತ್ತು ನೃತ್ಯ. ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಸಂಜೆ 6.</span></p> <p><span style="color: #800000"><strong><span style="font-size: small">ರಾಜ್ ಚಿತ್ರೋತ್ಸವ<br /> ಡಾ.ರಾಜ್ಕುಮಾರ್ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ತರಬೇತಿ ಕೇಂದ್ರ: </span></strong></span><span style="font-size: small">ಡಾ.ರಾಜ್ ಚಿತ್ರೋತ್ಸವ. ಪ್ರಿಯದರ್ಶಿನಿ ಸಭಾಂಗಣದಲ್ಲಿ (ಬಾದಾಮಿ ಹೌಸ್) ಬೆಳಿಗ್ಗೆ 11ಕ್ಕೆ ಡಾ.ಚಂದ್ರಶೇಖರ ಕಂಬಾರ ಅವರಿಂದ ಉದ್ಘಾಟನೆ. ಅತಿಥಿಗಳು: ತಾರಾ ಅನುರಾಧ, ನಟ ವಿಜಯ್, ಅಗರ ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಶಿವಕುಮಾರ್. ಮಧ್ಯಾಹ್ನ 12ಕ್ಕೆ ಶ್ರೀನಿವಾಸ ಕಲ್ಯಾಣ, ಮಧ್ಯಾಹ್ನ 2.30ಕ್ಕೆ ಭಕ್ತ ಪ್ರಹ್ಲಾದ, ಸಂಜೆ 6ಕ್ಕೆ ಭಕ್ತ ಕುಂಬಾರ ಚಿತ್ರಗಳ ಪ್ರದರ್ಶನ. ಜೆ.ಸಿ.ರಸ್ತೆ, ರವೀಂದ್ರ ಕಲಾಕ್ಷೇತ್ರ ಸಂಸ ಬಯಲು ರಂಗಮಂದಿರದಲ್ಲಿ ಸಂಜೆ 6ಕ್ಕೆ ಡಾ.ರಾಜ್ ಜೀವನಧಾರೆ ಸಾಕ್ಷ್ಯಚಿತ್ರ ಪ್ರದರ್ಶನ. ಅತಿಥಿಗಳು: ನಾಗತಿಹಳ್ಳಿ ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ, ಮಮತಾರಾವ್, ಪ್ರೊ.ಎಲ್.ಎನ್. ಮುಕುಂದರಾಜ್. ಅಧ್ಯಕ್ಷತೆ: ಡಿ.ಕೆ.ಚೌಟ. ವಿ.ಎಂ.ಮೋಹನ್ ಅವರ ಓಂಕಾರ್ ಮೆಲೋಡಿಸ್ ತಂಡದಿಂದ ಡಾ.ರಾಜ್ ಅವರ ಗೀತೆಗಳ ಗಾಯನ ಮತ್ತು ನೃತ್ಯ.</span></p> </td> </tr> </tbody> </table>.<p>ಜನಸಾಮಾನ್ಯರಿಂದ ಉನ್ನತ ವರ್ಗದವರೆಗೆ ರಾಜಕುಮಾರ್ ಆವರಿಸಿಕೊಂಡಿರುವ ಬಗೆ ವಿಸ್ಮಯ ಹುಟ್ಟಿಸುವಂತಿದೆ. ರಾಜಕುಮಾರ್ ಪಟಗಳು, ಪ್ರತಿಮೆಗಳು ನಗರದ ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ. ರಾಜಕುಮಾರ್ ಹೆಸರಿನ ಮಹಲುಗಳಿವೆ, ರಸ್ತೆಯಿದೆ. ರಾಜ್ ಸಿನಿಮಾಗಳನ್ನು ನೋಡದವರು ಕೂಡ ತಮ್ಮ ಅಂಗಡಿ ಮಹಲುಗಳ ಮೇಲೆ ರಾಜ್ ಚಿತ್ರಪಟ ಅಂಟಿಸಿಕೊಂಡಿರುವುದಿದೆ. ಅವರ ಪಾಲಿಗೆ ಈ ಚಿತ್ರಪಟ ಗುರಾಣಿಯಿದ್ದಂತೆ. <br /> ಬೀದಿಗೆ ಹೊಂದಿಕೊಂಡಿರುವ ಸಾರ್ವಜನಿಕ ಸ್ಥಳಗಳನ್ನು ಗಣಪ, ಏಸು, ಲಕ್ಷ್ಮಿ, ಮುಂತಾದವರ ಚಿತ್ರಪಟಗಳು ಮೂತ್ರಕೋರರಿಂದ ರಕ್ಷಿಸುತ್ತವೆ. <br /> <br /> ಅಂಥ ಔಷಧೀಯ ಗುಣ ರಾಜ್ ಚಿತ್ರಪಟಕ್ಕೂ ಇದೆ. ಭಾಷಾಭಿಮಾನ ಎಲ್ಲೆ ಮೀರಿದ ಸಂದರ್ಭದಲ್ಲಿ ದೊಡ್ಡ ದೊಡ್ಡ ಮಹಲು ಹಾಗೂ ವಾಹನಗಳ ಪಾಲಿಗೆ ರಾಜಕುಮಾರ್ ಚಿತ್ರಪಟವೇ ರಕ್ಷೆ!<br /> <br /> ರಂಜನೆಯೇ ಸಿನಿಮಾಗಳ ಪ್ರಧಾನ ಗುಣ ಎನ್ನುವ ನಂಬಿಕೆ ಬಲಿಯುತ್ತಿರುವ ಈ ದಿನಗಳಲ್ಲಿ, ಕನ್ನಡಿಗರ ಬದುಕು-ಭಾವನೆಗಳ ಅಭಿವ್ಯಕ್ತಿಯಂತೆ ರಾಜ್ ಚಿತ್ರಗಳು ಮೂಡಿಬಂದದ್ದು ಒಂದು ಅಸಾಧಾರಣ ಸಂಗತಿಯಂತೆ ಕಾಣಿಸುತ್ತದೆ. <br /> <br /> ರಾಜಕುಮಾರ್ ಸಿನಿಮಾಗಳ ಮೂಲಕ ಕನ್ನಡ ಸಂಸ್ಕೃತಿ ಮತ್ತು ಕನ್ನಡ ನೆಲದ ಮೌಲ್ಯಗಳನ್ನು ಕಟ್ಟಿಕೊಡುವ ಒಂದು ಪ್ರಜ್ಞಾಪೂರ್ವಕ ಪ್ರಯತ್ನ ನಡೆಯಿತು. ಈ ಪ್ರಯತ್ನದ ಹಂಬಲವೇ, ಕನ್ನಡ ಚಿತ್ರಗಳಲ್ಲಷ್ಟೇ ನಟಿಸುವ ರಾಜಕುಮಾರರ ಸಂಕಲ್ಪದ ಹಿಂದೆ ಕೆಲಸ ಮಾಡಿರಬಹುದು.<br /> <br /> ಒಂದು ಹಂತದ ನಂತರ ರಾಜಕುಮಾರ್ ಸಿನಿಮಾ ಎಂದಕೂಡಲೇ ಅಲ್ಲೊಂದು ಸಂದೇಶ ಇರಲೇಬೇಕು ಎನ್ನುವಂತಾಯಿತು. ತೀರಾ ಹಳೆಯ ಚಿತ್ರಗಳ ಮಾತಿರಲಿ, ರಾಜಕುಮಾರರ ಕೊನೆಯ ಚಿತ್ರಗಳನ್ನು ಉದಾಹರಿಸುವುದಾದರೆ- `ಜೀವನಚೈತ್ರ~ ಚಿತ್ರ ಮದ್ಯಪಾನದ ವಿರುದ್ಧ ಸೊಲ್ಲೆತ್ತುತ್ತದೆ. ಕಾಮನೆಗಳ ಬೆನ್ನುಹತ್ತಿದ ಯುವಪೀಳಿಗೆ ಹೆತ್ತವರನ್ನು ಹಾಗೂ ಮೌಲ್ಯಗಳನ್ನು ಬೀದಿಪಾಲು ಮಾಡುತ್ತಿರುವ ವಿಪರ್ಯಾಸವೂ, ಕೂಡು ಕುಟುಂಬದ ಪ್ರತಿಪಾದನೆಯೂ ಆ ಚಿತ್ರದಲ್ಲಿದೆ. <br /> <br /> `ಆಕಸ್ಮಿಕ~ ಚಿತ್ರ ಹೆಣ್ಣುಮಕ್ಕಳ ಮಾರಾಟದ ದಂಧೆಯನ್ನು ವಿರೋಧಿಸುವ ಕಥೆಯನ್ನು ಹೊಂದಿದೆ. `ಒಡಹುಟ್ಟಿದವರು~ ಚಿತ್ರ ಸೋದರ ವಾತ್ಸಲ್ಯದ ಜೊತೆಗೆ ರೈತಪ್ರೀತಿಯನ್ನು ಸಾರುತ್ತದೆ. ರಾಜಕುಮಾರರ ಕೊನೆಯ ಚಿತ್ರ `ಶಬ್ದವೇಧಿ~ ಎಳೆಯರು ಮತ್ತು ಯುವಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ವಸ್ತುಗಳ ಕಬಂಧ ಬಾಹುಗಳ ವಿರುದ್ಧ ದನಿಯೆತ್ತುತ್ತದೆ (ಈ ನಾಲ್ಕು ಚಿತ್ರಗಳಲ್ಲಿ ಮೂರು ಕಾದಂಬರಿ ಆಧರಿತ ಚಿತ್ರಗಳಾಗಿರುವುದು ಗಮನಾರ್ಹ). <br /> <br /> ಈ ನಾಲ್ಕು ಸಿನಿಮಾಗಳು, ನಗರಗಳು ಸೇರಿದಂತೆ ಈ ಹೊತ್ತಿನ ನಮ್ಮ ಸಮಾಜ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಮುಖಾಮುಖಿ ಆದಂತಿಲ್ಲವೇ? ಇಂಥ ಅನುಸಂಧಾನವನ್ನು ಇವತ್ತಿನ ಚಿತ್ರಗಳಲ್ಲಿ ಕಾಣಲಿಕ್ಕೆ ಸಾಧ್ಯವೇ? ಇಲ್ಲವೆನ್ನುವುದೇ ರಾಜಕುಮಾರ್ ಚಿತ್ರಗಳ ಅನನ್ಯತೆಗೆ ಕಾರಣವಾಗಿದೆ.<br /> <br /> `ಹೊಸ ಗಾನಬಜಾನ~ದ ಈ ದಿನಗಳಲ್ಲಿ ಹಳೆಯ ಚಿತ್ರಗಳು ನಿಧಾನಗತಿಯ ಚಿತ್ರಗಳಾಗಿ ಕಾಣಿಸುತ್ತವೆ, ಈ ಕಾಲಕ್ಕೆ ಹೊಂದದ ಕಥನಗಳಾಗಿ ಭಾಸವಾಗುತ್ತವೆ. ಆದರೆ, ಇಂಥ ಗೊಣಗಾಟ ರಾಜ್ ಚಿತ್ರಗಳ ಸಂದರ್ಭದಲ್ಲಿ ಕೇಳಿಸುವುದು ಕಡಿಮೆ. ರಿಮೋಟ್ನ ಗುಂಡಿಗಳನ್ನು ಅಮುಕುತ್ತಾ ಸಾಗುವಾಗ ವಾಹಿನಿಯೊಂದರಲ್ಲಿ ರಾಜಕುಮಾರರ ಮುಖ ಕಾಣಿಸುತ್ತದೆ ಎಂದುಕೊಳ್ಳಿ. ತಕ್ಷಣ ಮುಂದಕ್ಕೆ ಜಿಗಿದರೆ ಬಚಾವು. <br /> <br /> ಕೆಲವು ಕ್ಷಣ ಮೈಮರೆತರೆ ಆ ಸಿನಿಮಾ ತಂತಾನೇ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತದೆ. ಸತ್ಯ ಹರಿಶ್ಚಂದ್ರ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಮಯೂರ, ಶ್ರೀಕೃಷ್ಣ ದೇವರಾಯ, ಬಂಗಾರದ ಪಂಜರ- ಮುಂತಾದ ಚಿತ್ರಗಳು ಯಾವತ್ತಿಗೂ ಮಸುಕಾಗದ ಅನುಪಮ ಕಲಾಕೃತಿಗಳು.<br /> <br /> ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುವುದು ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಹೆಪ್ಪುಗಟ್ಟಿರುವ ಆತಂಕ. ಈ ಅಳಲಿನ ಹಿನ್ನೆಲೆಯಲ್ಲಿಯೇ ನಿರ್ದೇಶಕ ಎಸ್. ನಾರಾಯಣ್ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಿಂದ ಹೊರಗುಳಿದಿರುವುದಾಗಿ ಪ್ರಕಟಿಸಿದ್ದಾರೆ.<br /> <br /> ಇಂಥದೊಂದು ನಿರ್ವಾತವನ್ನು ರಾಜಕುಮಾರ್ ಕೂಡ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಎದುರಿಸಿದ್ದರು. ಅರವತ್ತರ ದಶಕದ ಆರಂಭದ ವರ್ಷಗಳಲ್ಲಿ ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರೋದ್ಯಮ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯಕ್ಕೀಡಾಗಿತ್ತು. <br /> <br /> ಪರಭಾಷಾ ಚಿತ್ರಗಳೊಂದಿಗೆ ಡಬ್ಬಿಂಗ್ ಚಿತ್ರಗಳು ಕೂಡ ಕನ್ನಡದ ಕಲಾವಿದರು, ತಂತ್ರಜ್ಞರ ಪಾಲಿಗೆ ಕಂಟಕವಾಗಿದ್ದವು. ಇಂಥದೊಂದು ವಿಷಮ ಪರಿಸ್ಥಿತಿಯಲ್ಲಿ, ಕನ್ನಡದ ಅಸ್ಮಿತೆಯನ್ನು ಸಾರುವ ಚಿತ್ರಗಳು ರಾಜಕುಮಾರರ ಮೂಲಕ ಸಾಲುಸಾಲಾಗಿ ಬಂದವು. <br /> <br /> ಕನ್ನಡದ ಸಾಹಿತ್ಯ ಕೃತಿಗಳನ್ನಾಧರಿಸಿ ಸಿನಿಮಾ ರೂಪಿಸುವ ಪರಂಪರೆ ಗಟ್ಟಿಯಾದದ್ದು ಆಗಲೇ. ಚಿತ್ರಗಳ ಗುಣಮಟ್ಟ ಹಾಗೂ ಕನ್ನಡದ ಸೊಗಡಿನ ಮೂಲಕವೇ ಕನ್ನಡ ಚಿತ್ರೋದ್ಯಮದ ಎಲ್ಲೆಕಟ್ಟುಗಳನ್ನು ವಿಸ್ತರಿಸುವಲ್ಲಿ `ರಾಜ್ ಚಿತ್ರಗಳು~ ಪ್ರಮುಖ ಪಾತ್ರ ವಹಿಸಿದವು. ಅಂಥದೊಂದು ಉಲ್ಲಂಘನೆ ಈಗಿನ ಜರೂರು ಕೂಡ. <br /> <br /> ಅರವತ್ತರ ದಶಕದ ಸಂಕ್ರಮಣ ಕಾಲ ಕನ್ನಡ ಸಿನಿಮಾಗಳ ಜೊತೆಗೆ, ಬೆಂಗಳೂರಿನಲ್ಲಿನ ಕನ್ನಡಿಗರ ಅಸ್ತಿತ್ವಕ್ಕೂ ಸಂಚಕಾರ ತಂದಿತ್ತು. ಮ. ರಾಮಮೂರ್ತಿ, ಅನಕೃ ನೇತೃತ್ವದಲ್ಲಿ ರೂಪುಗೊಂಡ ಕನ್ನಡ ಚಳವಳಿ ರಾಜಧಾನಿಯಲ್ಲಿ ಕನ್ನಡಿಗರ ಅಸ್ಮಿತೆಯನ್ನು ಕಾಪಾಡಿತು. ಆ ಚಳವಳಿಯ ಕವಲಾಗಿಯೇ ಡಬ್ಬಿಂಗ್ ನಿಷೇಧ ಕರ್ನಾಟಕದಲ್ಲಿ ಜಾರಿಯಾದುದು. <br /> <br /> ಕಾಲಚಕ್ರದ ಉರುಳಿನಲ್ಲಿ ಅರವತ್ತರ ದಶಕದ ನಿರ್ವಾತ ಮರುಕಳಿಸಿದಂತಿರುವ ದಿನಗಳಿವು. ಪರಭಾಷಾ ಚಿತ್ರಗಳ ಅಬ್ಬರ ಮತ್ತೆ ಹೆಚ್ಚಾಗಿದೆ. ರೀಮೇಕ್ ಮಾಡುವುದು ಪಾಪಪ್ರಜ್ಞೆಯ ಕೆಲಸವಾಗಿ ಈಗ ಉಳಿದಿಲ್ಲ. <br /> <br /> ಈ ನಡುವೆ, ಡಬ್ಬಿಂಗ್ ಪರ ದನಿಗಳು ನಿಚ್ಚಳವಾಗಿ ಕೇಳಿಸುತ್ತಿವೆ. ಆದರೆ, ಈ ಎಡರು ತೊಡರುಗಳನ್ನು ದಾಟಿಸಲು ರಾಜ್ ರೀತಿಯ ಅಂಬಿಗ ಈಗ ಬೇಕಾಗಿದ್ದಾನೆ. ಚಿತ್ರರಂಗದಲ್ಲೆಗ ಅನೇಕ ಪಾಳೇಪಟ್ಟುಗಳಿವೆ. ಅಖಂಡ ಕನ್ನಡ ಚಿತ್ರೋದ್ಯಮದ ಕನಸು ಮಾತ್ರ ಯಾರಿಗೂ ಬೀಳುವಂತೆ ಕಾಣುತ್ತಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡವನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನ ಸಾಂಸ್ಕೃತಿಕ ಚಹರೆಗಳನ್ನು ಗುರ್ತಿಸಲು ಹೊರಟರೆ ನಟ್ಟಿರುಳಲ್ಲಿ ದಟ್ಟಡವಿಯಲ್ಲಿ ದಾರಿ ಹುಡುಕಿದಂತಾಗುತ್ತದೆ. ಬೆಂಗಳೂರಿನಲ್ಲಿನ ಕನ್ನಡ ಸಂಸ್ಕೃತಿಯ ಚಹರೆಯಿರಲಿ, ಒಟ್ಟಾರೆ ಕನ್ನಡ ಸಂಸ್ಕೃತಿಯ ಸ್ವರೂಪವನ್ನು ಗುರ್ತಿಸುವುದೇ ಕಷ್ಟದ ಕೆಲಸ.<br /> <br /> `ಹಲವು ಕನ್ನಡಂಗಳ~ ಸಂಸ್ಕೃತಿಯನ್ನು ಒಂದು ಪ್ರಮೇಯದಲ್ಲಿ ಹಿಡಿದಿಡಲು ಪ್ರಯತ್ನಿಸುವುದು ಕನ್ನಡಿಯಲ್ಲಿ ಆನೆಯನ್ನು ತೋರಿಸಿದಂತೆ. ಹೀಗೆ, ಕನ್ನಡ ಸಂಸ್ಕೃತಿಯ ಪರಿಕಲ್ಪನೆಯೇ ಗೋಜಲಾಗಿರುವಾಗ, ರಾಜಧಾನಿಯ ಸಾಂಸ್ಕೃತಿಕ ಸಿಕ್ಕುಗಳನ್ನು ಬಿಡಿಸುವುದು ಇನ್ನೂ ಕಷ್ಟ. ಇಂಥ ಸಂದರ್ಭದಲ್ಲಿ ಕೆಲವು ರೂಪಕಗಳ ಮೂಲಕ ಸಾಂಸ್ಕೃತಿಕ ಚಹರೆಗಳನ್ನು ಸ್ಪಷ್ಟಪಡಿಸುವ ಪ್ರಯತ್ನ ಮಾಡಬಹುದು. ಅಂಥದೊಂದು ರೂಪಕ- ರಾಜಕುಮಾರ್.<br /> <br /> </p>.<table align="right" border="1" cellpadding="1" cellspacing="1" width="200"> <tbody> <tr> <td> <p style="text-align: center"><strong><span style="font-size: medium"><span style="color: #800000">ರಾಜ್ 84ನೇ ಜಯಂತ್ಯುತ್ಸವ</span></span></strong></p> <p><span style="color: #800000"><strong><span style="font-size: small">ಅಖಿಲ ಕರ್ನಾಟಕ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ </span></strong></span><span style="font-size: small">ಮಂಗಳವಾರ ವರನಟ ಡಾ.ರಾಜ್ಕುಮಾರ್ ಅವರ 84ನೇ ಜಯಂತ್ಯುತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದೆ.<br /> <br /> ಪದ್ಮಭೂಷಣ ಡಾ.ರಾಜ್ಕುಮಾರ್ ಅವರ ಜನ್ಮದಿನದ ಅಂಗವಾಗಿ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ತಂಡದಿಂದ ಸಂಗೀತ ರಸಮಂಜರಿ.<br /> ರೋಟರಿ ಬೆಂಗಳೂರು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ರಕ್ತದಾನ ಶಿಬಿರವನ್ನೂ ಆಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾ. ಪ್ರವೀಣ್ ಬರೆದಿರುವ `ಅಣ್ಣಾವ್ರ ಆದರ್ಶ ನಮಗೆ ಪ್ರಶಸ್ತ~ ಪುಸ್ತಕ ಲೋಕಾರ್ಪಣೆ.<br /> <br /> ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಎಚ್.ಡಿ. ಕುಮಾರಸ್ವಾಮಿ, ಸಾರಿಗೆ ಸಚಿವ ಆರ್.ಅಶೋಕ, ವಸತಿ ಸಚಿವ ವಿ.ಸೋಮಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಿಧಾನ ಪರಿಷತ್ ಸದಸ್ಯ, ನಟ ಶ್ರೀನಾಥ್, ನಟ ಅಂಬರೀಷ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಈ ಸಂಜೆ ಸಂಪಾದಕ ಟಿ. ವೆಂಕಟೇಶ್, ಬಿ.ಬಿ.ಎಂ.ಪಿ ಸದಸ್ಯ ಎಂ.ನಾಗರಾಜ್, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಸಾ.ರಾ.ಗೋವಿಂದು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ನೆ.ಲ.ನರೇಂದ್ರಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.<br /> <br /> ಸ್ಥಳ: ಡಾ.ರಾಜ್ ಕುಮಾರ್ ಪುಣ್ಯಭೂಮಿ, ಕಂಠೀರವ ಸ್ಟಡಿಯೋ. </span></p> <p><strong><span style="color: #800000"><span style="font-size: small">ಜ್ಞಾನಜ್ಯೋತಿ ಸಭಾಂಗಣದಲ್ಲಿ...<br /> </span></span></strong><span style="font-size: small">ವಾರ್ತಾ ಇಲಾಖೆಯು ಡಾ.ರಾಜ್ ಜನ್ಮದಿನಾಚರಣೆ ಆಯೋಜಿಸಿದೆ. ಡಿ.ವಿ.ಸದಾನಂದಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ಆಶಯ ನುಡಿ; ಡಾ.ಯು.ಆರ್.ಅನಂತಮೂರ್ತಿ. ಸಚಿವ ಆರ್.ಅಶೋಕ್, ಮೇಯರ್ ಶಾರದಮ್ಮ, ಸಂಸದ ಪಿ.ಸಿ. ಮೋಹನ್, ಪಾರ್ವತಮ್ಮ ರಾಜ್ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಕೆ.ವಿ. ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ, ನಟ ಜಗ್ಗೇಶ್, ಡಾ.ಮುಖ್ಯಮಂತ್ರಿ ಚಂದ್ರು, ವಿಧಾನ ಪರಿಷತ್ ಸದಸ್ಯರಾದ ಶ್ರೀನಾಥ್, ಡಾ.ದೊಡ್ಡರಂಗೇಗೌಡ, ಕಂಠೀರವ ಸ್ಟುಡಿಯೋ ಅಧ್ಯಕ್ಷ ಎಂ. ರುದ್ರೇಶ್, ಅಧ್ಯಕ್ಷತೆ- ಶಾಸಕ ದಿನೇಶ್ ಗುಂಡೂರಾವ್. ನಂತರ ಡಾ.ರಾಜ್ ಅಭಿನಯದ ಚಲನಚಿತ್ರಗಳ ದೃಶ್ಯಾವಳಿ ಪ್ರದರ್ಶನ. ಹಾಗೂ ಗೀತೆಗಳ ಗಾಯನ ಮತ್ತು ನೃತ್ಯ. ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಸಂಜೆ 6.</span></p> <p><span style="color: #800000"><strong><span style="font-size: small">ರಾಜ್ ಚಿತ್ರೋತ್ಸವ<br /> ಡಾ.ರಾಜ್ಕುಮಾರ್ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ತರಬೇತಿ ಕೇಂದ್ರ: </span></strong></span><span style="font-size: small">ಡಾ.ರಾಜ್ ಚಿತ್ರೋತ್ಸವ. ಪ್ರಿಯದರ್ಶಿನಿ ಸಭಾಂಗಣದಲ್ಲಿ (ಬಾದಾಮಿ ಹೌಸ್) ಬೆಳಿಗ್ಗೆ 11ಕ್ಕೆ ಡಾ.ಚಂದ್ರಶೇಖರ ಕಂಬಾರ ಅವರಿಂದ ಉದ್ಘಾಟನೆ. ಅತಿಥಿಗಳು: ತಾರಾ ಅನುರಾಧ, ನಟ ವಿಜಯ್, ಅಗರ ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಶಿವಕುಮಾರ್. ಮಧ್ಯಾಹ್ನ 12ಕ್ಕೆ ಶ್ರೀನಿವಾಸ ಕಲ್ಯಾಣ, ಮಧ್ಯಾಹ್ನ 2.30ಕ್ಕೆ ಭಕ್ತ ಪ್ರಹ್ಲಾದ, ಸಂಜೆ 6ಕ್ಕೆ ಭಕ್ತ ಕುಂಬಾರ ಚಿತ್ರಗಳ ಪ್ರದರ್ಶನ. ಜೆ.ಸಿ.ರಸ್ತೆ, ರವೀಂದ್ರ ಕಲಾಕ್ಷೇತ್ರ ಸಂಸ ಬಯಲು ರಂಗಮಂದಿರದಲ್ಲಿ ಸಂಜೆ 6ಕ್ಕೆ ಡಾ.ರಾಜ್ ಜೀವನಧಾರೆ ಸಾಕ್ಷ್ಯಚಿತ್ರ ಪ್ರದರ್ಶನ. ಅತಿಥಿಗಳು: ನಾಗತಿಹಳ್ಳಿ ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ, ಮಮತಾರಾವ್, ಪ್ರೊ.ಎಲ್.ಎನ್. ಮುಕುಂದರಾಜ್. ಅಧ್ಯಕ್ಷತೆ: ಡಿ.ಕೆ.ಚೌಟ. ವಿ.ಎಂ.ಮೋಹನ್ ಅವರ ಓಂಕಾರ್ ಮೆಲೋಡಿಸ್ ತಂಡದಿಂದ ಡಾ.ರಾಜ್ ಅವರ ಗೀತೆಗಳ ಗಾಯನ ಮತ್ತು ನೃತ್ಯ.</span></p> </td> </tr> </tbody> </table>.<p>ಜನಸಾಮಾನ್ಯರಿಂದ ಉನ್ನತ ವರ್ಗದವರೆಗೆ ರಾಜಕುಮಾರ್ ಆವರಿಸಿಕೊಂಡಿರುವ ಬಗೆ ವಿಸ್ಮಯ ಹುಟ್ಟಿಸುವಂತಿದೆ. ರಾಜಕುಮಾರ್ ಪಟಗಳು, ಪ್ರತಿಮೆಗಳು ನಗರದ ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ. ರಾಜಕುಮಾರ್ ಹೆಸರಿನ ಮಹಲುಗಳಿವೆ, ರಸ್ತೆಯಿದೆ. ರಾಜ್ ಸಿನಿಮಾಗಳನ್ನು ನೋಡದವರು ಕೂಡ ತಮ್ಮ ಅಂಗಡಿ ಮಹಲುಗಳ ಮೇಲೆ ರಾಜ್ ಚಿತ್ರಪಟ ಅಂಟಿಸಿಕೊಂಡಿರುವುದಿದೆ. ಅವರ ಪಾಲಿಗೆ ಈ ಚಿತ್ರಪಟ ಗುರಾಣಿಯಿದ್ದಂತೆ. <br /> ಬೀದಿಗೆ ಹೊಂದಿಕೊಂಡಿರುವ ಸಾರ್ವಜನಿಕ ಸ್ಥಳಗಳನ್ನು ಗಣಪ, ಏಸು, ಲಕ್ಷ್ಮಿ, ಮುಂತಾದವರ ಚಿತ್ರಪಟಗಳು ಮೂತ್ರಕೋರರಿಂದ ರಕ್ಷಿಸುತ್ತವೆ. <br /> <br /> ಅಂಥ ಔಷಧೀಯ ಗುಣ ರಾಜ್ ಚಿತ್ರಪಟಕ್ಕೂ ಇದೆ. ಭಾಷಾಭಿಮಾನ ಎಲ್ಲೆ ಮೀರಿದ ಸಂದರ್ಭದಲ್ಲಿ ದೊಡ್ಡ ದೊಡ್ಡ ಮಹಲು ಹಾಗೂ ವಾಹನಗಳ ಪಾಲಿಗೆ ರಾಜಕುಮಾರ್ ಚಿತ್ರಪಟವೇ ರಕ್ಷೆ!<br /> <br /> ರಂಜನೆಯೇ ಸಿನಿಮಾಗಳ ಪ್ರಧಾನ ಗುಣ ಎನ್ನುವ ನಂಬಿಕೆ ಬಲಿಯುತ್ತಿರುವ ಈ ದಿನಗಳಲ್ಲಿ, ಕನ್ನಡಿಗರ ಬದುಕು-ಭಾವನೆಗಳ ಅಭಿವ್ಯಕ್ತಿಯಂತೆ ರಾಜ್ ಚಿತ್ರಗಳು ಮೂಡಿಬಂದದ್ದು ಒಂದು ಅಸಾಧಾರಣ ಸಂಗತಿಯಂತೆ ಕಾಣಿಸುತ್ತದೆ. <br /> <br /> ರಾಜಕುಮಾರ್ ಸಿನಿಮಾಗಳ ಮೂಲಕ ಕನ್ನಡ ಸಂಸ್ಕೃತಿ ಮತ್ತು ಕನ್ನಡ ನೆಲದ ಮೌಲ್ಯಗಳನ್ನು ಕಟ್ಟಿಕೊಡುವ ಒಂದು ಪ್ರಜ್ಞಾಪೂರ್ವಕ ಪ್ರಯತ್ನ ನಡೆಯಿತು. ಈ ಪ್ರಯತ್ನದ ಹಂಬಲವೇ, ಕನ್ನಡ ಚಿತ್ರಗಳಲ್ಲಷ್ಟೇ ನಟಿಸುವ ರಾಜಕುಮಾರರ ಸಂಕಲ್ಪದ ಹಿಂದೆ ಕೆಲಸ ಮಾಡಿರಬಹುದು.<br /> <br /> ಒಂದು ಹಂತದ ನಂತರ ರಾಜಕುಮಾರ್ ಸಿನಿಮಾ ಎಂದಕೂಡಲೇ ಅಲ್ಲೊಂದು ಸಂದೇಶ ಇರಲೇಬೇಕು ಎನ್ನುವಂತಾಯಿತು. ತೀರಾ ಹಳೆಯ ಚಿತ್ರಗಳ ಮಾತಿರಲಿ, ರಾಜಕುಮಾರರ ಕೊನೆಯ ಚಿತ್ರಗಳನ್ನು ಉದಾಹರಿಸುವುದಾದರೆ- `ಜೀವನಚೈತ್ರ~ ಚಿತ್ರ ಮದ್ಯಪಾನದ ವಿರುದ್ಧ ಸೊಲ್ಲೆತ್ತುತ್ತದೆ. ಕಾಮನೆಗಳ ಬೆನ್ನುಹತ್ತಿದ ಯುವಪೀಳಿಗೆ ಹೆತ್ತವರನ್ನು ಹಾಗೂ ಮೌಲ್ಯಗಳನ್ನು ಬೀದಿಪಾಲು ಮಾಡುತ್ತಿರುವ ವಿಪರ್ಯಾಸವೂ, ಕೂಡು ಕುಟುಂಬದ ಪ್ರತಿಪಾದನೆಯೂ ಆ ಚಿತ್ರದಲ್ಲಿದೆ. <br /> <br /> `ಆಕಸ್ಮಿಕ~ ಚಿತ್ರ ಹೆಣ್ಣುಮಕ್ಕಳ ಮಾರಾಟದ ದಂಧೆಯನ್ನು ವಿರೋಧಿಸುವ ಕಥೆಯನ್ನು ಹೊಂದಿದೆ. `ಒಡಹುಟ್ಟಿದವರು~ ಚಿತ್ರ ಸೋದರ ವಾತ್ಸಲ್ಯದ ಜೊತೆಗೆ ರೈತಪ್ರೀತಿಯನ್ನು ಸಾರುತ್ತದೆ. ರಾಜಕುಮಾರರ ಕೊನೆಯ ಚಿತ್ರ `ಶಬ್ದವೇಧಿ~ ಎಳೆಯರು ಮತ್ತು ಯುವಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ವಸ್ತುಗಳ ಕಬಂಧ ಬಾಹುಗಳ ವಿರುದ್ಧ ದನಿಯೆತ್ತುತ್ತದೆ (ಈ ನಾಲ್ಕು ಚಿತ್ರಗಳಲ್ಲಿ ಮೂರು ಕಾದಂಬರಿ ಆಧರಿತ ಚಿತ್ರಗಳಾಗಿರುವುದು ಗಮನಾರ್ಹ). <br /> <br /> ಈ ನಾಲ್ಕು ಸಿನಿಮಾಗಳು, ನಗರಗಳು ಸೇರಿದಂತೆ ಈ ಹೊತ್ತಿನ ನಮ್ಮ ಸಮಾಜ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಮುಖಾಮುಖಿ ಆದಂತಿಲ್ಲವೇ? ಇಂಥ ಅನುಸಂಧಾನವನ್ನು ಇವತ್ತಿನ ಚಿತ್ರಗಳಲ್ಲಿ ಕಾಣಲಿಕ್ಕೆ ಸಾಧ್ಯವೇ? ಇಲ್ಲವೆನ್ನುವುದೇ ರಾಜಕುಮಾರ್ ಚಿತ್ರಗಳ ಅನನ್ಯತೆಗೆ ಕಾರಣವಾಗಿದೆ.<br /> <br /> `ಹೊಸ ಗಾನಬಜಾನ~ದ ಈ ದಿನಗಳಲ್ಲಿ ಹಳೆಯ ಚಿತ್ರಗಳು ನಿಧಾನಗತಿಯ ಚಿತ್ರಗಳಾಗಿ ಕಾಣಿಸುತ್ತವೆ, ಈ ಕಾಲಕ್ಕೆ ಹೊಂದದ ಕಥನಗಳಾಗಿ ಭಾಸವಾಗುತ್ತವೆ. ಆದರೆ, ಇಂಥ ಗೊಣಗಾಟ ರಾಜ್ ಚಿತ್ರಗಳ ಸಂದರ್ಭದಲ್ಲಿ ಕೇಳಿಸುವುದು ಕಡಿಮೆ. ರಿಮೋಟ್ನ ಗುಂಡಿಗಳನ್ನು ಅಮುಕುತ್ತಾ ಸಾಗುವಾಗ ವಾಹಿನಿಯೊಂದರಲ್ಲಿ ರಾಜಕುಮಾರರ ಮುಖ ಕಾಣಿಸುತ್ತದೆ ಎಂದುಕೊಳ್ಳಿ. ತಕ್ಷಣ ಮುಂದಕ್ಕೆ ಜಿಗಿದರೆ ಬಚಾವು. <br /> <br /> ಕೆಲವು ಕ್ಷಣ ಮೈಮರೆತರೆ ಆ ಸಿನಿಮಾ ತಂತಾನೇ ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತದೆ. ಸತ್ಯ ಹರಿಶ್ಚಂದ್ರ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಮಯೂರ, ಶ್ರೀಕೃಷ್ಣ ದೇವರಾಯ, ಬಂಗಾರದ ಪಂಜರ- ಮುಂತಾದ ಚಿತ್ರಗಳು ಯಾವತ್ತಿಗೂ ಮಸುಕಾಗದ ಅನುಪಮ ಕಲಾಕೃತಿಗಳು.<br /> <br /> ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುವುದು ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಹೆಪ್ಪುಗಟ್ಟಿರುವ ಆತಂಕ. ಈ ಅಳಲಿನ ಹಿನ್ನೆಲೆಯಲ್ಲಿಯೇ ನಿರ್ದೇಶಕ ಎಸ್. ನಾರಾಯಣ್ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಿಂದ ಹೊರಗುಳಿದಿರುವುದಾಗಿ ಪ್ರಕಟಿಸಿದ್ದಾರೆ.<br /> <br /> ಇಂಥದೊಂದು ನಿರ್ವಾತವನ್ನು ರಾಜಕುಮಾರ್ ಕೂಡ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಎದುರಿಸಿದ್ದರು. ಅರವತ್ತರ ದಶಕದ ಆರಂಭದ ವರ್ಷಗಳಲ್ಲಿ ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರೋದ್ಯಮ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯಕ್ಕೀಡಾಗಿತ್ತು. <br /> <br /> ಪರಭಾಷಾ ಚಿತ್ರಗಳೊಂದಿಗೆ ಡಬ್ಬಿಂಗ್ ಚಿತ್ರಗಳು ಕೂಡ ಕನ್ನಡದ ಕಲಾವಿದರು, ತಂತ್ರಜ್ಞರ ಪಾಲಿಗೆ ಕಂಟಕವಾಗಿದ್ದವು. ಇಂಥದೊಂದು ವಿಷಮ ಪರಿಸ್ಥಿತಿಯಲ್ಲಿ, ಕನ್ನಡದ ಅಸ್ಮಿತೆಯನ್ನು ಸಾರುವ ಚಿತ್ರಗಳು ರಾಜಕುಮಾರರ ಮೂಲಕ ಸಾಲುಸಾಲಾಗಿ ಬಂದವು. <br /> <br /> ಕನ್ನಡದ ಸಾಹಿತ್ಯ ಕೃತಿಗಳನ್ನಾಧರಿಸಿ ಸಿನಿಮಾ ರೂಪಿಸುವ ಪರಂಪರೆ ಗಟ್ಟಿಯಾದದ್ದು ಆಗಲೇ. ಚಿತ್ರಗಳ ಗುಣಮಟ್ಟ ಹಾಗೂ ಕನ್ನಡದ ಸೊಗಡಿನ ಮೂಲಕವೇ ಕನ್ನಡ ಚಿತ್ರೋದ್ಯಮದ ಎಲ್ಲೆಕಟ್ಟುಗಳನ್ನು ವಿಸ್ತರಿಸುವಲ್ಲಿ `ರಾಜ್ ಚಿತ್ರಗಳು~ ಪ್ರಮುಖ ಪಾತ್ರ ವಹಿಸಿದವು. ಅಂಥದೊಂದು ಉಲ್ಲಂಘನೆ ಈಗಿನ ಜರೂರು ಕೂಡ. <br /> <br /> ಅರವತ್ತರ ದಶಕದ ಸಂಕ್ರಮಣ ಕಾಲ ಕನ್ನಡ ಸಿನಿಮಾಗಳ ಜೊತೆಗೆ, ಬೆಂಗಳೂರಿನಲ್ಲಿನ ಕನ್ನಡಿಗರ ಅಸ್ತಿತ್ವಕ್ಕೂ ಸಂಚಕಾರ ತಂದಿತ್ತು. ಮ. ರಾಮಮೂರ್ತಿ, ಅನಕೃ ನೇತೃತ್ವದಲ್ಲಿ ರೂಪುಗೊಂಡ ಕನ್ನಡ ಚಳವಳಿ ರಾಜಧಾನಿಯಲ್ಲಿ ಕನ್ನಡಿಗರ ಅಸ್ಮಿತೆಯನ್ನು ಕಾಪಾಡಿತು. ಆ ಚಳವಳಿಯ ಕವಲಾಗಿಯೇ ಡಬ್ಬಿಂಗ್ ನಿಷೇಧ ಕರ್ನಾಟಕದಲ್ಲಿ ಜಾರಿಯಾದುದು. <br /> <br /> ಕಾಲಚಕ್ರದ ಉರುಳಿನಲ್ಲಿ ಅರವತ್ತರ ದಶಕದ ನಿರ್ವಾತ ಮರುಕಳಿಸಿದಂತಿರುವ ದಿನಗಳಿವು. ಪರಭಾಷಾ ಚಿತ್ರಗಳ ಅಬ್ಬರ ಮತ್ತೆ ಹೆಚ್ಚಾಗಿದೆ. ರೀಮೇಕ್ ಮಾಡುವುದು ಪಾಪಪ್ರಜ್ಞೆಯ ಕೆಲಸವಾಗಿ ಈಗ ಉಳಿದಿಲ್ಲ. <br /> <br /> ಈ ನಡುವೆ, ಡಬ್ಬಿಂಗ್ ಪರ ದನಿಗಳು ನಿಚ್ಚಳವಾಗಿ ಕೇಳಿಸುತ್ತಿವೆ. ಆದರೆ, ಈ ಎಡರು ತೊಡರುಗಳನ್ನು ದಾಟಿಸಲು ರಾಜ್ ರೀತಿಯ ಅಂಬಿಗ ಈಗ ಬೇಕಾಗಿದ್ದಾನೆ. ಚಿತ್ರರಂಗದಲ್ಲೆಗ ಅನೇಕ ಪಾಳೇಪಟ್ಟುಗಳಿವೆ. ಅಖಂಡ ಕನ್ನಡ ಚಿತ್ರೋದ್ಯಮದ ಕನಸು ಮಾತ್ರ ಯಾರಿಗೂ ಬೀಳುವಂತೆ ಕಾಣುತ್ತಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>