<p><strong>ಬೆಂಗಳೂರು: `</strong>ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಸರ್ಕಾರಕ್ಕೂ ಮನವರಿಕೆಯಾಗಿದೆ. ಆದರೆ, ಅದನ್ನು ಹೇಗೆ ಅನುಷ್ಠಾನಕ್ಕೆ ತರಬೇಕೆಂಬ ಜಿಜ್ಞಾಸೆ ಕಾಡುತ್ತಿದೆ. ಆದರೂ ಸರ್ಕಾರ ಈ ಬಗ್ಗೆ ಖಂಡಿತಾ ಚಿಂತನೆ ನಡೆಸಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸೋಮವಾರ ಇಲ್ಲಿ ಹೇಳಿದರು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.<br /> <br /> ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್. ಅನಂತಮೂರ್ತಿ ಹಾಗೂ ಡಾ. ಕಂಬಾರರೂ ಸೇರಿದಂತೆ ಅನೇಕ ಹಿರಿಯರ ಆಶಯಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಲು ಸರ್ಕಾರ ಪರಿಶೀಲಿಸಲಿದೆ ಎಂದರು.<br /> <br /> `ಕಳೆದ ಒಂದು-ಒಂದೂವರೆ ವರ್ಷದಿಂದ ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳನ್ನು ಓದಿ ಜನತೆಗೂ ಬೇಸರವಾಗಿತ್ತು. ಆದರೆ, ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ದಿನ ಜನತೆಗೆ ಭರವಸೆಯ ದಿನ. ಎಲ್ಲ ಪತ್ರಿಕೆಗಳಲ್ಲಿಯೂ ಕಂಬಾರರ ಸುದ್ದಿ ಓದಿ ಜನ ಪುಳಕಿತರಾದರು.<br /> <br /> ಇನ್ನು ಮುಂದೆ ಇಂಥದೇ ದಿನಗಳು ಬರಲಿ ಎಂದು ನಾನು ಕೂಡ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ~ ಎಂದು ಮುಖ್ಯಮಂತ್ರಿಗಳು ಹೇಳಿದಾಗ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಸಭಿಕರು ಚಪ್ಪಾಳೆ ಹೊಡೆದು ಹರ್ಷ ವ್ಯಕ್ತಪಡಿಸಿದರು.<br /> <br /> <strong>ನಮ್ಮದೂ ಸ್ವಾರ್ಥ ಇದೆ:</strong> `ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕಂಬಾರರನ್ನು ಸರ್ಕಾರದ ಪರವಾಗಿ ಅಭಿನಂದಿಸುವುದರಲ್ಲಿ ನಮ್ಮದೂ ಸ್ವಲ್ಪ ಸ್ವಾರ್ಥ ಇದೆ. ಪರವಾಗಿಲ್ಲ, ಸರ್ಕಾರ ಕಂಬಾರರನ್ನು ಅಭಿನಂದಿಸುವಂತಹ ಒಳ್ಳೆಯ ಕೆಲಸ ಮಾಡಿದೆ ಎಂದು ಜನ ಭಾವಿಸುವುದರ ಜತೆಗೆ, ಇಂತಹ ಕೆಲಸಗಳಿಂದ ಸರ್ಕಾರದ ಗೌರವವೂ ಹೆಚ್ಚಿದಂತಾಗುತ್ತದೆ. <br /> <br /> ಕಂಬಾರರು ಉತ್ತರ ಕರ್ನಾಟಕದವರು ಎಂಬ ಕಾರಣಕ್ಕೆ ಸಚಿವ ಕಾರಜೋಳ ಕೂಡ ಪ್ರಶಸ್ತಿ ಪ್ರಕಟವಾದ ದಿನದಿಂದಲೇ `ಸನ್ಮಾನ ಯಾವಾಗ ಮಾಡೋಣ ಸಾರ್~ ಎಂದು ಪಟ್ಟು ಹಿಡಿದರು. ಇದರಲ್ಲಿ ಅವರದೂ ಸ್ವಲ್ಪ ಸ್ವಾರ್ಥ ಅಡಗಿತ್ತು~ ಎಂದು ಮುಖ್ಯಮಂತ್ರಿಗಳು ನಗೆ ಚಟಾಕಿ ಹಾರಿಸಿದರು.<br /> <br /> <strong>ಕಂಬಾರರ ಸಮಗ್ರ ಸಾಹಿತ್ಯ ಮರು ಮುದ್ರಣ:</strong> ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ. ಕಾರಜೋಳ, `ಡಾ. ಕಂಬಾರರ ಸಮಗ್ರ ಸಾಹಿತ್ಯವನ್ನು ಮರು ಮುದ್ರಣ ಮಾಡುವ ಮೂಲಕ ಜನತೆಗೆ ಸುಲಭ ಬೆಲೆಗೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ~ ಎಂದು ಪ್ರಕಟಿಸಿದರು.<br /> <br /> ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಶಿಕ್ಷಣ ಮಾಧ್ಯಮವಾಗಿ ಉಳಿಯಬೇಕು. ಇಲ್ಲದಿದ್ದರೆ ಕನ್ನಡ ಅಡುಗೆ ಮನೆ ಭಾಷೆಯಾಗಿ ಉಳಿಯುವ ಅಪಾಯವಿದೆ~ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> `ಬೆಂಗಳೂರಿನಲ್ಲಿ ಮನಃಪೂರಕವಾಗಿ ಕನ್ನಡ ಕಲಿಯುವ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕಾಗಿದೆ. ಇಂಗ್ಲಿಷ್ ಭಾಷೆಗೆ ಸ್ವೀಕರಿಸುವ ಗುಣವಿರಬಹುದು. ಆದರೆ, ಕನ್ನಡವೂ ಶ್ರೀಮಂತ. ಗ್ರಹಿಸುವ ಶಕ್ತಿಗಾಗಿ ಇಂಗ್ಲಿಷ್ ಕಲಿತರೆ, ಜ್ಞಾನದ ವೃದ್ಧಿ ಹಾಗೂ ಅಭಿವ್ಯಕ್ತಿಗಾಗಿ ಕನ್ನಡ ಬಳಸಬೇಕಾಗಿದೆ~ ಎಂದರು.<br /> <br /> `ಬೆಂಗಳೂರಿನ ಪ್ರತಿಯೊಂದು ಬಹುರಾಷ್ಟ್ರೀಯ ಕಂಪೆನಿಗಳಲ್ಲಿಯೂ ಇಂಗ್ಲಿಷ್ ಜತೆಗೆ ಕನ್ನಡವನ್ನು ಬಳಸಲು ಸರ್ಕಾರ ಕಾನೂನು ಜಾರಿಗೊಳಿಸಬೇಕು. ನಾವು ಭಾಷಾಂಧರಲ್ಲ ನಿಜ. ಆದರೆ, ನಗರದಲ್ಲಿ ಕನ್ನಡವನ್ನು ಗಟ್ಟಿಯಾಗಿ ಬೆಳೆಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕೇವಲ ಕನ್ನಡ ನಾಡಿಗಷ್ಟೇ ಅಲ್ಲ, ಇಡೀ ಜಗತ್ತಿಗೇ ನಷ್ಟ~ ಎಂದರು.<br /> <br /> ಇದೇ ಸಂದರ್ಭದಲ್ಲಿ ಕವಿ ಡಾ. ಚಂದ್ರಶೇಖರ ಕಂಬಾರ- ಸತ್ಯಭಾಮ ಕಂಬಾರ ದಂಪತಿಯನ್ನು ಸರ್ಕಾರದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರಿಗೆ ಸರ್ಕಾರದ ವತಿಯಿಂದ ಐದು ಲಕ್ಷ ರೂಪಾಯಿ ಗೌರವಧನದ ಚೆಕ್ ನೀಡಲಾಯಿತು. <br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಸ್ವಾಗತಿಸಿದರು. ಆಯುಕ್ತ ಮನು ಬಳಿಗಾರ್ ವಂದಿಸಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಜಾನಪದ ಪರಿಷತ್ತಿನ ಅಧ್ಯಕ್ಷ ಜಿ. ನಾರಾಯಣ ಸೇರಿದಂತೆ ಅನೇಕ ಸಾಹಿತಿಗಳು ಸಮಾರಂಭಕ್ಕೆ ಸಾಕ್ಷಿಯಾದರು.<br /> <br /> <strong>ವಿವಿ ಮಾದರಿ ಶಿಕ್ಷಣ ಕೇಂದ್ರ ಸ್ಥಾಪನೆ: ಕಂಬಾರ ಸಲಹೆ<br /> ಬೆಂಗಳೂರು: </strong>ಎಲ್ಕೆಜಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ ಕನ್ನಡದಲ್ಲಿಯೇ ಬೋಧನೆ ಮಾಡುವಂತಹ ವಿಶ್ವವಿದ್ಯಾಲಯ ಮಾದರಿಯ ಒಂದು ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವಂತೆ ಡಾ. ಚಂದ್ರಶೇಖರ ಕಂಬಾರ ಅವರು ಸಲಹೆ ನೀಡಿದರು.<br /> <br /> ರಾಜ್ಯ ಸರ್ಕಾರದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, `ಕನ್ನಡ ಭಾಷೆಯ ಅಗತ್ಯತೆಗಳನ್ನು ಪೂರೈಸಲು ಹಾಗೂ ಶಿಕ್ಷಣ ವ್ಯವಸ್ಥೆಯ ನ್ಯೂನತೆ-ಕೊರತೆಗಳ ಬಗ್ಗೆ ಚರ್ಚಿಸಲು ಇದರಿಂದ ಸಹಕಾರಿಯಾಗಲಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಸರ್ಕಾರಕ್ಕೂ ಮನವರಿಕೆಯಾಗಿದೆ. ಆದರೆ, ಅದನ್ನು ಹೇಗೆ ಅನುಷ್ಠಾನಕ್ಕೆ ತರಬೇಕೆಂಬ ಜಿಜ್ಞಾಸೆ ಕಾಡುತ್ತಿದೆ. ಆದರೂ ಸರ್ಕಾರ ಈ ಬಗ್ಗೆ ಖಂಡಿತಾ ಚಿಂತನೆ ನಡೆಸಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸೋಮವಾರ ಇಲ್ಲಿ ಹೇಳಿದರು.<br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.<br /> <br /> ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್. ಅನಂತಮೂರ್ತಿ ಹಾಗೂ ಡಾ. ಕಂಬಾರರೂ ಸೇರಿದಂತೆ ಅನೇಕ ಹಿರಿಯರ ಆಶಯಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಲು ಸರ್ಕಾರ ಪರಿಶೀಲಿಸಲಿದೆ ಎಂದರು.<br /> <br /> `ಕಳೆದ ಒಂದು-ಒಂದೂವರೆ ವರ್ಷದಿಂದ ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳನ್ನು ಓದಿ ಜನತೆಗೂ ಬೇಸರವಾಗಿತ್ತು. ಆದರೆ, ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ದಿನ ಜನತೆಗೆ ಭರವಸೆಯ ದಿನ. ಎಲ್ಲ ಪತ್ರಿಕೆಗಳಲ್ಲಿಯೂ ಕಂಬಾರರ ಸುದ್ದಿ ಓದಿ ಜನ ಪುಳಕಿತರಾದರು.<br /> <br /> ಇನ್ನು ಮುಂದೆ ಇಂಥದೇ ದಿನಗಳು ಬರಲಿ ಎಂದು ನಾನು ಕೂಡ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ~ ಎಂದು ಮುಖ್ಯಮಂತ್ರಿಗಳು ಹೇಳಿದಾಗ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಸಭಿಕರು ಚಪ್ಪಾಳೆ ಹೊಡೆದು ಹರ್ಷ ವ್ಯಕ್ತಪಡಿಸಿದರು.<br /> <br /> <strong>ನಮ್ಮದೂ ಸ್ವಾರ್ಥ ಇದೆ:</strong> `ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕಂಬಾರರನ್ನು ಸರ್ಕಾರದ ಪರವಾಗಿ ಅಭಿನಂದಿಸುವುದರಲ್ಲಿ ನಮ್ಮದೂ ಸ್ವಲ್ಪ ಸ್ವಾರ್ಥ ಇದೆ. ಪರವಾಗಿಲ್ಲ, ಸರ್ಕಾರ ಕಂಬಾರರನ್ನು ಅಭಿನಂದಿಸುವಂತಹ ಒಳ್ಳೆಯ ಕೆಲಸ ಮಾಡಿದೆ ಎಂದು ಜನ ಭಾವಿಸುವುದರ ಜತೆಗೆ, ಇಂತಹ ಕೆಲಸಗಳಿಂದ ಸರ್ಕಾರದ ಗೌರವವೂ ಹೆಚ್ಚಿದಂತಾಗುತ್ತದೆ. <br /> <br /> ಕಂಬಾರರು ಉತ್ತರ ಕರ್ನಾಟಕದವರು ಎಂಬ ಕಾರಣಕ್ಕೆ ಸಚಿವ ಕಾರಜೋಳ ಕೂಡ ಪ್ರಶಸ್ತಿ ಪ್ರಕಟವಾದ ದಿನದಿಂದಲೇ `ಸನ್ಮಾನ ಯಾವಾಗ ಮಾಡೋಣ ಸಾರ್~ ಎಂದು ಪಟ್ಟು ಹಿಡಿದರು. ಇದರಲ್ಲಿ ಅವರದೂ ಸ್ವಲ್ಪ ಸ್ವಾರ್ಥ ಅಡಗಿತ್ತು~ ಎಂದು ಮುಖ್ಯಮಂತ್ರಿಗಳು ನಗೆ ಚಟಾಕಿ ಹಾರಿಸಿದರು.<br /> <br /> <strong>ಕಂಬಾರರ ಸಮಗ್ರ ಸಾಹಿತ್ಯ ಮರು ಮುದ್ರಣ:</strong> ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ. ಕಾರಜೋಳ, `ಡಾ. ಕಂಬಾರರ ಸಮಗ್ರ ಸಾಹಿತ್ಯವನ್ನು ಮರು ಮುದ್ರಣ ಮಾಡುವ ಮೂಲಕ ಜನತೆಗೆ ಸುಲಭ ಬೆಲೆಗೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ~ ಎಂದು ಪ್ರಕಟಿಸಿದರು.<br /> <br /> ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಶಿಕ್ಷಣ ಮಾಧ್ಯಮವಾಗಿ ಉಳಿಯಬೇಕು. ಇಲ್ಲದಿದ್ದರೆ ಕನ್ನಡ ಅಡುಗೆ ಮನೆ ಭಾಷೆಯಾಗಿ ಉಳಿಯುವ ಅಪಾಯವಿದೆ~ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> `ಬೆಂಗಳೂರಿನಲ್ಲಿ ಮನಃಪೂರಕವಾಗಿ ಕನ್ನಡ ಕಲಿಯುವ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕಾಗಿದೆ. ಇಂಗ್ಲಿಷ್ ಭಾಷೆಗೆ ಸ್ವೀಕರಿಸುವ ಗುಣವಿರಬಹುದು. ಆದರೆ, ಕನ್ನಡವೂ ಶ್ರೀಮಂತ. ಗ್ರಹಿಸುವ ಶಕ್ತಿಗಾಗಿ ಇಂಗ್ಲಿಷ್ ಕಲಿತರೆ, ಜ್ಞಾನದ ವೃದ್ಧಿ ಹಾಗೂ ಅಭಿವ್ಯಕ್ತಿಗಾಗಿ ಕನ್ನಡ ಬಳಸಬೇಕಾಗಿದೆ~ ಎಂದರು.<br /> <br /> `ಬೆಂಗಳೂರಿನ ಪ್ರತಿಯೊಂದು ಬಹುರಾಷ್ಟ್ರೀಯ ಕಂಪೆನಿಗಳಲ್ಲಿಯೂ ಇಂಗ್ಲಿಷ್ ಜತೆಗೆ ಕನ್ನಡವನ್ನು ಬಳಸಲು ಸರ್ಕಾರ ಕಾನೂನು ಜಾರಿಗೊಳಿಸಬೇಕು. ನಾವು ಭಾಷಾಂಧರಲ್ಲ ನಿಜ. ಆದರೆ, ನಗರದಲ್ಲಿ ಕನ್ನಡವನ್ನು ಗಟ್ಟಿಯಾಗಿ ಬೆಳೆಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕೇವಲ ಕನ್ನಡ ನಾಡಿಗಷ್ಟೇ ಅಲ್ಲ, ಇಡೀ ಜಗತ್ತಿಗೇ ನಷ್ಟ~ ಎಂದರು.<br /> <br /> ಇದೇ ಸಂದರ್ಭದಲ್ಲಿ ಕವಿ ಡಾ. ಚಂದ್ರಶೇಖರ ಕಂಬಾರ- ಸತ್ಯಭಾಮ ಕಂಬಾರ ದಂಪತಿಯನ್ನು ಸರ್ಕಾರದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರಿಗೆ ಸರ್ಕಾರದ ವತಿಯಿಂದ ಐದು ಲಕ್ಷ ರೂಪಾಯಿ ಗೌರವಧನದ ಚೆಕ್ ನೀಡಲಾಯಿತು. <br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಸ್ವಾಗತಿಸಿದರು. ಆಯುಕ್ತ ಮನು ಬಳಿಗಾರ್ ವಂದಿಸಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಜಾನಪದ ಪರಿಷತ್ತಿನ ಅಧ್ಯಕ್ಷ ಜಿ. ನಾರಾಯಣ ಸೇರಿದಂತೆ ಅನೇಕ ಸಾಹಿತಿಗಳು ಸಮಾರಂಭಕ್ಕೆ ಸಾಕ್ಷಿಯಾದರು.<br /> <br /> <strong>ವಿವಿ ಮಾದರಿ ಶಿಕ್ಷಣ ಕೇಂದ್ರ ಸ್ಥಾಪನೆ: ಕಂಬಾರ ಸಲಹೆ<br /> ಬೆಂಗಳೂರು: </strong>ಎಲ್ಕೆಜಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ ಕನ್ನಡದಲ್ಲಿಯೇ ಬೋಧನೆ ಮಾಡುವಂತಹ ವಿಶ್ವವಿದ್ಯಾಲಯ ಮಾದರಿಯ ಒಂದು ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವಂತೆ ಡಾ. ಚಂದ್ರಶೇಖರ ಕಂಬಾರ ಅವರು ಸಲಹೆ ನೀಡಿದರು.<br /> <br /> ರಾಜ್ಯ ಸರ್ಕಾರದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, `ಕನ್ನಡ ಭಾಷೆಯ ಅಗತ್ಯತೆಗಳನ್ನು ಪೂರೈಸಲು ಹಾಗೂ ಶಿಕ್ಷಣ ವ್ಯವಸ್ಥೆಯ ನ್ಯೂನತೆ-ಕೊರತೆಗಳ ಬಗ್ಗೆ ಚರ್ಚಿಸಲು ಇದರಿಂದ ಸಹಕಾರಿಯಾಗಲಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>