<p><strong>ಸುರಪುರ</strong>: ಮಹಾತ್ಮಾ ಕೋರಿಸಿದ್ದೇಶ್ವರರು ತಮ್ಮ ಪವಾಡಗಳ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಸರಳತೆ, ಪ್ರಾಮಾಣಿಕತೆ, ಪರೋಪಕಾರದಂತಹ ಗುಣಗಳನ್ನು ಅಳವಡಿಸಿಕೊಳ್ಳಲು ಬೋಧಿಸಿದ್ದರು. ಸರಳ ಸಾಮೂಹಿಕ ವಿವಾಹಕ್ಕೂ ಅವರು ಪ್ರೋತ್ಸಾಹಿಸಿದ್ದರು.<br /> <br /> ಅವರ ಜಾತ್ರಾ ಮಹೋತ್ಸವದಲ್ಲಿ ಸರಳ ಸಾಮೂಹಿಕ ವಿವಾಹ ಆಯೋಜಿಸಿರುವುದು ಸ್ತುತ್ಯಾರ್ಹ ಎಂದು ನಾಲವಾರದ ತೋಟೇಂದ್ರ ಶಿವಾಚಾರ್ಯರು ಹರ್ಷ ವ್ಯಕ್ತಪಡಿಸಿದರು.<br /> <br /> ತಾಲ್ಲೂಕಿನ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಕೋರಿಸಿದ್ದೇಶ್ವರರ 13ನೇ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ನೂತನ ಜೀವನಕ್ಕೆ ಕಾಲಿಟ್ಟ ದಂಪತಿಗಳನ್ನು ಆಶೀರ್ವದಿಸಿ ಮಾತನಾಡಿದರು.<br /> <br /> ಸಾಮೂಹಿಕ ವಿವಾಹದಿಂದ ಅನಗತ್ಯ ದುಂದು ವೆಚ್ಚ ಕಡಿಮೆಯಾಗುತ್ತದೆ. ವಿವಾಹದ ನಂತರವೂ ಪಾಲಕರು ನೆಮ್ಮದಿಯ ಜೀವನ ನಡೆಸಬಹುದು. ನವದಂಪತಿಗಳು ಸುಖವಾಗಿ ಇರುತ್ತಾರೆ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡುವುದು ರಾಷ್ಟ್ರೀಯ ಉಳಿತಾಯ ಎನ್ನಬಹುದು.<br /> <br /> ಉಳ್ಳವರು ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳ ಮದುವೆ ಮಾಡಿ ಎಂದು ಕರೆ ನೀಡಿದರು.<br /> <br /> ಕರಡಕಲ್ದ ಶಾಂತರುದ್ರಮುನಿ ಸ್ವಾಮೀಜಿ ಮಾತನಾಡಿ, ಕಳೆದ 13 ವರ್ಷಗಳಿಂದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ನಡೆಯುತ್ತಾ ಬಂದಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರ ಅಮೋಘವಾಗಿದೆ.<br /> <br /> ನಾಲವಾರ ಅಪ್ಪ ಅವರ ಆಶೀರ್ವಾದ ಸದಾ ಇದೆ. ಎಲ್ಲರಿಗೂ ಕೋರಿಸಿದ್ದೇಶ್ವರ ಮಂಗಳವನ್ನುಂಟು ಮಾಡಲಿ ಎಂದು ಹಾರೈಸಿದರು.<br /> ಮಲ್ಲಿಕಾರ್ಜುನ ದೇವರು, ಹರನಾಳದ ದೊಡ್ಡಯ್ಯ ಶರಣರು, ನಗನೂರಿನ ಶರಣಪ್ಪ ಶರಣರು, ಗದಗದ ಮಾಡಿವಾಳಯ್ಯಶಾಸ್ತ್ರಿ, ಯಡ್ರಾಮಿ ರುದ್ರಮುನಿ ಸ್ವಾಮೀಜಿ, ಕೆಂಭಾವಿ ಬೀರಪ್ಪ ಶರಣರು, ಕರವೇ ರಾಜ್ಯ ಸಂಚಾಲಕ ಬಸವರಾಜ ಪಡುಕೋಟಿ, ಸಂಗನಗೌಡ ವಜ್ಜಲ, ಶರಣು ದಂಡಿನ, ರವಿ ಸೊನ್ನದ ಇದ್ದರು.<br /> <br /> ಪ್ರಕಾಶ ಅಂಗಡಿ ಸ್ವಾಗತಿಸಿದರು. ಶಿವುಪ್ರಕಾಶ ದೇವರು ನಿರೂಪಿಸಿದರು. ಮಲ್ಲಯ್ಯ ಪರನಸಹಳ್ಳಿ ವಂದಿಸಿದರು.<br /> ಶರಣುಕುಮಾರ ಜಾಲಹಳ್ಳಿ, ಶಾಂತಗೌಡ ಮಾಲಿಪಾಟೀಲ, ಪ್ರಭು ಸೊನ್ನದ, ಚಂದ್ರಶೇಖರ ಗೋಗಿ, ಶಾಂತಕುಮಾರ ಜೇರಟಗಿ ಅವರಿಂದ ಸಂಗೀತ ಸೇವೆ ನಡೆಯಿತು. 32 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ಮಹಾತ್ಮಾ ಕೋರಿಸಿದ್ದೇಶ್ವರರು ತಮ್ಮ ಪವಾಡಗಳ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಸರಳತೆ, ಪ್ರಾಮಾಣಿಕತೆ, ಪರೋಪಕಾರದಂತಹ ಗುಣಗಳನ್ನು ಅಳವಡಿಸಿಕೊಳ್ಳಲು ಬೋಧಿಸಿದ್ದರು. ಸರಳ ಸಾಮೂಹಿಕ ವಿವಾಹಕ್ಕೂ ಅವರು ಪ್ರೋತ್ಸಾಹಿಸಿದ್ದರು.<br /> <br /> ಅವರ ಜಾತ್ರಾ ಮಹೋತ್ಸವದಲ್ಲಿ ಸರಳ ಸಾಮೂಹಿಕ ವಿವಾಹ ಆಯೋಜಿಸಿರುವುದು ಸ್ತುತ್ಯಾರ್ಹ ಎಂದು ನಾಲವಾರದ ತೋಟೇಂದ್ರ ಶಿವಾಚಾರ್ಯರು ಹರ್ಷ ವ್ಯಕ್ತಪಡಿಸಿದರು.<br /> <br /> ತಾಲ್ಲೂಕಿನ ಕರಡಕಲ್ ಗ್ರಾಮದ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಕೋರಿಸಿದ್ದೇಶ್ವರರ 13ನೇ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ನೂತನ ಜೀವನಕ್ಕೆ ಕಾಲಿಟ್ಟ ದಂಪತಿಗಳನ್ನು ಆಶೀರ್ವದಿಸಿ ಮಾತನಾಡಿದರು.<br /> <br /> ಸಾಮೂಹಿಕ ವಿವಾಹದಿಂದ ಅನಗತ್ಯ ದುಂದು ವೆಚ್ಚ ಕಡಿಮೆಯಾಗುತ್ತದೆ. ವಿವಾಹದ ನಂತರವೂ ಪಾಲಕರು ನೆಮ್ಮದಿಯ ಜೀವನ ನಡೆಸಬಹುದು. ನವದಂಪತಿಗಳು ಸುಖವಾಗಿ ಇರುತ್ತಾರೆ. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡುವುದು ರಾಷ್ಟ್ರೀಯ ಉಳಿತಾಯ ಎನ್ನಬಹುದು.<br /> <br /> ಉಳ್ಳವರು ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳ ಮದುವೆ ಮಾಡಿ ಎಂದು ಕರೆ ನೀಡಿದರು.<br /> <br /> ಕರಡಕಲ್ದ ಶಾಂತರುದ್ರಮುನಿ ಸ್ವಾಮೀಜಿ ಮಾತನಾಡಿ, ಕಳೆದ 13 ವರ್ಷಗಳಿಂದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ನಡೆಯುತ್ತಾ ಬಂದಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರ ಸಹಕಾರ ಅಮೋಘವಾಗಿದೆ.<br /> <br /> ನಾಲವಾರ ಅಪ್ಪ ಅವರ ಆಶೀರ್ವಾದ ಸದಾ ಇದೆ. ಎಲ್ಲರಿಗೂ ಕೋರಿಸಿದ್ದೇಶ್ವರ ಮಂಗಳವನ್ನುಂಟು ಮಾಡಲಿ ಎಂದು ಹಾರೈಸಿದರು.<br /> ಮಲ್ಲಿಕಾರ್ಜುನ ದೇವರು, ಹರನಾಳದ ದೊಡ್ಡಯ್ಯ ಶರಣರು, ನಗನೂರಿನ ಶರಣಪ್ಪ ಶರಣರು, ಗದಗದ ಮಾಡಿವಾಳಯ್ಯಶಾಸ್ತ್ರಿ, ಯಡ್ರಾಮಿ ರುದ್ರಮುನಿ ಸ್ವಾಮೀಜಿ, ಕೆಂಭಾವಿ ಬೀರಪ್ಪ ಶರಣರು, ಕರವೇ ರಾಜ್ಯ ಸಂಚಾಲಕ ಬಸವರಾಜ ಪಡುಕೋಟಿ, ಸಂಗನಗೌಡ ವಜ್ಜಲ, ಶರಣು ದಂಡಿನ, ರವಿ ಸೊನ್ನದ ಇದ್ದರು.<br /> <br /> ಪ್ರಕಾಶ ಅಂಗಡಿ ಸ್ವಾಗತಿಸಿದರು. ಶಿವುಪ್ರಕಾಶ ದೇವರು ನಿರೂಪಿಸಿದರು. ಮಲ್ಲಯ್ಯ ಪರನಸಹಳ್ಳಿ ವಂದಿಸಿದರು.<br /> ಶರಣುಕುಮಾರ ಜಾಲಹಳ್ಳಿ, ಶಾಂತಗೌಡ ಮಾಲಿಪಾಟೀಲ, ಪ್ರಭು ಸೊನ್ನದ, ಚಂದ್ರಶೇಖರ ಗೋಗಿ, ಶಾಂತಕುಮಾರ ಜೇರಟಗಿ ಅವರಿಂದ ಸಂಗೀತ ಸೇವೆ ನಡೆಯಿತು. 32 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>