<p>`ನನಗೂ ಮೋದಿ ಅವರೇ ಮಾದರಿ~ ಎಂದಿದ್ದಾರೆ ಮುಖ್ಯಮಂತ್ರಿ ಸದಾನಂದಗೌಡರು (ಪ್ರ.ವಾ. ಸೆ. 19). ಅಧಿಕಾರದ ಶಿಖರದಲ್ಲಿರುವ ವ್ಯಕ್ತಿಗೆ `ಸ್ವಂತಿಕೆ~ ಇರಬೇಕು. ಆತ ಅನುಕರಿಸುವ ಅಗತ್ಯ ಒದಗಿದಾಗ ಮಾತ್ರ ಬೇರೆಡೆಗೆ ಗಮನಹರಿಸಬೇಕು. <br /> <br /> ಮೋದಿ ಅವರು ಗುಜರಾತಿನ ಅಭಿವೃದ್ಧಿಯನ್ನು ಇತರರು ಕರುಬುವಂತೆ ಮಾಡಿರಬಹುದು. ಆ ನಿಟ್ಟಿನಲ್ಲಿ ಅವರೇನೂ ಮಂತ್ರದಂಡವನ್ನು ಉಪಯೋಗ ಮಾಡಿಕೊಂಡಿಲ್ಲ.<br /> <br /> ರಾಜ್ಯದ ಅಭಿವೃದ್ಧಿಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳೇನು, ನಿಗದಿತ ಅವಧಿಯೊಳಗೆ ಅವನ್ನು ಸಾಧಿಸುವುದು ಹೇಗೆ, ಅಗತ್ಯವಾದ ಸಿಬ್ಬಂದಿ ಮತ್ತು ಅವರ ಅರ್ಹತಾನರ್ಹತೆಗಳು, ಹಣ ಪೂರೈಕೆ, ಸೂಕ್ತ ಮೇಲ್ವಿಚಾರಣೆ, ಲೋಪ-ದೋಷಗಳು ಆಗದಂತೆ ಎಚ್ಚರಿಕೆ,</p>.<p>ಹಾಗೂ ಅವು ಸಂಭವಿಸಿದಾಗ ತುರ್ತಾಗಿ ಅವುಗಳ ನಿವಾರಣೆಗೆ ಕ್ರಮ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಲ್ಲಿ ತನ್ನವರು-ಇತರರು ಎಂಬ ತಾರತಮ್ಯ ಮಾಡದಿರುವುದು ಈ ಮುಂತಾದ ಅಪೇಕ್ಷಣೀಯ ನಡವಳಿಕೆಗಳನ್ನು ನಮ್ಮ ಗೌಡರು ಮೋದಿಯವರಿಂದ ಕಲಿಯಬೇಕೆ?<br /> <br /> `ಕರ್ನಾಟಕವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ~ ಎಂದು ಬೀಗುತ್ತಿದ್ದ ಯಡಿಯೂರಪ್ಪನವರು ಬರೀ ಮಾತಿನಮಲ್ಲರಾಗುಳಿದರು. ಸದಾನಂದಗೌಡರೇ, ಕರ್ನಾಟಕದ ಹಿಂದಿನ ಮಹನೀಯರುಗಳು ಅದೆಷ್ಟೋ ಇದ್ದಾರೆ, ನಿಮಗೆ `ಮಾದರಿ~ಯಾಗಲು. <br /> <br /> ಸರ್. ಎಂ.ವಿ. ಅವರ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಿ. ಅಧಿಕಾರಸ್ಥರ ನಡೆ-ನುಡಿಗಳು, ಅಭಿವೃದ್ಧಿಯ ಬಗೆಗೆ ಕಳಕಳಿ ಗೊತ್ತಾಗುತ್ತದೆ. ಇಂತಹ ಮಹನೀಯರಿಗಿಂತ ಬೇರೆ ಬೇಕೆ? ಒಂದು ಮಾತು ಸ್ಪಷ್ಟ: ಗುಜರಾತ್ ಗುಜರಾತೇ; ಕರ್ನಾಟಕ ಕರ್ನಾಟಕವೇ. ಒಳ್ಳೆಯದನ್ನು ಪಡೆಯಬಾರದೆಂದಲ್ಲ. ಅದು ನಮ್ಮಲ್ಲೇ ಧಂಡಿಯಾಗಿರುವಾಗ ಯಾಕೆ ಸಲ್ಲದ ಗಿಮಿಕ್?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ನನಗೂ ಮೋದಿ ಅವರೇ ಮಾದರಿ~ ಎಂದಿದ್ದಾರೆ ಮುಖ್ಯಮಂತ್ರಿ ಸದಾನಂದಗೌಡರು (ಪ್ರ.ವಾ. ಸೆ. 19). ಅಧಿಕಾರದ ಶಿಖರದಲ್ಲಿರುವ ವ್ಯಕ್ತಿಗೆ `ಸ್ವಂತಿಕೆ~ ಇರಬೇಕು. ಆತ ಅನುಕರಿಸುವ ಅಗತ್ಯ ಒದಗಿದಾಗ ಮಾತ್ರ ಬೇರೆಡೆಗೆ ಗಮನಹರಿಸಬೇಕು. <br /> <br /> ಮೋದಿ ಅವರು ಗುಜರಾತಿನ ಅಭಿವೃದ್ಧಿಯನ್ನು ಇತರರು ಕರುಬುವಂತೆ ಮಾಡಿರಬಹುದು. ಆ ನಿಟ್ಟಿನಲ್ಲಿ ಅವರೇನೂ ಮಂತ್ರದಂಡವನ್ನು ಉಪಯೋಗ ಮಾಡಿಕೊಂಡಿಲ್ಲ.<br /> <br /> ರಾಜ್ಯದ ಅಭಿವೃದ್ಧಿಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳೇನು, ನಿಗದಿತ ಅವಧಿಯೊಳಗೆ ಅವನ್ನು ಸಾಧಿಸುವುದು ಹೇಗೆ, ಅಗತ್ಯವಾದ ಸಿಬ್ಬಂದಿ ಮತ್ತು ಅವರ ಅರ್ಹತಾನರ್ಹತೆಗಳು, ಹಣ ಪೂರೈಕೆ, ಸೂಕ್ತ ಮೇಲ್ವಿಚಾರಣೆ, ಲೋಪ-ದೋಷಗಳು ಆಗದಂತೆ ಎಚ್ಚರಿಕೆ,</p>.<p>ಹಾಗೂ ಅವು ಸಂಭವಿಸಿದಾಗ ತುರ್ತಾಗಿ ಅವುಗಳ ನಿವಾರಣೆಗೆ ಕ್ರಮ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಲ್ಲಿ ತನ್ನವರು-ಇತರರು ಎಂಬ ತಾರತಮ್ಯ ಮಾಡದಿರುವುದು ಈ ಮುಂತಾದ ಅಪೇಕ್ಷಣೀಯ ನಡವಳಿಕೆಗಳನ್ನು ನಮ್ಮ ಗೌಡರು ಮೋದಿಯವರಿಂದ ಕಲಿಯಬೇಕೆ?<br /> <br /> `ಕರ್ನಾಟಕವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ~ ಎಂದು ಬೀಗುತ್ತಿದ್ದ ಯಡಿಯೂರಪ್ಪನವರು ಬರೀ ಮಾತಿನಮಲ್ಲರಾಗುಳಿದರು. ಸದಾನಂದಗೌಡರೇ, ಕರ್ನಾಟಕದ ಹಿಂದಿನ ಮಹನೀಯರುಗಳು ಅದೆಷ್ಟೋ ಇದ್ದಾರೆ, ನಿಮಗೆ `ಮಾದರಿ~ಯಾಗಲು. <br /> <br /> ಸರ್. ಎಂ.ವಿ. ಅವರ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಿ. ಅಧಿಕಾರಸ್ಥರ ನಡೆ-ನುಡಿಗಳು, ಅಭಿವೃದ್ಧಿಯ ಬಗೆಗೆ ಕಳಕಳಿ ಗೊತ್ತಾಗುತ್ತದೆ. ಇಂತಹ ಮಹನೀಯರಿಗಿಂತ ಬೇರೆ ಬೇಕೆ? ಒಂದು ಮಾತು ಸ್ಪಷ್ಟ: ಗುಜರಾತ್ ಗುಜರಾತೇ; ಕರ್ನಾಟಕ ಕರ್ನಾಟಕವೇ. ಒಳ್ಳೆಯದನ್ನು ಪಡೆಯಬಾರದೆಂದಲ್ಲ. ಅದು ನಮ್ಮಲ್ಲೇ ಧಂಡಿಯಾಗಿರುವಾಗ ಯಾಕೆ ಸಲ್ಲದ ಗಿಮಿಕ್?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>