<p>ನೂರು ಚಿತ್ರಗಳ ಹೊಸ್ತಿಲಲ್ಲಿರುವ ನಿರ್ದೇಶಕ ಸಾಯಿಪ್ರಕಾಶ್ ಅಪರಾಧದ ಜಾಡು ಹಿಡಿದು ಹೊರಟಿದ್ದಾರೆ. ಅತ್ಯಾಚಾರ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡ ಕಥೆಯನ್ನು ಅವರು ಹೆಣೆದಿದ್ದಾರೆ. ಸಮಾಜದಲ್ಲಿ ಘಟಿಸುತ್ತಿರುವ ಅನೀತಿ, ಅನ್ಯಾಯ, ಅಕ್ರಮಗಳಿಗೆ ಅವರು ಕಾಲವನ್ನೇ ಹೊಣೆಯಾಗಿಸಿದ್ದಾರೆ. ಚಿತ್ರದ ಶೀರ್ಷಿಕೆ `ಕಲಿಗಾಲ'. ಇದು ಅವರ 97ನೇ ಸಿನಿಮಾ.<br /> <br /> ಅವರ ಚಿತ್ರದಲ್ಲಿ ಪ್ರಚಲಿತ ಸಾಮಾಜಿಕ ತಲ್ಲಣಗಳಿಗೆ ಪರಿಹಾರವೂ ಇದೆಯಂತೆ. ಆ ಪರಿಹಾರ ಸಮಾಜದಿಂದಲೇ ಸಾಧ್ಯ ಎನ್ನುವುದನ್ನು ಪ್ರತಿಬಿಂಬಿಸುವಲ್ಲಿ ಸಿನಿಮಾದ ಆಶಯ ಅಡಗಿದೆಯಂತೆ. ವಯಸ್ಕನೊಬ್ಬ ಯುವತಿಯ ಮೇಲೆ ಕೆಟ್ಟದೃಷ್ಟಿ ಬೀರಿದಾಗ, ಆತನ ಪತ್ನಿಯೇ ಆತನನ್ನು ಸಾಯಿಸುವ ಕಥೆ ಚಿತ್ರದಲ್ಲಿದೆ. ಸಮಾಜವೂ ಹೀಗೆ ಬದಲಾಗಬೇಕು.<br /> <br /> ಅಪರಾಧ ಎಸಗುವವರಿಗೆ ಭಯ ಹುಟ್ಟಿಸುವ ಸಮಾಜ ನಿರ್ಮಾಣವಾದರೆ ಅಪರಾಧಗಳು ಸಹಜವಾಗಿಯೇ ಕಡಿಮೆಯಾಗುತ್ತದೆ ಎನ್ನುವುದು ಅವರ ವಾದ. ಸಾಯಿಪ್ರಕಾಶ್ ಅವರ ಸ್ನೇಹಿತ ಆಂಧ್ರಪ್ರದೇಶ ಮೂಲದ ರಾಯಣ್ಣ `ಕಲಿಗಾಲ'ದ ನಿರ್ಮಾಪಕರು. `ಕಲಿಗಾಲ'ದ ಬಳಗ ಹಿರಿದಾಗಿದೆ. ಕಥೆ ಮೂರು ಯುವ ಜೋಡಿಗಳ ಮೇಲೆ ಕೇಂದ್ರಿತ. ರೂಪಿಕಾ, ಕ್ಷಮಾ ಸಿಂಗ್ ಮತ್ತು ಪಾವನಿ ನಾಯಕಿಯರು. ಆನಂದ್, ದರ್ಶನ್ ಮತ್ತು ಸಂದೀಪ್ ಎಂಬ ನಟರು ಪ್ರಮುಖ ಪಾತ್ರದಲ್ಲಿದ್ದಾರೆ. ಸಾಯಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.<br /> <br /> ಶ್ರೀನಿವಾಸಮೂರ್ತಿ, ಲಕ್ಷ್ಮೀದೇವಿ, ರಮೇಶ್ ಭಟ್, ಸುಮನ್ ರಾಯ್, ಪದ್ಮಾ ವಾಸಂತಿ, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿದ್ದಾರೆ. ವಕೀಲರ ಪೋಷಾಕು ಧರಿಸುತ್ತಿರುವ ಶ್ರೀನಿವಾಸಮೂರ್ತಿ ಅವರ ಪ್ರಕಾರ ಇದು `ಬ್ರಿಡ್ಜ್' ಚಿತ್ರ. ಈಗಿನ ದಿನಗಳಲ್ಲಿ ಸ್ವರಕ್ಷಣೆಯೇ ಮುಖ್ಯ ಎನ್ನುವುದನ್ನು ಚಿತ್ರ ಬಿಂಬಿಸುತ್ತದೆಯಂತೆ. ಕರಾಟೆ, ಕಲರಿಪಯಟ್ಟು, ಭರತನಾಟ್ಯ ಇತ್ಯಾದಿ ಕಲೆಗಳಲ್ಲಿ ಜಾಣೆಯಾಗಿರುವ ನಟಿ ಕ್ಷಮಾಸಿಂಗ್ ಮೂಲತಃ ಯೋಗ ಶಿಕ್ಷಕಿ. ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರು ತಮ್ಮ ಸ್ನೇಹಿತೆಯರಿಗೆ ಕರಾಟೆ ಕಲಿಸಿಕೊಡಲಿದ್ದಾರಂತೆ. `ಗೊಂಬೆಗಳ ಲವ್' ಖ್ಯಾತಿಯ ಪಾವನಿ ನ್ಯಾಯಕ್ಕಾಗಿ ಹೋರಾಡುವ ಪಾತ್ರ ನಿರ್ವಹಿಸುತ್ತಿದ್ದಾರೆ.<br /> <br /> <strong>ಇನ್ನೂ ನಾಲ್ಕು ಚಿತ್ರಗಳು...</strong><br /> ಒಂದರ ಹಿಂದೊಂದು ಸರಣಿ ಚಿತ್ರಗಳಿಗೆ ಕೈಹಾಕಿರುವ ಸಾಯಿಪ್ರಕಾಶ್ ಒಂದರ್ಥದಲ್ಲಿ ಈಗಾಗಲೇ ನೂರು ಚಿತ್ರಗಳ ಗಡಿ ದಾಟಿದ್ದಾರೆ. `ಕಲಿಗಾಲ'ದ ಹಿಂದೆಯೇ ಅವರ ನಾಲ್ಕು ಚಿತ್ರಗಳು ಸಿದ್ಧಗೊಳ್ಳಲಿವೆ. ಕಥೆ ಮಾತ್ರವಲ್ಲ ತಾರಾಬಳಗವನ್ನೂ ಸಾಯಿಪ್ರಕಾಶ್ ಸಿದ್ಧಪಡಿಸಿಕೊಂಡಿದ್ದಾರೆ.<br /> <br /> ಅವರ 98ನೇ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ರಾಧಿಕಾ ಮತ್ತೆ ಜೊತೆಗೂಡುತ್ತಿದ್ದಾರೆ. ಶಮಿಕಾ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರಕ್ಕೆ `ರಾಜವಂಶ' ಎಂಬ ಶೀರ್ಷಿಕೆಯಿಡುವ ಉದ್ದೇಶ ಅವರದ್ದು. ಅದರ ನಂತರ ಉಪೇಂದ್ರ, ಪರೂಲ್ ಮತ್ತು ಐಂದ್ರಿತಾ ರೇ ಅಭಿನಯದ `ಗೌರಿ'ಯ ಸರದಿ. ತೆಲುಗಿನ `ಲಕ್ಷ್ಮೀ' ಚಿತ್ರದ ಕನ್ನಡ ಅವತರಣಿಕೆಯಿದು. 100ನೇ ಚಿತ್ರ ಬಿ. ವಿಜಯಕುಮಾರ್ ನಿರ್ಮಾಣದ್ದು. ಅದರ ಶೀರ್ಷಿಕೆಯಿನ್ನೂ ಅಂತಿಮಗೊಂಡಿಲ್ಲ. 101ನೇ ಚಿತ್ರಕ್ಕೆ 101 ಕಲಾವಿದರನ್ನು ಬಳಸಿಕೊಳ್ಳುವ ಉದ್ದೇಶ ಸಾಯಿಪ್ರಕಾಶ್ ಅವರದ್ದು. ಚಿತ್ರದ ಹೆಸರು `ಸಾಯಿ ಅವತಾರ'. ತಮ್ಮ 100 ಚಿತ್ರಗಳಲ್ಲಿ ನಟಿಸಿದ ಪ್ರಮುಖ ಕಲಾವಿದರೆಲ್ಲರನ್ನೂ ಈ ಚಿತ್ರದಲ್ಲಿ ಸೇರಿಸುವುದು ಅವರ ಗುರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೂರು ಚಿತ್ರಗಳ ಹೊಸ್ತಿಲಲ್ಲಿರುವ ನಿರ್ದೇಶಕ ಸಾಯಿಪ್ರಕಾಶ್ ಅಪರಾಧದ ಜಾಡು ಹಿಡಿದು ಹೊರಟಿದ್ದಾರೆ. ಅತ್ಯಾಚಾರ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡ ಕಥೆಯನ್ನು ಅವರು ಹೆಣೆದಿದ್ದಾರೆ. ಸಮಾಜದಲ್ಲಿ ಘಟಿಸುತ್ತಿರುವ ಅನೀತಿ, ಅನ್ಯಾಯ, ಅಕ್ರಮಗಳಿಗೆ ಅವರು ಕಾಲವನ್ನೇ ಹೊಣೆಯಾಗಿಸಿದ್ದಾರೆ. ಚಿತ್ರದ ಶೀರ್ಷಿಕೆ `ಕಲಿಗಾಲ'. ಇದು ಅವರ 97ನೇ ಸಿನಿಮಾ.<br /> <br /> ಅವರ ಚಿತ್ರದಲ್ಲಿ ಪ್ರಚಲಿತ ಸಾಮಾಜಿಕ ತಲ್ಲಣಗಳಿಗೆ ಪರಿಹಾರವೂ ಇದೆಯಂತೆ. ಆ ಪರಿಹಾರ ಸಮಾಜದಿಂದಲೇ ಸಾಧ್ಯ ಎನ್ನುವುದನ್ನು ಪ್ರತಿಬಿಂಬಿಸುವಲ್ಲಿ ಸಿನಿಮಾದ ಆಶಯ ಅಡಗಿದೆಯಂತೆ. ವಯಸ್ಕನೊಬ್ಬ ಯುವತಿಯ ಮೇಲೆ ಕೆಟ್ಟದೃಷ್ಟಿ ಬೀರಿದಾಗ, ಆತನ ಪತ್ನಿಯೇ ಆತನನ್ನು ಸಾಯಿಸುವ ಕಥೆ ಚಿತ್ರದಲ್ಲಿದೆ. ಸಮಾಜವೂ ಹೀಗೆ ಬದಲಾಗಬೇಕು.<br /> <br /> ಅಪರಾಧ ಎಸಗುವವರಿಗೆ ಭಯ ಹುಟ್ಟಿಸುವ ಸಮಾಜ ನಿರ್ಮಾಣವಾದರೆ ಅಪರಾಧಗಳು ಸಹಜವಾಗಿಯೇ ಕಡಿಮೆಯಾಗುತ್ತದೆ ಎನ್ನುವುದು ಅವರ ವಾದ. ಸಾಯಿಪ್ರಕಾಶ್ ಅವರ ಸ್ನೇಹಿತ ಆಂಧ್ರಪ್ರದೇಶ ಮೂಲದ ರಾಯಣ್ಣ `ಕಲಿಗಾಲ'ದ ನಿರ್ಮಾಪಕರು. `ಕಲಿಗಾಲ'ದ ಬಳಗ ಹಿರಿದಾಗಿದೆ. ಕಥೆ ಮೂರು ಯುವ ಜೋಡಿಗಳ ಮೇಲೆ ಕೇಂದ್ರಿತ. ರೂಪಿಕಾ, ಕ್ಷಮಾ ಸಿಂಗ್ ಮತ್ತು ಪಾವನಿ ನಾಯಕಿಯರು. ಆನಂದ್, ದರ್ಶನ್ ಮತ್ತು ಸಂದೀಪ್ ಎಂಬ ನಟರು ಪ್ರಮುಖ ಪಾತ್ರದಲ್ಲಿದ್ದಾರೆ. ಸಾಯಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.<br /> <br /> ಶ್ರೀನಿವಾಸಮೂರ್ತಿ, ಲಕ್ಷ್ಮೀದೇವಿ, ರಮೇಶ್ ಭಟ್, ಸುಮನ್ ರಾಯ್, ಪದ್ಮಾ ವಾಸಂತಿ, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿದ್ದಾರೆ. ವಕೀಲರ ಪೋಷಾಕು ಧರಿಸುತ್ತಿರುವ ಶ್ರೀನಿವಾಸಮೂರ್ತಿ ಅವರ ಪ್ರಕಾರ ಇದು `ಬ್ರಿಡ್ಜ್' ಚಿತ್ರ. ಈಗಿನ ದಿನಗಳಲ್ಲಿ ಸ್ವರಕ್ಷಣೆಯೇ ಮುಖ್ಯ ಎನ್ನುವುದನ್ನು ಚಿತ್ರ ಬಿಂಬಿಸುತ್ತದೆಯಂತೆ. ಕರಾಟೆ, ಕಲರಿಪಯಟ್ಟು, ಭರತನಾಟ್ಯ ಇತ್ಯಾದಿ ಕಲೆಗಳಲ್ಲಿ ಜಾಣೆಯಾಗಿರುವ ನಟಿ ಕ್ಷಮಾಸಿಂಗ್ ಮೂಲತಃ ಯೋಗ ಶಿಕ್ಷಕಿ. ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರು ತಮ್ಮ ಸ್ನೇಹಿತೆಯರಿಗೆ ಕರಾಟೆ ಕಲಿಸಿಕೊಡಲಿದ್ದಾರಂತೆ. `ಗೊಂಬೆಗಳ ಲವ್' ಖ್ಯಾತಿಯ ಪಾವನಿ ನ್ಯಾಯಕ್ಕಾಗಿ ಹೋರಾಡುವ ಪಾತ್ರ ನಿರ್ವಹಿಸುತ್ತಿದ್ದಾರೆ.<br /> <br /> <strong>ಇನ್ನೂ ನಾಲ್ಕು ಚಿತ್ರಗಳು...</strong><br /> ಒಂದರ ಹಿಂದೊಂದು ಸರಣಿ ಚಿತ್ರಗಳಿಗೆ ಕೈಹಾಕಿರುವ ಸಾಯಿಪ್ರಕಾಶ್ ಒಂದರ್ಥದಲ್ಲಿ ಈಗಾಗಲೇ ನೂರು ಚಿತ್ರಗಳ ಗಡಿ ದಾಟಿದ್ದಾರೆ. `ಕಲಿಗಾಲ'ದ ಹಿಂದೆಯೇ ಅವರ ನಾಲ್ಕು ಚಿತ್ರಗಳು ಸಿದ್ಧಗೊಳ್ಳಲಿವೆ. ಕಥೆ ಮಾತ್ರವಲ್ಲ ತಾರಾಬಳಗವನ್ನೂ ಸಾಯಿಪ್ರಕಾಶ್ ಸಿದ್ಧಪಡಿಸಿಕೊಂಡಿದ್ದಾರೆ.<br /> <br /> ಅವರ 98ನೇ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ರಾಧಿಕಾ ಮತ್ತೆ ಜೊತೆಗೂಡುತ್ತಿದ್ದಾರೆ. ಶಮಿಕಾ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರಕ್ಕೆ `ರಾಜವಂಶ' ಎಂಬ ಶೀರ್ಷಿಕೆಯಿಡುವ ಉದ್ದೇಶ ಅವರದ್ದು. ಅದರ ನಂತರ ಉಪೇಂದ್ರ, ಪರೂಲ್ ಮತ್ತು ಐಂದ್ರಿತಾ ರೇ ಅಭಿನಯದ `ಗೌರಿ'ಯ ಸರದಿ. ತೆಲುಗಿನ `ಲಕ್ಷ್ಮೀ' ಚಿತ್ರದ ಕನ್ನಡ ಅವತರಣಿಕೆಯಿದು. 100ನೇ ಚಿತ್ರ ಬಿ. ವಿಜಯಕುಮಾರ್ ನಿರ್ಮಾಣದ್ದು. ಅದರ ಶೀರ್ಷಿಕೆಯಿನ್ನೂ ಅಂತಿಮಗೊಂಡಿಲ್ಲ. 101ನೇ ಚಿತ್ರಕ್ಕೆ 101 ಕಲಾವಿದರನ್ನು ಬಳಸಿಕೊಳ್ಳುವ ಉದ್ದೇಶ ಸಾಯಿಪ್ರಕಾಶ್ ಅವರದ್ದು. ಚಿತ್ರದ ಹೆಸರು `ಸಾಯಿ ಅವತಾರ'. ತಮ್ಮ 100 ಚಿತ್ರಗಳಲ್ಲಿ ನಟಿಸಿದ ಪ್ರಮುಖ ಕಲಾವಿದರೆಲ್ಲರನ್ನೂ ಈ ಚಿತ್ರದಲ್ಲಿ ಸೇರಿಸುವುದು ಅವರ ಗುರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>