<p><strong>ರಾಯಚೂರು:</strong> ಶಿಕ್ಷಣ ನೀಡುವ, ಕಲಿಯುವ, ಪಡೆಯುವ ವಿಧಾನದಲ್ಲಿ ವಿಶೇಷ ತಂತ್ರಗಳ ಕುರಿತು ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿ ರೂಪಿಸಿದ ತಂತ್ರಗಳನ್ನು 30 ವಿದ್ಯಾರ್ಥಿಗಳ ಮೂಲಕ ಸಾಂಸ್ಕೃತಿಕ ರೂಪದಲ್ಲಿ ಎರಡುವರೆ ತಾಸಿನಲ್ಲಿ ಪ್ರದರ್ಶನ ನೀಡುವ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ `ಕಲಿವ ಹಕ್ಕು ನನ್ನ ಕೈಗೆ ಕೊಡಿ~ ಶಿಕ್ಷಣ ಜಾಗೃತಿ ಆಂದೋಲನವು ಶನಿವಾರ ಇಲ್ಲಿನ ಟ್ಯಾಗೋರ ಸಭಾಭವನದಲ್ಲಿ ಆರಂಭಗೊಡಿತು.<br /> <br /> ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಇದನ್ನು ಉದ್ಘಾಟಿಸಿ ಮಾತನಾಡಿ ಕಲಿಕೆ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್ ಅವರ ಸಂಶೋಧನೆಯನ್ನು ಆಧರಿಸಿದ ಕಲಿಕೆ ವಿಧಾನ ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.<br /> <br /> ಗೋಪಾಡ್ಕರ್ ಸಂಶೋಧನೆ ಮತ್ತು ಮಾರ್ಗದರ್ಶನ ಶಿಕ್ಷಣ ವಿಧಾನದ ಪರ್ಯಾಯ ಚಿಂತನೆ, ಪರಿಕಲ್ಪನೆ ಕುರಿತ ಪ್ರದರ್ಶನವನ್ನು ಸ್ವರೂಪ ಅಧ್ಯಯನ ಕೇಂದ್ರ ತಂಡದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜನರ ಮುಂದಿಟ್ಟರು.<br /> <br /> ಯುನಿಸೆಫ್ ಘಟಕದ ಸಂಯೋಜನಾಧಿಕಾರಿ ರಾಘವೇಂದ್ರ ಭಟ್ ಮಾತನಾಡಿ, ಗೋಪಾಡ್ಕರ್ ಅವರು ಸತತ 20 ವರ್ಷಗಳ ಕಾಲ ಅಧ್ಯಯನ ಮತ್ತು ಸಂಶೋಧನೆ ಮೂಲಕ ಮಕ್ಕಳ ಕಲಿಕೆಗೆ ಉಪಯುಕ್ತವಾದ ಶಿಕ್ಷಣ ಸರಳ ಕಲಿಕಾ ವಿಧಾನ ಗುರುತಿಸಿದ್ದಾರೆ.<br /> <br /> ಶಿಕ್ಷಣ ಜಾಗೃತಿ ಆಂದೋಲನದ ಮೂಲಕ ನಗರಕ್ಕೆ ಬಂದಿರುವ ಈ ತಂಡವು ಭಾನುವಾರವೂ (ಜ.22) ಟ್ಯಾಗೋರ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಕಲಿಕೆ ವಿಧಾನಗಳ ಬಗ್ಗೆ ಪ್ರದರ್ಶನ ನೀಡಲಿದೆ ಎಂದು ವಿವರಿಸಿದರು. ಗ್ರಾಮ ವಿಕಾಸ ಸಂಸ್ಥೆಯ ಅಧ್ಯಕ್ಷ ಹಫೀಜುಲ್ಲಾ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಶಿಕ್ಷಣ ನೀಡುವ, ಕಲಿಯುವ, ಪಡೆಯುವ ವಿಧಾನದಲ್ಲಿ ವಿಶೇಷ ತಂತ್ರಗಳ ಕುರಿತು ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿ ರೂಪಿಸಿದ ತಂತ್ರಗಳನ್ನು 30 ವಿದ್ಯಾರ್ಥಿಗಳ ಮೂಲಕ ಸಾಂಸ್ಕೃತಿಕ ರೂಪದಲ್ಲಿ ಎರಡುವರೆ ತಾಸಿನಲ್ಲಿ ಪ್ರದರ್ಶನ ನೀಡುವ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ `ಕಲಿವ ಹಕ್ಕು ನನ್ನ ಕೈಗೆ ಕೊಡಿ~ ಶಿಕ್ಷಣ ಜಾಗೃತಿ ಆಂದೋಲನವು ಶನಿವಾರ ಇಲ್ಲಿನ ಟ್ಯಾಗೋರ ಸಭಾಭವನದಲ್ಲಿ ಆರಂಭಗೊಡಿತು.<br /> <br /> ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಇದನ್ನು ಉದ್ಘಾಟಿಸಿ ಮಾತನಾಡಿ ಕಲಿಕೆ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥ ಗೋಪಾಡ್ಕರ್ ಅವರ ಸಂಶೋಧನೆಯನ್ನು ಆಧರಿಸಿದ ಕಲಿಕೆ ವಿಧಾನ ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.<br /> <br /> ಗೋಪಾಡ್ಕರ್ ಸಂಶೋಧನೆ ಮತ್ತು ಮಾರ್ಗದರ್ಶನ ಶಿಕ್ಷಣ ವಿಧಾನದ ಪರ್ಯಾಯ ಚಿಂತನೆ, ಪರಿಕಲ್ಪನೆ ಕುರಿತ ಪ್ರದರ್ಶನವನ್ನು ಸ್ವರೂಪ ಅಧ್ಯಯನ ಕೇಂದ್ರ ತಂಡದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜನರ ಮುಂದಿಟ್ಟರು.<br /> <br /> ಯುನಿಸೆಫ್ ಘಟಕದ ಸಂಯೋಜನಾಧಿಕಾರಿ ರಾಘವೇಂದ್ರ ಭಟ್ ಮಾತನಾಡಿ, ಗೋಪಾಡ್ಕರ್ ಅವರು ಸತತ 20 ವರ್ಷಗಳ ಕಾಲ ಅಧ್ಯಯನ ಮತ್ತು ಸಂಶೋಧನೆ ಮೂಲಕ ಮಕ್ಕಳ ಕಲಿಕೆಗೆ ಉಪಯುಕ್ತವಾದ ಶಿಕ್ಷಣ ಸರಳ ಕಲಿಕಾ ವಿಧಾನ ಗುರುತಿಸಿದ್ದಾರೆ.<br /> <br /> ಶಿಕ್ಷಣ ಜಾಗೃತಿ ಆಂದೋಲನದ ಮೂಲಕ ನಗರಕ್ಕೆ ಬಂದಿರುವ ಈ ತಂಡವು ಭಾನುವಾರವೂ (ಜ.22) ಟ್ಯಾಗೋರ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಕಲಿಕೆ ವಿಧಾನಗಳ ಬಗ್ಗೆ ಪ್ರದರ್ಶನ ನೀಡಲಿದೆ ಎಂದು ವಿವರಿಸಿದರು. ಗ್ರಾಮ ವಿಕಾಸ ಸಂಸ್ಥೆಯ ಅಧ್ಯಕ್ಷ ಹಫೀಜುಲ್ಲಾ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>