<p><strong>ಮದ್ದೂರು:</strong> ಕಲುಷಿತ ಪಶು ಆಹಾರ ಸೇವಿಸಿ ಮೂರು ಹಸುಗಳು ಮೃತಪಟ್ಟ ಘಟನೆ ಸಮೀಪದ ಚಾಮನಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಕೃಷಿಕ ಸಿ.ಸಿ.ಪುಟ್ಟರಾಜು ಅವರಿಗೆ ಈ ಹಸುಗಳು ಸೇರಿದ್ದಾಗಿವೆ.<br /> <br /> ಭಾನುವಾರ ರಾತ್ರಿ ಪುಟ್ಟರಾಜು ಅವರು ಮನ್ಮುಲ್ನಿಂದ ವಿತರಿಸಲಾದ ಪಶು ಆಹಾರ (ಫೀಡ್ಸ್) ಹಾಗೂ ಅಂಗಡಿಯಿಂದ ಖರೀದಿಸಿದ ರವೆ ಬೂಸಾವನ್ನು ಮಿಶ್ರಣಗೊಳಿಸಿ ಹಸುಗಳಿಗೆ ನೀಡಿದ್ದರು. ಅದನ್ನು ತಿಂದ ಬಳಿಕ ಹಸುಗಳು ಸತ್ತಿವೆ. ಆದ್ದರಿಂದ ಪಶು ಆಹಾರದ ಗುಣಮಟ್ಟ ಕುರಿತು ಸಂಶಯ ಉಂಟಾಗಿದೆ. <br /> <br /> ಸೋಮವಾರ ಬೆಳಗಿನ ಜಾವ 4 ಗಂಟೆಯಲ್ಲೂ ಇದೇ ಮಾದರಿ ಮಿಶ್ರ ಆಹಾರವನ್ನು ಹಸುಗಳಿಗೆ ನೀಡಿದ್ದರು. ಬೆಳಿಗ್ಗೆ 5 ಗಂಟೆ ವೇಳೆಗೆ ಹಾಲು ಕರೆಯಲು ಪುಟ್ಟರಾಜು ತೆರಳಿದಾಗ ಮೂರು ಹಸುಗಳು ಒದ್ದಾಡಿ ಅಸು ನೀಗಿದವು ಎನ್ನಲಾಗಿದೆ. <br /> <br /> ಸ್ಥಳಕ್ಕೆ ಭೇಟಿ ನೀಡಿದ ಮನ್ಮುಲ್ ಕ್ಷೇತ್ರಾಧಿಕಾರಿ ಕೃಷ್ಣಮೂರ್ತಿ ವಲಯ ಪಶು ವೈದ್ಯರೊಡನೆ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ~ಪಶು ಆಹಾರ ಕಲುಷಿತಗೊಂಡಿದೆಯೇ? ಸಾವಿಗೆ ಕಾರಣಗಳು ಏನು ಎಂಬುದು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿ ನಂತರ ತಿಳಿಯಲಿದೆ~ ಎಂದು ತಿಳಿಸಿದರು. <br /> <br /> ತಹಶೀಲ್ದಾರ್ ನಾಗರಾಜು ಮೃತ ಹಸುಗಳ ಮಹಜರು ನಡೆಸಿದರು. ಬದುಕಿಗೆ ಆಧಾರವಾಗಿದ್ದ ಹಸುಗಳನ್ನು ಕಳೆದುಕೊಂಡಿದ್ದ ಮಾಲೀಕ ಪುಟ್ಟರಾಜು ಹಾಗೂ ಕುಟುಂಬದವರ ಗೋಳು ಮೇರೆಮೀರಿತ್ತು. ಸ್ಥಳಕ್ಕೆ ಶಾಸಕಿ ಕಲ್ಪನಾ ಸಿದ್ದರಾಜು, ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:</strong> ಕಲುಷಿತ ಪಶು ಆಹಾರ ಸೇವಿಸಿ ಮೂರು ಹಸುಗಳು ಮೃತಪಟ್ಟ ಘಟನೆ ಸಮೀಪದ ಚಾಮನಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಕೃಷಿಕ ಸಿ.ಸಿ.ಪುಟ್ಟರಾಜು ಅವರಿಗೆ ಈ ಹಸುಗಳು ಸೇರಿದ್ದಾಗಿವೆ.<br /> <br /> ಭಾನುವಾರ ರಾತ್ರಿ ಪುಟ್ಟರಾಜು ಅವರು ಮನ್ಮುಲ್ನಿಂದ ವಿತರಿಸಲಾದ ಪಶು ಆಹಾರ (ಫೀಡ್ಸ್) ಹಾಗೂ ಅಂಗಡಿಯಿಂದ ಖರೀದಿಸಿದ ರವೆ ಬೂಸಾವನ್ನು ಮಿಶ್ರಣಗೊಳಿಸಿ ಹಸುಗಳಿಗೆ ನೀಡಿದ್ದರು. ಅದನ್ನು ತಿಂದ ಬಳಿಕ ಹಸುಗಳು ಸತ್ತಿವೆ. ಆದ್ದರಿಂದ ಪಶು ಆಹಾರದ ಗುಣಮಟ್ಟ ಕುರಿತು ಸಂಶಯ ಉಂಟಾಗಿದೆ. <br /> <br /> ಸೋಮವಾರ ಬೆಳಗಿನ ಜಾವ 4 ಗಂಟೆಯಲ್ಲೂ ಇದೇ ಮಾದರಿ ಮಿಶ್ರ ಆಹಾರವನ್ನು ಹಸುಗಳಿಗೆ ನೀಡಿದ್ದರು. ಬೆಳಿಗ್ಗೆ 5 ಗಂಟೆ ವೇಳೆಗೆ ಹಾಲು ಕರೆಯಲು ಪುಟ್ಟರಾಜು ತೆರಳಿದಾಗ ಮೂರು ಹಸುಗಳು ಒದ್ದಾಡಿ ಅಸು ನೀಗಿದವು ಎನ್ನಲಾಗಿದೆ. <br /> <br /> ಸ್ಥಳಕ್ಕೆ ಭೇಟಿ ನೀಡಿದ ಮನ್ಮುಲ್ ಕ್ಷೇತ್ರಾಧಿಕಾರಿ ಕೃಷ್ಣಮೂರ್ತಿ ವಲಯ ಪಶು ವೈದ್ಯರೊಡನೆ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ~ಪಶು ಆಹಾರ ಕಲುಷಿತಗೊಂಡಿದೆಯೇ? ಸಾವಿಗೆ ಕಾರಣಗಳು ಏನು ಎಂಬುದು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿ ನಂತರ ತಿಳಿಯಲಿದೆ~ ಎಂದು ತಿಳಿಸಿದರು. <br /> <br /> ತಹಶೀಲ್ದಾರ್ ನಾಗರಾಜು ಮೃತ ಹಸುಗಳ ಮಹಜರು ನಡೆಸಿದರು. ಬದುಕಿಗೆ ಆಧಾರವಾಗಿದ್ದ ಹಸುಗಳನ್ನು ಕಳೆದುಕೊಂಡಿದ್ದ ಮಾಲೀಕ ಪುಟ್ಟರಾಜು ಹಾಗೂ ಕುಟುಂಬದವರ ಗೋಳು ಮೇರೆಮೀರಿತ್ತು. ಸ್ಥಳಕ್ಕೆ ಶಾಸಕಿ ಕಲ್ಪನಾ ಸಿದ್ದರಾಜು, ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>