<p>ಅರ್ಘ್ಯಂ ಸಂಸ್ಥೆ ವಿಶ್ವ ಜಲ ದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದೆ. ದೇಶದ ಏಳು ಮಂದಿ ಖ್ಯಾತ ಕಲಾವಿದರು ನೀರನ್ನು ಕುರಿತು ಚಿತ್ರಿಸಿರುವ ಅಪರೂಪದ ಕಲಾಕೃತಿಗಳು ಇಲ್ಲಿ ಪ್ರದರ್ಶನಕ್ಕಿವೆ. ಹಾಗಾಗಿ ಇದೊಂದು ವಿಶಿಷ್ಟ ಕಾರ್ಯಕ್ರಮ. </p>.<p><br /> <br /> ಪಂಚಭೂತಗಳಲ್ಲಿ ಒಂದಾದ ನೀರಿನ ಹಲವು ಆಯಾಮಗಳನ್ನು ಕುರಿತಂತೆ ಏಳು ಮಂದಿ ಕಲಾವಿದರು ಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳಲ್ಲಿ ನೀರಿನ ಮಹತ್ವ, ಮೌಲ್ಯ, ನೀರಿನ ಬಳಕೆಯಲ್ಲಿ ಇರಬಹುದಾದ ರಾಜಕಾರಣ, ಮಾನವನಿಂದ ವಸಾಹತೀಕೃತಗೊಂಡ ನಂತರ ನೀರಿನ ಸ್ಥಿತಿ ಮೊದಲಾದ ಸಾಮಾಜಿಕ-ರಾಜಕೀಯ-ಸೌಂದರ್ಯಾತ್ಮಕ ಆಯಾಮಗಳನ್ನು ತಮ್ಮ ಕುಂಚಗಳ ಮೂಲಕ ಕಲಾವಿದರು ಅನಾವರಣಗೊಳಿಸಿದ್ದಾರೆ. <br /> <br /> ಅಂದಹಾಗೆ, ಆಲ್ಫಾನ್ಸೊ ದಾಸ್, ಜೆ.ಎಂ.ಎಸ್.ಮಣಿ, ರೇಖಾ ರಾವ್, ಬಿ.ಓ.ಶೈಲೇಶ್, ಎಸ್.ಜಯರಾಜ್, ಆಸ್ಮಾ ಮೆನನ್ ಮತ್ತು ಜಿ.ಜಯಕುಮಾರ್ ಈ ಪ್ರದರ್ಶನದಲ್ಲಿ ಭಾಗವಹಿಸಿರುವ ಏಳು ಮಂದಿ ಕಲಾವಿದರು. <br /> <br /> ದೃಶ್ಯಕಲೆಯಲ್ಲಿ ಈ ಕಲಾವಿದರು ಅಪಾರ ಖ್ಯಾತಿ ಗಳಿಸಿದ್ದಾರೆ. ಇವರು ಕೇವಲ ಕಲಾವಿದರಾಗಿ ಹೆಸರು ಗಳಿಸದೆ ಕಲಾಚಳವಳಿಯ ಹರಿಕಾರರಾಗಿಯೂ ಹೆಸರಾಗಿದ್ದಾರೆ. ಕಲಾ ಬೋಧನೆ, ಕಲಾ ಚಳವಳಿ, ಕಲಾ ವಿಮರ್ಶೆ ಮೊದಲಾದವುಗಳಲ್ಲಿ ತೊಡಗಿದ್ದಾರೆ. ಪ್ರಸ್ತುತ ಪ್ರದರ್ಶನದಲ್ಲಿ ಈ ಕಲಾವಿದರು ರಚಿಸಿರುವ ಕಲಾಕೃತಿಗಳೇ ಇದಕ್ಕೆ ಸಾಕ್ಷಿ. ದೃಶ್ಯಕಲೆಗೆ ನಿರ್ದಿಷ್ಟವಾದ ಭಾಷೆಯೊಂದನ್ನು ಬಳಸಿ ಇವರು ನೀರಿನ ಕುರಿತಾದ ಒಳನೋಟಗಳನ್ನು ಬಿಚ್ಚಿಟ್ಟಿದ್ದಾರೆ. <br /> <br /> ಈ ಕಲಾವಿದರು ತಮ್ಮ ಕಲಾಕೃತಿಯಲ್ಲಿ ನೀರನ್ನು ಲಿಂಗರಾಜಕಾರಣಕ್ಕೆ ತಾಳೆ ಹಾಕಿದ್ದಾರೆ. ಹಾಗೆಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ನೀರು ವಿಭಜಿಸುತ್ತದೆ. ಇದನ್ನಷ್ಟೇ ಅಲ್ಲದೆ ಜಲದ ಅನಿವಾರ್ಯತೆ ಹಾಗೂ ಸರ್ವಾಂತರ್ಯಾಮಿ ಗುಣವನ್ನು ಕಲಾವಿದರು ಚಿತ್ರಿಸಿದ್ದಾರೆ. <br /> <br /> ನೀರಿನ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಆಯಾಮದ ವಿಶೇಷ ಮೆರುಗಿರುವ ಈ ಪ್ರದರ್ಶನವನ್ನು ರೋಹಿಣಿ ನೀಲೇಕಣಿ ಬುಧವಾರ ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಹೆಸರಾಂತ ಕಲಾವಿದರಾದ ಎಸ್.ಜಿ.ವಾಸುದೇವ್ ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಲಾಕೃತಿಗಳು ಮಾರ್ಚ್ 30ರವರೆಗೆ ಪ್ರದರ್ಶನಗೊಳ್ಳಲಿವೆ. <br /> <br /> ಸಂಸ್ಕೃತದಲ್ಲಿ ಅರ್ಘ್ಯಂ ಎಂದರೆ ಅರ್ಪಣೆ ಎಂದರ್ಥ. ಅರ್ಘ್ಯಂ ಸಂಸ್ಥೆ ಕುಡಿವ ನೀರು ಹಾಗೂ ಶೌಚಾಲಯ ವ್ಯವಸ್ಥೆಯ ಪೂರೈಕೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ದೇಶದಲ್ಲಿ ಈ ರಂಗದಲ್ಲಿ ಇಷ್ಟೊಂದು ವಿಸ್ತೃತವಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಂಸ್ಥೆ ಅರ್ಘ್ಯಂ. ಇದರ ಗಮನವು ಕುಡಿಯುವ ನೀರಿನ ಬಗ್ಗೆ ಕೇಂದ್ರೀಕೃತವಾಗಿದೆ. <br /> <br /> ಜಲದ ಗುಣಮಟ್ಟ, ಅಗತ್ಯ ಪ್ರಮಾಣ ಮತ್ತು ಅದರ ಲಭ್ಯತೆಯನ್ನು ಸಮಾಜ, ಸಾಂಸ್ಥೀಕರಣ, ತಾಂತ್ರೀಕರಣ, ಪರಿಸರ ಹಾಗೂ ಆರ್ಥಿಕ ಆಯಾಮಗಳ ಅಧ್ಯಯನದ ಮೂಲಕ ಅರಿಯುವುದು ಅದರ ಉದ್ದೇಶ. ಮನೆ, ವಸತಿ ಸಮುಚ್ಚಯಗಳ ಬಳಿ ನೀರಿನ ಉಳಿತಾಯ, ಶೇಖರಣೆ ಮತ್ತು ಶೌಚ-ಶುಚಿತ್ವದೆಡೆ ಜನ ಗಮನಹರಿಸಿ, ಆ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳುವ ಅನೇಕ ಸಂಸ್ಥೆಗಳ ಜೊತೆ ಅರ್ಘ್ಯಂ ಒಡನಾಟವಿಟ್ಟುಕೊಂಡಿದೆ. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರ್ಘ್ಯಂ ಸಂಸ್ಥೆ ವಿಶ್ವ ಜಲ ದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದೆ. ದೇಶದ ಏಳು ಮಂದಿ ಖ್ಯಾತ ಕಲಾವಿದರು ನೀರನ್ನು ಕುರಿತು ಚಿತ್ರಿಸಿರುವ ಅಪರೂಪದ ಕಲಾಕೃತಿಗಳು ಇಲ್ಲಿ ಪ್ರದರ್ಶನಕ್ಕಿವೆ. ಹಾಗಾಗಿ ಇದೊಂದು ವಿಶಿಷ್ಟ ಕಾರ್ಯಕ್ರಮ. </p>.<p><br /> <br /> ಪಂಚಭೂತಗಳಲ್ಲಿ ಒಂದಾದ ನೀರಿನ ಹಲವು ಆಯಾಮಗಳನ್ನು ಕುರಿತಂತೆ ಏಳು ಮಂದಿ ಕಲಾವಿದರು ಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳಲ್ಲಿ ನೀರಿನ ಮಹತ್ವ, ಮೌಲ್ಯ, ನೀರಿನ ಬಳಕೆಯಲ್ಲಿ ಇರಬಹುದಾದ ರಾಜಕಾರಣ, ಮಾನವನಿಂದ ವಸಾಹತೀಕೃತಗೊಂಡ ನಂತರ ನೀರಿನ ಸ್ಥಿತಿ ಮೊದಲಾದ ಸಾಮಾಜಿಕ-ರಾಜಕೀಯ-ಸೌಂದರ್ಯಾತ್ಮಕ ಆಯಾಮಗಳನ್ನು ತಮ್ಮ ಕುಂಚಗಳ ಮೂಲಕ ಕಲಾವಿದರು ಅನಾವರಣಗೊಳಿಸಿದ್ದಾರೆ. <br /> <br /> ಅಂದಹಾಗೆ, ಆಲ್ಫಾನ್ಸೊ ದಾಸ್, ಜೆ.ಎಂ.ಎಸ್.ಮಣಿ, ರೇಖಾ ರಾವ್, ಬಿ.ಓ.ಶೈಲೇಶ್, ಎಸ್.ಜಯರಾಜ್, ಆಸ್ಮಾ ಮೆನನ್ ಮತ್ತು ಜಿ.ಜಯಕುಮಾರ್ ಈ ಪ್ರದರ್ಶನದಲ್ಲಿ ಭಾಗವಹಿಸಿರುವ ಏಳು ಮಂದಿ ಕಲಾವಿದರು. <br /> <br /> ದೃಶ್ಯಕಲೆಯಲ್ಲಿ ಈ ಕಲಾವಿದರು ಅಪಾರ ಖ್ಯಾತಿ ಗಳಿಸಿದ್ದಾರೆ. ಇವರು ಕೇವಲ ಕಲಾವಿದರಾಗಿ ಹೆಸರು ಗಳಿಸದೆ ಕಲಾಚಳವಳಿಯ ಹರಿಕಾರರಾಗಿಯೂ ಹೆಸರಾಗಿದ್ದಾರೆ. ಕಲಾ ಬೋಧನೆ, ಕಲಾ ಚಳವಳಿ, ಕಲಾ ವಿಮರ್ಶೆ ಮೊದಲಾದವುಗಳಲ್ಲಿ ತೊಡಗಿದ್ದಾರೆ. ಪ್ರಸ್ತುತ ಪ್ರದರ್ಶನದಲ್ಲಿ ಈ ಕಲಾವಿದರು ರಚಿಸಿರುವ ಕಲಾಕೃತಿಗಳೇ ಇದಕ್ಕೆ ಸಾಕ್ಷಿ. ದೃಶ್ಯಕಲೆಗೆ ನಿರ್ದಿಷ್ಟವಾದ ಭಾಷೆಯೊಂದನ್ನು ಬಳಸಿ ಇವರು ನೀರಿನ ಕುರಿತಾದ ಒಳನೋಟಗಳನ್ನು ಬಿಚ್ಚಿಟ್ಟಿದ್ದಾರೆ. <br /> <br /> ಈ ಕಲಾವಿದರು ತಮ್ಮ ಕಲಾಕೃತಿಯಲ್ಲಿ ನೀರನ್ನು ಲಿಂಗರಾಜಕಾರಣಕ್ಕೆ ತಾಳೆ ಹಾಕಿದ್ದಾರೆ. ಹಾಗೆಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ನೀರು ವಿಭಜಿಸುತ್ತದೆ. ಇದನ್ನಷ್ಟೇ ಅಲ್ಲದೆ ಜಲದ ಅನಿವಾರ್ಯತೆ ಹಾಗೂ ಸರ್ವಾಂತರ್ಯಾಮಿ ಗುಣವನ್ನು ಕಲಾವಿದರು ಚಿತ್ರಿಸಿದ್ದಾರೆ. <br /> <br /> ನೀರಿನ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಆಯಾಮದ ವಿಶೇಷ ಮೆರುಗಿರುವ ಈ ಪ್ರದರ್ಶನವನ್ನು ರೋಹಿಣಿ ನೀಲೇಕಣಿ ಬುಧವಾರ ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಹೆಸರಾಂತ ಕಲಾವಿದರಾದ ಎಸ್.ಜಿ.ವಾಸುದೇವ್ ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಕಲಾಕೃತಿಗಳು ಮಾರ್ಚ್ 30ರವರೆಗೆ ಪ್ರದರ್ಶನಗೊಳ್ಳಲಿವೆ. <br /> <br /> ಸಂಸ್ಕೃತದಲ್ಲಿ ಅರ್ಘ್ಯಂ ಎಂದರೆ ಅರ್ಪಣೆ ಎಂದರ್ಥ. ಅರ್ಘ್ಯಂ ಸಂಸ್ಥೆ ಕುಡಿವ ನೀರು ಹಾಗೂ ಶೌಚಾಲಯ ವ್ಯವಸ್ಥೆಯ ಪೂರೈಕೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ದೇಶದಲ್ಲಿ ಈ ರಂಗದಲ್ಲಿ ಇಷ್ಟೊಂದು ವಿಸ್ತೃತವಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಂಸ್ಥೆ ಅರ್ಘ್ಯಂ. ಇದರ ಗಮನವು ಕುಡಿಯುವ ನೀರಿನ ಬಗ್ಗೆ ಕೇಂದ್ರೀಕೃತವಾಗಿದೆ. <br /> <br /> ಜಲದ ಗುಣಮಟ್ಟ, ಅಗತ್ಯ ಪ್ರಮಾಣ ಮತ್ತು ಅದರ ಲಭ್ಯತೆಯನ್ನು ಸಮಾಜ, ಸಾಂಸ್ಥೀಕರಣ, ತಾಂತ್ರೀಕರಣ, ಪರಿಸರ ಹಾಗೂ ಆರ್ಥಿಕ ಆಯಾಮಗಳ ಅಧ್ಯಯನದ ಮೂಲಕ ಅರಿಯುವುದು ಅದರ ಉದ್ದೇಶ. ಮನೆ, ವಸತಿ ಸಮುಚ್ಚಯಗಳ ಬಳಿ ನೀರಿನ ಉಳಿತಾಯ, ಶೇಖರಣೆ ಮತ್ತು ಶೌಚ-ಶುಚಿತ್ವದೆಡೆ ಜನ ಗಮನಹರಿಸಿ, ಆ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳುವ ಅನೇಕ ಸಂಸ್ಥೆಗಳ ಜೊತೆ ಅರ್ಘ್ಯಂ ಒಡನಾಟವಿಟ್ಟುಕೊಂಡಿದೆ. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>