<p>ಚೆನ್ನೈ (ಪಿಟಿಐ): ಭೂಕಂಪನದ ಅನುಭವ, ಸುನಾಮಿ ಎಚ್ಚರಿಕೆಯ ಹೊರತಾಗಿಯೂ ಚೆನ್ನೈ ಸಮೀಪದ ಕಲ್ಪಾಕಂನ ಮದ್ರಾಸ್ ಪರಮಾಣು ವಿದ್ಯುತ್ ಕೇಂದ್ರ ಬುಧವಾರ ಎಂದಿನಂತೆ ಕಾರ್ಯನಿರ್ವಹಿಸಿತು.<br /> <br /> ಸುನಾಮಿ ಮನ್ಸೂಚನೆಯ ಕಾರಣ ಮೊದಲಿಗೆ ನಾವು ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೆವು. ಅಂಡಮಾನ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಸ್ಥಾವರದಲ್ಲಿ ಕಾರ್ಯಾಚರಣೆ ಮುಂದುವರಿಸಿದೆವು. ಆದರೂ, ಸ್ಥಾವರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಲ್ಪಾಕಂ ಅಣು ಸ್ಥಾವರದ ನಿರ್ದೇಶಕ ಕೆ. ರಾಮಮೂರ್ತಿ ತಿಳಿಸಿದರು.<br /> <br /> ಕೂಡುಂಕುಳಂ ಸ್ಥಾವರದ ಕಾಮಗಾರಿಯೂ ಎಂದಿನಂತೆ ನಡೆಯಿತು. ಸ್ಥಾವರದ ಆವರಣದ ಗೋಡೆಗಳು 7.5 ಮೀಟರ್ ಎತ್ತರ ಇರುವುದರಿಂದ ಹಾಗೂ ಇಡೀ ಸ್ಥಾವರವನ್ನು ಎತ್ತರಿಸಿದ ಅಡಿಪಾಯದ ಮೇಲೆ ಕಟ್ಟಿರುವುದರಿಂದ ಯಾವುದೇ ಭಯವಿಲ್ಲ ಎಂದು ಅಲ್ಲಿನ ನಿರ್ದೇಶಕ ಎಂ. ಕಾಶೀನಾಥ್ ಬಾಲಾಜಿ ಹೇಳಿದರು.</p>.<p><strong>ನೋಡಲು ಬಂದರು</strong></p>.<p><strong>ಚೆನ್ನೈ (ಪಿಟಿಐ): </strong>ಇಂಡೋನೇಷ್ಯಾದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೂಕಂಪನದ ಸುದ್ದಿ ಭಯದ ಅಲೆಯನ್ನೇ ಹುಟ್ಟುಹಾಕಿದ್ದರೂ ಸುನಾಮಿ ನೋಡುವ ಕುತೂಹಲದಿಂದ ಚೆನ್ನೈನ `ಮರೀನಾ ಬೀಚ್~ನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.<br /> <br /> ಈ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ನಾವು ಸುನಾಮಿ ನೋಡಲು ಇಲ್ಲಿಗೆ ಬಂದಿದ್ದೇವೆ ಎಂದು ಹಿರಿಯ ಮಹಿಳೆಯೊಬ್ಬರು ಉತ್ಸಾಹದಿಂದ ಹೇಳಿದರು. <br /> <br /> ಮನ್ಸೂಚನೆಯಂತೆ ಸಂಜೆ 5 ಗಂಟೆಯ ಹೊತ್ತಿಗೆ ಸುನಾಮಿ ಅಲೆಗಳು ಚೆನ್ನೈ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೆನ್ನೈ (ಪಿಟಿಐ): ಭೂಕಂಪನದ ಅನುಭವ, ಸುನಾಮಿ ಎಚ್ಚರಿಕೆಯ ಹೊರತಾಗಿಯೂ ಚೆನ್ನೈ ಸಮೀಪದ ಕಲ್ಪಾಕಂನ ಮದ್ರಾಸ್ ಪರಮಾಣು ವಿದ್ಯುತ್ ಕೇಂದ್ರ ಬುಧವಾರ ಎಂದಿನಂತೆ ಕಾರ್ಯನಿರ್ವಹಿಸಿತು.<br /> <br /> ಸುನಾಮಿ ಮನ್ಸೂಚನೆಯ ಕಾರಣ ಮೊದಲಿಗೆ ನಾವು ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೆವು. ಅಂಡಮಾನ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಸ್ಥಾವರದಲ್ಲಿ ಕಾರ್ಯಾಚರಣೆ ಮುಂದುವರಿಸಿದೆವು. ಆದರೂ, ಸ್ಥಾವರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಲ್ಪಾಕಂ ಅಣು ಸ್ಥಾವರದ ನಿರ್ದೇಶಕ ಕೆ. ರಾಮಮೂರ್ತಿ ತಿಳಿಸಿದರು.<br /> <br /> ಕೂಡುಂಕುಳಂ ಸ್ಥಾವರದ ಕಾಮಗಾರಿಯೂ ಎಂದಿನಂತೆ ನಡೆಯಿತು. ಸ್ಥಾವರದ ಆವರಣದ ಗೋಡೆಗಳು 7.5 ಮೀಟರ್ ಎತ್ತರ ಇರುವುದರಿಂದ ಹಾಗೂ ಇಡೀ ಸ್ಥಾವರವನ್ನು ಎತ್ತರಿಸಿದ ಅಡಿಪಾಯದ ಮೇಲೆ ಕಟ್ಟಿರುವುದರಿಂದ ಯಾವುದೇ ಭಯವಿಲ್ಲ ಎಂದು ಅಲ್ಲಿನ ನಿರ್ದೇಶಕ ಎಂ. ಕಾಶೀನಾಥ್ ಬಾಲಾಜಿ ಹೇಳಿದರು.</p>.<p><strong>ನೋಡಲು ಬಂದರು</strong></p>.<p><strong>ಚೆನ್ನೈ (ಪಿಟಿಐ): </strong>ಇಂಡೋನೇಷ್ಯಾದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೂಕಂಪನದ ಸುದ್ದಿ ಭಯದ ಅಲೆಯನ್ನೇ ಹುಟ್ಟುಹಾಕಿದ್ದರೂ ಸುನಾಮಿ ನೋಡುವ ಕುತೂಹಲದಿಂದ ಚೆನ್ನೈನ `ಮರೀನಾ ಬೀಚ್~ನಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.<br /> <br /> ಈ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ನಾವು ಸುನಾಮಿ ನೋಡಲು ಇಲ್ಲಿಗೆ ಬಂದಿದ್ದೇವೆ ಎಂದು ಹಿರಿಯ ಮಹಿಳೆಯೊಬ್ಬರು ಉತ್ಸಾಹದಿಂದ ಹೇಳಿದರು. <br /> <br /> ಮನ್ಸೂಚನೆಯಂತೆ ಸಂಜೆ 5 ಗಂಟೆಯ ಹೊತ್ತಿಗೆ ಸುನಾಮಿ ಅಲೆಗಳು ಚೆನ್ನೈ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>