<p>ಹಾಸನ: ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಅರಸೀಕೆರೆ ತಾಲ್ಲೂಕು ರಂಗನಾಥಪುರ ಕಾವಲು ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ಹಾಸನ ತಹಶೀಲ್ದಾರ ಕೆ. ಮಥಾಯಿ ಅವರು ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶ ನೀಡಿದ್ದಾರೆ.<br /> <br /> ಇಲ್ಲಿ ನಡೆಸುವ ಗಣಿಗಾರಿಕೆಯಿಂದಾಗಿ ಹಾಸನ ತಾಲ್ಲೂಕು ವ್ಯಾಪ್ತಿಯ ಹಂಗರಹಳ್ಳಿಯಲ್ಲಿ ಮನೆಗಳು ಬಿಡುಕು ಬಿಡುತ್ತಿರುವುದಾಗಿ ದೂರು ಬಂದಿರುವ ಹಿನ್ನೆಲೆಯಲ್ಲಿ ತಹಶೀಲ್ದಾರರು ಈ ಸೂಚನೆ ನೀಡಿದ್ದಾರೆ.<br /> <br /> ರಂಗನಾಥಪುರ ಕಾವಲಿನಲ್ಲಿ ಖಾಸಗಿ ಸಂಸ್ಥೆಯವರು ಕೆಲವು ದಿನಗಳ ಹಿಂದೆ ದೊಡ್ಡ ಪ್ರಮಾಣದ ಜಲ್ಲಿ ಕ್ರಷರ್ ಅಳವಡಿಸಿ ಕಾಮಗಾರಿ ಆರಂಭಿಸಿದ್ದಾರೆ. ಗುಡ್ಡದಲ್ಲಿ ರಿಗ್ನಿಂದ ಗುಂಡಿ ತೋಡಿ, ಸ್ಫೋಟಕಗಳನ್ನು ಸಿಡಿಸಿ ಜಲ್ಲಿ ತಯಾರಿಸುತ್ತಿದ್ದಾರೆ. ಇದರಿಂದ ಸುಮಾರು ಮೂರು-ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸುತ್ತಿದೆ. <br /> <br /> ವಿಶೇಷವಾಗಿ ಹಂಗರಹಳ್ಳಿಯ ಲಂಬಾಣಿ ತಾಂಡಾದಲ್ಲಿರುವ ಸುಮಾರು 60 ರಿಂದ 70 ಮನೆಗಳ ಗೋಡೆಗಳು ಬಿಡುಕು ಬಿಟ್ಟಿವೆ ಎಂದು ಸ್ಥಳೀಯರು ದೂರಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರರು ಸೋಮವಾರ ಪರಿಶೀಲನೆ ನಡೆಸಿದರು.<br /> <br /> ಸ್ಥಳಕ್ಕೆ ಭೇಟಿನೀಡಿದ ಮಥಾಯಿ, ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಖಾಸಗಿ ಸಂಸ್ಥೆಯವರಿಂದ ಮಾಹಿತಿ ಪಡೆದರು. ಸರ್ಕಾರ ಯಾವ ಪರವಾನಿಗೆ ನೀಡಿದೆ ಎಂಬುದನ್ನು ಪರಿಶೀಲಿಸಬೇಕಾಗಿದ್ದು, ಮಂಗಳವಾರದೊಳಗೆ ಪರವಾನಿಗೆಪತ್ರವನ್ನು ತಂದು ತೋರಿಸಬೇಕು, ಅಲ್ಲಿಯವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಸಂಸ್ಥೆಗೆ ಆದೇಶ ನೀಡಿದ್ದಾರೆ.<br /> <br /> ಹಂಗರಹಳ್ಳದ ಲಂಬಾಣಿ ತಾಂಡಾದ ಅನೇಕ ಮನೆಗಳ ಗೋಡೆಯಲ್ಲಿ ದೊಡ್ಡ ಪ್ರಮಾಣದ ಬಿಡುಕು ಬಿಟ್ಟಿರುವುದು ಗೋಚರಿಸುತ್ತಿದೆ. `ಸ್ಫೋಟವಾದಾಗ ನಿಂತ ಭೂಮಿ ಕಂಪಿಸುವುದರಿಂದ ಮನೆಯೊಳಗೆ ಇರಲು ಭಯವಾಗುತ್ತಿದೆ. ಕ್ರಷರ್ನಿಂದಾಗಿ ಗ್ರಾಮದಲ್ಲಿ ಧೂಳು ತುಂಬಿಕೊಂಡಿದೆ. ಜನರು, ಜಾನುವಾರುಗಳು ಹಲವು ರೋಗಗಳಿಗೆ ಒಳಗಾಗುತ್ತಿದ್ದಾರೆ~ ಎಂದು ಸ್ಥಳೀಯರು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಅರಸೀಕೆರೆ ತಾಲ್ಲೂಕು ರಂಗನಾಥಪುರ ಕಾವಲು ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ಹಾಸನ ತಹಶೀಲ್ದಾರ ಕೆ. ಮಥಾಯಿ ಅವರು ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶ ನೀಡಿದ್ದಾರೆ.<br /> <br /> ಇಲ್ಲಿ ನಡೆಸುವ ಗಣಿಗಾರಿಕೆಯಿಂದಾಗಿ ಹಾಸನ ತಾಲ್ಲೂಕು ವ್ಯಾಪ್ತಿಯ ಹಂಗರಹಳ್ಳಿಯಲ್ಲಿ ಮನೆಗಳು ಬಿಡುಕು ಬಿಡುತ್ತಿರುವುದಾಗಿ ದೂರು ಬಂದಿರುವ ಹಿನ್ನೆಲೆಯಲ್ಲಿ ತಹಶೀಲ್ದಾರರು ಈ ಸೂಚನೆ ನೀಡಿದ್ದಾರೆ.<br /> <br /> ರಂಗನಾಥಪುರ ಕಾವಲಿನಲ್ಲಿ ಖಾಸಗಿ ಸಂಸ್ಥೆಯವರು ಕೆಲವು ದಿನಗಳ ಹಿಂದೆ ದೊಡ್ಡ ಪ್ರಮಾಣದ ಜಲ್ಲಿ ಕ್ರಷರ್ ಅಳವಡಿಸಿ ಕಾಮಗಾರಿ ಆರಂಭಿಸಿದ್ದಾರೆ. ಗುಡ್ಡದಲ್ಲಿ ರಿಗ್ನಿಂದ ಗುಂಡಿ ತೋಡಿ, ಸ್ಫೋಟಕಗಳನ್ನು ಸಿಡಿಸಿ ಜಲ್ಲಿ ತಯಾರಿಸುತ್ತಿದ್ದಾರೆ. ಇದರಿಂದ ಸುಮಾರು ಮೂರು-ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸುತ್ತಿದೆ. <br /> <br /> ವಿಶೇಷವಾಗಿ ಹಂಗರಹಳ್ಳಿಯ ಲಂಬಾಣಿ ತಾಂಡಾದಲ್ಲಿರುವ ಸುಮಾರು 60 ರಿಂದ 70 ಮನೆಗಳ ಗೋಡೆಗಳು ಬಿಡುಕು ಬಿಟ್ಟಿವೆ ಎಂದು ಸ್ಥಳೀಯರು ದೂರಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರರು ಸೋಮವಾರ ಪರಿಶೀಲನೆ ನಡೆಸಿದರು.<br /> <br /> ಸ್ಥಳಕ್ಕೆ ಭೇಟಿನೀಡಿದ ಮಥಾಯಿ, ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಖಾಸಗಿ ಸಂಸ್ಥೆಯವರಿಂದ ಮಾಹಿತಿ ಪಡೆದರು. ಸರ್ಕಾರ ಯಾವ ಪರವಾನಿಗೆ ನೀಡಿದೆ ಎಂಬುದನ್ನು ಪರಿಶೀಲಿಸಬೇಕಾಗಿದ್ದು, ಮಂಗಳವಾರದೊಳಗೆ ಪರವಾನಿಗೆಪತ್ರವನ್ನು ತಂದು ತೋರಿಸಬೇಕು, ಅಲ್ಲಿಯವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಸಂಸ್ಥೆಗೆ ಆದೇಶ ನೀಡಿದ್ದಾರೆ.<br /> <br /> ಹಂಗರಹಳ್ಳದ ಲಂಬಾಣಿ ತಾಂಡಾದ ಅನೇಕ ಮನೆಗಳ ಗೋಡೆಯಲ್ಲಿ ದೊಡ್ಡ ಪ್ರಮಾಣದ ಬಿಡುಕು ಬಿಟ್ಟಿರುವುದು ಗೋಚರಿಸುತ್ತಿದೆ. `ಸ್ಫೋಟವಾದಾಗ ನಿಂತ ಭೂಮಿ ಕಂಪಿಸುವುದರಿಂದ ಮನೆಯೊಳಗೆ ಇರಲು ಭಯವಾಗುತ್ತಿದೆ. ಕ್ರಷರ್ನಿಂದಾಗಿ ಗ್ರಾಮದಲ್ಲಿ ಧೂಳು ತುಂಬಿಕೊಂಡಿದೆ. ಜನರು, ಜಾನುವಾರುಗಳು ಹಲವು ರೋಗಗಳಿಗೆ ಒಳಗಾಗುತ್ತಿದ್ದಾರೆ~ ಎಂದು ಸ್ಥಳೀಯರು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>