<p><strong>ಉಡುಪಿ: </strong>ಉಡುಪಿ ತಾಲ್ಲೂಕಿನ ನಾಲ್ಕೂರು ಗ್ರಾಮದ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ತಿಳಿಸಿದ್ದಾರೆ.<br /> <br /> ಗಣಿಗಾರಿಕೆ, ಜಲ್ಲಿ ಕ್ರಶರ್ಗಳನ್ನು ಸ್ಥಗಿತಗೊಳಿಸುವಂತೆ ಆ ಗ್ರಾಮದ ಜನರು ಮನವಿ ನೀಡಿದ್ದರು. ಇದಕ್ಕೆ ಸ್ಪಂದಿಸಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.<br /> <br /> ಈ ಸಂಬಂಧ ಜಿಲ್ಲಾಡಳಿತ ಸಮಗ್ರ ಸರ್ವೆ ನಡೆಸಿದ್ದು ಸರ್ವೆ ನಂ. 219/1 ರಲ್ಲಿ 1693.94 ಎಕರೆ ಪ್ರದೇಶವು ಸರ್ಕಾರಿ ಸ್ಥಳವೆಂದು ನಮೂದಾಗಿದೆ. ಅದರಲ್ಲಿ 1492.44 ಎಕರೆ ಪರಿಭಾವಿತ ಅರಣ್ಯವಾಗಿರುತ್ತದೆ. ಉಳಿದ 201.50 ಎಕರೆ ಸರ್ಕಾರಿ ಪ್ರದೇಶವಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> ನಾಲ್ಕೂರು ಗ್ರಾಮದಲ್ಲಿ ಒಟ್ಟು ಒಟ್ಟು 24.60 ಎಕರೆ ಪ್ರದೇಶದಲ್ಲಿ 16 ಕಲ್ಲು ಗಣಿ ಗುತ್ತಿಗೆಗಳಿವೆ. ನಾಲ್ಕೂರು ಗ್ರಾಮದಲ್ಲಿ 14.75 ಎಕರೆ ಪ್ರದೇಶದಲ್ಲಿ ಕಲ್ಲುಪುಡಿ ಮಾಡುವ ಘಟಕಗಳನ್ನು ನಿಯಂತ್ರಣಾ ಆಧ್ಯಾದೇಶ 2011ರಂತೆ ಸುರಕ್ಷಿತ ವಲಯವಾಗಿ ಘೋಷಣೆಯಾಗಿದೆ. ಅದರಲ್ಲಿ ಒಟ್ಟು 5 ಕ್ರಷರ್ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ ಮತ್ತು ಆಧ್ಯಾದೇಶದ ನಿಯಮ 7ರಂತೆ ನವಯುಗ ಇಂಜಿನಿಯರಿಂಗ್ ಕಂಪನಿ ಹಾಗೂ ಆರ್.ಎಸ್.ಕಿಣಿ ರೈಲ್ವೆ ಕಾಮಗಾರಿ ಕೆಲಸಕ್ಕೆ ಇಬ್ಬರಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.<br /> <br /> ಸುರಕ್ಷಿತ ವಲಯವೆಂದು ಮತ್ತು ಕಲ್ಲು ಗಣಿ ಗುತ್ತಿಗೆಗಳಿಗೆ ನೀಡಿರುವ ಪ್ರದೇಶಗಳು ಕಲ್ಲು ಬಂಡೆಗಳಿಂದ ಕೂಡಿದ್ದು, ಅತಿ ವಿರಳವಾಗಿ ಮರ-ಗಿಡಗಳಿರುವುದರಿಂದ ಸದರಿ ಪ್ರದೇಶವನ್ನು ಸರ್ಕಾರಿ ಪ್ರದೇಶವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.<br /> <br /> ನಾಲ್ಕೂರು– ನಂಚಾರು ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಶರ್ಗಳಿಂದ ಪರಿಸರ ಮಾಲಿನ್ಯ ಉಂಟಾಗಿ ತೀವ್ರ ತೊಂದರೆ ಆಗುತ್ತಿದ್ದು ಎಲ್ಲ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ, ಬಂದ್ ನಡೆಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಉಡುಪಿ ತಾಲ್ಲೂಕಿನ ನಾಲ್ಕೂರು ಗ್ರಾಮದ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ತಿಳಿಸಿದ್ದಾರೆ.<br /> <br /> ಗಣಿಗಾರಿಕೆ, ಜಲ್ಲಿ ಕ್ರಶರ್ಗಳನ್ನು ಸ್ಥಗಿತಗೊಳಿಸುವಂತೆ ಆ ಗ್ರಾಮದ ಜನರು ಮನವಿ ನೀಡಿದ್ದರು. ಇದಕ್ಕೆ ಸ್ಪಂದಿಸಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.<br /> <br /> ಈ ಸಂಬಂಧ ಜಿಲ್ಲಾಡಳಿತ ಸಮಗ್ರ ಸರ್ವೆ ನಡೆಸಿದ್ದು ಸರ್ವೆ ನಂ. 219/1 ರಲ್ಲಿ 1693.94 ಎಕರೆ ಪ್ರದೇಶವು ಸರ್ಕಾರಿ ಸ್ಥಳವೆಂದು ನಮೂದಾಗಿದೆ. ಅದರಲ್ಲಿ 1492.44 ಎಕರೆ ಪರಿಭಾವಿತ ಅರಣ್ಯವಾಗಿರುತ್ತದೆ. ಉಳಿದ 201.50 ಎಕರೆ ಸರ್ಕಾರಿ ಪ್ರದೇಶವಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> ನಾಲ್ಕೂರು ಗ್ರಾಮದಲ್ಲಿ ಒಟ್ಟು ಒಟ್ಟು 24.60 ಎಕರೆ ಪ್ರದೇಶದಲ್ಲಿ 16 ಕಲ್ಲು ಗಣಿ ಗುತ್ತಿಗೆಗಳಿವೆ. ನಾಲ್ಕೂರು ಗ್ರಾಮದಲ್ಲಿ 14.75 ಎಕರೆ ಪ್ರದೇಶದಲ್ಲಿ ಕಲ್ಲುಪುಡಿ ಮಾಡುವ ಘಟಕಗಳನ್ನು ನಿಯಂತ್ರಣಾ ಆಧ್ಯಾದೇಶ 2011ರಂತೆ ಸುರಕ್ಷಿತ ವಲಯವಾಗಿ ಘೋಷಣೆಯಾಗಿದೆ. ಅದರಲ್ಲಿ ಒಟ್ಟು 5 ಕ್ರಷರ್ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ ಮತ್ತು ಆಧ್ಯಾದೇಶದ ನಿಯಮ 7ರಂತೆ ನವಯುಗ ಇಂಜಿನಿಯರಿಂಗ್ ಕಂಪನಿ ಹಾಗೂ ಆರ್.ಎಸ್.ಕಿಣಿ ರೈಲ್ವೆ ಕಾಮಗಾರಿ ಕೆಲಸಕ್ಕೆ ಇಬ್ಬರಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.<br /> <br /> ಸುರಕ್ಷಿತ ವಲಯವೆಂದು ಮತ್ತು ಕಲ್ಲು ಗಣಿ ಗುತ್ತಿಗೆಗಳಿಗೆ ನೀಡಿರುವ ಪ್ರದೇಶಗಳು ಕಲ್ಲು ಬಂಡೆಗಳಿಂದ ಕೂಡಿದ್ದು, ಅತಿ ವಿರಳವಾಗಿ ಮರ-ಗಿಡಗಳಿರುವುದರಿಂದ ಸದರಿ ಪ್ರದೇಶವನ್ನು ಸರ್ಕಾರಿ ಪ್ರದೇಶವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.<br /> <br /> ನಾಲ್ಕೂರು– ನಂಚಾರು ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಶರ್ಗಳಿಂದ ಪರಿಸರ ಮಾಲಿನ್ಯ ಉಂಟಾಗಿ ತೀವ್ರ ತೊಂದರೆ ಆಗುತ್ತಿದ್ದು ಎಲ್ಲ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ, ಬಂದ್ ನಡೆಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>