<p><strong>ಕಾರ್ಗಲ್: </strong>ಪ್ರಕೃತಿ ಸೌಂದರ್ಯದ ಕಣಜ ಎಂದು ಗುರುತಿಸಿಕೊಂಡು ಪ್ರಪಂಚದಾದ್ಯಂತ ಸೌಂದರ್ಯ ಉಪಾಸಕರನ್ನು ಸೆಳೆಯುತ್ತಿದ್ದ ಜೋಗ ಜಲಪಾತ ಇತ್ತೀಚೆಗಿನ ದಿನಗಳಲ್ಲಿ ಸದ್ದಡಗಿ ನಿಂತಿದೆ. ರಾಜನ ಗಾಂಭಿರ್ಯ, ರಾಣಿಯ ಸೌಂದರ್ಯ, ರೋರರ್ನ ಅರ್ಭಟ, ರಾಕೆಟ್ನ ಶರವೇಗ ಮಾಯವಾಗಿದೆ.<br /> <br /> ರಸಿಕ ಪ್ರವಾಸಿಗರಿಗೆ ರಸದೌತಣ ನೀಡಿ ರಮಿಸುತ್ತಿದ್ದ ಜೋಗ ಜಲಪಾತ ಮಳೆಯ ಅಭಾವ, ನೀರಿನ ಕೊರತೆಯಿಂದ ಇಂದು ಬಳಲುತ್ತಿದೆ. ಪ್ರವಾಸಿಗರ ಮನ ನಡುಗಿಸುವ ಭೀಕರ ರೂಪದ ಕಡು ಕಂದು ಬಣ್ಣದ ಬಂಡೆಗಳು ಮಾತ್ರ ಕಂಡು ಬರುತ್ತಿದೆ. <br /> <br /> ಮಕ್ಕಳ ಪರೀಕ್ಷೆಗಳನ್ನು ಮುಗಿಸಿ ಶಾಲಾ ರಜಾದಿನದ ಆರಂಭದ ದಿನಗಳಾದ ಈ ಭಾನುವಾರದಂದು ಸಾವಿರಾರು ಸಂಖ್ಯೆಯ ಪ್ರವಾಸಿಗರು ಜೋಗಕ್ಕೆ ಆಗಮಿಸಿದ್ದರು. ರಸಿಕ ಪ್ರವಾಸಿಗರನ್ನು ಜೋಗ ಜಲಪಾತ ಭಾನುವಾರದಂದು ಭಾರೀ ನಿರಾಸೆಯ ಮಡುವಿಗೆ ಕೊಂಡೊಯ್ದಿತ್ತು. <br /> <br /> ನೀರಿನ ಕೊರತೆಯಿಂದ ಬಂಡೆಕಲ್ಲುಗಳು ಬಿಸಿಲಿನ ತಾಪದಿಂದ ಕಾವೇರಿಸಿಕೊಂಡಿದ್ದು, ಬಂಡೆಯ ಪೊಟರೆಗಳಲ್ಲಿ ಆಶ್ರಯಿಸಿದ್ದ ಸಾವಿರಾರು ಪಾರಿವಾಳಗಳು, ಪಕ್ಷಿ ಸಂಕುಲಗಳು ವಲಸೆ ಹೋಗುತ್ತಲಿವೆ. ಹರಿದಾಡುವ ಅಪರೂಪದ ವನ್ಯ ಜೀವಿಗಳು ಇಂದು ಇಲ್ಲಿ ಕಾಣೆಯಾಗಿದೆ.<br /> <br /> ಶನಿವಾರ ಮತ್ತು ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಜಲಪಾತಕ್ಕೆ 200 ಕ್ಯೂಸೆಕ್ ನೀರು ಹರಿಯಬಿಡಬೇಕು ಎಂಬ ಸರ್ಕಾರದ ಆದೇಶ ಕಾಗದದ ಹಾಳೆಗಳಲ್ಲಿ ಉಳಿದು ಹೋಗಿದೆ. ಜಲಾಶಯದಲ್ಲಿ ನೀರಿನ ಶೇಖರಣೆ ತಳ ಸೇರಿದೆ. ಅಳಿದುಳಿದ ನೀರನ್ನು ವಿದ್ಯುತ್ ಉತ್ಪಾದನೆಗೆ ಮೀಸಲಾಗಿರಿಸಿದೆ.<br /> ಮಳೆಗಾಲಕ್ಕೆ ಇನ್ನೂ 2 ತಿಂಗಳು ಕಾಯಬೇಕು. ಮಳೆ ಸಕಾಲಕ್ಕೆ ಬರುತ್ತದೆ ಎಂಬ ನಂಬಿಕೆ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಗಲ್: </strong>ಪ್ರಕೃತಿ ಸೌಂದರ್ಯದ ಕಣಜ ಎಂದು ಗುರುತಿಸಿಕೊಂಡು ಪ್ರಪಂಚದಾದ್ಯಂತ ಸೌಂದರ್ಯ ಉಪಾಸಕರನ್ನು ಸೆಳೆಯುತ್ತಿದ್ದ ಜೋಗ ಜಲಪಾತ ಇತ್ತೀಚೆಗಿನ ದಿನಗಳಲ್ಲಿ ಸದ್ದಡಗಿ ನಿಂತಿದೆ. ರಾಜನ ಗಾಂಭಿರ್ಯ, ರಾಣಿಯ ಸೌಂದರ್ಯ, ರೋರರ್ನ ಅರ್ಭಟ, ರಾಕೆಟ್ನ ಶರವೇಗ ಮಾಯವಾಗಿದೆ.<br /> <br /> ರಸಿಕ ಪ್ರವಾಸಿಗರಿಗೆ ರಸದೌತಣ ನೀಡಿ ರಮಿಸುತ್ತಿದ್ದ ಜೋಗ ಜಲಪಾತ ಮಳೆಯ ಅಭಾವ, ನೀರಿನ ಕೊರತೆಯಿಂದ ಇಂದು ಬಳಲುತ್ತಿದೆ. ಪ್ರವಾಸಿಗರ ಮನ ನಡುಗಿಸುವ ಭೀಕರ ರೂಪದ ಕಡು ಕಂದು ಬಣ್ಣದ ಬಂಡೆಗಳು ಮಾತ್ರ ಕಂಡು ಬರುತ್ತಿದೆ. <br /> <br /> ಮಕ್ಕಳ ಪರೀಕ್ಷೆಗಳನ್ನು ಮುಗಿಸಿ ಶಾಲಾ ರಜಾದಿನದ ಆರಂಭದ ದಿನಗಳಾದ ಈ ಭಾನುವಾರದಂದು ಸಾವಿರಾರು ಸಂಖ್ಯೆಯ ಪ್ರವಾಸಿಗರು ಜೋಗಕ್ಕೆ ಆಗಮಿಸಿದ್ದರು. ರಸಿಕ ಪ್ರವಾಸಿಗರನ್ನು ಜೋಗ ಜಲಪಾತ ಭಾನುವಾರದಂದು ಭಾರೀ ನಿರಾಸೆಯ ಮಡುವಿಗೆ ಕೊಂಡೊಯ್ದಿತ್ತು. <br /> <br /> ನೀರಿನ ಕೊರತೆಯಿಂದ ಬಂಡೆಕಲ್ಲುಗಳು ಬಿಸಿಲಿನ ತಾಪದಿಂದ ಕಾವೇರಿಸಿಕೊಂಡಿದ್ದು, ಬಂಡೆಯ ಪೊಟರೆಗಳಲ್ಲಿ ಆಶ್ರಯಿಸಿದ್ದ ಸಾವಿರಾರು ಪಾರಿವಾಳಗಳು, ಪಕ್ಷಿ ಸಂಕುಲಗಳು ವಲಸೆ ಹೋಗುತ್ತಲಿವೆ. ಹರಿದಾಡುವ ಅಪರೂಪದ ವನ್ಯ ಜೀವಿಗಳು ಇಂದು ಇಲ್ಲಿ ಕಾಣೆಯಾಗಿದೆ.<br /> <br /> ಶನಿವಾರ ಮತ್ತು ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಜಲಪಾತಕ್ಕೆ 200 ಕ್ಯೂಸೆಕ್ ನೀರು ಹರಿಯಬಿಡಬೇಕು ಎಂಬ ಸರ್ಕಾರದ ಆದೇಶ ಕಾಗದದ ಹಾಳೆಗಳಲ್ಲಿ ಉಳಿದು ಹೋಗಿದೆ. ಜಲಾಶಯದಲ್ಲಿ ನೀರಿನ ಶೇಖರಣೆ ತಳ ಸೇರಿದೆ. ಅಳಿದುಳಿದ ನೀರನ್ನು ವಿದ್ಯುತ್ ಉತ್ಪಾದನೆಗೆ ಮೀಸಲಾಗಿರಿಸಿದೆ.<br /> ಮಳೆಗಾಲಕ್ಕೆ ಇನ್ನೂ 2 ತಿಂಗಳು ಕಾಯಬೇಕು. ಮಳೆ ಸಕಾಲಕ್ಕೆ ಬರುತ್ತದೆ ಎಂಬ ನಂಬಿಕೆ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>