<p><strong><span style="font-size: small">ನವ ದೆಹಲಿ (ಪಿಟಿಐ): </span></strong><span style="font-size: small">ಮುಂಬೈ ದಾಳಿ ರೂವಾರಿ ಅಜ್ಮಲ್ ಕಸಬ್ ಗೆ ವಿಶೇಷ ನ್ಯಾಯಾಲಯ ನೀಡಿದ್ದ ಮರಣದಂಡನೆ ತೀರ್ಪನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. </span></p>.<p><span style="font-size: small">ಮರಣದಂಡನೆ ನೀಡುವಲ್ಲಿ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಪಾಲಿಸಲಾಗಿದೆಯೇ ಎಂಬುದನ್ನು ವಿವರವಾಗಿ ಪರಿಶೀಲಿಸಲು ತಾನು ಬಯಸುವುದಾಗಿ ನ್ಯಾಯಾಲಯವು ತೀರ್ಪನ್ನು ಪ್ರಶ್ನಿಸಿ ಕಸಬ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುತ್ತಾ ಹೇಳಿತು. </span></p>.<p><span style="font-size: small">ಕಸಬ್ ಮನವಿಯನ್ನು ಸರಾಸಗಟಾಗಿ ತಿರಸ್ಕರಿಸಲು ಹಲವರು ಬಯಸಿದ್ದರೂ ಕಾನೂನು ಪ್ರಕ್ರಿಯೆಯ ಪಾಲನೆ ವಿಚಾರದಲ್ಲಿ </span><span style="font-size: small">ನ್ಯಾಯಾಲಯಕ್ಕೆ ನೆರವಾಗಲು ಮುಂದೆ ಬಂದಿರುವ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ಅವರನ್ನು ಶ್ಲಾಘಿಸುವುದಾಗಿ ಪೀಠವು ಹೇಳಿತು.</span></p>.<p><span style="font-size: small">ನ್ಯಾಯಮೂರ್ತಿಗಳಾದ ಅಫ್ತಬ್ ಅಲಮ್ ಹಾಗೂ ಸಿ.ಕೆ.ಪ್ರಸಾದ್ ಅವರನ್ನೊಳಗೊಂಡ ವಿಶೇಷ ಪೀಠವು ವಿಶೇಷ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಕಸಾಬ್ ಗೆ ಅನುಮತಿ ನೀಡಿತ್ತು. ಇದೇ ವೇಳೆಯಲ್ಲಿ ಮನವಿಯನ್ನು ತುರ್ತಾಗಿ ಇತ್ಯರ್ಥ್ಯಗೊಳಿಸಲು ಒಪ್ಪಿತು. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><span style="font-size: small">ನವ ದೆಹಲಿ (ಪಿಟಿಐ): </span></strong><span style="font-size: small">ಮುಂಬೈ ದಾಳಿ ರೂವಾರಿ ಅಜ್ಮಲ್ ಕಸಬ್ ಗೆ ವಿಶೇಷ ನ್ಯಾಯಾಲಯ ನೀಡಿದ್ದ ಮರಣದಂಡನೆ ತೀರ್ಪನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. </span></p>.<p><span style="font-size: small">ಮರಣದಂಡನೆ ನೀಡುವಲ್ಲಿ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಪಾಲಿಸಲಾಗಿದೆಯೇ ಎಂಬುದನ್ನು ವಿವರವಾಗಿ ಪರಿಶೀಲಿಸಲು ತಾನು ಬಯಸುವುದಾಗಿ ನ್ಯಾಯಾಲಯವು ತೀರ್ಪನ್ನು ಪ್ರಶ್ನಿಸಿ ಕಸಬ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುತ್ತಾ ಹೇಳಿತು. </span></p>.<p><span style="font-size: small">ಕಸಬ್ ಮನವಿಯನ್ನು ಸರಾಸಗಟಾಗಿ ತಿರಸ್ಕರಿಸಲು ಹಲವರು ಬಯಸಿದ್ದರೂ ಕಾನೂನು ಪ್ರಕ್ರಿಯೆಯ ಪಾಲನೆ ವಿಚಾರದಲ್ಲಿ </span><span style="font-size: small">ನ್ಯಾಯಾಲಯಕ್ಕೆ ನೆರವಾಗಲು ಮುಂದೆ ಬಂದಿರುವ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ಅವರನ್ನು ಶ್ಲಾಘಿಸುವುದಾಗಿ ಪೀಠವು ಹೇಳಿತು.</span></p>.<p><span style="font-size: small">ನ್ಯಾಯಮೂರ್ತಿಗಳಾದ ಅಫ್ತಬ್ ಅಲಮ್ ಹಾಗೂ ಸಿ.ಕೆ.ಪ್ರಸಾದ್ ಅವರನ್ನೊಳಗೊಂಡ ವಿಶೇಷ ಪೀಠವು ವಿಶೇಷ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಕಸಾಬ್ ಗೆ ಅನುಮತಿ ನೀಡಿತ್ತು. ಇದೇ ವೇಳೆಯಲ್ಲಿ ಮನವಿಯನ್ನು ತುರ್ತಾಗಿ ಇತ್ಯರ್ಥ್ಯಗೊಳಿಸಲು ಒಪ್ಪಿತು. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>