<p><strong>ಕೋಲ್ಕತ್ತ (ಪಿಟಿಐ): </strong>ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ಕಾಂಗ್ರೆಸ್ ನಡುವಣ ಗೆಳೆತನದಲ್ಲಿ ಒಡಕು ಮೂಡಿದೆ.<br /> <br /> `ತೃಣಮೂಲ ಕಾಂಗ್ರೆಸ್ ಪಕ್ಷವು ಸಿಪಿಎಂ ಪಕ್ಷದ ಬಿ ತಂಡದಂತೆ ಕೆಲಸ ಮಾಡುತ್ತಿದೆಯಲ್ಲದೆ ಬಿಜೆಪಿಯ ಆಜ್ಞೆಗಳನ್ನೂ ಪಾಲಿಸುತ್ತಿರುವಂತಿದೆ~ ಎಂದು ಕಾಂಗ್ರೆಸ್ ಸಂಸದೆ ದೀಪಾ ದಾಸ್ಮುನ್ಶಿ ಮಂಗಳವಾರ ಹೇಳಿದ್ದ ಮಾತುಗಳು ಬುಧವಾರ ತೃಣಮೂಲ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ.<br /> <br /> ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಯತ್ನವನ್ನು ಸಿಪಿಎಂ ವಿರೋಧಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಮಾತ್ರ ಸಿಪಿಎಂ ಜೊತೆ ಕೈಜೋಡಿಸಿ ವಿಶ್ವಾಸಘಾತುಕತನ ಎಸಗಿದೆ ಎಂದೂ ದೀಪಾ ಅವರು ಟೀಕಿಸಿದ್ದರು.<br /> <br /> ದೀಪಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಸರ್ಕಾರದ ಕ್ರೀಡಾ ಸಚಿವ ಮದನ್ ಮಿತ್ರ `ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುವ ಕಸರತ್ತು ನಡೆಸುವುದಕ್ಕಿಂತ, ಧೈರ್ಯವಿದ್ದರೆ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ನೋಡೋಣ~ ಎಂದಿದ್ದಾರೆ.<br /> <br /> ಇನ್ನೊಬ್ಬ ಸಚಿವ ಹಕೀಮ್ ಮಾತನಾಡಿ `ತೃಣಮೂಲ ಕಾಂಗ್ರೆಸ್ನ ಬೆಂಬಲವಿಲ್ಲದಿದ್ದರೆ, ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನಾಮಾವಶೇಷಗೊಳ್ಳುತ್ತದೆ, ಅಷ್ಟೇ~ ಎಂದಿದ್ದಾರೆ.<br /> <br /> ಕೇಂದ್ರದ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ನ ನಂತರ ಅತಿ ದೊಡ್ಡ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ನ ವಿರೋಧ ಕಟ್ಟಿಕೊಂಡರೆ ಯುಪಿಎ ಸರ್ಕಾರದ ಉಳಿವು ಕಷ್ಟ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ. <br /> <br /> ಆದರೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 180 ಸ್ಥಾನಗಳನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಅವಲಂಬಿಸಿಲ್ಲ. ಆದರೂ ಆ ಪಕ್ಷವನ್ನು ತನ್ನ ಸರ್ಕಾರದೊಳಗೆ ಸೇರಿಸಿಕೊಂಡಿದೆ.<br /> <br /> ಎರಡೂ ಪಕ್ಷಗಳ ನಡುವೆ ಸಂಬಂಧ ಈ ತೆರನಾಗಿ ಹಳಸಿರುವಾಗಲೇ, ಸರ್ಕಾರದ ಪ್ರತಿಷ್ಠಿತ ಕಟ್ಟಡ ಒಂದಕ್ಕೆ `ಇಂದಿರಾ ಭವನ~ ಎಂದು ಹೆಸರಿದ್ದುದನ್ನು ಅಳಿಸಿ, ಬಂಗಾಳಿ ಕವಿ ಖಾಜಿ ನಜ್ರುಲ್ ಇಸ್ಲಾಂ ಎಂದು ಪುನರ್ನಾಮಕರಣ ಮಾಡಲು ಸರ್ಕಾರ ಹೊರಟಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.<br /> <br /> `ದೇಶದ ಪ್ರಸಿದ್ಧ ವ್ಯಕ್ತಿಯೊಬ್ಬರ ಹೆಸರನ್ನು ಈ ರೀತಿ ಅಗೌರವದಿಂದ ಕಾಡುವುದು ಸರಿಯಲ್ಲ~ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಹೇಳಿದ್ದಾರೆ.<br /> <br /> ಕಟ್ಟಡದ ಹೆಸರನ್ನು ಬದಲಿಸುವ ಸರ್ಕಾರದ ನಿಲುವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ವ್ಯಾಪಕ ಪ್ರತಿಭಟನೆ ನಡೆಸಿದರು. <br /> <br /> `ಇಂದಿರಾ ಗಾಂಧಿ ಹಿಂದೆ ಮಮತಾ ಬ್ಯಾನರ್ಜಿಯವರ ನಾಯಕಿಯಾಗಿದ್ದರು ಎಂಬುದನ್ನು ಮಮತಾ ಮರೆಯದಿರಲಿ~ ಎಂದೂ ರಶೀದ್ ಹೇಳಿದ್ದಾರೆ. ಇಂತಹ ವಿಷಯಗಳ ಕುರಿತು ತಮ್ಮ ಪಕ್ಷದ ವಕ್ತಾರರು ಪ್ರತಿಕ್ರಿಯಿಸುತ್ತಾರೆ ಎಂದು ಮಮತಾ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ (ಪಿಟಿಐ): </strong>ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷ ಕಾಂಗ್ರೆಸ್ ನಡುವಣ ಗೆಳೆತನದಲ್ಲಿ ಒಡಕು ಮೂಡಿದೆ.<br /> <br /> `ತೃಣಮೂಲ ಕಾಂಗ್ರೆಸ್ ಪಕ್ಷವು ಸಿಪಿಎಂ ಪಕ್ಷದ ಬಿ ತಂಡದಂತೆ ಕೆಲಸ ಮಾಡುತ್ತಿದೆಯಲ್ಲದೆ ಬಿಜೆಪಿಯ ಆಜ್ಞೆಗಳನ್ನೂ ಪಾಲಿಸುತ್ತಿರುವಂತಿದೆ~ ಎಂದು ಕಾಂಗ್ರೆಸ್ ಸಂಸದೆ ದೀಪಾ ದಾಸ್ಮುನ್ಶಿ ಮಂಗಳವಾರ ಹೇಳಿದ್ದ ಮಾತುಗಳು ಬುಧವಾರ ತೃಣಮೂಲ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ.<br /> <br /> ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಯತ್ನವನ್ನು ಸಿಪಿಎಂ ವಿರೋಧಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಮಾತ್ರ ಸಿಪಿಎಂ ಜೊತೆ ಕೈಜೋಡಿಸಿ ವಿಶ್ವಾಸಘಾತುಕತನ ಎಸಗಿದೆ ಎಂದೂ ದೀಪಾ ಅವರು ಟೀಕಿಸಿದ್ದರು.<br /> <br /> ದೀಪಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಸರ್ಕಾರದ ಕ್ರೀಡಾ ಸಚಿವ ಮದನ್ ಮಿತ್ರ `ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುವ ಕಸರತ್ತು ನಡೆಸುವುದಕ್ಕಿಂತ, ಧೈರ್ಯವಿದ್ದರೆ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ನೋಡೋಣ~ ಎಂದಿದ್ದಾರೆ.<br /> <br /> ಇನ್ನೊಬ್ಬ ಸಚಿವ ಹಕೀಮ್ ಮಾತನಾಡಿ `ತೃಣಮೂಲ ಕಾಂಗ್ರೆಸ್ನ ಬೆಂಬಲವಿಲ್ಲದಿದ್ದರೆ, ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನಾಮಾವಶೇಷಗೊಳ್ಳುತ್ತದೆ, ಅಷ್ಟೇ~ ಎಂದಿದ್ದಾರೆ.<br /> <br /> ಕೇಂದ್ರದ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ನ ನಂತರ ಅತಿ ದೊಡ್ಡ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ನ ವಿರೋಧ ಕಟ್ಟಿಕೊಂಡರೆ ಯುಪಿಎ ಸರ್ಕಾರದ ಉಳಿವು ಕಷ್ಟ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ. <br /> <br /> ಆದರೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 180 ಸ್ಥಾನಗಳನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಅವಲಂಬಿಸಿಲ್ಲ. ಆದರೂ ಆ ಪಕ್ಷವನ್ನು ತನ್ನ ಸರ್ಕಾರದೊಳಗೆ ಸೇರಿಸಿಕೊಂಡಿದೆ.<br /> <br /> ಎರಡೂ ಪಕ್ಷಗಳ ನಡುವೆ ಸಂಬಂಧ ಈ ತೆರನಾಗಿ ಹಳಸಿರುವಾಗಲೇ, ಸರ್ಕಾರದ ಪ್ರತಿಷ್ಠಿತ ಕಟ್ಟಡ ಒಂದಕ್ಕೆ `ಇಂದಿರಾ ಭವನ~ ಎಂದು ಹೆಸರಿದ್ದುದನ್ನು ಅಳಿಸಿ, ಬಂಗಾಳಿ ಕವಿ ಖಾಜಿ ನಜ್ರುಲ್ ಇಸ್ಲಾಂ ಎಂದು ಪುನರ್ನಾಮಕರಣ ಮಾಡಲು ಸರ್ಕಾರ ಹೊರಟಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.<br /> <br /> `ದೇಶದ ಪ್ರಸಿದ್ಧ ವ್ಯಕ್ತಿಯೊಬ್ಬರ ಹೆಸರನ್ನು ಈ ರೀತಿ ಅಗೌರವದಿಂದ ಕಾಡುವುದು ಸರಿಯಲ್ಲ~ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಹೇಳಿದ್ದಾರೆ.<br /> <br /> ಕಟ್ಟಡದ ಹೆಸರನ್ನು ಬದಲಿಸುವ ಸರ್ಕಾರದ ನಿಲುವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ವ್ಯಾಪಕ ಪ್ರತಿಭಟನೆ ನಡೆಸಿದರು. <br /> <br /> `ಇಂದಿರಾ ಗಾಂಧಿ ಹಿಂದೆ ಮಮತಾ ಬ್ಯಾನರ್ಜಿಯವರ ನಾಯಕಿಯಾಗಿದ್ದರು ಎಂಬುದನ್ನು ಮಮತಾ ಮರೆಯದಿರಲಿ~ ಎಂದೂ ರಶೀದ್ ಹೇಳಿದ್ದಾರೆ. ಇಂತಹ ವಿಷಯಗಳ ಕುರಿತು ತಮ್ಮ ಪಕ್ಷದ ವಕ್ತಾರರು ಪ್ರತಿಕ್ರಿಯಿಸುತ್ತಾರೆ ಎಂದು ಮಮತಾ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>