<p><strong>ನವದೆಹಲಿ (ಪಿಟಿಐ): </strong>ತಾವು ಅತಿಥಿಯಾಗಿ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರ ಸಂಘಟಕರಿಂದ ಹೆಚ್ಚುವರಿ ವಿಮಾನ ದರ ಪಡೆದ ಆರೋಪ ಅಣ್ಣಾ ಹಜಾರೆ ತಂಡದ ಕಿರಣ್ ಬೇಡಿ ವಿರುದ್ಧ ಕೇಳಿಬಂದಿದೆ.<br /> <br /> ಕಾರ್ಪೊರೇಟ್ ಕಂಪೆನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೇಡಿ ವಿಮಾನದಲ್ಲಿ ತೆರಳಿದ್ದರು. ನಿವೃತ್ತ ಐಪಿಎಸ್ ಅಧಿಕಾರಿಯಾದ ಕಿರಣ್ ಬೇಡಿ ಆ ಸಂದರ್ಭದಲ್ಲಿ ತಾವು ಶೌರ್ಯ ಪದಕ ಪುರಸ್ಕೃತೆ ಎಂಬುದನ್ನು ಬಳಸಿಕೊಂಡು ಏರ್ ಇಂಡಿಯಾ ವಿಮಾನ ದರದಲ್ಲಿ ಶೇ 75ರಷ್ಟು ರಿಯಾಯಿತಿ ಪಡೆದಿದ್ದರು. <br /> <br /> ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ್ದ ಅವರು ನಂತರ ಸಂಘಟಕರಿಂದ ಬಿಜಿನೆಸ್ ದರ ಪಡೆದಿದ್ದಾರೆ ಎಂಬುದು ಈಗ ಕೇಳಿಬಂದಿರುವ ದೂರು.<br /> <br /> <strong>ಕಾಂಗ್ರೆಸ್ ಪ್ರಹಾರ</strong><br /> ಈ ಸುದ್ದಿ ಹೊರಬೀಳುತ್ತಿದ್ದಂತೆ ಪ್ರಹಾರ ಮಾಡಿರುವ ಕಾಂಗ್ರೆಸ್, ಗಾಂಧಿವಾದಿಯ ಸಹಚರರ ನಿಜವಾದ ಬಣ್ಣ ಬಯಲಾಗಿದೆ ಎಂದು ಟೀಕಿಸಿದೆ.ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮುನ್ನ ತಾವು ಸ್ವಚ್ಛ ಎಂಬುದನ್ನು ಬೇಡಿ ಸಾಬೀತುಪಡಿಸಬೇಕು.<br /> <br /> ಒಂದೆಡೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇವರೇ ಹೀಗೆ ಮಾಡಿರುವುದು ವಿಪರ್ಯಾಸ. ಈ ಪ್ರಕರಣದಲ್ಲಿ ತಾವು ನಿರ್ದೋಷಿ ಎಂಬುದನ್ನು ಬೇಡಿ ಸಾಬೀತುಪಡಿಸಬೇಕು ಎಂದು ಪಕ್ಷದ ವಕ್ತಾರ ರಷೀದ್ ಅಲ್ವಿ ಸವಾಲು ಹಾಕಿದ್ದಾರೆ.<br /> <br /> ಅಣ್ಣಾ ತಂಡದ ಒಬ್ಬರು, ಜಮ್ಮು ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕು ಎನ್ನುತ್ತಾರೆ. ಮತ್ತೊಬ್ಬರು ಸಂಸತ್ತಿಗಿಂತ ಅಣ್ಣಾ ಮೇಲು ಎನ್ನುತ್ತಾರೆ. ಇದೀಗ ಕಿರಣ್ ಬೇಡಿ ವಿರುದ್ಧ ಹೆಚ್ಚುವರಿ ವಿಮಾನ ದರ ಪಡೆದ ಆರೋಪ ಕೇಳಿಬಂದಿದೆ ಎಂದಿದ್ದಾರೆ.<br /> <br /> ಅಣ್ಣಾ ತಂಡದ ವಿರುದ್ಧ ಮುಂಚಿನಿಂದಲೂ ಟೀಕಾಸ್ತ್ರ ಪ್ರಯೋಗಿಸುತ್ತಲೇ ಬಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಇದೊಂದು ಗಂಭೀರ ಆರೋಪ ಎಂದಿದ್ದಾರೆ.<br /> <br /> <strong>ಆಪಾದನೆ ನಿರಾಕರಣೆ :</strong> ಆದರೆ, ತಮ್ಮ ವಿರುದ್ಧದ ಆರೋಪವನ್ನು ಬೇಡಿ ಅಲ್ಲಗಳೆದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದವರು ಬಿಜಿನೆಸ್ ದರ್ಜೆಯಲ್ಲಿ ಪ್ರಯಾಣಿಸಬಹುದೆಂದು ತಿಳಿಸಿದ್ದರು. <br /> <br /> ಹಣ ಉಳಿದರೆ ಅದನ್ನು ನಾನು ನಡೆಸುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ (ಇಂಡಿಯಾ ವಿಷನ್ ಪ್ರತಿಷ್ಠಾನ) ಕಾರ್ಯಕ್ಕೆ ಬಳಸಿಕೊಳ್ಳಬಹುದೆಂದು ಸ್ವಇಚ್ಛೆಯಿಂದ ಸಾಮಾನ್ಯ ದರ್ಜೆಯಲ್ಲೇ ಪ್ರಯಾಣಿಸಿದ್ದೆ. ಈ ಎರಡು ದರ್ಜೆಗಳ ವ್ಯತ್ಯಾಸದ ಹಣವನ್ನು ಸ್ವಂತಕ್ಕಾಗಿ ಬಳಸಿಕೊಂಡಿಲ್ಲ ಎಂದಿದ್ದಾರೆ.<br /> <br /> `ಸಾರ್ವಜನಿಕ ಜೀವನದಲ್ಲಿ ಇಂತಹ ಆರೋಪಗಳನ್ನು ಸವಾಲಾಗಿ ಸ್ವೀಕರಿಸಲು ಬಯಸುತ್ತೇನೆ. ಉಪನ್ಯಾಸ ಹಾಗೂ ಪುಸ್ತಕಗಳಿಂದ ಗೌರವ ಸಂಭಾವನೆ ರೂಪದಲ್ಲಿ ನನಗೆ ಸಾಕಷ್ಟು ಹಣ ಬರುತ್ತದೆ. ಅದನ್ನು ಪ್ರತಿಷ್ಠಾನದ ಕಾರ್ಯಕ್ಕೇ ವಿನಿಯೋಗಿಸುತ್ತಿದ್ದೇನೆ~ ಎಂದು ಬೇಡಿ ವಿವರಿಸಿದ್ದಾರೆ.<br /> <br /> `ನಾನು ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ್ದು ಸಂಘಟಕರಿಗೂ ಗೊತ್ತಿತ್ತು. ಪ್ರತಿಷ್ಠಾನಕ್ಕಾಗಿ ಹಣ ಉಳಿಸಲು ನಾನು ಹೀಗೆ ಮಾಡಿದ್ದರ ಬಗ್ಗೆ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು~ ಎಂದೂ ತಿಳಿಸಿದ್ದಾರೆ.<br /> <br /> ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಾದ ಸ್ವಂತ ಹೆಸರಿನಲ್ಲಿ ನಾನು ಹಣ ನಗದು ಮಾಡಿಕೊಳ್ಳುವುದಿಲ್ಲ. ಆಹ್ವಾನ ಪತ್ರಿಕೆ ಪ್ರತಿಷ್ಠಾನದ ಹೆಸರಿಗೇ ಬರುತ್ತದೆ. ಚೆಕ್ ಕೂಡ ಪ್ರತಿಷ್ಠಾನದ ಹೆಸರಿನಲ್ಲೇ ಇರುತ್ತದೆ. <br /> <br /> ಹೀಗಾಗಿ ಹಣ ಉಳಿದರೂ ಅದು ಪ್ರತಿಷ್ಠಾನದ ನಿಧಿಗೇ ಹೋಗುತ್ತದೆ. ನನ್ನನ್ನು ಆಹ್ವಾನಿಸಬಯಸುವ ಕೆಲವು ಎನ್ಜಿಒಗಳಿಗೆ ವಿಮಾನ ದರ ಭರಿಸಲು ಕಷ್ಟವಾದಾಗ ಪ್ರತಿಷ್ಠಾನದ ಹಣದಿಂದಲೇ ತೆರಳುತ್ತೇನೆ ಎಂದಿದ್ದಾರೆ. ಈ ವಿವರಣೆಯಿಂದಾಗಿ, ನನ್ನ ವಿರೋಧ ಆರೋಪ ಮಾಡಲು ಹವಣಿಸುತ್ತಿರುವವರಿಗೆ ಹತಾಶೆಯಾಗಿರಬಹುದು ಎಂದು ಬೇಡಿ ಪ್ರತಿಕ್ರಿಯಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ತಾವು ಅತಿಥಿಯಾಗಿ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರ ಸಂಘಟಕರಿಂದ ಹೆಚ್ಚುವರಿ ವಿಮಾನ ದರ ಪಡೆದ ಆರೋಪ ಅಣ್ಣಾ ಹಜಾರೆ ತಂಡದ ಕಿರಣ್ ಬೇಡಿ ವಿರುದ್ಧ ಕೇಳಿಬಂದಿದೆ.<br /> <br /> ಕಾರ್ಪೊರೇಟ್ ಕಂಪೆನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೇಡಿ ವಿಮಾನದಲ್ಲಿ ತೆರಳಿದ್ದರು. ನಿವೃತ್ತ ಐಪಿಎಸ್ ಅಧಿಕಾರಿಯಾದ ಕಿರಣ್ ಬೇಡಿ ಆ ಸಂದರ್ಭದಲ್ಲಿ ತಾವು ಶೌರ್ಯ ಪದಕ ಪುರಸ್ಕೃತೆ ಎಂಬುದನ್ನು ಬಳಸಿಕೊಂಡು ಏರ್ ಇಂಡಿಯಾ ವಿಮಾನ ದರದಲ್ಲಿ ಶೇ 75ರಷ್ಟು ರಿಯಾಯಿತಿ ಪಡೆದಿದ್ದರು. <br /> <br /> ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ್ದ ಅವರು ನಂತರ ಸಂಘಟಕರಿಂದ ಬಿಜಿನೆಸ್ ದರ ಪಡೆದಿದ್ದಾರೆ ಎಂಬುದು ಈಗ ಕೇಳಿಬಂದಿರುವ ದೂರು.<br /> <br /> <strong>ಕಾಂಗ್ರೆಸ್ ಪ್ರಹಾರ</strong><br /> ಈ ಸುದ್ದಿ ಹೊರಬೀಳುತ್ತಿದ್ದಂತೆ ಪ್ರಹಾರ ಮಾಡಿರುವ ಕಾಂಗ್ರೆಸ್, ಗಾಂಧಿವಾದಿಯ ಸಹಚರರ ನಿಜವಾದ ಬಣ್ಣ ಬಯಲಾಗಿದೆ ಎಂದು ಟೀಕಿಸಿದೆ.ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮುನ್ನ ತಾವು ಸ್ವಚ್ಛ ಎಂಬುದನ್ನು ಬೇಡಿ ಸಾಬೀತುಪಡಿಸಬೇಕು.<br /> <br /> ಒಂದೆಡೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇವರೇ ಹೀಗೆ ಮಾಡಿರುವುದು ವಿಪರ್ಯಾಸ. ಈ ಪ್ರಕರಣದಲ್ಲಿ ತಾವು ನಿರ್ದೋಷಿ ಎಂಬುದನ್ನು ಬೇಡಿ ಸಾಬೀತುಪಡಿಸಬೇಕು ಎಂದು ಪಕ್ಷದ ವಕ್ತಾರ ರಷೀದ್ ಅಲ್ವಿ ಸವಾಲು ಹಾಕಿದ್ದಾರೆ.<br /> <br /> ಅಣ್ಣಾ ತಂಡದ ಒಬ್ಬರು, ಜಮ್ಮು ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕು ಎನ್ನುತ್ತಾರೆ. ಮತ್ತೊಬ್ಬರು ಸಂಸತ್ತಿಗಿಂತ ಅಣ್ಣಾ ಮೇಲು ಎನ್ನುತ್ತಾರೆ. ಇದೀಗ ಕಿರಣ್ ಬೇಡಿ ವಿರುದ್ಧ ಹೆಚ್ಚುವರಿ ವಿಮಾನ ದರ ಪಡೆದ ಆರೋಪ ಕೇಳಿಬಂದಿದೆ ಎಂದಿದ್ದಾರೆ.<br /> <br /> ಅಣ್ಣಾ ತಂಡದ ವಿರುದ್ಧ ಮುಂಚಿನಿಂದಲೂ ಟೀಕಾಸ್ತ್ರ ಪ್ರಯೋಗಿಸುತ್ತಲೇ ಬಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಇದೊಂದು ಗಂಭೀರ ಆರೋಪ ಎಂದಿದ್ದಾರೆ.<br /> <br /> <strong>ಆಪಾದನೆ ನಿರಾಕರಣೆ :</strong> ಆದರೆ, ತಮ್ಮ ವಿರುದ್ಧದ ಆರೋಪವನ್ನು ಬೇಡಿ ಅಲ್ಲಗಳೆದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದವರು ಬಿಜಿನೆಸ್ ದರ್ಜೆಯಲ್ಲಿ ಪ್ರಯಾಣಿಸಬಹುದೆಂದು ತಿಳಿಸಿದ್ದರು. <br /> <br /> ಹಣ ಉಳಿದರೆ ಅದನ್ನು ನಾನು ನಡೆಸುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ (ಇಂಡಿಯಾ ವಿಷನ್ ಪ್ರತಿಷ್ಠಾನ) ಕಾರ್ಯಕ್ಕೆ ಬಳಸಿಕೊಳ್ಳಬಹುದೆಂದು ಸ್ವಇಚ್ಛೆಯಿಂದ ಸಾಮಾನ್ಯ ದರ್ಜೆಯಲ್ಲೇ ಪ್ರಯಾಣಿಸಿದ್ದೆ. ಈ ಎರಡು ದರ್ಜೆಗಳ ವ್ಯತ್ಯಾಸದ ಹಣವನ್ನು ಸ್ವಂತಕ್ಕಾಗಿ ಬಳಸಿಕೊಂಡಿಲ್ಲ ಎಂದಿದ್ದಾರೆ.<br /> <br /> `ಸಾರ್ವಜನಿಕ ಜೀವನದಲ್ಲಿ ಇಂತಹ ಆರೋಪಗಳನ್ನು ಸವಾಲಾಗಿ ಸ್ವೀಕರಿಸಲು ಬಯಸುತ್ತೇನೆ. ಉಪನ್ಯಾಸ ಹಾಗೂ ಪುಸ್ತಕಗಳಿಂದ ಗೌರವ ಸಂಭಾವನೆ ರೂಪದಲ್ಲಿ ನನಗೆ ಸಾಕಷ್ಟು ಹಣ ಬರುತ್ತದೆ. ಅದನ್ನು ಪ್ರತಿಷ್ಠಾನದ ಕಾರ್ಯಕ್ಕೇ ವಿನಿಯೋಗಿಸುತ್ತಿದ್ದೇನೆ~ ಎಂದು ಬೇಡಿ ವಿವರಿಸಿದ್ದಾರೆ.<br /> <br /> `ನಾನು ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ್ದು ಸಂಘಟಕರಿಗೂ ಗೊತ್ತಿತ್ತು. ಪ್ರತಿಷ್ಠಾನಕ್ಕಾಗಿ ಹಣ ಉಳಿಸಲು ನಾನು ಹೀಗೆ ಮಾಡಿದ್ದರ ಬಗ್ಗೆ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು~ ಎಂದೂ ತಿಳಿಸಿದ್ದಾರೆ.<br /> <br /> ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಾದ ಸ್ವಂತ ಹೆಸರಿನಲ್ಲಿ ನಾನು ಹಣ ನಗದು ಮಾಡಿಕೊಳ್ಳುವುದಿಲ್ಲ. ಆಹ್ವಾನ ಪತ್ರಿಕೆ ಪ್ರತಿಷ್ಠಾನದ ಹೆಸರಿಗೇ ಬರುತ್ತದೆ. ಚೆಕ್ ಕೂಡ ಪ್ರತಿಷ್ಠಾನದ ಹೆಸರಿನಲ್ಲೇ ಇರುತ್ತದೆ. <br /> <br /> ಹೀಗಾಗಿ ಹಣ ಉಳಿದರೂ ಅದು ಪ್ರತಿಷ್ಠಾನದ ನಿಧಿಗೇ ಹೋಗುತ್ತದೆ. ನನ್ನನ್ನು ಆಹ್ವಾನಿಸಬಯಸುವ ಕೆಲವು ಎನ್ಜಿಒಗಳಿಗೆ ವಿಮಾನ ದರ ಭರಿಸಲು ಕಷ್ಟವಾದಾಗ ಪ್ರತಿಷ್ಠಾನದ ಹಣದಿಂದಲೇ ತೆರಳುತ್ತೇನೆ ಎಂದಿದ್ದಾರೆ. ಈ ವಿವರಣೆಯಿಂದಾಗಿ, ನನ್ನ ವಿರೋಧ ಆರೋಪ ಮಾಡಲು ಹವಣಿಸುತ್ತಿರುವವರಿಗೆ ಹತಾಶೆಯಾಗಿರಬಹುದು ಎಂದು ಬೇಡಿ ಪ್ರತಿಕ್ರಿಯಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>