<p>ಬೆಟ್ಟದಲ್ಲಿ ಜೀವ ಸಂಚಾರವಾಗಿದೆ. ಕಾಡ ನೋಡಹೋದವರು ಖುಷಿಯಾಗಿದ್ದಾರೆ. ಆ ಖುಷಿ ಎರಡನೇ ವಾರಕ್ಕೂ ಮುಂದುವರೆದಿದೆ.<br /> <br /> `ಬೆಟ್ಟದ ಜೀವ~ ಚಿತ್ರಕ್ಕೆ ವ್ಯಕ್ತವಾಗಿರುವ ಪ್ರೇಕ್ಷಕರ ಪ್ರತಿಕ್ರಿಯೆ ನಿರ್ದೇಶಕ ಪಿ.ಶೇಷಾದ್ರಿ ಅವರಿಗೆ ಸಮಾಧಾನ ತಂದಿದೆ. ಕಳೆದ ವಾರವಷ್ಟೇ ಪ್ರೇಕ್ಷಕರನ್ನು ಥಿಯೇಟರ್ಗೆ ಸೆಳೆಯುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದ ಅವರು, ಇದೀಗ ತಮ್ಮ ಕಷ್ಟದ ಫಲವನ್ನು ಸಹೃದಯರು ಇಷ್ಟಪಡುತ್ತಿರುವ ಬಗ್ಗೆ ಖುಷಿಖುಷಿಯಾಗಿದ್ದರು.<br /> <br /> `ತೆರೆಕಂಡಿರುವ ಮಂತ್ರಿ ಮಾಲ್ ಮತ್ತು ಪಿವಿಆರ್ ಎರಡೂ ಕಡೆ ವಾರಾಂತ್ಯದಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಉಳಿದ ಪ್ರದರ್ಶನಗಳಲ್ಲೂ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ. ಆ ಕಾರಣದಿಂದಲೇ ಸಿನಿಮಾ ಎರಡನೇ ವಾರಕ್ಕೆ ಮುಂದುವರೆಸುತ್ತಿದ್ದೇವೆ~ ಎಂದರು ಶೇಷಾದ್ರಿ. <br /> <br /> ಕಮರ್ಷಿಯಲ್ ಪ್ರಭೆಯ ಚಿತ್ರವೊಂದರ ನಿರ್ಮಾಪಕ - ನಿರ್ದೇಶಕರು ತಮ್ಮ ಚಿತ್ರ ತೆರೆಕಂಡ ಮೂರೇ ದಿನಕ್ಕೆ, `ಇನ್ನು ಸಿನಿಮಾ ಓಡಿಸಲಾರೆ, ಸಾರಿ~ ಎಂದು ಕೈಚೆಲ್ಲಿರುವ ಹೊತ್ತಿನಲ್ಲಿ `ಬೆಟ್ಟದ ಜೀವ~ದ ಜೀವಸಂಚಾರ ವಿಶೇಷ ಎನ್ನುವಂತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಟ್ಟದಲ್ಲಿ ಜೀವ ಸಂಚಾರವಾಗಿದೆ. ಕಾಡ ನೋಡಹೋದವರು ಖುಷಿಯಾಗಿದ್ದಾರೆ. ಆ ಖುಷಿ ಎರಡನೇ ವಾರಕ್ಕೂ ಮುಂದುವರೆದಿದೆ.<br /> <br /> `ಬೆಟ್ಟದ ಜೀವ~ ಚಿತ್ರಕ್ಕೆ ವ್ಯಕ್ತವಾಗಿರುವ ಪ್ರೇಕ್ಷಕರ ಪ್ರತಿಕ್ರಿಯೆ ನಿರ್ದೇಶಕ ಪಿ.ಶೇಷಾದ್ರಿ ಅವರಿಗೆ ಸಮಾಧಾನ ತಂದಿದೆ. ಕಳೆದ ವಾರವಷ್ಟೇ ಪ್ರೇಕ್ಷಕರನ್ನು ಥಿಯೇಟರ್ಗೆ ಸೆಳೆಯುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದ ಅವರು, ಇದೀಗ ತಮ್ಮ ಕಷ್ಟದ ಫಲವನ್ನು ಸಹೃದಯರು ಇಷ್ಟಪಡುತ್ತಿರುವ ಬಗ್ಗೆ ಖುಷಿಖುಷಿಯಾಗಿದ್ದರು.<br /> <br /> `ತೆರೆಕಂಡಿರುವ ಮಂತ್ರಿ ಮಾಲ್ ಮತ್ತು ಪಿವಿಆರ್ ಎರಡೂ ಕಡೆ ವಾರಾಂತ್ಯದಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಉಳಿದ ಪ್ರದರ್ಶನಗಳಲ್ಲೂ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ. ಆ ಕಾರಣದಿಂದಲೇ ಸಿನಿಮಾ ಎರಡನೇ ವಾರಕ್ಕೆ ಮುಂದುವರೆಸುತ್ತಿದ್ದೇವೆ~ ಎಂದರು ಶೇಷಾದ್ರಿ. <br /> <br /> ಕಮರ್ಷಿಯಲ್ ಪ್ರಭೆಯ ಚಿತ್ರವೊಂದರ ನಿರ್ಮಾಪಕ - ನಿರ್ದೇಶಕರು ತಮ್ಮ ಚಿತ್ರ ತೆರೆಕಂಡ ಮೂರೇ ದಿನಕ್ಕೆ, `ಇನ್ನು ಸಿನಿಮಾ ಓಡಿಸಲಾರೆ, ಸಾರಿ~ ಎಂದು ಕೈಚೆಲ್ಲಿರುವ ಹೊತ್ತಿನಲ್ಲಿ `ಬೆಟ್ಟದ ಜೀವ~ದ ಜೀವಸಂಚಾರ ವಿಶೇಷ ಎನ್ನುವಂತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>