<p><strong>ನವದೆಹಲಿ (ಪಿಟಿಐ): </strong>ಜನಲೋಕಪಾಲ ಜಂಟಿ ಕರಡು ರಚನಾ ಸಮಿತಿ ಸಭಾ ನಡಾವಳಿ ಧ್ವನಿ ಮುದ್ರಿಕೆಯನ್ನು ಸಾರ್ವಜನಿಕ ಮುಕ್ತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಕಾನೂನು ಸಚಿವಾಲಯದ ಸಲಹೆ ಕೇಳಿದೆ.<br /> <br /> ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಏಪ್ರಿಲ್ನಲ್ಲಿ ಕೈಗೊಂಡ ಉಪವಾಸ ಸತ್ಯಾಗ್ರಹಕ್ಕೆ ಮಣಿದ ಕೇಂದ್ರ, ಐವರು ಸಚಿವರು ಮತ್ತು ಐವರು ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕರಡು ರಚನಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ನಡೆಸಿದ ಪ್ರತಿಯೊಂದು ಸಭೆಯ ನಡಾವಳಿಯನ್ನು ಧ್ವನಿ ಮುದ್ರಿಕೆ ಮಾಡಲಾಗಿದೆ.<br /> <br /> `ಕರಡು ರಚನಾ ಸಮಿತಿ ನಡಾವಳಿಯ ಧ್ವನಿ ಮುದ್ರಿಕೆಯನ್ನು ಸಾರ್ವಜನಿಕ ಮುಕ್ತಗೊಳಿಸಿದರೆ ಆರ್ಟಿಐ ವ್ಯಾಪ್ತಿಯಲ್ಲಿ ಅರ್ಜಿ ಬಂದ ಪಕ್ಷದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಸರ್ಕಾರ ಕಾನೂನು ಸಚಿವಾಲಯವನ್ನು ಕೋರಿದೆ~ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮಾಹಿತಿ ಹಕ್ಕು ವಿಭಾಗ ಹೇಳಿದೆ. <br /> <br /> ಮಾಹಿತಿ ಹಕ್ಕು ಕಾರ್ಯಕರ್ತ ಎಸ್.ಸಿ. ಅಗರ್ವಾಲ್ ಜನ ಲೋಕಪಾಲ ಕರಡು ರಚನಾ ಸಮಿತಿ ನಡಾವಳಿಯ ಧ್ವನಿ ಮುದ್ರಿಕೆಯನ್ನು ಸಿ.ಡಿ ರೂಪದಲ್ಲಿ ನೀಡುವಂತೆ ಡಿಒಪಿಟಿಗೆ ಅರ್ಜಿ ಸಲ್ಲಿಸಿದ್ದಾರೆ. <br /> ಡಿಒಪಿಟಿ ತನ್ನ ವೆಬ್ಸೈಟ್ನಲ್ಲಿದ್ದ ಕರಡು ಸಮಿತಿ ನಡಾವಳಿಯ ಸಾರಾಂಶವನಷ್ಟೇ ಅರ್ಜಿದಾರರಿಗೆ ರವಾನಿಸಿ, ಧ್ವನಿ ಮುದ್ರಿಕೆ ತನ್ನ ಬಳಿ ಇಲ್ಲ ಎಂದು ಉತ್ತರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಜನಲೋಕಪಾಲ ಜಂಟಿ ಕರಡು ರಚನಾ ಸಮಿತಿ ಸಭಾ ನಡಾವಳಿ ಧ್ವನಿ ಮುದ್ರಿಕೆಯನ್ನು ಸಾರ್ವಜನಿಕ ಮುಕ್ತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಕಾನೂನು ಸಚಿವಾಲಯದ ಸಲಹೆ ಕೇಳಿದೆ.<br /> <br /> ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಏಪ್ರಿಲ್ನಲ್ಲಿ ಕೈಗೊಂಡ ಉಪವಾಸ ಸತ್ಯಾಗ್ರಹಕ್ಕೆ ಮಣಿದ ಕೇಂದ್ರ, ಐವರು ಸಚಿವರು ಮತ್ತು ಐವರು ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕರಡು ರಚನಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ನಡೆಸಿದ ಪ್ರತಿಯೊಂದು ಸಭೆಯ ನಡಾವಳಿಯನ್ನು ಧ್ವನಿ ಮುದ್ರಿಕೆ ಮಾಡಲಾಗಿದೆ.<br /> <br /> `ಕರಡು ರಚನಾ ಸಮಿತಿ ನಡಾವಳಿಯ ಧ್ವನಿ ಮುದ್ರಿಕೆಯನ್ನು ಸಾರ್ವಜನಿಕ ಮುಕ್ತಗೊಳಿಸಿದರೆ ಆರ್ಟಿಐ ವ್ಯಾಪ್ತಿಯಲ್ಲಿ ಅರ್ಜಿ ಬಂದ ಪಕ್ಷದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಸರ್ಕಾರ ಕಾನೂನು ಸಚಿವಾಲಯವನ್ನು ಕೋರಿದೆ~ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮಾಹಿತಿ ಹಕ್ಕು ವಿಭಾಗ ಹೇಳಿದೆ. <br /> <br /> ಮಾಹಿತಿ ಹಕ್ಕು ಕಾರ್ಯಕರ್ತ ಎಸ್.ಸಿ. ಅಗರ್ವಾಲ್ ಜನ ಲೋಕಪಾಲ ಕರಡು ರಚನಾ ಸಮಿತಿ ನಡಾವಳಿಯ ಧ್ವನಿ ಮುದ್ರಿಕೆಯನ್ನು ಸಿ.ಡಿ ರೂಪದಲ್ಲಿ ನೀಡುವಂತೆ ಡಿಒಪಿಟಿಗೆ ಅರ್ಜಿ ಸಲ್ಲಿಸಿದ್ದಾರೆ. <br /> ಡಿಒಪಿಟಿ ತನ್ನ ವೆಬ್ಸೈಟ್ನಲ್ಲಿದ್ದ ಕರಡು ಸಮಿತಿ ನಡಾವಳಿಯ ಸಾರಾಂಶವನಷ್ಟೇ ಅರ್ಜಿದಾರರಿಗೆ ರವಾನಿಸಿ, ಧ್ವನಿ ಮುದ್ರಿಕೆ ತನ್ನ ಬಳಿ ಇಲ್ಲ ಎಂದು ಉತ್ತರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>