<p><strong>ಬೆಂಗಳೂರು:</strong> ರಾಜ್ಯದಲ್ಲಿ 1993–94ರಲ್ಲಿ ಜಾರಿಗೆ ಬಂದ ಸಾಮಾನ್ಯ ಪ್ರವೇಶ ಪರೀಕ್ಷಾ ಪದ್ಧತಿ (ಸಿಇಟಿ) 2002ರವರೆಗೂ ದೇಶಕ್ಕೆ ಮಾದರಿಯಾಗಿತ್ತು. ಆದರೆ, 2002ರಲ್ಲಿ ಟಿಎಂಎ ಪೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಖಾಸಗಿ ಕಾಲೇಜುಗಳ ಮೇಲೆ ಸರ್ಕಾರಕ್ಕೆ ಯಾವುದೇ ಹಿಡಿತ ಇಲ್ಲದಂತಾಯಿತು.<br /> <br /> ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಸೀಟುಗಳನ್ನು ನೀಡಬೇಕಾಗಿಲ್ಲ. ಆಯಾ ಕಾಲೇಜುಗಳು ಸ್ವತಂತ್ರವಾಗಿ ಸಿಇಟಿ ನಡೆಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದು ಎಂದು 11 ಮಂದಿ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಬಹುಮತದ ಆಧಾರದ ಮೇಲೆ ಹೇಳಿತು.<br /> <br /> ಹನ್ನೊಂದು ಮಂದಿ ನ್ಯಾಯಮೂರ್ತಿಗಳ ಪೈಕಿ ಆರು ಮಂದಿ ಆಡಳಿತ ಮಂಡಳಿಗಳ ಪರವಾಗಿ ನಿಲುವು ತಳೆದರೆ, 5 ಮಂದಿ ವಿರುದ್ಧವಾದ ನಿಲುವು ತಳೆದರು. ಅಂತಿಮವಾಗಿ ಬಹುಮತದ ಆಧಾರದ ಮೇಲೆ ತೀರ್ಪು ಹೊರಬಿತ್ತು.<br /> <br /> ಆಗಿನಿಂದ ಸರ್ಕಾರ ಪ್ರತಿವರ್ಷ ಖಾಸಗಿ ಕಾಲೇಜುಗಳೊಂದಿಗೆ ಮಾತುಕತೆ ನಡೆಸಿ ಒಂದಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಂಚಿಕೆ ಮಾಡುತ್ತಿತ್ತು. ಮಾತುಕತೆ ಮೂಲಕ ಶುಲ್ಕ ನಿಗದಿಯಾಗುತ್ತಿತ್ತು.<br /> <br /> ಆದರೆ, ಖಾಸಗಿ ಕಾಲೇಜುಗಳು ಪ್ರತಿ ವರ್ಷ ಹೆಚ್ಚಿನ ಶುಲ್ಕ ನಿಗದಿ ಮಾಡುವಂತೆ ಪಟ್ಟು ಹಿಡಿಯುತ್ತಿದ್ದವು. ಅಲ್ಲದೆ ಸರ್ಕಾರಕ್ಕೆ ಬಿಟ್ಟುಕೊಡುತ್ತಿದ್ದ ಸೀಟುಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿತ್ತು.<br /> <br /> ಖಾಸಗಿ ಕಾಲೇಜುಗಳು ಸರ್ಕಾರದ ಮೇಲೆ ಸವಾರಿ ಮಾಡಲು ಹೊರಟಿವೆ. ಸರ್ಕಾರದ ಮಾತನ್ನು ಕೇಳುವುದಿಲ್ಲ ಎಂಬ ಕಾರಣಕ್ಕೆ 2006ರಲ್ಲಿ ಕಾಯ್ದೆ ರೂಪಿಸಿ ಕೆಲವೊಂದು ನಿರ್ಬಂಧ ವಿಧಿಸಲು ಆಗಿನ ಸರ್ಕಾರ ಮುಂದಾಯಿತು.<br /> <br /> ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿದ ಈ ಮಸೂದೆಗೆ ರಾಜ್ಯಪಾಲರು ಅಂಗೀಕಾರ ನೀಡುತ್ತಿದ್ದಂತೆಯೇ ಕಾಯ್ದೆ ಆಯಿತು. ಆದರೆ, ಇದರಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಅನನುಕೂಲವಾದ ಅಂಶಗಳು ಇದ್ದ ಕಾರಣ ತಕ್ಷಣವೇ ಜಾರಿ ಮಾಡದೆ ತಡೆಹಿಡಿಯಲಾಗಿತ್ತು.<br /> <br /> ಪ್ರತಿ ವರ್ಷ ಈ ಕಾಯ್ದೆಯನ್ನು ತಡೆಹಿಡಿದು ಪರಸ್ಪರ ಮಾತುಕತೆ ಮೂಲಕವೇ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಮಾಡಲಾಗುತ್ತಿತ್ತು. ಕಳೆದ ವರ್ಷ ಖಾಸಗಿ ಕಾಲೇಜುಗಳು ಶುಲ್ಕ ಹೆಚ್ಚಳಕ್ಕೆ ಪಟ್ಟು ಹಿಡಿದ ಕಾರಣ, ಸರ್ಕಾರ ಕಾಯ್ದೆ ಜಾರಿಗೊಳಿಸುವುದಾಗಿ ಘೋಷಿಸಿತ್ತು.<br /> <br /> ಆ ಪ್ರಕಾರ ಕಳೆದ ಜುಲೈನಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಕಾಯ್ದೆ ಜಾರಿಗೆ ಇದ್ದ ತಡೆಯನ್ನು ತೆರವುಗೊಳಿಸಲಾಯಿತು. 2014 – 15ನೇ ಸಾಲಿನಿಂದ ಕಾಯ್ದೆ ಜಾರಿಗೆ ಎರಡು ಸಮಿತಿಗಳನ್ನು ರಚಿಸುವ ಮೂಲಕ ಚಾಲನೆ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲಿ 1993–94ರಲ್ಲಿ ಜಾರಿಗೆ ಬಂದ ಸಾಮಾನ್ಯ ಪ್ರವೇಶ ಪರೀಕ್ಷಾ ಪದ್ಧತಿ (ಸಿಇಟಿ) 2002ರವರೆಗೂ ದೇಶಕ್ಕೆ ಮಾದರಿಯಾಗಿತ್ತು. ಆದರೆ, 2002ರಲ್ಲಿ ಟಿಎಂಎ ಪೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಖಾಸಗಿ ಕಾಲೇಜುಗಳ ಮೇಲೆ ಸರ್ಕಾರಕ್ಕೆ ಯಾವುದೇ ಹಿಡಿತ ಇಲ್ಲದಂತಾಯಿತು.<br /> <br /> ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಸೀಟುಗಳನ್ನು ನೀಡಬೇಕಾಗಿಲ್ಲ. ಆಯಾ ಕಾಲೇಜುಗಳು ಸ್ವತಂತ್ರವಾಗಿ ಸಿಇಟಿ ನಡೆಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದು ಎಂದು 11 ಮಂದಿ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಬಹುಮತದ ಆಧಾರದ ಮೇಲೆ ಹೇಳಿತು.<br /> <br /> ಹನ್ನೊಂದು ಮಂದಿ ನ್ಯಾಯಮೂರ್ತಿಗಳ ಪೈಕಿ ಆರು ಮಂದಿ ಆಡಳಿತ ಮಂಡಳಿಗಳ ಪರವಾಗಿ ನಿಲುವು ತಳೆದರೆ, 5 ಮಂದಿ ವಿರುದ್ಧವಾದ ನಿಲುವು ತಳೆದರು. ಅಂತಿಮವಾಗಿ ಬಹುಮತದ ಆಧಾರದ ಮೇಲೆ ತೀರ್ಪು ಹೊರಬಿತ್ತು.<br /> <br /> ಆಗಿನಿಂದ ಸರ್ಕಾರ ಪ್ರತಿವರ್ಷ ಖಾಸಗಿ ಕಾಲೇಜುಗಳೊಂದಿಗೆ ಮಾತುಕತೆ ನಡೆಸಿ ಒಂದಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಂಚಿಕೆ ಮಾಡುತ್ತಿತ್ತು. ಮಾತುಕತೆ ಮೂಲಕ ಶುಲ್ಕ ನಿಗದಿಯಾಗುತ್ತಿತ್ತು.<br /> <br /> ಆದರೆ, ಖಾಸಗಿ ಕಾಲೇಜುಗಳು ಪ್ರತಿ ವರ್ಷ ಹೆಚ್ಚಿನ ಶುಲ್ಕ ನಿಗದಿ ಮಾಡುವಂತೆ ಪಟ್ಟು ಹಿಡಿಯುತ್ತಿದ್ದವು. ಅಲ್ಲದೆ ಸರ್ಕಾರಕ್ಕೆ ಬಿಟ್ಟುಕೊಡುತ್ತಿದ್ದ ಸೀಟುಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿತ್ತು.<br /> <br /> ಖಾಸಗಿ ಕಾಲೇಜುಗಳು ಸರ್ಕಾರದ ಮೇಲೆ ಸವಾರಿ ಮಾಡಲು ಹೊರಟಿವೆ. ಸರ್ಕಾರದ ಮಾತನ್ನು ಕೇಳುವುದಿಲ್ಲ ಎಂಬ ಕಾರಣಕ್ಕೆ 2006ರಲ್ಲಿ ಕಾಯ್ದೆ ರೂಪಿಸಿ ಕೆಲವೊಂದು ನಿರ್ಬಂಧ ವಿಧಿಸಲು ಆಗಿನ ಸರ್ಕಾರ ಮುಂದಾಯಿತು.<br /> <br /> ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿದ ಈ ಮಸೂದೆಗೆ ರಾಜ್ಯಪಾಲರು ಅಂಗೀಕಾರ ನೀಡುತ್ತಿದ್ದಂತೆಯೇ ಕಾಯ್ದೆ ಆಯಿತು. ಆದರೆ, ಇದರಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಅನನುಕೂಲವಾದ ಅಂಶಗಳು ಇದ್ದ ಕಾರಣ ತಕ್ಷಣವೇ ಜಾರಿ ಮಾಡದೆ ತಡೆಹಿಡಿಯಲಾಗಿತ್ತು.<br /> <br /> ಪ್ರತಿ ವರ್ಷ ಈ ಕಾಯ್ದೆಯನ್ನು ತಡೆಹಿಡಿದು ಪರಸ್ಪರ ಮಾತುಕತೆ ಮೂಲಕವೇ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಮಾಡಲಾಗುತ್ತಿತ್ತು. ಕಳೆದ ವರ್ಷ ಖಾಸಗಿ ಕಾಲೇಜುಗಳು ಶುಲ್ಕ ಹೆಚ್ಚಳಕ್ಕೆ ಪಟ್ಟು ಹಿಡಿದ ಕಾರಣ, ಸರ್ಕಾರ ಕಾಯ್ದೆ ಜಾರಿಗೊಳಿಸುವುದಾಗಿ ಘೋಷಿಸಿತ್ತು.<br /> <br /> ಆ ಪ್ರಕಾರ ಕಳೆದ ಜುಲೈನಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಕಾಯ್ದೆ ಜಾರಿಗೆ ಇದ್ದ ತಡೆಯನ್ನು ತೆರವುಗೊಳಿಸಲಾಯಿತು. 2014 – 15ನೇ ಸಾಲಿನಿಂದ ಕಾಯ್ದೆ ಜಾರಿಗೆ ಎರಡು ಸಮಿತಿಗಳನ್ನು ರಚಿಸುವ ಮೂಲಕ ಚಾಲನೆ ನೀಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>