<p><strong>ಬೆಂಗಳೂರು</strong>: ‘ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ಅನುಮತಿ ಇಲ್ಲದೆ ನನ್ನ ರಚನೆಯ ಗೀತೆಯನ್ನು ಅವರ ‘ನಾಗಮಂಡಲ’ ನಾಟಕ ಕೃತಿಯಲ್ಲಿ ಬಳಸಿಕೊಂಡಿದ್ದಾರೆ’ ಎಂದು ಲೇಖಕ ಗೋಪಾಲ್ ವಾಜಪೇಯಿ ದೂರಿದರು.<br /> <br /> ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ದೂರು ದಾಖಲಿಸಲಾಗಿದ್ದು, ಬೆಂಗಳೂರಿನ 9ನೇ ಎಸಿಎಂಎಂ ನ್ಯಾಯಾಲಯವು ಮಾರ್ಚ್ 6ರಂದು ಸಾಹಿತಿ ಕಾರ್ನಾಡ್, ಕೃತಿ ಪ್ರಕಟಿಸಿರುವ ಮನೋಹರ್ ಗ್ರಂಥಮಾಲಾ ಪ್ರಕಾಶನದ ರಮಾಕಾಂತ ಜಿ.ಜೋಶಿ, ಪ್ರಕಾಶನದ ವ್ಯವಸ್ಥಾಪಕ ಸಮೀರ್ ಆರ್.ಜೋಶಿ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿಸಿದರು.<br /> <br /> ‘ಗಿರೀಶ್ ಕಾರ್ನಾಡ್ ಅವರ ನಾಗಮಂಡಲ ನಾಟಕವನ್ನು ಶಂಕರ್ನಾಗ್ ರಂಗಕ್ಕೆ ತರುವಾಗ ನಾಟಕಕ್ಕಾಗಿ ನನ್ನಿಂದ ಹತ್ತು ಗೀತೆಗಳನ್ನು ಬರೆಸಿದ್ದರು. ಗೀತೆಗಳು ಜನಪ್ರಿಯಾದ ಮೇಲೆ ಕಾರ್ನಾಡ್ ಅವರು ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ‘ಮಾಯಾದೊ ಮನದ ಭಾರ’ ಗೀತೆಯನ್ನು ಕೃತಿಯ ಮುಂದಿನ ಎಲ್ಲ ಆವೃತ್ತಿಗಳಲ್ಲಿ ಕೇವಲ ₨1,500ಕ್ಕೆ ಬಳಸಿಕೊಳ್ಳಲು ಅನುಮತಿ ಪಡೆದಿದ್ದರು’ ಎಂದು ತಿಳಿಸಿದರು.<br /> <br /> ‘2005ರಲ್ಲಿ ಬಂದ ಕೃತಿಯ 2ನೇ ಆವೃತ್ತಿಯಲ್ಲಿ ಗೀತೆಯನ್ನು ಬಳಸಿಕೊಂಡು ನನ್ನ ಹೆಸರು ಹಾಕಿರಲಿಲ್ಲ. 2008ರಲ್ಲಿ ತಿಳಿದು ಗಿರೀಶ್ ಕಾರ್ನಾಡ್ ಅವರನ್ನು ಕೇಳಿದಾಗ ಕಣ್ತಪ್ಪಿನಿಂದ ಆಗಿದೆ ಎಂದು ಹೇಳಿದರು. ಆಗ ಗೀತೆಯನ್ನು ಬಳಸಿಕೊಳ್ಳಲು ನೀಡಿದ್ದ ಅನುಮತಿಯನ್ನು ಹಿಂಪಡೆದು ಅವರು ನೀಡಿದ್ದ ₨1,500 ಚೆಕ್ನ್ನು ಹಿಂತಿರುಗಿಸಿದ್ದೇನೆ. ಆದರೂ 2009ರಲ್ಲಿ ಬಂದ ಸಮಗ್ರ ನಾಟಕ ಸಂಪುಟ, 2012ರಲ್ಲಿ ಪ್ರಕಟಗೊಂಡ ಕೃತಿಯ ಮರು ಆವೃತ್ತಿಗಳಲ್ಲಿ ಗೀತೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿದರು. ಅನುಮತಿ ಹಿಂಪಡೆದ ನಂತರವೂ ಗೀತೆಗಳನ್ನು ಬಳಸಿಕೊಂಡಿರುವುದರಿಂದ ₨10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ಅನುಮತಿ ಇಲ್ಲದೆ ನನ್ನ ರಚನೆಯ ಗೀತೆಯನ್ನು ಅವರ ‘ನಾಗಮಂಡಲ’ ನಾಟಕ ಕೃತಿಯಲ್ಲಿ ಬಳಸಿಕೊಂಡಿದ್ದಾರೆ’ ಎಂದು ಲೇಖಕ ಗೋಪಾಲ್ ವಾಜಪೇಯಿ ದೂರಿದರು.<br /> <br /> ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ದೂರು ದಾಖಲಿಸಲಾಗಿದ್ದು, ಬೆಂಗಳೂರಿನ 9ನೇ ಎಸಿಎಂಎಂ ನ್ಯಾಯಾಲಯವು ಮಾರ್ಚ್ 6ರಂದು ಸಾಹಿತಿ ಕಾರ್ನಾಡ್, ಕೃತಿ ಪ್ರಕಟಿಸಿರುವ ಮನೋಹರ್ ಗ್ರಂಥಮಾಲಾ ಪ್ರಕಾಶನದ ರಮಾಕಾಂತ ಜಿ.ಜೋಶಿ, ಪ್ರಕಾಶನದ ವ್ಯವಸ್ಥಾಪಕ ಸಮೀರ್ ಆರ್.ಜೋಶಿ ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿಸಿದರು.<br /> <br /> ‘ಗಿರೀಶ್ ಕಾರ್ನಾಡ್ ಅವರ ನಾಗಮಂಡಲ ನಾಟಕವನ್ನು ಶಂಕರ್ನಾಗ್ ರಂಗಕ್ಕೆ ತರುವಾಗ ನಾಟಕಕ್ಕಾಗಿ ನನ್ನಿಂದ ಹತ್ತು ಗೀತೆಗಳನ್ನು ಬರೆಸಿದ್ದರು. ಗೀತೆಗಳು ಜನಪ್ರಿಯಾದ ಮೇಲೆ ಕಾರ್ನಾಡ್ ಅವರು ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ‘ಮಾಯಾದೊ ಮನದ ಭಾರ’ ಗೀತೆಯನ್ನು ಕೃತಿಯ ಮುಂದಿನ ಎಲ್ಲ ಆವೃತ್ತಿಗಳಲ್ಲಿ ಕೇವಲ ₨1,500ಕ್ಕೆ ಬಳಸಿಕೊಳ್ಳಲು ಅನುಮತಿ ಪಡೆದಿದ್ದರು’ ಎಂದು ತಿಳಿಸಿದರು.<br /> <br /> ‘2005ರಲ್ಲಿ ಬಂದ ಕೃತಿಯ 2ನೇ ಆವೃತ್ತಿಯಲ್ಲಿ ಗೀತೆಯನ್ನು ಬಳಸಿಕೊಂಡು ನನ್ನ ಹೆಸರು ಹಾಕಿರಲಿಲ್ಲ. 2008ರಲ್ಲಿ ತಿಳಿದು ಗಿರೀಶ್ ಕಾರ್ನಾಡ್ ಅವರನ್ನು ಕೇಳಿದಾಗ ಕಣ್ತಪ್ಪಿನಿಂದ ಆಗಿದೆ ಎಂದು ಹೇಳಿದರು. ಆಗ ಗೀತೆಯನ್ನು ಬಳಸಿಕೊಳ್ಳಲು ನೀಡಿದ್ದ ಅನುಮತಿಯನ್ನು ಹಿಂಪಡೆದು ಅವರು ನೀಡಿದ್ದ ₨1,500 ಚೆಕ್ನ್ನು ಹಿಂತಿರುಗಿಸಿದ್ದೇನೆ. ಆದರೂ 2009ರಲ್ಲಿ ಬಂದ ಸಮಗ್ರ ನಾಟಕ ಸಂಪುಟ, 2012ರಲ್ಲಿ ಪ್ರಕಟಗೊಂಡ ಕೃತಿಯ ಮರು ಆವೃತ್ತಿಗಳಲ್ಲಿ ಗೀತೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿದರು. ಅನುಮತಿ ಹಿಂಪಡೆದ ನಂತರವೂ ಗೀತೆಗಳನ್ನು ಬಳಸಿಕೊಂಡಿರುವುದರಿಂದ ₨10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>