<p>ಸಿಂದಗಿ: ಬಿಜೆಪಿ ಕಾರ್ಯಕರ್ತರೇ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಧ್ವಂಸಗೊಳಿಸಿ ದಾಂಧಲೆ ಮಾಡಿದ ಘಟನೆ ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿಯಲ್ಲಿ ಸೋಮವಾರ ನಡೆದಿದೆ.<br /> <br /> ದೇವರಹಿಪ್ಪರಗಿ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಅಶೋಕ ಅಲ್ಲಾಪುರ ಅವರಿಗೆ ’ಬಿ’ಫಾರಂ ನೀಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಹಠಾತ್ತನೇ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯಕ್ಕೆ ಧಾವಿಸಿ ಪಕ್ಷದ ಬ್ಯಾನರ್ ಹರಿದು, 25ಕ್ಕೂ ಅಧಿಕ ಕುರ್ಚಿಗಳನ್ನು ಮುರಿದು ಹಾಕಿ ಅವುಗಳಿಗೆ ಬೆಂಕಿ ಹಚ್ಚಿದರು.<br /> <br /> ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಾ.ಆರ್.ಆರ್.ನಾಯಕ ಅವರ ಮುಖಕ್ಕೆ ಮಸಿ ಹಚ್ಚಿ ರಾಜೀನಾಮೆಗೆ ಒತ್ತಾಯಿಸಿದರು.<br /> ತಮ್ಮ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತನಿಗೆ ಟಿಕೆಟ್ ನೀಡದೇ ಸಿಂದಗಿ ಕ್ಷೇತ್ರದ ಅಶೋಕ ಅಲ್ಲಾಪುರ ಅವರಿಗೆ ಟಿಕೆಟ್ ನೀಡಿರುವುದೇ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.<br /> <br /> “ನಮ್ಮ ಕ್ಷೇತ್ರದವರಲ್ಲದ ಬೇರೊಬ್ಬರನ್ನು ಜಿ.ಪಂ. ಅಭ್ಯರ್ಥಿಯಾಗಿ ’ಬಿ’ಫಾರಂ ನೀಡಿರುವುದು ಅನ್ಯಾಯದ ಪರಮಾವಧಿಯಾಗಿದೆ. ಹೀಗಾಗಿ ಅಲ್ಲಾಪುರ ಪರ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುತ್ತೇವೆ” ಎಂದು ಬಿಜೆಪಿ ಪ್ರಮುಖರಾದ ಶಿವಾಜಿ ಮೆಟಗಾರ, ರಮೇಶ ಮಸಬಿನಾಳ, ಪ್ರಮೋದ ನಾಡಗೌಡ, ಲೋಕೇಶ ಸೌದಿ ಹೇಳಿದರು.<br /> <br /> ಅಸಮಾಧಾನ: ತಮ್ಮ ಕ್ಷೇತ್ರದವರಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿರುವುದು ತಮಗೂ ತೀರ ಅಸಮಾಧಾನ ತರಿಸಿದೆ ಎಂದು ಬಿಜೆಪಿ ಅಧ್ಯಕ್ಷ ಡಾ.ಆರ್.ಆರ್. ನಾಯಕ ’ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದ್ದಾರೆ.<br /> <br /> ರಾಜೀನಾಮೆ:ಟಿಕೆಟ್ ಹಂಚಿಕೆ ವಿಷಯವಾಗಿ ಮಹೇಶ ಬುದ್ನಿ ಅವರು ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರಾಥಮಿಕ ಸದ್ಯಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಂದಗಿ: ಬಿಜೆಪಿ ಕಾರ್ಯಕರ್ತರೇ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಧ್ವಂಸಗೊಳಿಸಿ ದಾಂಧಲೆ ಮಾಡಿದ ಘಟನೆ ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿಯಲ್ಲಿ ಸೋಮವಾರ ನಡೆದಿದೆ.<br /> <br /> ದೇವರಹಿಪ್ಪರಗಿ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಅಶೋಕ ಅಲ್ಲಾಪುರ ಅವರಿಗೆ ’ಬಿ’ಫಾರಂ ನೀಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಹಠಾತ್ತನೇ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯಕ್ಕೆ ಧಾವಿಸಿ ಪಕ್ಷದ ಬ್ಯಾನರ್ ಹರಿದು, 25ಕ್ಕೂ ಅಧಿಕ ಕುರ್ಚಿಗಳನ್ನು ಮುರಿದು ಹಾಕಿ ಅವುಗಳಿಗೆ ಬೆಂಕಿ ಹಚ್ಚಿದರು.<br /> <br /> ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಾ.ಆರ್.ಆರ್.ನಾಯಕ ಅವರ ಮುಖಕ್ಕೆ ಮಸಿ ಹಚ್ಚಿ ರಾಜೀನಾಮೆಗೆ ಒತ್ತಾಯಿಸಿದರು.<br /> ತಮ್ಮ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತನಿಗೆ ಟಿಕೆಟ್ ನೀಡದೇ ಸಿಂದಗಿ ಕ್ಷೇತ್ರದ ಅಶೋಕ ಅಲ್ಲಾಪುರ ಅವರಿಗೆ ಟಿಕೆಟ್ ನೀಡಿರುವುದೇ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.<br /> <br /> “ನಮ್ಮ ಕ್ಷೇತ್ರದವರಲ್ಲದ ಬೇರೊಬ್ಬರನ್ನು ಜಿ.ಪಂ. ಅಭ್ಯರ್ಥಿಯಾಗಿ ’ಬಿ’ಫಾರಂ ನೀಡಿರುವುದು ಅನ್ಯಾಯದ ಪರಮಾವಧಿಯಾಗಿದೆ. ಹೀಗಾಗಿ ಅಲ್ಲಾಪುರ ಪರ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುತ್ತೇವೆ” ಎಂದು ಬಿಜೆಪಿ ಪ್ರಮುಖರಾದ ಶಿವಾಜಿ ಮೆಟಗಾರ, ರಮೇಶ ಮಸಬಿನಾಳ, ಪ್ರಮೋದ ನಾಡಗೌಡ, ಲೋಕೇಶ ಸೌದಿ ಹೇಳಿದರು.<br /> <br /> ಅಸಮಾಧಾನ: ತಮ್ಮ ಕ್ಷೇತ್ರದವರಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿರುವುದು ತಮಗೂ ತೀರ ಅಸಮಾಧಾನ ತರಿಸಿದೆ ಎಂದು ಬಿಜೆಪಿ ಅಧ್ಯಕ್ಷ ಡಾ.ಆರ್.ಆರ್. ನಾಯಕ ’ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದ್ದಾರೆ.<br /> <br /> ರಾಜೀನಾಮೆ:ಟಿಕೆಟ್ ಹಂಚಿಕೆ ವಿಷಯವಾಗಿ ಮಹೇಶ ಬುದ್ನಿ ಅವರು ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರಾಥಮಿಕ ಸದ್ಯಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>