<p><strong>ಹುಣಸೂರು: </strong>ಕಾವೇರಿ ಕುಡಿಯುವ ನೀರು ಹಸ್ತಾಂತರದ ವಿಚಾರದಲ್ಲಿ ಸದಸ್ಯರ ನಡುವೆ `ಕಾವೇರಿ~ದ ಚರ್ಚೆ ನಡೆದು ಪುರಸಭೆಯ ಸಾಮಾನ್ಯ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.<br /> <br /> ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿ ರವಿಕೀರ್ತಿ ಮಾತನಾಡಿ ರೂ.22 ಕೋಟಿ ಅನುದಾನದಲ್ಲಿ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಕಲ್ಪಿಸಿ ಕಳೆದ 3 ತಿಂಗಳಿಂದ ನಿರ್ವಹಣೆ ಮಾಡಲಾಗುತ್ತಿದ್ದು, ಮುಂದಿನ ನಿರ್ವಹಣೆಯನ್ನು ಹುಣಸೂರು ಪುರಸಭೆ ನಿರ್ವಹಿಸಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು. <br /> <br /> ಈ ಮನವಿಗೆ ಮಾಜಿ ಅಧ್ಯಕ್ಷ ಹಜರತ್ಜಾನ್ ವಿರೋಧ ವ್ಯಕ್ತಪಡಿಸಿ, ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಸರಬರಾಜು ನಡೆಯುತ್ತಿದ್ದು, ಕಾವೇರಿ ಎಲ್ಲರ ಮನೆಗೆ ತಲಪಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪುರಸಭೆ ಕಾವೇರಿ ಕುಡಿಯುವ ನೀರು ಘಟಕದ ಸಂಪೂರ್ಣ ಜವಾಬ್ದಾರಿ ಹೋರುವುದಾದರೂ ಹೇಗೆ? ಎಂದರು. ಪುರಸಭಾ ಮುಖ್ಯಾಧಿಕಾರಿ ಹರೀಶ್ ಮಧ್ಯ ಪ್ರವೇಶಿಸಿ ನ್ಯೂನತೆಯನ್ನು ಹೆಚ್ಚುವರಿ ಅನುದಾನದಲ್ಲಿ ಸರಿಪಡಿಸಿಕೊಳ್ಳುವ ಅವಕಾಶವಿದ್ದು, ಅನು ಮೋದನೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.<br /> <br /> ಪಟ್ಟಣಕ್ಕೆ ಕೆ.ಆರ್.ನಗರದ ಹೊರ ವಲಯದಿಂದ ಅಂದಾಜು 22 ಕೋಟಿ ಅನುದಾನದಲ್ಲಿ ಕುಡಿಯುವ ನೀರು ತರಲಾಗಿದೆ. ಪಟ್ಟಣದಲ್ಲಿ ನಿಗದಿಗೊಳಿಸಿದ ಸ್ಥಳದಲ್ಲಿ ನೀರು ಸಂಗ್ರಹಾಗಾರ ನಿರ್ಮಿಸಿ ಪ್ರತಿ ದಿನ 15-20 ಲಕ್ಷ ಲೀಟರ್ ನೀರು ಪಟ್ಟಣಕ್ಕೆ ಸರಬರಾಜು ಮಾಡುತ್ತಿದ್ದೇವೆ. ಪಟ್ಟಣದಲ್ಲಿ ಮನೆಗಳಿಗೆ ವಿತರಿಸುವ ಪೈಪ್ ಸಾಮರ್ಥ್ಯವಿಲ್ಲದೆ ಸರಬರಾಜಿಗೆ ತೊಂದರೆಯಾಗಿದೆ. ಮನೆಗಳಿಗೆ ವಿತರಣೆ ಜವಾಬ್ದಾರಿ ಮಂಡಳಿಯದಲ್ಲ ಎಂದರು.<br /> <br /> ಸದಸ್ಯ ಶಿವರಾಜ್ ಮಾತನಾಡಿ, 22 ಕೋಟಿ ವೆಚ್ಚದಲ್ಲಿ ನೀರು ಪಟ್ಟಣಕ್ಕೆ ಬಂದಿದ್ದರೂ ಹೌಸಿಂಗ್ಬೋರ್ಡ್ ವಸತಿ ಕಾಲೋನಿಯ 7 ಸಾವಿರ ನಾಗರಿಕರಿಗೆ ಕಾವೇರಿ ನೀರು ಭಾಗ್ಯವಿಲ್ಲ ಎಂದರು. ಪಟ್ಟಣದಲ್ಲಿ ಹೆಚ್ಚುವರಿ ಮೂರು ಸಂಗ್ರಹಾಗಾರವನ್ನು ನಿರ್ಮಿಸಲು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.<br /> <br /> <strong>9 ಗ್ರಾಮ ಜವಾಬ್ದಾರಿ ಯಾರಿಗೆ?: </strong>ಕಾವೇರಿ ಕುಡಿಯುವ ನೀರು ಕೆ.ಆರ್.ನಗರದಿಂದ ಹುಣಸೂರಿಗೆ ಬರುವ ಮಾರ್ಗ ಮಧ್ಯೆ ಬರುವ 9 ಗ್ರಾಮಗಳಿಗೂ ವಿತರಿಸುತ್ತಿದ್ದು, ವಿತರಣಾ ಜವಾಬ್ದಾರಿಯನ್ನು ಹೊರುವವರು ಯಾರು ? ಎಂದು ಸದಸ್ಯರು ಪ್ರಶ್ನಿಸಿದರು. ಅಧಿಕಾರಿ ಉತ್ತರಿಸಿ 9 ಗ್ರಾಮಗಳ ಜವಾಬ್ದಾರಿ ಪುರಸಭೆ ಹೊರಬೇಕಿದ್ದು, ಇದಕ್ಕೆ ಹಲವು ನಿಬಂಧನೆಯುಳ್ಳ ಕರಾರು ಪತ್ರಕ್ಕೆ ಗ್ರಾ.ಪಂ ಅಧಿಕಾರಿಯಿಂದ ಸಹಿ ಪಡೆದುಕೊಳ್ಳಬೇಕು. ಕರಾರಿನ ಪ್ರಕಾರ ಗ್ರಾಮಗಳು 6 ತಿಂಗಳ ನೀರು ಸರಬರಾಜಿನ ಖರ್ಚಿನ ಹಣವನ್ನು ಪುರಸಭೆಗೆ ಮುಂಗಡವಾಗಿ ಪಾವತಿಸಬೇಕು ಎಂದರು.<br /> <br /> ಹುಣಸೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ವಿದ್ಯುತ್ ವೆಚ್ಚ ತಿಂಗಳಿಗೆ ರೂ 8-10 ಲಕ್ಷ ಬರುತ್ತಿದ್ದು, ಪುರಸಭೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಹಣ ಭರಿಸಲು ಹಣಕಾಸು ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಸದಸ್ಯರಿಗೆ ತಿಳಿ ಹೇಳಿದರು.<br /> <br /> <strong>ನೀರು ನಿರ್ವಹಣೆ: </strong>ಕಾವೇರಿ ಕುಡಿಯುವ ನೀರು ನಿರ್ವಹಣೆಗೆ ಪುರಸಭೆ ಹೆಚ್ಚುವರಿ 20 ನೌಕರರನ್ನು ನೇಮಿಸಿಕೊಂಡಲ್ಲಿ ಮಾತ್ರ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಸಾಧ್ಯ. ಹಾಲಿ 6 ನೌಕರರಿಂದ ಸಾಧ್ಯವಿಲ್ಲ ಎಂದ ರವಿಕೀರ್ತಿ, ನೀರು ನಿರ್ವಹಣೆಗೆ ನಿಯೋಜಿಸಿಕೊಳ್ಳುವ ನೌಕರರಿಗೆ ಮಂಡಳಿ ತರಬೇತಿ ನೀಡಲಿದೆ ಎಂದರು.<br /> <br /> <strong>ಒಳಚರಂಡಿ: </strong>ಪಟ್ಟಣದ ಒಳಚರಂಡಿಗೆ ನವೀಕರಿಸಿದ ನಕಾಶೆ ಸಿದ್ಧಗೊಂಡಿದ್ದು, ಈ ಯೋಜನೆಗೆ ಸರ್ಕಾರ 48 ಕೋಟಿ ಬಿಡುಗಡೆ ಮಾಡುವ ಹಂತದಲ್ಲಿದೆ. ಯೋಜನೆಯನ್ನು 2035ರ ಜನಸಂಖ್ಯೆ ಆಧಾರದ ಅನ್ವಯ ಸಿದ್ಧಗೊಳಿಸಲಾಗಿದೆ ಎಂದರು. ಪುರಸಭೆ ಸರ್ವೆಗೆ ತಗಲುವ ಖರ್ಚು ಭರಿಸಬೇಕಿದ್ದು, ಈ ಹಿಂದೆ 7 ಲಕ್ಷ ಪಾವತಿಸಿದ್ದು, ಉಳಿದ ಹಣವನ್ನು ಪಾವತಿಸಿದರೆ ಮುಂದಿನ ವರ್ಷದಲ್ಲಿ ಯೋಜನೆ ಚಾಲನೆಗೆ ಬರಲಿದೆ ಎಂದರು.<br /> ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಮಂಜುಳಾಚೆನ್ನಬಸಪ್ಪ ವಹಿಸಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು: </strong>ಕಾವೇರಿ ಕುಡಿಯುವ ನೀರು ಹಸ್ತಾಂತರದ ವಿಚಾರದಲ್ಲಿ ಸದಸ್ಯರ ನಡುವೆ `ಕಾವೇರಿ~ದ ಚರ್ಚೆ ನಡೆದು ಪುರಸಭೆಯ ಸಾಮಾನ್ಯ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.<br /> <br /> ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿ ರವಿಕೀರ್ತಿ ಮಾತನಾಡಿ ರೂ.22 ಕೋಟಿ ಅನುದಾನದಲ್ಲಿ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಕಲ್ಪಿಸಿ ಕಳೆದ 3 ತಿಂಗಳಿಂದ ನಿರ್ವಹಣೆ ಮಾಡಲಾಗುತ್ತಿದ್ದು, ಮುಂದಿನ ನಿರ್ವಹಣೆಯನ್ನು ಹುಣಸೂರು ಪುರಸಭೆ ನಿರ್ವಹಿಸಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು. <br /> <br /> ಈ ಮನವಿಗೆ ಮಾಜಿ ಅಧ್ಯಕ್ಷ ಹಜರತ್ಜಾನ್ ವಿರೋಧ ವ್ಯಕ್ತಪಡಿಸಿ, ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಸರಬರಾಜು ನಡೆಯುತ್ತಿದ್ದು, ಕಾವೇರಿ ಎಲ್ಲರ ಮನೆಗೆ ತಲಪಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪುರಸಭೆ ಕಾವೇರಿ ಕುಡಿಯುವ ನೀರು ಘಟಕದ ಸಂಪೂರ್ಣ ಜವಾಬ್ದಾರಿ ಹೋರುವುದಾದರೂ ಹೇಗೆ? ಎಂದರು. ಪುರಸಭಾ ಮುಖ್ಯಾಧಿಕಾರಿ ಹರೀಶ್ ಮಧ್ಯ ಪ್ರವೇಶಿಸಿ ನ್ಯೂನತೆಯನ್ನು ಹೆಚ್ಚುವರಿ ಅನುದಾನದಲ್ಲಿ ಸರಿಪಡಿಸಿಕೊಳ್ಳುವ ಅವಕಾಶವಿದ್ದು, ಅನು ಮೋದನೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.<br /> <br /> ಪಟ್ಟಣಕ್ಕೆ ಕೆ.ಆರ್.ನಗರದ ಹೊರ ವಲಯದಿಂದ ಅಂದಾಜು 22 ಕೋಟಿ ಅನುದಾನದಲ್ಲಿ ಕುಡಿಯುವ ನೀರು ತರಲಾಗಿದೆ. ಪಟ್ಟಣದಲ್ಲಿ ನಿಗದಿಗೊಳಿಸಿದ ಸ್ಥಳದಲ್ಲಿ ನೀರು ಸಂಗ್ರಹಾಗಾರ ನಿರ್ಮಿಸಿ ಪ್ರತಿ ದಿನ 15-20 ಲಕ್ಷ ಲೀಟರ್ ನೀರು ಪಟ್ಟಣಕ್ಕೆ ಸರಬರಾಜು ಮಾಡುತ್ತಿದ್ದೇವೆ. ಪಟ್ಟಣದಲ್ಲಿ ಮನೆಗಳಿಗೆ ವಿತರಿಸುವ ಪೈಪ್ ಸಾಮರ್ಥ್ಯವಿಲ್ಲದೆ ಸರಬರಾಜಿಗೆ ತೊಂದರೆಯಾಗಿದೆ. ಮನೆಗಳಿಗೆ ವಿತರಣೆ ಜವಾಬ್ದಾರಿ ಮಂಡಳಿಯದಲ್ಲ ಎಂದರು.<br /> <br /> ಸದಸ್ಯ ಶಿವರಾಜ್ ಮಾತನಾಡಿ, 22 ಕೋಟಿ ವೆಚ್ಚದಲ್ಲಿ ನೀರು ಪಟ್ಟಣಕ್ಕೆ ಬಂದಿದ್ದರೂ ಹೌಸಿಂಗ್ಬೋರ್ಡ್ ವಸತಿ ಕಾಲೋನಿಯ 7 ಸಾವಿರ ನಾಗರಿಕರಿಗೆ ಕಾವೇರಿ ನೀರು ಭಾಗ್ಯವಿಲ್ಲ ಎಂದರು. ಪಟ್ಟಣದಲ್ಲಿ ಹೆಚ್ಚುವರಿ ಮೂರು ಸಂಗ್ರಹಾಗಾರವನ್ನು ನಿರ್ಮಿಸಲು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.<br /> <br /> <strong>9 ಗ್ರಾಮ ಜವಾಬ್ದಾರಿ ಯಾರಿಗೆ?: </strong>ಕಾವೇರಿ ಕುಡಿಯುವ ನೀರು ಕೆ.ಆರ್.ನಗರದಿಂದ ಹುಣಸೂರಿಗೆ ಬರುವ ಮಾರ್ಗ ಮಧ್ಯೆ ಬರುವ 9 ಗ್ರಾಮಗಳಿಗೂ ವಿತರಿಸುತ್ತಿದ್ದು, ವಿತರಣಾ ಜವಾಬ್ದಾರಿಯನ್ನು ಹೊರುವವರು ಯಾರು ? ಎಂದು ಸದಸ್ಯರು ಪ್ರಶ್ನಿಸಿದರು. ಅಧಿಕಾರಿ ಉತ್ತರಿಸಿ 9 ಗ್ರಾಮಗಳ ಜವಾಬ್ದಾರಿ ಪುರಸಭೆ ಹೊರಬೇಕಿದ್ದು, ಇದಕ್ಕೆ ಹಲವು ನಿಬಂಧನೆಯುಳ್ಳ ಕರಾರು ಪತ್ರಕ್ಕೆ ಗ್ರಾ.ಪಂ ಅಧಿಕಾರಿಯಿಂದ ಸಹಿ ಪಡೆದುಕೊಳ್ಳಬೇಕು. ಕರಾರಿನ ಪ್ರಕಾರ ಗ್ರಾಮಗಳು 6 ತಿಂಗಳ ನೀರು ಸರಬರಾಜಿನ ಖರ್ಚಿನ ಹಣವನ್ನು ಪುರಸಭೆಗೆ ಮುಂಗಡವಾಗಿ ಪಾವತಿಸಬೇಕು ಎಂದರು.<br /> <br /> ಹುಣಸೂರು ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ವಿದ್ಯುತ್ ವೆಚ್ಚ ತಿಂಗಳಿಗೆ ರೂ 8-10 ಲಕ್ಷ ಬರುತ್ತಿದ್ದು, ಪುರಸಭೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಹಣ ಭರಿಸಲು ಹಣಕಾಸು ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಸದಸ್ಯರಿಗೆ ತಿಳಿ ಹೇಳಿದರು.<br /> <br /> <strong>ನೀರು ನಿರ್ವಹಣೆ: </strong>ಕಾವೇರಿ ಕುಡಿಯುವ ನೀರು ನಿರ್ವಹಣೆಗೆ ಪುರಸಭೆ ಹೆಚ್ಚುವರಿ 20 ನೌಕರರನ್ನು ನೇಮಿಸಿಕೊಂಡಲ್ಲಿ ಮಾತ್ರ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಸಾಧ್ಯ. ಹಾಲಿ 6 ನೌಕರರಿಂದ ಸಾಧ್ಯವಿಲ್ಲ ಎಂದ ರವಿಕೀರ್ತಿ, ನೀರು ನಿರ್ವಹಣೆಗೆ ನಿಯೋಜಿಸಿಕೊಳ್ಳುವ ನೌಕರರಿಗೆ ಮಂಡಳಿ ತರಬೇತಿ ನೀಡಲಿದೆ ಎಂದರು.<br /> <br /> <strong>ಒಳಚರಂಡಿ: </strong>ಪಟ್ಟಣದ ಒಳಚರಂಡಿಗೆ ನವೀಕರಿಸಿದ ನಕಾಶೆ ಸಿದ್ಧಗೊಂಡಿದ್ದು, ಈ ಯೋಜನೆಗೆ ಸರ್ಕಾರ 48 ಕೋಟಿ ಬಿಡುಗಡೆ ಮಾಡುವ ಹಂತದಲ್ಲಿದೆ. ಯೋಜನೆಯನ್ನು 2035ರ ಜನಸಂಖ್ಯೆ ಆಧಾರದ ಅನ್ವಯ ಸಿದ್ಧಗೊಳಿಸಲಾಗಿದೆ ಎಂದರು. ಪುರಸಭೆ ಸರ್ವೆಗೆ ತಗಲುವ ಖರ್ಚು ಭರಿಸಬೇಕಿದ್ದು, ಈ ಹಿಂದೆ 7 ಲಕ್ಷ ಪಾವತಿಸಿದ್ದು, ಉಳಿದ ಹಣವನ್ನು ಪಾವತಿಸಿದರೆ ಮುಂದಿನ ವರ್ಷದಲ್ಲಿ ಯೋಜನೆ ಚಾಲನೆಗೆ ಬರಲಿದೆ ಎಂದರು.<br /> ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಮಂಜುಳಾಚೆನ್ನಬಸಪ್ಪ ವಹಿಸಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>