<p>‘ದೀಪಾವಳಿ ಆದಮ್ಯಾಲೆ ದಿಲ್ಲೀವಳಗೆ ವಾಯುಮಾಲಿನ್ಯ ಮಿತಿ ಮೀರೈತಂತೆ. ಕೆಲವು ಕಡಿಗಿ ಗಾಳಿ ಗುಣಮಟ್ಟ ಸೂಚ್ಯಂಕ 400 ದಾಟೈತಂತ.’ ಬೆಕ್ಕಣ್ಣ ದೆಹಲಿಯ ಹವಾಮಾನ ವರದಿ ಓದಿತು.</p>.<p>‘ಅಲ್ಲಿ ಪ್ರತೀ ವರ್ಷ ಈ ಟೈಮಿನಾಗೆ ಮಾಲಿನ್ಯದ ಗೋಳು ಇದ್ದಿದ್ದೇ. ಇಷ್ಟಾದ್ರೂ ಮಂದಿ ಪಟಾಕಿ ಹೊಡಿಯೂದೂ ಬಿಡಂಗಿಲ್ಲ’ ಎಂದೆ.</p>.<p>‘ದೀಪಾವಳಿ ದೊಡ್ಡಬ್ಬ. ಪಟಾಕಿ ಹೊಡಿಯೂದು ಹೆಂಗ ಬಿಡತಾರೆ? ನೀನು ಜಿಪುಣಿ, ನನಗೆ ಪಟಾಕಿ ಕೊಡಿಸಲಿಲ್ಲ ಅಂದರೆ ರಾಜಧಾನಿ ಮಂದೀನೂ ಪಟಾಕಿ ಹೊಡೆಯಬಾರದೇನು?’ ಎಂದು ಬೆಕ್ಕಣ್ಣ ದುರುಗುಟ್ಟಿಕೊಂಡು ನೋಡುತ್ತಾ ಗುರುಗುಟ್ಟಿತು.</p>.<p>‘ಮೋದಿಮಾಮಾರು ಪ್ರಧಾನಿಯಾಗಿ ಸಂಸತ್ತಿನೊಳಗೆ ಕುಂತು ಹನ್ನೊಂದು ವರ್ಸ ಆಯಿತು… ಇನ್ನಾ ತನಾ ಈ ಸಮಸ್ಯೆಗೆ ಎದಕ್ಕೆ ಪರಿಹಾರ ಸಿಕ್ಕಿಲ್ಲ?’ ನಾನು ರಾಗವೆಳೆದೆ. </p>.<p>‘ನೀ ಎಲ್ಲಿಂದೆಲ್ಲಿಗೋ ಸಂಬಂಧ ಕಲ್ಪಿಸಬ್ಯಾಡ. ಮೋದಿಮಾಮಾರು ಗಾಳಿ ಗುಣಮಟ್ಟ ಅಳೀತಾ ಕೂಡಬೇಕೇನು? ಪಂಜಾಬ್ ಕಡೆ ಹೊಲದಾಗೆ ಕೂಳೆ ಸುಡತಾರಲ್ಲ, ಅದರ ಹೊಗೆ ಬರತೈತಿ ದಿಲ್ಲಿಗೆ’ ಬೆಕ್ಕಣ್ಣ ವಾದಿಸಿತು.</p>.<p>‘ಹರಿಯಾಣದಾಗೆ ಕೂಳೆ ಸುಡಂಗಿಲ್ಲೇನು? ಅಲ್ಲಿಯ ಗಾಳಿ ದಿಲ್ಲಿಗೆ ಸೋಕಂಗಿಲ್ಲೇನು?’ ನಾನು ಕಿಚಾಯಿಸಿದೆ.</p>.<p>‘ಹೋಗಲಿ ಬಿಡು… ನಮಗ್ಯಾಕೆ ದಿಲ್ಲಿ ಸುದ್ದಿ? ನಮ್ಮ ಬೆಂಗಳೂರಿನಾಗೆ ಈ ಸಲ ದೀಪಾವಳಿ ನಂತರ ವಾಯುಮಾಲಿನ್ಯ ಕಡಿಮೆ ಆಗೈತಂತ. ಅದಕ್ಕೆ ಖುಷಿ ಪಡೂಣು’ ಎಂದು ಮಾತು ಬದಲಿಸಿತು.</p>.<p>‘ಮಂದಿ ಹಸಿರು ಪಟಾಕಿ ಹಚ್ಯಾರೆ. ಲಾಲ್ಬಾಗ್, ಕಬ್ಬನ್ಪಾರ್ಕ್ ಇಂಥಾ ಕಡಿಗೆ ಮರಗಳು ಅದಾವು ಅಂತ ನಮ್ಮಲ್ಲಿ ಮಾಲಿನ್ಯ ಕಡಿಮೆಯಾಗೈತೆ’ ಎಂದೆ ನಾನು.</p>.<p>‘ಅಲ್ಲಿಯ ಮರಗಳೂ ಮಾಯವಾಗತಾವೆ! ಹೊಸದಾಗಿ ಮಾಡೋ ಸುರಂಗ ರಸ್ತೆಗೆ ಲಾಲ್ಬಾಗಿನ ಆರು ಎಕರೆ ಬಲಿಯಾಗತೈತಿ. ಯಾರ್ಯಾರ ಜೇಬುಗಳು ಎಷ್ಟು ತುಂಬತಾವೋ ಗೊತ್ತಿಲ್ಲ, ಮರಗಳಂತೂ ಮಾಯವಾಗತಾವೆ. ನೀವು ಶ್ರೀಸಾಮಾನ್ಯರು ನೋಡಿಕೋತ ಕುಂದರತೀರಿ’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ದೀಪಾವಳಿ ಆದಮ್ಯಾಲೆ ದಿಲ್ಲೀವಳಗೆ ವಾಯುಮಾಲಿನ್ಯ ಮಿತಿ ಮೀರೈತಂತೆ. ಕೆಲವು ಕಡಿಗಿ ಗಾಳಿ ಗುಣಮಟ್ಟ ಸೂಚ್ಯಂಕ 400 ದಾಟೈತಂತ.’ ಬೆಕ್ಕಣ್ಣ ದೆಹಲಿಯ ಹವಾಮಾನ ವರದಿ ಓದಿತು.</p>.<p>‘ಅಲ್ಲಿ ಪ್ರತೀ ವರ್ಷ ಈ ಟೈಮಿನಾಗೆ ಮಾಲಿನ್ಯದ ಗೋಳು ಇದ್ದಿದ್ದೇ. ಇಷ್ಟಾದ್ರೂ ಮಂದಿ ಪಟಾಕಿ ಹೊಡಿಯೂದೂ ಬಿಡಂಗಿಲ್ಲ’ ಎಂದೆ.</p>.<p>‘ದೀಪಾವಳಿ ದೊಡ್ಡಬ್ಬ. ಪಟಾಕಿ ಹೊಡಿಯೂದು ಹೆಂಗ ಬಿಡತಾರೆ? ನೀನು ಜಿಪುಣಿ, ನನಗೆ ಪಟಾಕಿ ಕೊಡಿಸಲಿಲ್ಲ ಅಂದರೆ ರಾಜಧಾನಿ ಮಂದೀನೂ ಪಟಾಕಿ ಹೊಡೆಯಬಾರದೇನು?’ ಎಂದು ಬೆಕ್ಕಣ್ಣ ದುರುಗುಟ್ಟಿಕೊಂಡು ನೋಡುತ್ತಾ ಗುರುಗುಟ್ಟಿತು.</p>.<p>‘ಮೋದಿಮಾಮಾರು ಪ್ರಧಾನಿಯಾಗಿ ಸಂಸತ್ತಿನೊಳಗೆ ಕುಂತು ಹನ್ನೊಂದು ವರ್ಸ ಆಯಿತು… ಇನ್ನಾ ತನಾ ಈ ಸಮಸ್ಯೆಗೆ ಎದಕ್ಕೆ ಪರಿಹಾರ ಸಿಕ್ಕಿಲ್ಲ?’ ನಾನು ರಾಗವೆಳೆದೆ. </p>.<p>‘ನೀ ಎಲ್ಲಿಂದೆಲ್ಲಿಗೋ ಸಂಬಂಧ ಕಲ್ಪಿಸಬ್ಯಾಡ. ಮೋದಿಮಾಮಾರು ಗಾಳಿ ಗುಣಮಟ್ಟ ಅಳೀತಾ ಕೂಡಬೇಕೇನು? ಪಂಜಾಬ್ ಕಡೆ ಹೊಲದಾಗೆ ಕೂಳೆ ಸುಡತಾರಲ್ಲ, ಅದರ ಹೊಗೆ ಬರತೈತಿ ದಿಲ್ಲಿಗೆ’ ಬೆಕ್ಕಣ್ಣ ವಾದಿಸಿತು.</p>.<p>‘ಹರಿಯಾಣದಾಗೆ ಕೂಳೆ ಸುಡಂಗಿಲ್ಲೇನು? ಅಲ್ಲಿಯ ಗಾಳಿ ದಿಲ್ಲಿಗೆ ಸೋಕಂಗಿಲ್ಲೇನು?’ ನಾನು ಕಿಚಾಯಿಸಿದೆ.</p>.<p>‘ಹೋಗಲಿ ಬಿಡು… ನಮಗ್ಯಾಕೆ ದಿಲ್ಲಿ ಸುದ್ದಿ? ನಮ್ಮ ಬೆಂಗಳೂರಿನಾಗೆ ಈ ಸಲ ದೀಪಾವಳಿ ನಂತರ ವಾಯುಮಾಲಿನ್ಯ ಕಡಿಮೆ ಆಗೈತಂತ. ಅದಕ್ಕೆ ಖುಷಿ ಪಡೂಣು’ ಎಂದು ಮಾತು ಬದಲಿಸಿತು.</p>.<p>‘ಮಂದಿ ಹಸಿರು ಪಟಾಕಿ ಹಚ್ಯಾರೆ. ಲಾಲ್ಬಾಗ್, ಕಬ್ಬನ್ಪಾರ್ಕ್ ಇಂಥಾ ಕಡಿಗೆ ಮರಗಳು ಅದಾವು ಅಂತ ನಮ್ಮಲ್ಲಿ ಮಾಲಿನ್ಯ ಕಡಿಮೆಯಾಗೈತೆ’ ಎಂದೆ ನಾನು.</p>.<p>‘ಅಲ್ಲಿಯ ಮರಗಳೂ ಮಾಯವಾಗತಾವೆ! ಹೊಸದಾಗಿ ಮಾಡೋ ಸುರಂಗ ರಸ್ತೆಗೆ ಲಾಲ್ಬಾಗಿನ ಆರು ಎಕರೆ ಬಲಿಯಾಗತೈತಿ. ಯಾರ್ಯಾರ ಜೇಬುಗಳು ಎಷ್ಟು ತುಂಬತಾವೋ ಗೊತ್ತಿಲ್ಲ, ಮರಗಳಂತೂ ಮಾಯವಾಗತಾವೆ. ನೀವು ಶ್ರೀಸಾಮಾನ್ಯರು ನೋಡಿಕೋತ ಕುಂದರತೀರಿ’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>