<p>ಚೆನ್ನೈ (ಪಿಟಿಐ): ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನವಾಗಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಗುರುವಾರ ಬೆಂಗಳೂರಿನಲ್ಲಿ ಕರ್ನಾಟಕ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಲಿದ್ದಾರೆ.<br /> <br /> ಸೂಕ್ಷ್ಮವಾದ ಜಲ ವಿವಾದ ವಿಚಾರದಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಖಾಮುಖಿ ಮಾತುಕತೆ ನಡೆಸುವಂತೆ ಸುಪ್ರೀಂಕೋರ್ಟ್ ಸೋಮವಾರ ಉಭಯ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಈ ಭೇಟಿ ನಡೆಯಲಿದೆ.<br /> <br /> ಸುಪ್ರೀಂಕೋರ್ಟ್ ಸಲಹೆಯಂತೆ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾತುಕತೆ ನಡೆಸುವ ಸಲುವಾಗಿ ನವೆಂಬರ್ 29ರಂದು ಮುಖ್ಯಮಂತ್ರಿಯವರು ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡುವರು ಎಂದು ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.<br /> <br /> 'ಉಭಯ ಮುಖ್ಯಮಂತ್ರಿಗಳು ಏಕೆ ಒಟ್ಟಿಗೆ ಕುಳಿತುಕೊಳ್ಳಲಾಗುವುದಿಲ್ಲ? ಇದಕ್ಕಾಗಿ ಪ್ರಯತ್ನಿಸಿ. ಅದು ಅಸಾಧ್ಯವಾದದ್ದೇನಲ್ಲ' ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಜೈನ್ ಮತ್ತು ಮದನ್ ಬಿ. ಲೋಕೂರ್ ಅವರನ್ನು ಒಳಗೊಂಡ ಪೀಠ ಸೋಮವಾರ ಹೇಳಿತ್ತು.<br /> <br /> 'ನೀವು ಸೌಹಾರ್ದಯುತ ಪರಿಸರದಲ್ಲಿ ಸಭೆ ನಡೆಸಬೇಕು ಮತ್ತು ಉಭಯ ರಾಜ್ಯಗಳ ರೈತರ ವಿಶಾಲ ಹಿತಾಸಕ್ತಿಗಳ ವಿಷಯವನ್ನು ಚರ್ಚಿಸಬೇಕು ಎಂದು ನಾವು ಬಯಸುತ್ತೇವೆ' ಎಂದು ಪೀಠ ಹೇಳಿತ್ತು.<br /> <br /> 'ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರಕ್ಕೆ ಸಭೆ ನಡೆಸುವುದು ಸಾಧ್ಯವಿಲ್ಲ, ಆದ್ದರಿಂದ ಪರಿಹಾರ ಕಂಡು ಹಿಡಿಯಲು ರಾಜ್ಯ ಸರ್ಕಾರಗಳು ಸಭೆ ಸೇರಬೇಕು' ಎಂದೂ ಪೀಠ ಸಲಹೆ ಮಾಡಿತ್ತು.<br /> <br /> 'ಕೊಡು-ಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ಮುಖ್ಯಮಂತ್ರಿಗಳು ಕೇವಲ ಕಾಫಿ ಕುಡಿಯುವ ಸಲುವಾಗಿ ಸಭೆ ಸೇರುವುದಲ್ಲ, ಪರಿಹಾರ ಕಂಡು ಹಿಡಿಯಲು ತಜ್ಞರ ತಂಡದೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಬೇಕು' ಎಂದೂ ಪೀಠ ಸೂಚನೆ ನೀಡಿತ್ತು.<br /> <br /> 'ಮುಖಾಮುಖಿ ಮಾತುಕತೆ ನಡೆಸುವಂತೆ' ಉಭಯ ಮುಖ್ಯಮಂತ್ರಿಗಳನ್ನೂ ಒತ್ತಾಯಿಸಿದ ನ್ಯಾಯಾಲಯ ವಿಷಯವನ್ನು ನಿರ್ದೇಶನಗಳಿಗಾಗಿ ಶುಕ್ರವಾರ ತನ್ನ ಮುಂದೆ ತರುವಂತೆ ಸೂಚಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೆನ್ನೈ (ಪಿಟಿಐ): ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನವಾಗಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಗುರುವಾರ ಬೆಂಗಳೂರಿನಲ್ಲಿ ಕರ್ನಾಟಕ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಲಿದ್ದಾರೆ.<br /> <br /> ಸೂಕ್ಷ್ಮವಾದ ಜಲ ವಿವಾದ ವಿಚಾರದಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಖಾಮುಖಿ ಮಾತುಕತೆ ನಡೆಸುವಂತೆ ಸುಪ್ರೀಂಕೋರ್ಟ್ ಸೋಮವಾರ ಉಭಯ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಈ ಭೇಟಿ ನಡೆಯಲಿದೆ.<br /> <br /> ಸುಪ್ರೀಂಕೋರ್ಟ್ ಸಲಹೆಯಂತೆ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾತುಕತೆ ನಡೆಸುವ ಸಲುವಾಗಿ ನವೆಂಬರ್ 29ರಂದು ಮುಖ್ಯಮಂತ್ರಿಯವರು ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡುವರು ಎಂದು ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.<br /> <br /> 'ಉಭಯ ಮುಖ್ಯಮಂತ್ರಿಗಳು ಏಕೆ ಒಟ್ಟಿಗೆ ಕುಳಿತುಕೊಳ್ಳಲಾಗುವುದಿಲ್ಲ? ಇದಕ್ಕಾಗಿ ಪ್ರಯತ್ನಿಸಿ. ಅದು ಅಸಾಧ್ಯವಾದದ್ದೇನಲ್ಲ' ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಜೈನ್ ಮತ್ತು ಮದನ್ ಬಿ. ಲೋಕೂರ್ ಅವರನ್ನು ಒಳಗೊಂಡ ಪೀಠ ಸೋಮವಾರ ಹೇಳಿತ್ತು.<br /> <br /> 'ನೀವು ಸೌಹಾರ್ದಯುತ ಪರಿಸರದಲ್ಲಿ ಸಭೆ ನಡೆಸಬೇಕು ಮತ್ತು ಉಭಯ ರಾಜ್ಯಗಳ ರೈತರ ವಿಶಾಲ ಹಿತಾಸಕ್ತಿಗಳ ವಿಷಯವನ್ನು ಚರ್ಚಿಸಬೇಕು ಎಂದು ನಾವು ಬಯಸುತ್ತೇವೆ' ಎಂದು ಪೀಠ ಹೇಳಿತ್ತು.<br /> <br /> 'ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರಕ್ಕೆ ಸಭೆ ನಡೆಸುವುದು ಸಾಧ್ಯವಿಲ್ಲ, ಆದ್ದರಿಂದ ಪರಿಹಾರ ಕಂಡು ಹಿಡಿಯಲು ರಾಜ್ಯ ಸರ್ಕಾರಗಳು ಸಭೆ ಸೇರಬೇಕು' ಎಂದೂ ಪೀಠ ಸಲಹೆ ಮಾಡಿತ್ತು.<br /> <br /> 'ಕೊಡು-ಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ಮುಖ್ಯಮಂತ್ರಿಗಳು ಕೇವಲ ಕಾಫಿ ಕುಡಿಯುವ ಸಲುವಾಗಿ ಸಭೆ ಸೇರುವುದಲ್ಲ, ಪರಿಹಾರ ಕಂಡು ಹಿಡಿಯಲು ತಜ್ಞರ ತಂಡದೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಬೇಕು' ಎಂದೂ ಪೀಠ ಸೂಚನೆ ನೀಡಿತ್ತು.<br /> <br /> 'ಮುಖಾಮುಖಿ ಮಾತುಕತೆ ನಡೆಸುವಂತೆ' ಉಭಯ ಮುಖ್ಯಮಂತ್ರಿಗಳನ್ನೂ ಒತ್ತಾಯಿಸಿದ ನ್ಯಾಯಾಲಯ ವಿಷಯವನ್ನು ನಿರ್ದೇಶನಗಳಿಗಾಗಿ ಶುಕ್ರವಾರ ತನ್ನ ಮುಂದೆ ತರುವಂತೆ ಸೂಚಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>