<p><strong>ಮುಂಬೈ (ಪಿಟಿಐ):</strong> ಮಾರ್ಚ್ 31ಕ್ಕೆ ಕೊನೆಗೊಂಡ 2012-13ನೇ ಸಾಲಿನ ನಾಲ್ಕನೆಯ ತ್ರೈಮಾಸಿಕದಲ್ಲಿ ಕಿಂಗ್ಫಿಷರ್ ಏರ್ಲೈನ್ಸ್ ರೂ2,141 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.<br /> <br /> ಆರ್ಥಿಕ ಮುಗ್ಗಟ್ಟಿನಿಂದ ಕಳೆದ ಅಕ್ಟೋಬರ್1ರಿಂದ ಕಿಂಗ್ಫಿಷರ್ ಹಾರಾಟ ಸ್ಥಗಿತಗೊಂಡಿದೆ. 2011-12ನೇ ಸಾಲಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಂಪೆನಿ ರೂ1,151 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು.<br /> <br /> ಒಟ್ಟಾರೆ 2012-13ನೇ ಸಾಲಿನ ನಾಲ್ಕೂ ತ್ರೈಮಾಸಿಕಗಳು ಸೇರಿ ಕಂಪೆನಿ ರೂ4,001 ಕೋಟಿಯಷ್ಟು ನಷ್ಟ ಅನುಭವಿಸಿದೆ. 2011-12ನೇ ಸಾಲಿನಲ್ಲಿ ಒಟ್ಟಾರೆ ರೂ2,328 ಕೋಟಿಯಷ್ಟು ನಷ್ಟ ದಾಖಲಾಗಿತ್ತು ಎಂದು ಕಂಪೆನಿ ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.<br /> <br /> ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಿಂಗ್ಫಿಷರ್ನ ಒಟ್ಟಾರೆ ಕಾರ್ಯನಿರ್ವಹಣೆ ನಷ್ಟ ರೂ16,023 ಕೋಟಿಗೆ ಏರಿಕೆ ಕಂಡಿದೆ.<br /> <br /> ಹಾರಾಟ ಪರವಾನಗಿ ನವೀಕರಣ ಕೋರಿ ಕಿಂಗ್ಫಿಷರ್ ಕಳೆದ ತಿಂಗಳು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಪರಿಷ್ಕೃತ ಮನವಿ ಸಲ್ಲಿಸಿದೆ. ಆದರೆ, ಬ್ಯಾಂಕುಗಳು, ತೈಲ ಮಾರಾಟ ಕಂಪೆನಿಗಳು ಮತ್ತು ಹೂಡಿಕೆದಾರರಿಂದ ನಿರಾಕ್ಷೇಪಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ `ಡಿಜಿಸಿಎ' ಇನ್ನೂ ಪರವಾನಗಿ ನೀಡಿಲ್ಲ.<br /> <br /> <strong>ರೂ7 ಸಾವಿರ ಕೋಟಿ ಸಾಲ</strong><br /> ಕಿಂಗ್ಫಿಷರ್ `ಎಸ್ಬಿಐ' ಸೇರಿದಂತೆ 17 ಬ್ಯಾಂಕುಗಳಿಗೆ ಒಟ್ಟು ರೂ7 ಸಾವಿರ ಕೋಟಿ ಸಾಲ ಪಾವತಿಸಬೇಕಿದೆ. ಇದರಲ್ಲಿ `ಎಸ್ಬಿಐ'ಗೆ ರೂ1,600 ಕೋಟಿ, `ಪಿಎನ್ಬಿ'ಗೆ ರೂ800 ಕೋಟಿ, `ಐಡಿಬಿಐ'ಗೆ ರೂ800 ಕೋಟಿ, ಬ್ಯಾಂಕ್ ಆಫ್ ಇಂಡಿಯಾಗೆ ರೂ650 ಕೋಟಿ ಮತ್ತು ಬ್ಯಾಂಕ್ ಆಫ್ ಬರೋಡಕ್ಕೆ ರೂ550 ಕೋಟಿ ಸಾಲ ಪಾವತಿಸಬೇಕಿದೆ.<br /> <br /> ಇಲ್ಲಿಯವರೆಗೆ `ಎಸ್ಬಿಐ' ಸಮೂಹದ ಬ್ಯಾಂಕುಗಳು ಕಿಂಗ್ಫಿಷರ್ನಿಂದ ರೂ1 ಸಾವಿರ ಕೋಟಿಯಷ್ಟು ಸಾಲ ವಸೂಲಿ ಮಾಡಿವೆ ಎಂದು ಅಧ್ಯಕ್ಷ ಪ್ರತೀಪ್ ಚೌಧರಿ ತಿಳಿಸಿದ್ದಾರೆ.<br /> <br /> <strong>ಮೂವರು ಅಧಿಕಾರಿಗಳ ರಾಜೀನಾಮೆ</strong><br /> <strong>ಮುಂಬೈ (ಪಿಟಿಐ):</strong> ಹತ್ತು ತಿಂಗಳಿನಿಂದ ವೇತನ ಪಾವತಿ ಮಾಡದ ಕಿಂಗ್ಫಿಷರ್ ಏರ್ಲೈನ್ಸ್ ಆಡಳಿತ ಮಂಡಳಿ ವಿರುದ್ಧ ಮತ್ತೆ ಹೋರಾಟ ಆರಂಭಿಸುವ ಬೆದರಿಕೆಯನ್ನು ಉದ್ಯೋಗಿಗಳು ಹಾಕಿರುವ ಬೆನ್ನಹಿಂದೆಯೇ ಏರ್ಲೈನ್ಸ್ ಮೂವರು ಹಿರಿಯ ಸಿಬ್ಬಂದಿ ಭಾನುವಾರ ರಾಜೀನಾಮೆ ನೀಡಿದ್ದಾರೆ.<br /> <br /> ಮುಖ್ಯ ಮಾಹಿತಿ ಅಧಿಕಾರಿ ಸೌರವ್ ಸಿನ್ಹಾ, ವಿಮಾನ ಕಾರ್ಯಾಚರಣೆಯ ಮುಖ್ಯ ಕ್ಯಾಪ್ಟನ್ ರೋನಾಲ್ಡ್ ನಗರ್ ಹಾಗೂ ವಿಮಾನ ಸಿಬ್ಬಂದಿ ಮುಖ್ಯಸ್ಥ ಅಜಿತ್ ಭಾಗಚಂದಾನಿ ರಾಜೀನಾಮೆ ನೀಡಿದವರು ಎಂದು ಮೂಲಗಳು ತಿಳಿಸಿವೆ.<br /> <br /> ಬಿಕ್ಕಟ್ಟು ಪರಿಹಾರವಾಗದ ಒಂದು ತಿಂಗಳಿನಿಂದ ಈಚೆಗೆ ಹಲವು ಪೈಲಟ್ಗಳು ಹಾಗೂ ಎಂಜಿನಿಯರ್ಗಳು ರಾಜೀನಾಮೆ ನೀಡಿದ್ದಾರೆ. ಈ ನಡುವೆ ಏರ್ಲೈನ್ಸ್ನ ಮುಂಬೈ ಮೂಲದ ಸಿಬ್ಬಂದಿ ವೇತನ ಪಾವತಿಗೆ ಆಗ್ರಹಿಸಿ ಮತ್ತೆ ಹೋರಾಟ ಆರಂಭಿಸುವ ಸಿದ್ಧತೆಯಲ್ಲಿದ್ದು ಸೋಮವಾರ ಈ ಸಂಬಂಧ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಮಾರ್ಚ್ 31ಕ್ಕೆ ಕೊನೆಗೊಂಡ 2012-13ನೇ ಸಾಲಿನ ನಾಲ್ಕನೆಯ ತ್ರೈಮಾಸಿಕದಲ್ಲಿ ಕಿಂಗ್ಫಿಷರ್ ಏರ್ಲೈನ್ಸ್ ರೂ2,141 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.<br /> <br /> ಆರ್ಥಿಕ ಮುಗ್ಗಟ್ಟಿನಿಂದ ಕಳೆದ ಅಕ್ಟೋಬರ್1ರಿಂದ ಕಿಂಗ್ಫಿಷರ್ ಹಾರಾಟ ಸ್ಥಗಿತಗೊಂಡಿದೆ. 2011-12ನೇ ಸಾಲಿನ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಂಪೆನಿ ರೂ1,151 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು.<br /> <br /> ಒಟ್ಟಾರೆ 2012-13ನೇ ಸಾಲಿನ ನಾಲ್ಕೂ ತ್ರೈಮಾಸಿಕಗಳು ಸೇರಿ ಕಂಪೆನಿ ರೂ4,001 ಕೋಟಿಯಷ್ಟು ನಷ್ಟ ಅನುಭವಿಸಿದೆ. 2011-12ನೇ ಸಾಲಿನಲ್ಲಿ ಒಟ್ಟಾರೆ ರೂ2,328 ಕೋಟಿಯಷ್ಟು ನಷ್ಟ ದಾಖಲಾಗಿತ್ತು ಎಂದು ಕಂಪೆನಿ ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.<br /> <br /> ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಿಂಗ್ಫಿಷರ್ನ ಒಟ್ಟಾರೆ ಕಾರ್ಯನಿರ್ವಹಣೆ ನಷ್ಟ ರೂ16,023 ಕೋಟಿಗೆ ಏರಿಕೆ ಕಂಡಿದೆ.<br /> <br /> ಹಾರಾಟ ಪರವಾನಗಿ ನವೀಕರಣ ಕೋರಿ ಕಿಂಗ್ಫಿಷರ್ ಕಳೆದ ತಿಂಗಳು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಪರಿಷ್ಕೃತ ಮನವಿ ಸಲ್ಲಿಸಿದೆ. ಆದರೆ, ಬ್ಯಾಂಕುಗಳು, ತೈಲ ಮಾರಾಟ ಕಂಪೆನಿಗಳು ಮತ್ತು ಹೂಡಿಕೆದಾರರಿಂದ ನಿರಾಕ್ಷೇಪಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ `ಡಿಜಿಸಿಎ' ಇನ್ನೂ ಪರವಾನಗಿ ನೀಡಿಲ್ಲ.<br /> <br /> <strong>ರೂ7 ಸಾವಿರ ಕೋಟಿ ಸಾಲ</strong><br /> ಕಿಂಗ್ಫಿಷರ್ `ಎಸ್ಬಿಐ' ಸೇರಿದಂತೆ 17 ಬ್ಯಾಂಕುಗಳಿಗೆ ಒಟ್ಟು ರೂ7 ಸಾವಿರ ಕೋಟಿ ಸಾಲ ಪಾವತಿಸಬೇಕಿದೆ. ಇದರಲ್ಲಿ `ಎಸ್ಬಿಐ'ಗೆ ರೂ1,600 ಕೋಟಿ, `ಪಿಎನ್ಬಿ'ಗೆ ರೂ800 ಕೋಟಿ, `ಐಡಿಬಿಐ'ಗೆ ರೂ800 ಕೋಟಿ, ಬ್ಯಾಂಕ್ ಆಫ್ ಇಂಡಿಯಾಗೆ ರೂ650 ಕೋಟಿ ಮತ್ತು ಬ್ಯಾಂಕ್ ಆಫ್ ಬರೋಡಕ್ಕೆ ರೂ550 ಕೋಟಿ ಸಾಲ ಪಾವತಿಸಬೇಕಿದೆ.<br /> <br /> ಇಲ್ಲಿಯವರೆಗೆ `ಎಸ್ಬಿಐ' ಸಮೂಹದ ಬ್ಯಾಂಕುಗಳು ಕಿಂಗ್ಫಿಷರ್ನಿಂದ ರೂ1 ಸಾವಿರ ಕೋಟಿಯಷ್ಟು ಸಾಲ ವಸೂಲಿ ಮಾಡಿವೆ ಎಂದು ಅಧ್ಯಕ್ಷ ಪ್ರತೀಪ್ ಚೌಧರಿ ತಿಳಿಸಿದ್ದಾರೆ.<br /> <br /> <strong>ಮೂವರು ಅಧಿಕಾರಿಗಳ ರಾಜೀನಾಮೆ</strong><br /> <strong>ಮುಂಬೈ (ಪಿಟಿಐ):</strong> ಹತ್ತು ತಿಂಗಳಿನಿಂದ ವೇತನ ಪಾವತಿ ಮಾಡದ ಕಿಂಗ್ಫಿಷರ್ ಏರ್ಲೈನ್ಸ್ ಆಡಳಿತ ಮಂಡಳಿ ವಿರುದ್ಧ ಮತ್ತೆ ಹೋರಾಟ ಆರಂಭಿಸುವ ಬೆದರಿಕೆಯನ್ನು ಉದ್ಯೋಗಿಗಳು ಹಾಕಿರುವ ಬೆನ್ನಹಿಂದೆಯೇ ಏರ್ಲೈನ್ಸ್ ಮೂವರು ಹಿರಿಯ ಸಿಬ್ಬಂದಿ ಭಾನುವಾರ ರಾಜೀನಾಮೆ ನೀಡಿದ್ದಾರೆ.<br /> <br /> ಮುಖ್ಯ ಮಾಹಿತಿ ಅಧಿಕಾರಿ ಸೌರವ್ ಸಿನ್ಹಾ, ವಿಮಾನ ಕಾರ್ಯಾಚರಣೆಯ ಮುಖ್ಯ ಕ್ಯಾಪ್ಟನ್ ರೋನಾಲ್ಡ್ ನಗರ್ ಹಾಗೂ ವಿಮಾನ ಸಿಬ್ಬಂದಿ ಮುಖ್ಯಸ್ಥ ಅಜಿತ್ ಭಾಗಚಂದಾನಿ ರಾಜೀನಾಮೆ ನೀಡಿದವರು ಎಂದು ಮೂಲಗಳು ತಿಳಿಸಿವೆ.<br /> <br /> ಬಿಕ್ಕಟ್ಟು ಪರಿಹಾರವಾಗದ ಒಂದು ತಿಂಗಳಿನಿಂದ ಈಚೆಗೆ ಹಲವು ಪೈಲಟ್ಗಳು ಹಾಗೂ ಎಂಜಿನಿಯರ್ಗಳು ರಾಜೀನಾಮೆ ನೀಡಿದ್ದಾರೆ. ಈ ನಡುವೆ ಏರ್ಲೈನ್ಸ್ನ ಮುಂಬೈ ಮೂಲದ ಸಿಬ್ಬಂದಿ ವೇತನ ಪಾವತಿಗೆ ಆಗ್ರಹಿಸಿ ಮತ್ತೆ ಹೋರಾಟ ಆರಂಭಿಸುವ ಸಿದ್ಧತೆಯಲ್ಲಿದ್ದು ಸೋಮವಾರ ಈ ಸಂಬಂಧ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>