<p>ಕಿರುತೆರೆಯಲ್ಲಿ ಕಿರುಚಾಡುವ ಪಾತ್ರಗಳನ್ನು ನಿರ್ವಹಿಸುವ ಈ ನಟಿ ಬೆಳ್ಳಿತೆರೆಯಲ್ಲಿ ಸೌಮ್ಯ ಸ್ವಭಾವದ ಪಾತ್ರಕ್ಕೆ ಪ್ರಶಸ್ತಿ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. <br /> <br /> ಇವರೇ ಚಂದ್ರಕಲಾ ಮೋಹನ್. ಬಿ.ರಾಮಮೂರ್ತಿ ನಿರ್ದೇಶನದ `ಋಣಾನುಬಂಧ~ ಸಿನಿಮಾದ ನಟನೆಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿರುವ ಚಂದ್ರಕಲಾ, ಕಿರುತೆರೆಯಿಂದಲೇ ಹೆಚ್ಚು ಜನಪ್ರಿಯರಾದವರು.<br /> <br /> ಪ್ರಸ್ತುತ `ಕೃಷ್ಣರುಕ್ಮಿಣಿ~ ಧಾರಾವಾಹಿಯ ಗೌಡತಿ ಮತ್ತು `ಬೆಂಕಿಯಲ್ಲಿ ಅರಳಿನ ಹೂವು~ ಧಾರಾವಾಹಿಯ ಖಳನಾಯಕಿಯ ಪಾತ್ರಗಳಿಗೆ ಅವರು ಜೀವ ತುಂಬಿರುವ ಪರಿ ಅನನ್ಯ.<br /> <br /> ಮಂಡ್ಯದ ಹೊಸಳ್ಳಿಯವರಾದ ಚಂದ್ರಕಲಾ ಮೋಹನ್, ಹತ್ತರ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ಚಿಕ್ಕಂದಿನಲ್ಲಿಯೇ ರಂಗಭೂಮಿಯಲ್ಲಿ ಸಕ್ರಿಯರಾದ ಅವರು `ಕುರುಕ್ಷೇತ್ರ~, `ದಕ್ಷಯಜ್ಞ~, `ಶ್ರೀಕೃಷ್ಣ ಸಂಧಾನ~, `ರತ್ನ ಮಾಂಗಲ್ಯ~, `ಬಸ್ ಕಂಡಕ್ಟರ್~, `ಸತಿ ಸಂಸಾರದ ಜ್ಯೋತಿ~, `ಗೌಡ್ರಗದ್ಲ~ ಹೀಗೆ ಸಾಕಷ್ಟು ನಾಟಕಗಳಲ್ಲಿ ನಟಿಸಿದರು. ಮದುವೆಯ ನಂತರವೂ ಬಣ್ಣದ ಬದುಕಿನಲ್ಲಿ ತೊಡಗಿಸಿಕೊಂಡ ಅವರಿಗೆ ದೂರದರ್ಶನದಲ್ಲಿ ಪ್ರಸಾರವಾದ `ಮರೀಚಿಕೆ~ ಧಾರಾವಾಹಿ ಮೂಲಕ ಕಿರುತೆರೆಗೆ ಪ್ರವೇಶ ದೊರೆಯಿತು. <br /> <br /> ನಂತರದಲ್ಲಿ `ಜೀವನ~, `ಕುಸುಮಾಂಜಲಿ~, `ರಂಗೋಲಿ~, `ಗೋಧೂಳಿ~, `ಎಸ್ಸೆಸ್ಸೆಲ್ಸಿ ನನ್ಮಕ್ಳು~ ಹೀಗೆ ಸಾಲು ಸಾಲು ಅವಕಾಶಗಳು ದೊರೆತವು. ಪಕ್ಕಾ ಮಂಡ್ಯ ಸೀಮೆಯವರಾದ ಅವರಿಗೆ `ಮೂಡಲಮನೆ~ಯಲ್ಲಿ ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ಕಲಿತು ಆಡುವುದು ಸವಾಲೇ ಆಗಿತ್ತು.<br /> <br /> ಅದನ್ನು ಯಶಸ್ವಿಯಾಗಿ ನಿಭಾಯಿಸಿ ಇಂದಿಗೂ ಮೂಡಲಮನೆಯ ಶಾಂತಾ ಎಂದೇ ಪಾತ್ರದಿಂದ ಗುರುತಿಸಿಕೊಳ್ಳುವ ಚಂದ್ರಕಲಾ ತಾವು ಉತ್ತಮ ನಟಿ ಎಂಬುದನ್ನು ಸಾಬೀತುಪಡಿಸಿದರು.<br /> <br /> ಧಾರಾವಾಹಿ ಜೊತೆಜೊತೆಗೆ `ಭಕ್ತಶಂಕರ~, `ಆಂತರ್ಯ~, `ರಿಕ್ಷಾರಾಜ~, `ಮಿ.ಪುಡಾರಿ~, `ಸುಹಾಸಿನಿ~, `ನಾ ರಾಣಿ ನೀ ಮಹಾರಾಣಿ~, `ಭದ್ರ~, `ರಾಜಧಾನಿ~, `ಆಟ~, `ಅರ್ಥ~, `ಹುಂಜ~, `ಗೇಮ್ ಫಾರ್ ಲವ್~ ಹೀಗೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿರುವ ಮತ್ತು ನಟಿಸುತ್ತಿರುವ ಚಂದ್ರಕಲಾ ಅವರಿಗೆ ಕಿರುತೆರೆ ನೀಡಿರುವ ತೃಪ್ತಿ ಹೆಚ್ಚು ಎನಿಸಿದೆ.<br /> <br /> ಬುಕ್ಕಾಪಟ್ನ ವಾಸು ಅವರ `ಗುರಿ~ ಟೆಲಿಫಿಲ್ಮ್ನಲ್ಲಿ ಕರಿಬಸವಯ್ಯ ಅವರೊಂದಿಗೆ ಹಳ್ಳಿ ಹೆಂಗಸಿನ ಪಾತ್ರದಲ್ಲಿ ಕಪ್ಪು ಮೇಕಪ್ ಹಾಕಿಕೊಂಡು ನಟಿಸಿದ್ದು ಮತ್ತು `ಮಾನಸ ವೀಣೆ~ ಧಾರಾವಾಹಿಯಲ್ಲಿ ಲೋಹಿತಾಶ್ವ ಅವರ ಪತ್ನಿಯಾಗಿ 75 ವರ್ಷದ ಮುದುಕಿ ಪಾತ್ರದಲ್ಲಿ ನಟಿಸಿದ್ದು ಅವರು ಹೆಚ್ಚು ಇಷ್ಟಪಡುವ ಪಾತ್ರಗಳು.<br /> <br /> ತಾವು ನಟಿ ಶ್ರುತಿ ಅವರ ಚಿಕ್ಕಮ್ಮ ಎಂದು ಹೇಳಿಕೊಳ್ಳಲು ಸಂಕೋಚಪಡುವ ಚಂದ್ರಕಲಾ, `ಕೃಷ್ಣ ರುಕ್ಮಿಣಿ~ಯಲ್ಲಿ ತಮಗೆ ಅವಕಾಶ ನೀಡಿದ ನಿರ್ದೇಶಕ ರವಿ.ಆರ್ ಗರಣಿ, ನಿರ್ಮಾಪಕ ಕುಮಾರಸ್ವಾಮಿ ಮತ್ತು `ಬೆಂಕಿಯಲ್ಲಿ ಅರಳಿದ ಹೂವು~ ನಿರ್ದೇಶಕಿ ಪದ್ಮಜಾ ರಾವ್ ಅವರಿಗೆ ಧನ್ಯವಾದ ಸಲ್ಲಿಸುತ್ತಾರೆ.<br /> <br /> `ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಹೆಚ್ಚು ಒತ್ತು ಕೊಡುವುದಿಲ್ಲ. ಅದರಿಂದ ಕಿರುತೆರೆ ಹೆಚ್ಚು ತೃಪ್ತಿ ನೀಡುತ್ತಿದೆ. ಪಾತ್ರಕ್ಕೆ ತೂಕವಿದ್ದಾಗ, ಕಸ ಗುಡಿಸುವ ಪಾತ್ರ ಕೊಟ್ಟರೂ ಕಣ್ಣಿಗೊತ್ತಿಕೊಂಡು ಮಾಡಿಬಿಡುವೆ~ ಎನ್ನುವ ವೃತ್ತಿಪರತೆ ಅವರದು. <br /> <br /> ನಟಿ ಉಮಾಶ್ರೀ ಅವರಂತೆ ವಯಸ್ಸಿರುವಾಗಲೇ ಮುದುಕಿ ಪಾತ್ರ ಮಾಡುವಾಸೆ ಎನ್ನುವ ಅವರಿಗೆ ಅದರಲ್ಲೂ ಹಣ್ಣಣ್ಣು ಮುದುಕಿ ಪಾತ್ರ, ಕೆಸರಲ್ಲಿ ಉರುಳಾಡೋ ಪಾತ್ರ, ಕಪ್ಪು ಮೇಕಪ್ ಬಳಿದುಕೊಳ್ಳುವ ಪಾತ್ರಗಳೆಂದರೆ ಅಚ್ಚುಮೆಚ್ಚು. `ನೀವು ಬೆಳ್ಳಗಿದ್ದೀರಾ ಅಂಥ ಪಾತ್ರಗಳು ನಿಮಗೆ ಹೊಂದಿಕೆಯಾಗಲ್ಲ~ ಎನ್ನುವವರಿಗೆ, `ಕೊಟ್ಟು ನೋಡಿ~ ಎಂದು ಸವಾಲು ಹಾಕುತ್ತಾರೆ. ಹುಚ್ಚಿ, ಕುರುಡಿ, ಮೂಗಿ ಪಾತ್ರ ನಿರ್ವಹಿಸುವ ಆಸೆಯೂ ಅವರಿಗಿದೆ. <br /> <br /> ಕಿರುತೆರೆ, ಸಿನಿಮಾದ ಜೊತೆಜೊತೆಗೆ ರಂಗಭೂಮಿಯ ನಂಟನ್ನೂ ಉಳಿಸಿಕೊಂಡಿರುವ ಅವರು ಕಷ್ಟದಲ್ಲಿ ಇದ್ದಾಗ ಅವಕಾಶ ನೀಡಿದ ಡಿಂಗ್ರಿ ನಾಗರಾಜ್ ಅವರ ಪತ್ನಿ ಮಾಲಾ, ಕರಿಬಸವಯ್ಯ, ಬ್ಯಾಂಕ್ ಜನಾರ್ದನ್, ಶಂಖನಾದ ಅರವಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿರುತೆರೆಯಲ್ಲಿ ಕಿರುಚಾಡುವ ಪಾತ್ರಗಳನ್ನು ನಿರ್ವಹಿಸುವ ಈ ನಟಿ ಬೆಳ್ಳಿತೆರೆಯಲ್ಲಿ ಸೌಮ್ಯ ಸ್ವಭಾವದ ಪಾತ್ರಕ್ಕೆ ಪ್ರಶಸ್ತಿ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. <br /> <br /> ಇವರೇ ಚಂದ್ರಕಲಾ ಮೋಹನ್. ಬಿ.ರಾಮಮೂರ್ತಿ ನಿರ್ದೇಶನದ `ಋಣಾನುಬಂಧ~ ಸಿನಿಮಾದ ನಟನೆಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಪಡೆದಿರುವ ಚಂದ್ರಕಲಾ, ಕಿರುತೆರೆಯಿಂದಲೇ ಹೆಚ್ಚು ಜನಪ್ರಿಯರಾದವರು.<br /> <br /> ಪ್ರಸ್ತುತ `ಕೃಷ್ಣರುಕ್ಮಿಣಿ~ ಧಾರಾವಾಹಿಯ ಗೌಡತಿ ಮತ್ತು `ಬೆಂಕಿಯಲ್ಲಿ ಅರಳಿನ ಹೂವು~ ಧಾರಾವಾಹಿಯ ಖಳನಾಯಕಿಯ ಪಾತ್ರಗಳಿಗೆ ಅವರು ಜೀವ ತುಂಬಿರುವ ಪರಿ ಅನನ್ಯ.<br /> <br /> ಮಂಡ್ಯದ ಹೊಸಳ್ಳಿಯವರಾದ ಚಂದ್ರಕಲಾ ಮೋಹನ್, ಹತ್ತರ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ಚಿಕ್ಕಂದಿನಲ್ಲಿಯೇ ರಂಗಭೂಮಿಯಲ್ಲಿ ಸಕ್ರಿಯರಾದ ಅವರು `ಕುರುಕ್ಷೇತ್ರ~, `ದಕ್ಷಯಜ್ಞ~, `ಶ್ರೀಕೃಷ್ಣ ಸಂಧಾನ~, `ರತ್ನ ಮಾಂಗಲ್ಯ~, `ಬಸ್ ಕಂಡಕ್ಟರ್~, `ಸತಿ ಸಂಸಾರದ ಜ್ಯೋತಿ~, `ಗೌಡ್ರಗದ್ಲ~ ಹೀಗೆ ಸಾಕಷ್ಟು ನಾಟಕಗಳಲ್ಲಿ ನಟಿಸಿದರು. ಮದುವೆಯ ನಂತರವೂ ಬಣ್ಣದ ಬದುಕಿನಲ್ಲಿ ತೊಡಗಿಸಿಕೊಂಡ ಅವರಿಗೆ ದೂರದರ್ಶನದಲ್ಲಿ ಪ್ರಸಾರವಾದ `ಮರೀಚಿಕೆ~ ಧಾರಾವಾಹಿ ಮೂಲಕ ಕಿರುತೆರೆಗೆ ಪ್ರವೇಶ ದೊರೆಯಿತು. <br /> <br /> ನಂತರದಲ್ಲಿ `ಜೀವನ~, `ಕುಸುಮಾಂಜಲಿ~, `ರಂಗೋಲಿ~, `ಗೋಧೂಳಿ~, `ಎಸ್ಸೆಸ್ಸೆಲ್ಸಿ ನನ್ಮಕ್ಳು~ ಹೀಗೆ ಸಾಲು ಸಾಲು ಅವಕಾಶಗಳು ದೊರೆತವು. ಪಕ್ಕಾ ಮಂಡ್ಯ ಸೀಮೆಯವರಾದ ಅವರಿಗೆ `ಮೂಡಲಮನೆ~ಯಲ್ಲಿ ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ಕಲಿತು ಆಡುವುದು ಸವಾಲೇ ಆಗಿತ್ತು.<br /> <br /> ಅದನ್ನು ಯಶಸ್ವಿಯಾಗಿ ನಿಭಾಯಿಸಿ ಇಂದಿಗೂ ಮೂಡಲಮನೆಯ ಶಾಂತಾ ಎಂದೇ ಪಾತ್ರದಿಂದ ಗುರುತಿಸಿಕೊಳ್ಳುವ ಚಂದ್ರಕಲಾ ತಾವು ಉತ್ತಮ ನಟಿ ಎಂಬುದನ್ನು ಸಾಬೀತುಪಡಿಸಿದರು.<br /> <br /> ಧಾರಾವಾಹಿ ಜೊತೆಜೊತೆಗೆ `ಭಕ್ತಶಂಕರ~, `ಆಂತರ್ಯ~, `ರಿಕ್ಷಾರಾಜ~, `ಮಿ.ಪುಡಾರಿ~, `ಸುಹಾಸಿನಿ~, `ನಾ ರಾಣಿ ನೀ ಮಹಾರಾಣಿ~, `ಭದ್ರ~, `ರಾಜಧಾನಿ~, `ಆಟ~, `ಅರ್ಥ~, `ಹುಂಜ~, `ಗೇಮ್ ಫಾರ್ ಲವ್~ ಹೀಗೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿರುವ ಮತ್ತು ನಟಿಸುತ್ತಿರುವ ಚಂದ್ರಕಲಾ ಅವರಿಗೆ ಕಿರುತೆರೆ ನೀಡಿರುವ ತೃಪ್ತಿ ಹೆಚ್ಚು ಎನಿಸಿದೆ.<br /> <br /> ಬುಕ್ಕಾಪಟ್ನ ವಾಸು ಅವರ `ಗುರಿ~ ಟೆಲಿಫಿಲ್ಮ್ನಲ್ಲಿ ಕರಿಬಸವಯ್ಯ ಅವರೊಂದಿಗೆ ಹಳ್ಳಿ ಹೆಂಗಸಿನ ಪಾತ್ರದಲ್ಲಿ ಕಪ್ಪು ಮೇಕಪ್ ಹಾಕಿಕೊಂಡು ನಟಿಸಿದ್ದು ಮತ್ತು `ಮಾನಸ ವೀಣೆ~ ಧಾರಾವಾಹಿಯಲ್ಲಿ ಲೋಹಿತಾಶ್ವ ಅವರ ಪತ್ನಿಯಾಗಿ 75 ವರ್ಷದ ಮುದುಕಿ ಪಾತ್ರದಲ್ಲಿ ನಟಿಸಿದ್ದು ಅವರು ಹೆಚ್ಚು ಇಷ್ಟಪಡುವ ಪಾತ್ರಗಳು.<br /> <br /> ತಾವು ನಟಿ ಶ್ರುತಿ ಅವರ ಚಿಕ್ಕಮ್ಮ ಎಂದು ಹೇಳಿಕೊಳ್ಳಲು ಸಂಕೋಚಪಡುವ ಚಂದ್ರಕಲಾ, `ಕೃಷ್ಣ ರುಕ್ಮಿಣಿ~ಯಲ್ಲಿ ತಮಗೆ ಅವಕಾಶ ನೀಡಿದ ನಿರ್ದೇಶಕ ರವಿ.ಆರ್ ಗರಣಿ, ನಿರ್ಮಾಪಕ ಕುಮಾರಸ್ವಾಮಿ ಮತ್ತು `ಬೆಂಕಿಯಲ್ಲಿ ಅರಳಿದ ಹೂವು~ ನಿರ್ದೇಶಕಿ ಪದ್ಮಜಾ ರಾವ್ ಅವರಿಗೆ ಧನ್ಯವಾದ ಸಲ್ಲಿಸುತ್ತಾರೆ.<br /> <br /> `ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಹೆಚ್ಚು ಒತ್ತು ಕೊಡುವುದಿಲ್ಲ. ಅದರಿಂದ ಕಿರುತೆರೆ ಹೆಚ್ಚು ತೃಪ್ತಿ ನೀಡುತ್ತಿದೆ. ಪಾತ್ರಕ್ಕೆ ತೂಕವಿದ್ದಾಗ, ಕಸ ಗುಡಿಸುವ ಪಾತ್ರ ಕೊಟ್ಟರೂ ಕಣ್ಣಿಗೊತ್ತಿಕೊಂಡು ಮಾಡಿಬಿಡುವೆ~ ಎನ್ನುವ ವೃತ್ತಿಪರತೆ ಅವರದು. <br /> <br /> ನಟಿ ಉಮಾಶ್ರೀ ಅವರಂತೆ ವಯಸ್ಸಿರುವಾಗಲೇ ಮುದುಕಿ ಪಾತ್ರ ಮಾಡುವಾಸೆ ಎನ್ನುವ ಅವರಿಗೆ ಅದರಲ್ಲೂ ಹಣ್ಣಣ್ಣು ಮುದುಕಿ ಪಾತ್ರ, ಕೆಸರಲ್ಲಿ ಉರುಳಾಡೋ ಪಾತ್ರ, ಕಪ್ಪು ಮೇಕಪ್ ಬಳಿದುಕೊಳ್ಳುವ ಪಾತ್ರಗಳೆಂದರೆ ಅಚ್ಚುಮೆಚ್ಚು. `ನೀವು ಬೆಳ್ಳಗಿದ್ದೀರಾ ಅಂಥ ಪಾತ್ರಗಳು ನಿಮಗೆ ಹೊಂದಿಕೆಯಾಗಲ್ಲ~ ಎನ್ನುವವರಿಗೆ, `ಕೊಟ್ಟು ನೋಡಿ~ ಎಂದು ಸವಾಲು ಹಾಕುತ್ತಾರೆ. ಹುಚ್ಚಿ, ಕುರುಡಿ, ಮೂಗಿ ಪಾತ್ರ ನಿರ್ವಹಿಸುವ ಆಸೆಯೂ ಅವರಿಗಿದೆ. <br /> <br /> ಕಿರುತೆರೆ, ಸಿನಿಮಾದ ಜೊತೆಜೊತೆಗೆ ರಂಗಭೂಮಿಯ ನಂಟನ್ನೂ ಉಳಿಸಿಕೊಂಡಿರುವ ಅವರು ಕಷ್ಟದಲ್ಲಿ ಇದ್ದಾಗ ಅವಕಾಶ ನೀಡಿದ ಡಿಂಗ್ರಿ ನಾಗರಾಜ್ ಅವರ ಪತ್ನಿ ಮಾಲಾ, ಕರಿಬಸವಯ್ಯ, ಬ್ಯಾಂಕ್ ಜನಾರ್ದನ್, ಶಂಖನಾದ ಅರವಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>