<p><strong>ಬೆಂಗಳೂರು:</strong> ವಿಧಾನಪರಿಷತ್ ಕಲಾಪದಲ್ಲಿ ಮಂಗಳವಾರ `ಕುರಿ' ಮೇಲೆ ಸ್ವಾರಸ್ಯಕರ ಚರ್ಚೆ ನಡೆಯಿತು.<br /> <br /> 2013-14ನೇ ಸಾಲಿನ ಪರಿಷ್ಕೃತ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, `ಬಜೆಟ್ನಲ್ಲಿ ಕುರಿ ಅಥವಾ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ 3 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ. ಆದರೆ ಈ ಪರಿಹಾರವನ್ನು ಕೇವಲ ಕುರಿಗಳಿಗೆ ಮಾತ್ರ ಸೀಮಿತಗೊಳಿಸದೆ ಎತ್ತು ಹಾಗೂ ಇತರ ಜಾನುವಾರುಗಳು ಮೃತಪಟ್ಟಾಗಲೂ ನೀಡುವಂತಾಗಬೇಕು' ಎಂದು ಸಲಹೆ ನೀಡಿದರು.<br /> <br /> ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಎಸ್.ಆರ್. ಪಾಟೀಲ್, `ಕುರಿ ಎಂದರೆ ಲಕ್ಷ್ಮಿ ಇದ್ದಂತೆ! ಲಕ್ಷ್ಮಿ ಎಂದರೆ ಹಣ. ಹಣ ಎಂದರೆ ಬಜೆಟ್. ಇದಕ್ಕಾಗಿ ಕುರಿಗೆ ಬಜೆಟ್ನಲ್ಲಿ ಸಹಜವಾಗಿಯೇ ಪ್ರಾತಿನಿಧ್ಯ ದೊರೆತಿದೆ' ಎಂದು ಅರ್ಥೈಸಿದರು.<br /> <br /> ಪಾಟೀಲ್ ಅವರ ಈ ಮಾತಿಗೆ ದನಿಗೂಡಿಸಿದ ಜೆಡಿಎಸ್ನ ಬಸವರಾಜ ಹೊರಟ್ಟಿ, `ಕುರಿ ಲಕ್ಷ್ಮಿ ಎನ್ನುವುದಾದರೆ ಅದರ ವಧೆ ನಿಲ್ಲಿಸಬೇಕು. ಕುರಿಯನ್ನು ಬಲಿ ಕೊಡಬಾರದು' ಎಂಬ ತರ್ಕ ಮಂಡಿಸಿದರು. ಮಹಾತ್ಮಾ ಗಾಂಧೀಜಿಯವರು ಮೇಕೆ ಹಾಲನ್ನೇ ಕುಡಿಯುತ್ತಿದ್ದರು ಎಂಬುದನ್ನು ನೆನಪಿಸುತ್ತಲೇ, `ಸರ್ಕಾರ ಕುರಿ ಮತ್ತು ಮೇಕೆ ಡೈರಿ ಸ್ಥಾಪನೆಯನ್ನು ಪ್ರಕಟಿಸಬೇಕು' ಎಂಬ ಸಲಹೆ ನೀಡಿದರು.<br /> <br /> ಹೊರಟ್ಟಿಯವರ ತರ್ಕಕ್ಕೆ ಕೆಲವು ಕಾಂಗ್ರೆಸ್ ಸದಸ್ಯರು `ಆರೋಗ್ಯಕ್ಕೆ ಮೇಕೆ ಹಾಲು ಉತ್ತಮ' ಎಂದೆನ್ನೆತ್ತಾ ತಲೆದೂಗಿದರು.<br /> `ಕುರಿ ರಾಷ್ಟ್ರೀಯ ಪ್ರಾಣಿ ಆಗಲಿ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಬಜೆಟ್ ದಿನವೂ ವಿಧಾನಸೌಧಕ್ಕೆ ಕುರಿ ಬಂದಿತ್ತು. ಅದೇ ರೀತಿ ಕಾಂಗ್ರೆಸ್ಗೂ ಒಂದು ಪ್ರಾಣಿ ಕೊಡೋಣ' ಎಂದು ಸದಾನಂದಗೌಡರು ಚರ್ಚೆಗೆ ಹಾಸ್ಯದ ಲೇಪನ ನೀಡಲು ಯತ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಧಾನಪರಿಷತ್ ಕಲಾಪದಲ್ಲಿ ಮಂಗಳವಾರ `ಕುರಿ' ಮೇಲೆ ಸ್ವಾರಸ್ಯಕರ ಚರ್ಚೆ ನಡೆಯಿತು.<br /> <br /> 2013-14ನೇ ಸಾಲಿನ ಪರಿಷ್ಕೃತ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, `ಬಜೆಟ್ನಲ್ಲಿ ಕುರಿ ಅಥವಾ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ 3 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ. ಆದರೆ ಈ ಪರಿಹಾರವನ್ನು ಕೇವಲ ಕುರಿಗಳಿಗೆ ಮಾತ್ರ ಸೀಮಿತಗೊಳಿಸದೆ ಎತ್ತು ಹಾಗೂ ಇತರ ಜಾನುವಾರುಗಳು ಮೃತಪಟ್ಟಾಗಲೂ ನೀಡುವಂತಾಗಬೇಕು' ಎಂದು ಸಲಹೆ ನೀಡಿದರು.<br /> <br /> ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಎಸ್.ಆರ್. ಪಾಟೀಲ್, `ಕುರಿ ಎಂದರೆ ಲಕ್ಷ್ಮಿ ಇದ್ದಂತೆ! ಲಕ್ಷ್ಮಿ ಎಂದರೆ ಹಣ. ಹಣ ಎಂದರೆ ಬಜೆಟ್. ಇದಕ್ಕಾಗಿ ಕುರಿಗೆ ಬಜೆಟ್ನಲ್ಲಿ ಸಹಜವಾಗಿಯೇ ಪ್ರಾತಿನಿಧ್ಯ ದೊರೆತಿದೆ' ಎಂದು ಅರ್ಥೈಸಿದರು.<br /> <br /> ಪಾಟೀಲ್ ಅವರ ಈ ಮಾತಿಗೆ ದನಿಗೂಡಿಸಿದ ಜೆಡಿಎಸ್ನ ಬಸವರಾಜ ಹೊರಟ್ಟಿ, `ಕುರಿ ಲಕ್ಷ್ಮಿ ಎನ್ನುವುದಾದರೆ ಅದರ ವಧೆ ನಿಲ್ಲಿಸಬೇಕು. ಕುರಿಯನ್ನು ಬಲಿ ಕೊಡಬಾರದು' ಎಂಬ ತರ್ಕ ಮಂಡಿಸಿದರು. ಮಹಾತ್ಮಾ ಗಾಂಧೀಜಿಯವರು ಮೇಕೆ ಹಾಲನ್ನೇ ಕುಡಿಯುತ್ತಿದ್ದರು ಎಂಬುದನ್ನು ನೆನಪಿಸುತ್ತಲೇ, `ಸರ್ಕಾರ ಕುರಿ ಮತ್ತು ಮೇಕೆ ಡೈರಿ ಸ್ಥಾಪನೆಯನ್ನು ಪ್ರಕಟಿಸಬೇಕು' ಎಂಬ ಸಲಹೆ ನೀಡಿದರು.<br /> <br /> ಹೊರಟ್ಟಿಯವರ ತರ್ಕಕ್ಕೆ ಕೆಲವು ಕಾಂಗ್ರೆಸ್ ಸದಸ್ಯರು `ಆರೋಗ್ಯಕ್ಕೆ ಮೇಕೆ ಹಾಲು ಉತ್ತಮ' ಎಂದೆನ್ನೆತ್ತಾ ತಲೆದೂಗಿದರು.<br /> `ಕುರಿ ರಾಷ್ಟ್ರೀಯ ಪ್ರಾಣಿ ಆಗಲಿ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಬಜೆಟ್ ದಿನವೂ ವಿಧಾನಸೌಧಕ್ಕೆ ಕುರಿ ಬಂದಿತ್ತು. ಅದೇ ರೀತಿ ಕಾಂಗ್ರೆಸ್ಗೂ ಒಂದು ಪ್ರಾಣಿ ಕೊಡೋಣ' ಎಂದು ಸದಾನಂದಗೌಡರು ಚರ್ಚೆಗೆ ಹಾಸ್ಯದ ಲೇಪನ ನೀಡಲು ಯತ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>