<p>ಶಿರಾ: ರಾತ್ರಿ ನೆಂಟರ ಮನೆಯಲ್ಲಿ ಮಲಗಿದ್ದು ನಸುಕಿನಲ್ಲೇ ಕುರಿ ಮಂದೆಗೆ ಹಿಂದಿರುಗುತ್ತಿದ್ದ ಕುರಿಗಾಹಿ ಮೇಲೆ ಜೋಡಿ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಬರಗೂರು ಕೆರೆಯಲ್ಲಿ ಸೋಮವಾರ ನಡೆದಿದೆ.<br /> <br /> ತಾಲ್ಲೂಕಿನ ಗೌಡಗೆರೆ ಹೋಬಳಿ ಬಡಮಂಗನಹಟ್ಟಿಯ ನಾಗೇಂದ್ರ (28) ಕೆಲ ದಿನಗಳ ಹಿಂದೆ ಬರಗೂರು ಸಮೀಪದ ರಂಗಾಪುರದ ಬಳಿಗೆ ಕುರಿ ಮಂದೆ ಕರೆದುಕೊಂಡು ಹೋಗಿದ್ದರು.<br /> <br /> ಅಲ್ಲಿಗೆ ಸಮೀಪದ ಕದಿರೇಹಳ್ಳಿಯಲ್ಲಿ ನಾಗೇಂದ್ರನ ನೆಂಟರಿದ್ದರು. ಭಾನುವಾರ ಕುರಿಗಳನ್ನು ಮೇಯಿಸಿ ಮಂದೆಗೆ ಕೂಡಿದ ನಾಗೇಂದ್ರ ನೆಂಟರ ಮನೆಗೆಂದು ರಾತ್ರಿ ಹೋಗಿದ್ದಾರೆ. ಅಲ್ಲಿಯೇ ತಂಗಿದ್ದು ಸೋಮವಾರ ನಸುಕಿನಲ್ಲೇ ಎದ್ದು ಕುರಿ ಮಂದೆ ಕಡೆಗೆ ಹೆಜ್ಜೆ ಹಾಕಿದ್ದಾರೆ.<br /> <br /> ಬರಗೂರು ಕೆರೆ ಮೂಲಕ ಹಾದು ಬರುತ್ತಿದ್ದ ವೇಳೆ ಸೀಮೆ ಜಾಲಿಯಲ್ಲಿ ಅಡಗಿದ್ದ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿ ಮೈ-ಕೈ, ಬೆನ್ನು, ಎದೆಗೆ ಪರಚಿವೆ. ಇದರಿಂದ ತೀವ್ರ ರಕ್ತ ಸ್ರಾವವಾಗಿದೆ. ಗಾಬರಿಯಿಂದ ಕಿರುಚಿಕೊಂಡು ಅಲ್ಲಿಂದ ಓಟ ಕಿತ್ತಿದ್ದಾನೆ. ಆಗ ಎರಡು ಕರಡಿಗಳೂ ಹಿಮ್ಮೆಟ್ಟಿವೆ. ಇದರಿಂದ ನಾಗೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.<br /> <br /> ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತುಮಕೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ತಾಲ್ಲೂಕು ವಲಯ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಾ: ರಾತ್ರಿ ನೆಂಟರ ಮನೆಯಲ್ಲಿ ಮಲಗಿದ್ದು ನಸುಕಿನಲ್ಲೇ ಕುರಿ ಮಂದೆಗೆ ಹಿಂದಿರುಗುತ್ತಿದ್ದ ಕುರಿಗಾಹಿ ಮೇಲೆ ಜೋಡಿ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಬರಗೂರು ಕೆರೆಯಲ್ಲಿ ಸೋಮವಾರ ನಡೆದಿದೆ.<br /> <br /> ತಾಲ್ಲೂಕಿನ ಗೌಡಗೆರೆ ಹೋಬಳಿ ಬಡಮಂಗನಹಟ್ಟಿಯ ನಾಗೇಂದ್ರ (28) ಕೆಲ ದಿನಗಳ ಹಿಂದೆ ಬರಗೂರು ಸಮೀಪದ ರಂಗಾಪುರದ ಬಳಿಗೆ ಕುರಿ ಮಂದೆ ಕರೆದುಕೊಂಡು ಹೋಗಿದ್ದರು.<br /> <br /> ಅಲ್ಲಿಗೆ ಸಮೀಪದ ಕದಿರೇಹಳ್ಳಿಯಲ್ಲಿ ನಾಗೇಂದ್ರನ ನೆಂಟರಿದ್ದರು. ಭಾನುವಾರ ಕುರಿಗಳನ್ನು ಮೇಯಿಸಿ ಮಂದೆಗೆ ಕೂಡಿದ ನಾಗೇಂದ್ರ ನೆಂಟರ ಮನೆಗೆಂದು ರಾತ್ರಿ ಹೋಗಿದ್ದಾರೆ. ಅಲ್ಲಿಯೇ ತಂಗಿದ್ದು ಸೋಮವಾರ ನಸುಕಿನಲ್ಲೇ ಎದ್ದು ಕುರಿ ಮಂದೆ ಕಡೆಗೆ ಹೆಜ್ಜೆ ಹಾಕಿದ್ದಾರೆ.<br /> <br /> ಬರಗೂರು ಕೆರೆ ಮೂಲಕ ಹಾದು ಬರುತ್ತಿದ್ದ ವೇಳೆ ಸೀಮೆ ಜಾಲಿಯಲ್ಲಿ ಅಡಗಿದ್ದ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿ ಮೈ-ಕೈ, ಬೆನ್ನು, ಎದೆಗೆ ಪರಚಿವೆ. ಇದರಿಂದ ತೀವ್ರ ರಕ್ತ ಸ್ರಾವವಾಗಿದೆ. ಗಾಬರಿಯಿಂದ ಕಿರುಚಿಕೊಂಡು ಅಲ್ಲಿಂದ ಓಟ ಕಿತ್ತಿದ್ದಾನೆ. ಆಗ ಎರಡು ಕರಡಿಗಳೂ ಹಿಮ್ಮೆಟ್ಟಿವೆ. ಇದರಿಂದ ನಾಗೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.<br /> <br /> ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತುಮಕೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ತಾಲ್ಲೂಕು ವಲಯ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>