<p><strong>ನವದೆಹಲಿ (ಪಿಟಿಐ): </strong>ಕೂಡುಂಕುಳಂನ ಪರಮಾಣು ಶಕ್ತಿ ಸ್ಥಾವರದ ಮೊದಲ ಘಟಕವು ಇನ್ನು 40 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದೆ.<br /> <br /> `ಒಂದು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಮೊದಲ ಘಟಕವು ಇನ್ನು 40 ದಿವಸಗಳಲ್ಲಿ ಚಾಲನೆಗೊಳ್ಳಲಿದೆ~ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ವಿ. ನಾರಾಯಣಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> `ಅಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್ಬಿ) ಅಧಿಕಾರಿಗಳು ಕೂಡುಂಕುಳಂನಲ್ಲಿ ಬೀಡು ಬಿಟ್ಟಿದ್ದು, ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದಾರೆ. ಉತ್ಪಾದನೆ ಆರಂಭಿಸಲು ಇನ್ನೊಂದು ವಾರದಲ್ಲಿ ಎಇಆರ್ಬಿ ಅನುಮತಿ ನೀಡುವ ಸಾಧ್ಯತೆ ಇದೆ. ಇದು ದೊರಕಿದ ತರುವಾಯ ಘಟಕಕ್ಕೆ ಯುರೇನಿಯಂ ಇಂಧನವನ್ನು ಭರ್ತಿ ಮಾಡಲಾಗುವುದು~ ಎಂದರು.<br /> <br /> `ಮೊದಲ 20 ದಿನಗಳು ಘಟಕದ ಪ್ರಯೋಗಾರ್ಥ ಚಾಲನೆ ನಡೆಯಲಿದ್ದು, ನಂತರವಷ್ಟೇ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ~ ಎಂದ ಅವರು, `ಮೊದಲ ಘಟಕ ಚಾಲನೆಗೊಂಡ ಎರಡು ತಿಂಗಳಲ್ಲೇ ಎರಡನೇ ಘಟಕವೂ ಕಾರ್ಯಾರಂಭ ಮಾಡಲಿದೆ. ಇದರ ಸಾಮರ್ಥ್ಯ ಕೂಡ ಒಂದು ಸಾವಿರ ಮೆಗಾವಾಟ್~ ಎಂದರು.<br /> <br /> `ಈ ಅಣು ಸ್ಥಾವರದ ಕಾರ್ಯಾರಂಭಕ್ಕೆ ಭಾರತ ಮತ್ತು ರಷ್ಯಾದ ಎರಡು ಸಾವಿರಕ್ಕೂ ಹೆಚ್ಚು ಎಂಜಿನಿಯರ್ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಸಹಕಾರ ನೀಡಿದೆ~ ಎಂದೂ ನಾರಾಯಣಸ್ವಾಮಿ ತಿಳಿಸಿದರು.<br /> <br /> ರಷ್ಯ ಸಹಭಾಗಿತ್ವದ ರೂ 15,824 ಕೋಟಿ ವೆಚ್ಚದ ಈ ಯೋಜನೆಯು ಪರಿಸರದ ಮೇಲೆ ಮಾರಕ ಪರಿಣಾಮ ಬೀರುವುದರಿಂದ ಸುರಕ್ಷತೆಗೆ ಧಕ್ಕೆ ಉಂಟಾಗಲಿದೆ ಎಂದು ಆತಂಕಗೊಂಡ ಸ್ಥಳೀಯರು ಸತತ ಎಂಟು ತಿಂಗಳ ಕಾಲ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು. <br /> <br /> ಇವರಿಗೆ ಪರಮಾಣು ಕಾರ್ಯಕ್ರಮಗಳ ವಿರೋಧಿ ಗುಂಪುಗಳು ಬೆಂಬಲ ನೀಡಿದ್ದವು. ಜೊತೆಗೆ ತಮಿಳುನಾಡು ಸರ್ಕಾರ ಕೂಡ ಸುರಕ್ಷತೆ ಬಗ್ಗೆ ಖಾತರಿ ನೀಡದ ಹೊರತು ಯೋಜನೆ ಮುಂದುವರಿಯಲು ಬಿಡುವುದಿಲ್ಲ ಎಂದು ತಕರಾರು ತೆಗೆದಿತ್ತು. ಈ ಕಾರಣಗಳಿಂದಾಗಿ ಕಳೆದ ಅಕ್ಟೋಬರ್ನಲ್ಲೇ ಸ್ಥಾವರದ ಕೆಲಸ- ಕಾರ್ಯಗಳು ಸ್ಥಗಿತಗೊಂಡಿದ್ದವು. <br /> <br /> <strong>ಮೇ 1ರಿಂದ ಅನಿರ್ದಿಷ್ಟ ಉಪವಾಸ<br /> </strong><br /> <strong>ಚೆನ್ನೈ (ಐಎಎನ್ಎಸ್): </strong>ಜನರಿಗೆ ನೀಡಿರುವ ಭರವಸೆಗಳನ್ನು ಮರೆತಿರುವ ತಮಿಳುನಾಡು ಸರ್ಕಾರದ ವಿರುದ್ಧ ಮೇ 1 ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಕೂಡುಂಕುಳಂ ಅಣುಸ್ಥಾವರ ವಿರೋಧಿ ಜನ ಸಂಘಟನೆ (ಪಿಎಮ್ಎಎನ್ಎ) ಸೋಮವಾರ ತಿಳಿಸಿದೆ.<br /> <br /> ಹಿಂದೆ ಪ್ರತಿಭಟನೆ ನಡೆಸಿದಾಗ ತಮಿಳುನಾಡು ಸರ್ಕಾರವು, ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಲಾಗುವುದು, ಪ್ರತಿಭಟನಾಕಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದು, 2008ರಲ್ಲಿ ಪರಮಾಣು ಸ್ಥಾವರಗಳ ಸಾಧಕ ಬಾಧಕಗಳ ಬಗ್ಗೆ ಭಾರತ-ರಷ್ಯಾ ಒಪ್ಪಂದಕ್ಕೆ ಸಂಬಂಧಿಸಿದ ಕರಡಿನ ಪ್ರತಿ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಕೂಡುಂಕುಳಂನ ಪರಮಾಣು ಶಕ್ತಿ ಸ್ಥಾವರದ ಮೊದಲ ಘಟಕವು ಇನ್ನು 40 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದೆ.<br /> <br /> `ಒಂದು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಮೊದಲ ಘಟಕವು ಇನ್ನು 40 ದಿವಸಗಳಲ್ಲಿ ಚಾಲನೆಗೊಳ್ಳಲಿದೆ~ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ವಿ. ನಾರಾಯಣಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> `ಅಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್ಬಿ) ಅಧಿಕಾರಿಗಳು ಕೂಡುಂಕುಳಂನಲ್ಲಿ ಬೀಡು ಬಿಟ್ಟಿದ್ದು, ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದಾರೆ. ಉತ್ಪಾದನೆ ಆರಂಭಿಸಲು ಇನ್ನೊಂದು ವಾರದಲ್ಲಿ ಎಇಆರ್ಬಿ ಅನುಮತಿ ನೀಡುವ ಸಾಧ್ಯತೆ ಇದೆ. ಇದು ದೊರಕಿದ ತರುವಾಯ ಘಟಕಕ್ಕೆ ಯುರೇನಿಯಂ ಇಂಧನವನ್ನು ಭರ್ತಿ ಮಾಡಲಾಗುವುದು~ ಎಂದರು.<br /> <br /> `ಮೊದಲ 20 ದಿನಗಳು ಘಟಕದ ಪ್ರಯೋಗಾರ್ಥ ಚಾಲನೆ ನಡೆಯಲಿದ್ದು, ನಂತರವಷ್ಟೇ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ~ ಎಂದ ಅವರು, `ಮೊದಲ ಘಟಕ ಚಾಲನೆಗೊಂಡ ಎರಡು ತಿಂಗಳಲ್ಲೇ ಎರಡನೇ ಘಟಕವೂ ಕಾರ್ಯಾರಂಭ ಮಾಡಲಿದೆ. ಇದರ ಸಾಮರ್ಥ್ಯ ಕೂಡ ಒಂದು ಸಾವಿರ ಮೆಗಾವಾಟ್~ ಎಂದರು.<br /> <br /> `ಈ ಅಣು ಸ್ಥಾವರದ ಕಾರ್ಯಾರಂಭಕ್ಕೆ ಭಾರತ ಮತ್ತು ರಷ್ಯಾದ ಎರಡು ಸಾವಿರಕ್ಕೂ ಹೆಚ್ಚು ಎಂಜಿನಿಯರ್ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಸಹಕಾರ ನೀಡಿದೆ~ ಎಂದೂ ನಾರಾಯಣಸ್ವಾಮಿ ತಿಳಿಸಿದರು.<br /> <br /> ರಷ್ಯ ಸಹಭಾಗಿತ್ವದ ರೂ 15,824 ಕೋಟಿ ವೆಚ್ಚದ ಈ ಯೋಜನೆಯು ಪರಿಸರದ ಮೇಲೆ ಮಾರಕ ಪರಿಣಾಮ ಬೀರುವುದರಿಂದ ಸುರಕ್ಷತೆಗೆ ಧಕ್ಕೆ ಉಂಟಾಗಲಿದೆ ಎಂದು ಆತಂಕಗೊಂಡ ಸ್ಥಳೀಯರು ಸತತ ಎಂಟು ತಿಂಗಳ ಕಾಲ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು. <br /> <br /> ಇವರಿಗೆ ಪರಮಾಣು ಕಾರ್ಯಕ್ರಮಗಳ ವಿರೋಧಿ ಗುಂಪುಗಳು ಬೆಂಬಲ ನೀಡಿದ್ದವು. ಜೊತೆಗೆ ತಮಿಳುನಾಡು ಸರ್ಕಾರ ಕೂಡ ಸುರಕ್ಷತೆ ಬಗ್ಗೆ ಖಾತರಿ ನೀಡದ ಹೊರತು ಯೋಜನೆ ಮುಂದುವರಿಯಲು ಬಿಡುವುದಿಲ್ಲ ಎಂದು ತಕರಾರು ತೆಗೆದಿತ್ತು. ಈ ಕಾರಣಗಳಿಂದಾಗಿ ಕಳೆದ ಅಕ್ಟೋಬರ್ನಲ್ಲೇ ಸ್ಥಾವರದ ಕೆಲಸ- ಕಾರ್ಯಗಳು ಸ್ಥಗಿತಗೊಂಡಿದ್ದವು. <br /> <br /> <strong>ಮೇ 1ರಿಂದ ಅನಿರ್ದಿಷ್ಟ ಉಪವಾಸ<br /> </strong><br /> <strong>ಚೆನ್ನೈ (ಐಎಎನ್ಎಸ್): </strong>ಜನರಿಗೆ ನೀಡಿರುವ ಭರವಸೆಗಳನ್ನು ಮರೆತಿರುವ ತಮಿಳುನಾಡು ಸರ್ಕಾರದ ವಿರುದ್ಧ ಮೇ 1 ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಕೂಡುಂಕುಳಂ ಅಣುಸ್ಥಾವರ ವಿರೋಧಿ ಜನ ಸಂಘಟನೆ (ಪಿಎಮ್ಎಎನ್ಎ) ಸೋಮವಾರ ತಿಳಿಸಿದೆ.<br /> <br /> ಹಿಂದೆ ಪ್ರತಿಭಟನೆ ನಡೆಸಿದಾಗ ತಮಿಳುನಾಡು ಸರ್ಕಾರವು, ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಲಾಗುವುದು, ಪ್ರತಿಭಟನಾಕಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದು, 2008ರಲ್ಲಿ ಪರಮಾಣು ಸ್ಥಾವರಗಳ ಸಾಧಕ ಬಾಧಕಗಳ ಬಗ್ಗೆ ಭಾರತ-ರಷ್ಯಾ ಒಪ್ಪಂದಕ್ಕೆ ಸಂಬಂಧಿಸಿದ ಕರಡಿನ ಪ್ರತಿ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>