<p>ಕೊಪ್ಪ: ತಾಲ್ಲೂಕಿನ ಕೃಷಿಕರು ಇಲ್ಲಿನ ಪುರಭವನದಲ್ಲಿ ಇದೇ 6ರಂದು ನಡೆಯುವ ಕೃಷಿ ಉತ್ಸವದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಾ.ಪಂ.ಅಧ್ಯಕ್ಷೆ ಪ್ರೇಮಾ ದಾಮೋದರ್ ಮನವಿ ಮಾಡಿದರು.<br /> <br /> ಇಲ್ಲಿನ ತಾ.ಪಂ.ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳು, ಕೃಷಿಕ ಸಂಘ, ಸ್ವಸಹಾಯ ಸಂಘಗಳನ್ನು ಒಳಗೊಂಡು ಕೃಷಿ ಉತ್ಸವ ಆಯೋಜಿಸಲಾಗಿದೆ. ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಪೂರಕ ಮಾಹಿತಿಗಳು ಉತ್ಸವದಲ್ಲಿ ಲಭ್ಯವಾಗಲಿದೆ ಎಂದರು.<br /> <br /> ತೋಟಗಾರಿಕೆ, ಕೃಷಿ, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಸ್ವಸಹಾಯ ಸಂಘಗಳ ಕೃಷಿ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನದೊಂದಿಗೆ, 10 ಜನ ಉತ್ತಮ ಕೃಷಿಕರನ್ನು ಗೌರವಿಸಲಾಗುವುದು ಎಂದರು.<br /> <br /> ಪುರಭವನದಲ್ಲಿ 50 ಪ್ರದರ್ಶನ ಮಳಿಗೆ ಸಿದ್ಧಗೊಳಿಸಲಾಗಿದೆ. ಪಟ್ಟಣಕ್ಕೆ ಅಂದು ಆಗಮಿಸುವ ಕನ್ನಡ ರಥದ ಸ್ವಾಗತದೊಂದಿಗೆ ಕೃಷಿ ಉತ್ಸವದ ಮೆರವಣಿಗೆ ನಡೆಸಲಾಗುವುದು. ಕೃಷಿಗೆ ಸಂಬಂಧಪಟ್ಟ ಸ್ತಬ್ಧಚಿತ್ರಗಳು, ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದರು.<br /> <br /> ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಸುಚೇತ ನರೇಂದ್ರ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ನರೇಂದ್ರ, ಉತ್ಸವದ ಸಂಚಾಲಕ ಅದ್ದಡ ಸತೀಶ್, ತಾ.ಪಂ.ಸದಸ್ಯೆ ಸುಭದ್ರಮ್ಮ, ಪದ್ಮಾವತಿ, ಪೂರ್ಣಚಂದ್ರ, ತಾ.ಪಂ.ಉಪಾಧ್ಯಕ್ಷ ಜಯಂತ್, ಕೃಷಿ ಅಧಿಕಾರಿಗಳಾದ ಓಂಕಾರಪ್ಪ, ಪ್ರಶಾಂತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪ: ತಾಲ್ಲೂಕಿನ ಕೃಷಿಕರು ಇಲ್ಲಿನ ಪುರಭವನದಲ್ಲಿ ಇದೇ 6ರಂದು ನಡೆಯುವ ಕೃಷಿ ಉತ್ಸವದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಾ.ಪಂ.ಅಧ್ಯಕ್ಷೆ ಪ್ರೇಮಾ ದಾಮೋದರ್ ಮನವಿ ಮಾಡಿದರು.<br /> <br /> ಇಲ್ಲಿನ ತಾ.ಪಂ.ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳು, ಕೃಷಿಕ ಸಂಘ, ಸ್ವಸಹಾಯ ಸಂಘಗಳನ್ನು ಒಳಗೊಂಡು ಕೃಷಿ ಉತ್ಸವ ಆಯೋಜಿಸಲಾಗಿದೆ. ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಪೂರಕ ಮಾಹಿತಿಗಳು ಉತ್ಸವದಲ್ಲಿ ಲಭ್ಯವಾಗಲಿದೆ ಎಂದರು.<br /> <br /> ತೋಟಗಾರಿಕೆ, ಕೃಷಿ, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಸ್ವಸಹಾಯ ಸಂಘಗಳ ಕೃಷಿ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನದೊಂದಿಗೆ, 10 ಜನ ಉತ್ತಮ ಕೃಷಿಕರನ್ನು ಗೌರವಿಸಲಾಗುವುದು ಎಂದರು.<br /> <br /> ಪುರಭವನದಲ್ಲಿ 50 ಪ್ರದರ್ಶನ ಮಳಿಗೆ ಸಿದ್ಧಗೊಳಿಸಲಾಗಿದೆ. ಪಟ್ಟಣಕ್ಕೆ ಅಂದು ಆಗಮಿಸುವ ಕನ್ನಡ ರಥದ ಸ್ವಾಗತದೊಂದಿಗೆ ಕೃಷಿ ಉತ್ಸವದ ಮೆರವಣಿಗೆ ನಡೆಸಲಾಗುವುದು. ಕೃಷಿಗೆ ಸಂಬಂಧಪಟ್ಟ ಸ್ತಬ್ಧಚಿತ್ರಗಳು, ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದರು.<br /> <br /> ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಸುಚೇತ ನರೇಂದ್ರ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ನರೇಂದ್ರ, ಉತ್ಸವದ ಸಂಚಾಲಕ ಅದ್ದಡ ಸತೀಶ್, ತಾ.ಪಂ.ಸದಸ್ಯೆ ಸುಭದ್ರಮ್ಮ, ಪದ್ಮಾವತಿ, ಪೂರ್ಣಚಂದ್ರ, ತಾ.ಪಂ.ಉಪಾಧ್ಯಕ್ಷ ಜಯಂತ್, ಕೃಷಿ ಅಧಿಕಾರಿಗಳಾದ ಓಂಕಾರಪ್ಪ, ಪ್ರಶಾಂತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>