<p><strong>ಶ್ರೀರಂಗಪಟ್ಟಣ:</strong> ತ್ಲ್ಲಾಲೂಕಿನ ಪ್ರಸಿದ್ಧ ಕೃಷ್ಣರಾಜ ಸಾಗರ ಜಲಾಶಯಕ್ಕೆ ಕೂಗಳತೆ ದೂರದಲ್ಲಿ, ಬೃಂದಾವನಕ್ಕೆ ಹೊಂದಿಕೊಂಡಂತೆ ಖಾಸಗಿ ವ್ಯಕ್ತಿಯೊಬ್ಬರು ರೆಸಾರ್ಟ್ ನಿರ್ಮಿಸಲು ಮುಂದಾಗಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ.<br /> <br /> ಬೃಂದಾನಕ್ಕೆ ಕೇವಲ 25 ಮೀಟರ್ ದೂರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿ ಶುರುವಾಗಿದೆ. ಪಾಂಡವಪುರ ತಾಲ್ಲೂಕಿನ ಹೊಸ ಕನ್ನಂಬಾಡಿ ಗ್ರಾಮದ ನಾರಾಯಣ ಎಂಬುವವರಿಗೆ ಸೇರಿದ ಸ.ನಂ.147/1ರ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ. <br /> <br /> ನಾರಾಯಣ ಅವರು ತಮ್ಮ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿ ಬೇರೊಬ್ಬರಿಗೆ ಗುತ್ತಿಗೆ ನೀಡಿದ್ದಾರೆ ಎಂದು ಕೆಆರ್ಎಸ್ ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಅವರು ತಿಳಿಸಿದ್ದಾರೆ. <br /> <br /> ವಿಶ್ವೇಶ್ವರಯ್ಯ ನಾಲೆ ಹಾಗೂ ತೋಟಗಾರಿಕೆ ಇಲಾಖೆ ಮಧ್ಯೆ ಹರಿಯುವ ಹನುಮನಹಳ್ಳಕ್ಕೆ ಹೊಂದಿಕೊಂಡಂತೆ ರೆಸಾರ್ಟ್ ನಿರ್ಮಾಣವಾಗಿದೆ. ಮೂರು ತಿಂಗಳಿನಿಂದ ಕಾಮಗಾರಿ ಭರದಿಂದ ನಡೆಯುತ್ತಿದೆ. <br /> <br /> ಆದರೆ `ಹಸಿರು ಪಟ್ಟಿ ವಲಯ~ ಎಂದು ಘೋಷಿತವಾಗಿರುವ ಜಾಗದಲ್ಲಿ ರೆಸಾರ್ಟ್ ನಿರ್ಮಿಸುತ್ತಿರುವುದಕ್ಕೆ ಕೆಆರ್ಎಸ್ ಗ್ರಾ.ಪಂ. ಸದಸ್ಯ ಪ್ರಕಾಶ್ ಮತ್ತು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಜಲಾಶಯದ ಭದ್ರತೆ ದೃಷ್ಟಿಯಿಂದ ರೆಸಾರ್ಟ್ ನಿರ್ಮಾಣ ಕಾರ್ಯವನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.<br /> <br /> ಬೃಂದಾವನ ಹಾಗೂ ಜಲಾಶಯದ `ವ್ಯೆ ಪಾಯಿಂಟ್~ ಎಂದು ಹೇಳಲಾಗುವ ಸ್ಥಳದಲ್ಲಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವುದಕ್ಕೆ ಅಧಿಕಾರಿಗಳು ಮೌನ ಸಮ್ಮತಿ ಸೂಚಿಸಿದ್ದಾರೆ ಎಂದು ಟೀಕಿಸಿದ್ದಾರೆ.<br /> <br /> `ಕೆಆರ್ಎಸ್ ಜಲಾಶಯ ಸಮೀಪವೇ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸುತ್ತಿರುವುದು ನಿಜ. ಕಟ್ಟಡ ನಿರ್ಮಿಸುತ್ತಿರುವವರನ್ನು ಪ್ರಶ್ನಿಸಿದರೆ ಬೃಂದಾವನದ ಒಳಗೆ ಸರ್ಕಾರವೇ ಹೋಟೆಲ್ ಕಟ್ಟಿದೆ. ನಮ್ಮನ್ನು ಏಕೆ ಕೇಳುತ್ತೀರಿ ಎಂದು ಮರು ಪ್ರಶ್ನೆ ಹಾಕುತ್ತಾರೆ.</p>.<p><br /> ಇಷ್ಟಕ್ಕೂ ಕಟ್ಟಡ ನಿರ್ಮಿಸಲು ಪರವಾನಗಿ ಕೊಡುವವರು ಕಂದಾಯ ಅಧಿಕಾರಿಗಳೇ ಹೊರತು ನಾವಲ್ಲ~ ಎಂದು ಕಾವೇರಿ ನೀರಾವರಿ ನಿಗಮದ ಇಇ ವಿಜಯಕುಮಾರ್ ಹೇಳುತ್ತಾರೆ. <br /> <br /> `ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಕಟ್ಟಡ ನಿರ್ಮಿಸಲು ಅಲಿನಿಯೇಶನ್ ಕೊಡುವವರು ತಹಶೀಲ್ದಾರ್. ಹಾಗಾಗಿ ನನಗೆ ಆ ಬಗ್ಗೆ ಮಾಹಿತಿ ಇಲ್ಲ~ ಎನ್ನುವುದು ಪಾಂಡವಪುರ ಉಪ ವಿಭಾಗಾಧಿಕಾರಿ ಜಿ.ಪ್ರಭು ಅವರ ವಿವರಣೆ.<br /> <br /> `ಕೆಆರ್ಎಸ್ನ ಬೃಂದಾವನ ಬಳಿ ವಾಣಿಜ್ಯ ಕಟ್ಟಡ ನಿರ್ಮಿಸಲು ಎರಡು ವರ್ಷಗಳ ಹಿಂದೆಯೇ ಅನುಮತಿ ನೀಡಲಾಗಿದೆ. ಯಾವ ಆಧಾರದ ಮೇಲೆ ಅನುಮತಿ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಒಂದೆರಡು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸುತ್ತೇನೆ~ ಎಂದು ಪಾಂಡವಪುರ ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ ಹೇಳಿದ್ದಾರೆ. <br /> <br /> ಬೃಂದಾವನ ಬಳಿ ಸಣ್ಣ ವ್ಯಾಪಾರಿಗಳು ಕೈಗಾಡಿ, ಪಾರ್ಲರ್ ಇಟ್ಟುಕೊಳ್ಳಲು ಆಕ್ಷೇಪಿಸುವ ಕಾವೇರಿ ನೀರಾವರಿ ನಿಗಮ 1.20 ಎಕರೆ ವಿಸ್ತೀರ್ಣದಲ್ಲಿ ರೆಸಾರ್ಟ್ ನಿಮಿಸುತ್ತಿದ್ದರೂ ಚಕಾರ ಎತ್ತದೇ ಇರುವುದು ಹಾಗೂ ಕಂದಾಯ ಅಧಿಕಾರಿಗಳ ಹಾರಿಕೆ ಉತ್ತರ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. <br /> <br /> ಉದ್ದೇಶಿತ ಕಟ್ಟಡ ನಿರ್ಮಾಣವಾದರೆ ಜಲಾಶಯ ಮತ್ತು ಬೃಂದಾನ ನೋಡಲು ಪ್ರವಾಸಿಗರು ತ್ರಾಸ ಪಡಬೇಕಾಗುತ್ತದೆ. ಅಲ್ಲದೆ ಭದ್ರತೆ ದೃಷ್ಟಿಯಿಂದ ರೆಸಾರ್ಟ್ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಬೇಕು ಎಂದು ಕೆಆರ್ಎಸ್ ಗ್ರಾ.ಪಂ.ನ ಜನಪ್ರತಿನಿಧಿಗಳು ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ತ್ಲ್ಲಾಲೂಕಿನ ಪ್ರಸಿದ್ಧ ಕೃಷ್ಣರಾಜ ಸಾಗರ ಜಲಾಶಯಕ್ಕೆ ಕೂಗಳತೆ ದೂರದಲ್ಲಿ, ಬೃಂದಾವನಕ್ಕೆ ಹೊಂದಿಕೊಂಡಂತೆ ಖಾಸಗಿ ವ್ಯಕ್ತಿಯೊಬ್ಬರು ರೆಸಾರ್ಟ್ ನಿರ್ಮಿಸಲು ಮುಂದಾಗಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ.<br /> <br /> ಬೃಂದಾನಕ್ಕೆ ಕೇವಲ 25 ಮೀಟರ್ ದೂರದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿ ಶುರುವಾಗಿದೆ. ಪಾಂಡವಪುರ ತಾಲ್ಲೂಕಿನ ಹೊಸ ಕನ್ನಂಬಾಡಿ ಗ್ರಾಮದ ನಾರಾಯಣ ಎಂಬುವವರಿಗೆ ಸೇರಿದ ಸ.ನಂ.147/1ರ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ. <br /> <br /> ನಾರಾಯಣ ಅವರು ತಮ್ಮ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿ ಬೇರೊಬ್ಬರಿಗೆ ಗುತ್ತಿಗೆ ನೀಡಿದ್ದಾರೆ ಎಂದು ಕೆಆರ್ಎಸ್ ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಅವರು ತಿಳಿಸಿದ್ದಾರೆ. <br /> <br /> ವಿಶ್ವೇಶ್ವರಯ್ಯ ನಾಲೆ ಹಾಗೂ ತೋಟಗಾರಿಕೆ ಇಲಾಖೆ ಮಧ್ಯೆ ಹರಿಯುವ ಹನುಮನಹಳ್ಳಕ್ಕೆ ಹೊಂದಿಕೊಂಡಂತೆ ರೆಸಾರ್ಟ್ ನಿರ್ಮಾಣವಾಗಿದೆ. ಮೂರು ತಿಂಗಳಿನಿಂದ ಕಾಮಗಾರಿ ಭರದಿಂದ ನಡೆಯುತ್ತಿದೆ. <br /> <br /> ಆದರೆ `ಹಸಿರು ಪಟ್ಟಿ ವಲಯ~ ಎಂದು ಘೋಷಿತವಾಗಿರುವ ಜಾಗದಲ್ಲಿ ರೆಸಾರ್ಟ್ ನಿರ್ಮಿಸುತ್ತಿರುವುದಕ್ಕೆ ಕೆಆರ್ಎಸ್ ಗ್ರಾ.ಪಂ. ಸದಸ್ಯ ಪ್ರಕಾಶ್ ಮತ್ತು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಜಲಾಶಯದ ಭದ್ರತೆ ದೃಷ್ಟಿಯಿಂದ ರೆಸಾರ್ಟ್ ನಿರ್ಮಾಣ ಕಾರ್ಯವನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.<br /> <br /> ಬೃಂದಾವನ ಹಾಗೂ ಜಲಾಶಯದ `ವ್ಯೆ ಪಾಯಿಂಟ್~ ಎಂದು ಹೇಳಲಾಗುವ ಸ್ಥಳದಲ್ಲಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವುದಕ್ಕೆ ಅಧಿಕಾರಿಗಳು ಮೌನ ಸಮ್ಮತಿ ಸೂಚಿಸಿದ್ದಾರೆ ಎಂದು ಟೀಕಿಸಿದ್ದಾರೆ.<br /> <br /> `ಕೆಆರ್ಎಸ್ ಜಲಾಶಯ ಸಮೀಪವೇ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸುತ್ತಿರುವುದು ನಿಜ. ಕಟ್ಟಡ ನಿರ್ಮಿಸುತ್ತಿರುವವರನ್ನು ಪ್ರಶ್ನಿಸಿದರೆ ಬೃಂದಾವನದ ಒಳಗೆ ಸರ್ಕಾರವೇ ಹೋಟೆಲ್ ಕಟ್ಟಿದೆ. ನಮ್ಮನ್ನು ಏಕೆ ಕೇಳುತ್ತೀರಿ ಎಂದು ಮರು ಪ್ರಶ್ನೆ ಹಾಕುತ್ತಾರೆ.</p>.<p><br /> ಇಷ್ಟಕ್ಕೂ ಕಟ್ಟಡ ನಿರ್ಮಿಸಲು ಪರವಾನಗಿ ಕೊಡುವವರು ಕಂದಾಯ ಅಧಿಕಾರಿಗಳೇ ಹೊರತು ನಾವಲ್ಲ~ ಎಂದು ಕಾವೇರಿ ನೀರಾವರಿ ನಿಗಮದ ಇಇ ವಿಜಯಕುಮಾರ್ ಹೇಳುತ್ತಾರೆ. <br /> <br /> `ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಕಟ್ಟಡ ನಿರ್ಮಿಸಲು ಅಲಿನಿಯೇಶನ್ ಕೊಡುವವರು ತಹಶೀಲ್ದಾರ್. ಹಾಗಾಗಿ ನನಗೆ ಆ ಬಗ್ಗೆ ಮಾಹಿತಿ ಇಲ್ಲ~ ಎನ್ನುವುದು ಪಾಂಡವಪುರ ಉಪ ವಿಭಾಗಾಧಿಕಾರಿ ಜಿ.ಪ್ರಭು ಅವರ ವಿವರಣೆ.<br /> <br /> `ಕೆಆರ್ಎಸ್ನ ಬೃಂದಾವನ ಬಳಿ ವಾಣಿಜ್ಯ ಕಟ್ಟಡ ನಿರ್ಮಿಸಲು ಎರಡು ವರ್ಷಗಳ ಹಿಂದೆಯೇ ಅನುಮತಿ ನೀಡಲಾಗಿದೆ. ಯಾವ ಆಧಾರದ ಮೇಲೆ ಅನುಮತಿ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಒಂದೆರಡು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸುತ್ತೇನೆ~ ಎಂದು ಪಾಂಡವಪುರ ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ ಹೇಳಿದ್ದಾರೆ. <br /> <br /> ಬೃಂದಾವನ ಬಳಿ ಸಣ್ಣ ವ್ಯಾಪಾರಿಗಳು ಕೈಗಾಡಿ, ಪಾರ್ಲರ್ ಇಟ್ಟುಕೊಳ್ಳಲು ಆಕ್ಷೇಪಿಸುವ ಕಾವೇರಿ ನೀರಾವರಿ ನಿಗಮ 1.20 ಎಕರೆ ವಿಸ್ತೀರ್ಣದಲ್ಲಿ ರೆಸಾರ್ಟ್ ನಿಮಿಸುತ್ತಿದ್ದರೂ ಚಕಾರ ಎತ್ತದೇ ಇರುವುದು ಹಾಗೂ ಕಂದಾಯ ಅಧಿಕಾರಿಗಳ ಹಾರಿಕೆ ಉತ್ತರ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ. <br /> <br /> ಉದ್ದೇಶಿತ ಕಟ್ಟಡ ನಿರ್ಮಾಣವಾದರೆ ಜಲಾಶಯ ಮತ್ತು ಬೃಂದಾನ ನೋಡಲು ಪ್ರವಾಸಿಗರು ತ್ರಾಸ ಪಡಬೇಕಾಗುತ್ತದೆ. ಅಲ್ಲದೆ ಭದ್ರತೆ ದೃಷ್ಟಿಯಿಂದ ರೆಸಾರ್ಟ್ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಬೇಕು ಎಂದು ಕೆಆರ್ಎಸ್ ಗ್ರಾ.ಪಂ.ನ ಜನಪ್ರತಿನಿಧಿಗಳು ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>