<p><strong>ಕೆ.ಆರ್</strong>.<strong>ಪುರ:</strong> ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯಾಗಿದ್ದ ಉಚಿತ ಟ್ಯಾಂಕರ್ ನೀರು ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> `ಕೆ.ಆರ್.ಪುರದ ನೀರಿನ ಸಮಸ್ಯೆ ನಿವಾರಣೆಗೆ ಜಲಮಂಡಳಿ ಹಾಗೂ ಬಿಬಿಎಂಪಿ ಸದಸ್ಯರು ಉಚಿತವಾಗಿ ಟ್ಯಾಂಕರ್ ನೀರು ಪೂರೈಕೆಯ ವ್ಯವಸ್ಥೆ ಮಾಡಿದ್ದರು. ಆದರೆ ಉಚಿತ ನೀರು ಪೂರೈಕೆಯ ಟ್ಯಾಂಕರ್ಗಳ ನಿರ್ವಹಣೆ ಸರಿಯಾಗಿಲ್ಲದೇ ಇರುವುದರಿಂದ ದಿನವೂ ಟ್ಯಾಂಕರ್ಗಳಿಗೆ ನೂಕು ನುಗ್ಗಲು ಹೆಚ್ಚಾಗುತ್ತಿದೆ~ ಎಂದು ಸ್ಥಳೀಯರಾದ ಮುರಳಿ ದೂರಿದ್ದಾರೆ.<br /> <br /> `ಬಡಾವಣೆಗಳಲ್ಲಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಯ ವ್ಯವಸ್ಥೆಯೂ ಸರಿಯಾಗಿಲ್ಲ. ಒಡೆದಿರುವ ಪೈಪುಗಳನ್ನು ಬದಲಾಯಿಸಲು ಅಧಿಕಾರಿಗಳು ಮೀನಾಮೇಶ ಎಣಿಸುತ್ತಿದ್ದಾರೆ. ಕೊಳವೆ ಬಾವಿಗಳ ಸುತ್ತ ಮಣ್ಣು ಶೇಖರಣೆಯಾಗಿದ್ದು ದೂರು ನೀಡಿದರೂ ಅದನ್ನು ತೆಗೆಸಿಲ್ಲ~ ಎಂಬುದು ಇಸ್ಲಾಂಪುರ ನಿವಾಸಿ ಜಾನ್ ಅವರ ಅಳಲು. ಇನ್ನು ಪ್ರಿಯಾಂಕ ನಗರದಲ್ಲಿ ಜಲಮಂಡಳಿಯಿಂದಾಗಲೀ ಅಥವಾ ಬಿಬಿಎಂಪಿ ಸದಸ್ಯರಿಂದಾಗಲೀ ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಒಂದು ಟ್ಯಾಂಕ್ಗೆ 500 ರಿಂದ 600 ರೂಪಾಯಿ ಕೊಟ್ಟು ನೀರು ಕೊಳ್ಳಬೇಕಾಗಿದೆ ಎಂದು ಸ್ಥಳೀಯರಾದ ರಾಜು ದೂರಿದರು.<br /> <br /> ತ್ರಿವೇಣಿ ಬಡಾವಣೆ ನಿವಾಸಿಗಳು ಇಲ್ಲಿನ ಸರ್ಕಾರಿ ಶಾಲೆಯ ಕಾಂಪೌಂಡಿಗೆ ಹೊಂದಿಕೊಂಡಂತೆ ಇರುವ ಒಂದೇ ನಲ್ಲಿಯಿಂದ ನೀರು ಪಡೆಯುವುದು ಅನಿವಾರ್ಯವಾಗಿದೆ.<br /> <br /> `ಸ್ಥಳೀಯರ ಕೋರಿಕೆಯ ಮೇರೆಗೆ ಪ್ರತಿವಾರ್ಡಿಗೆ 6 ರಿಂದ 7 ಟ್ಯಾಂಕರ್ಗಳ ಮೂಲಕ ನೀರು ಪೂರೈಕೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ ಒಂದೆರಡು ಟ್ಯಾಂಕರ್ಗಳನ್ನು ಹೆಚ್ಚುವರಿಯಾಗಿ ಕಳುಹಿಸುತ್ತೇವೆ. ಆದರೂ ಈ ಬಡಾವಣೆಗಳ ನೀರಿನ ಸಮಸ್ಯೆ ತಳ್ಳಿಹಾಕುವಂತಿಲ್ಲ~ ಎಂದು ಜಲಮಂಡಳಿ ಸಹಾಯಕ ಎಂಜಿನಿಯರ್ ಶ್ರೀಧರ್ ತಿಳಿಸಿದರು. `ನೀರಿನ ಸಮಸ್ಯೆ ಹೆಚ್ಚಾದ ಸಂದರ್ಭಗಳಲ್ಲಿ ತಮ್ಮನ್ನು (ಮೊಬೈಲ್: 9591987968) ಅಥವಾ ಸಹಾಯಕ ಎಂಜಿನಿಯರ್ ಅವರನ್ನು (ಮೊಬೈಲ್ ಸಂಖ್ಯೆ: 9591987971ಸಂಪರ್ಕಿಸಬಹುದು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್</strong>.<strong>ಪುರ:</strong> ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯಾಗಿದ್ದ ಉಚಿತ ಟ್ಯಾಂಕರ್ ನೀರು ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> `ಕೆ.ಆರ್.ಪುರದ ನೀರಿನ ಸಮಸ್ಯೆ ನಿವಾರಣೆಗೆ ಜಲಮಂಡಳಿ ಹಾಗೂ ಬಿಬಿಎಂಪಿ ಸದಸ್ಯರು ಉಚಿತವಾಗಿ ಟ್ಯಾಂಕರ್ ನೀರು ಪೂರೈಕೆಯ ವ್ಯವಸ್ಥೆ ಮಾಡಿದ್ದರು. ಆದರೆ ಉಚಿತ ನೀರು ಪೂರೈಕೆಯ ಟ್ಯಾಂಕರ್ಗಳ ನಿರ್ವಹಣೆ ಸರಿಯಾಗಿಲ್ಲದೇ ಇರುವುದರಿಂದ ದಿನವೂ ಟ್ಯಾಂಕರ್ಗಳಿಗೆ ನೂಕು ನುಗ್ಗಲು ಹೆಚ್ಚಾಗುತ್ತಿದೆ~ ಎಂದು ಸ್ಥಳೀಯರಾದ ಮುರಳಿ ದೂರಿದ್ದಾರೆ.<br /> <br /> `ಬಡಾವಣೆಗಳಲ್ಲಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಯ ವ್ಯವಸ್ಥೆಯೂ ಸರಿಯಾಗಿಲ್ಲ. ಒಡೆದಿರುವ ಪೈಪುಗಳನ್ನು ಬದಲಾಯಿಸಲು ಅಧಿಕಾರಿಗಳು ಮೀನಾಮೇಶ ಎಣಿಸುತ್ತಿದ್ದಾರೆ. ಕೊಳವೆ ಬಾವಿಗಳ ಸುತ್ತ ಮಣ್ಣು ಶೇಖರಣೆಯಾಗಿದ್ದು ದೂರು ನೀಡಿದರೂ ಅದನ್ನು ತೆಗೆಸಿಲ್ಲ~ ಎಂಬುದು ಇಸ್ಲಾಂಪುರ ನಿವಾಸಿ ಜಾನ್ ಅವರ ಅಳಲು. ಇನ್ನು ಪ್ರಿಯಾಂಕ ನಗರದಲ್ಲಿ ಜಲಮಂಡಳಿಯಿಂದಾಗಲೀ ಅಥವಾ ಬಿಬಿಎಂಪಿ ಸದಸ್ಯರಿಂದಾಗಲೀ ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಒಂದು ಟ್ಯಾಂಕ್ಗೆ 500 ರಿಂದ 600 ರೂಪಾಯಿ ಕೊಟ್ಟು ನೀರು ಕೊಳ್ಳಬೇಕಾಗಿದೆ ಎಂದು ಸ್ಥಳೀಯರಾದ ರಾಜು ದೂರಿದರು.<br /> <br /> ತ್ರಿವೇಣಿ ಬಡಾವಣೆ ನಿವಾಸಿಗಳು ಇಲ್ಲಿನ ಸರ್ಕಾರಿ ಶಾಲೆಯ ಕಾಂಪೌಂಡಿಗೆ ಹೊಂದಿಕೊಂಡಂತೆ ಇರುವ ಒಂದೇ ನಲ್ಲಿಯಿಂದ ನೀರು ಪಡೆಯುವುದು ಅನಿವಾರ್ಯವಾಗಿದೆ.<br /> <br /> `ಸ್ಥಳೀಯರ ಕೋರಿಕೆಯ ಮೇರೆಗೆ ಪ್ರತಿವಾರ್ಡಿಗೆ 6 ರಿಂದ 7 ಟ್ಯಾಂಕರ್ಗಳ ಮೂಲಕ ನೀರು ಪೂರೈಕೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ ಒಂದೆರಡು ಟ್ಯಾಂಕರ್ಗಳನ್ನು ಹೆಚ್ಚುವರಿಯಾಗಿ ಕಳುಹಿಸುತ್ತೇವೆ. ಆದರೂ ಈ ಬಡಾವಣೆಗಳ ನೀರಿನ ಸಮಸ್ಯೆ ತಳ್ಳಿಹಾಕುವಂತಿಲ್ಲ~ ಎಂದು ಜಲಮಂಡಳಿ ಸಹಾಯಕ ಎಂಜಿನಿಯರ್ ಶ್ರೀಧರ್ ತಿಳಿಸಿದರು. `ನೀರಿನ ಸಮಸ್ಯೆ ಹೆಚ್ಚಾದ ಸಂದರ್ಭಗಳಲ್ಲಿ ತಮ್ಮನ್ನು (ಮೊಬೈಲ್: 9591987968) ಅಥವಾ ಸಹಾಯಕ ಎಂಜಿನಿಯರ್ ಅವರನ್ನು (ಮೊಬೈಲ್ ಸಂಖ್ಯೆ: 9591987971ಸಂಪರ್ಕಿಸಬಹುದು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>