<p><br /> ಕರ್ನಾಟಕ ಲೋಕಸೇವಾ ಆಯೋಗವು ಎಫ್ಡಿಎ ಹಾಗೂ ಎಸ್ಡಿಎ ಹುದ್ದೆಗಳಿಗೆ ಅರ್ಜಿ ಕರೆದಿರುವುದು ಸಂತೋಷದ ಸಂಗತಿ. ಈ ಹುದ್ದೆಗಳ ನೇಮಕಾತಿಯಲ್ಲಿ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಇರುವುದಿಲ್ಲ. ಮೇಲಾಗಿ ಪರೀಕ್ಷೆಯಲ್ಲಿ ಓಎಮ್ಆರ್ ಶೀಟ್ನಲ್ಲಿ ಉತ್ತರಗಳನ್ನು ಗುರುತಿಸುವ ಕ್ರಮ ಇದ್ದದ್ದರಿಂದ ಬೇಕಾದವರಿಗೆ ಹೆಚ್ಚಿನ ಅಂಕಗಳನ್ನು ನೀಡುವುದಕ್ಕೂ ಸಾಧ್ಯವಿರಲಿಲ್ಲ ಎನ್ನುವ ಸಮಾಧಾನವಿತ್ತು.<br /> <br /> ಹೀಗಾಗಿ ಈ ಹುದ್ದೆಗಳ ನೇಮಕಾತಿಯಲ್ಲಿ ಕೆಪಿಎಸ್ಸಿಯ ಭ್ರ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತಕ್ಕೆ ಅವಕಾಶ ಇರಲಿಲ್ಲ. ಇದರಿಂದಾಗಿ ನಮ್ಮಂತಹ ಬಡವರು ಈ ಕೆಳ ದರ್ಜೆಯ ಹುದ್ದೆಗಳನ್ನಾದರೂ ಲಂಚ ಕೊಡದೆ ಪಡಿಯಬಹುದು ಎನ್ನುವ ನಂಬಿಕೆ ಇತ್ತು. ಆದರೆ ಇದರಲ್ಲೂ ಕಳ್ಳದಾರಿ ಕಂಡು ಹಿಡಿದುಕೊಂಡಿರುವವರಿದ್ದಾರೆ. ಅಂದರೆ ಎಫ್ಡಿಎ ಹಾಗೂ ಎಸ್ಡಿಎಗಳಂತಹ ಹುದ್ದೆಗಳ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.<br /> <br /> ಈ ನೇಮಕದ ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಿ, ಅದರಲ್ಲಿ ಒಂದನ್ನು ಆಯ್ಕೆ ಮಾಡಿ, ಓಎಮ್ಆರ್ ಶೀಟ್ನಲ್ಲಿ ಸಂಬಂಧಿಸಿದ ಪ್ರಶ್ನೆ ಸಂಖ್ಯೆಯ ಎದುರಿಗೆ ಕೊಟ್ಟಿರುವ ನಾಲ್ಕು ಖಾನೆಗಳಲ್ಲಿ ಒಂದನ್ನು ಗುರುತಿಸಬೇಕಾಗಿರುತ್ತದೆ. ನಾವು ಎಷ್ಟು ಸರಿ ಉತ್ತರಗಳನ್ನು ಗುರುತಿಸಿರುತ್ತೇವೆಯೋ ಅಷ್ಟು ಅಂಕಗಳು ಬರಬೇಕು. <br /> <br /> ಅದನ್ನು ಕಂಪ್ಯೂಟರ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲೇಬೇಕೆನ್ನುವ ನಿರ್ಬಂಧ ಇಲ್ಲ. ಇಲ್ಲಿಯೇ ಭ್ರಷ್ಟಾಚಾರಕ್ಕೆ ಅವಕಾಶ ಇರುವುದು. ಈ ಭ್ರಷ್ಟ ವ್ಯವಸ್ಥೆಯನ್ನು ತಿಳಿದಿರುವ ಅಭ್ಯರ್ಥಿ ತನಗೆ ನಿಖರವಾಗಿ ಗೊತ್ತಿರುವ ಕೆಲವೇ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸಿ ಉಳಿದ ಉತ್ತರಪತ್ರಿಕೆಯನ್ನು ಹಾಗೆಯೇ ಖಾಲಿಬಿಟ್ಟು ಕೊಟ್ಟು ಹೋಗುತ್ತಾನೆ. ನಂತರ ಕೆಪಿಎಸ್ಸಿಯಲ್ಲಿ ನಡೆಯಬೇಕಾದುದೆಲ್ಲ ನಡೆಯುತ್ತದೆ ಎನ್ನುವ ಮಾತುಗಳಿವೆ. <br /> <br /> ನಮಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಂದ ಹಿಡಿದು ಕಂಪ್ಯೂಟರ್ನಿಂದ ಆ ಓಎಮ್ಆರ್ ಶೀಟ್ ಮೌಲ್ಯಮಾಪನವಾಗುವವರೆಗೆ ಸಂಬಂಧಿಸಿದವರ ಚಮತ್ಕಾರದಿಂದ ಆ ಓಎಮ್ಆರ್ ಶೀಟ್ನ ಖಾಲಿ ಜಾಗದಲ್ಲಿ ಸರಿಯಾದ ಉತ್ತರ ಗುರುತಿಸಲಾಗುತ್ತದೆಯಂತೆ. ಈ ಅನೈತಿಕ ಕ್ರಮದಿಂದ ಆಯೋಗದಲ್ಲಿರುವ ಭ್ರಷ್ಟರು ತಮಗೆ ಬೇಕಾದವರಿಗೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುತ್ತಾರಂತೆ! <br /> <br /> ಈ ಭ್ರಷ್ಟ ವ್ಯವಸ್ಥೆಯನ್ನು ಒಳಹೊಕ್ಕಿ ನೋಡಿದರೆ ನಮ್ಮಂತಹ ಬಡವರಿಗೆ ದಾರಿಯೇ ಇಲ್ಲ ಎನಿಸುತ್ತದೆ. ಅಸಹಾಯಕರಾದ ನಾವೇನು ಮಾಡಬೇಕು ಎಂದು ತಿಳಿಯದಾಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಕರ್ನಾಟಕ ಲೋಕಸೇವಾ ಆಯೋಗವು ಎಫ್ಡಿಎ ಹಾಗೂ ಎಸ್ಡಿಎ ಹುದ್ದೆಗಳಿಗೆ ಅರ್ಜಿ ಕರೆದಿರುವುದು ಸಂತೋಷದ ಸಂಗತಿ. ಈ ಹುದ್ದೆಗಳ ನೇಮಕಾತಿಯಲ್ಲಿ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಇರುವುದಿಲ್ಲ. ಮೇಲಾಗಿ ಪರೀಕ್ಷೆಯಲ್ಲಿ ಓಎಮ್ಆರ್ ಶೀಟ್ನಲ್ಲಿ ಉತ್ತರಗಳನ್ನು ಗುರುತಿಸುವ ಕ್ರಮ ಇದ್ದದ್ದರಿಂದ ಬೇಕಾದವರಿಗೆ ಹೆಚ್ಚಿನ ಅಂಕಗಳನ್ನು ನೀಡುವುದಕ್ಕೂ ಸಾಧ್ಯವಿರಲಿಲ್ಲ ಎನ್ನುವ ಸಮಾಧಾನವಿತ್ತು.<br /> <br /> ಹೀಗಾಗಿ ಈ ಹುದ್ದೆಗಳ ನೇಮಕಾತಿಯಲ್ಲಿ ಕೆಪಿಎಸ್ಸಿಯ ಭ್ರ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತಕ್ಕೆ ಅವಕಾಶ ಇರಲಿಲ್ಲ. ಇದರಿಂದಾಗಿ ನಮ್ಮಂತಹ ಬಡವರು ಈ ಕೆಳ ದರ್ಜೆಯ ಹುದ್ದೆಗಳನ್ನಾದರೂ ಲಂಚ ಕೊಡದೆ ಪಡಿಯಬಹುದು ಎನ್ನುವ ನಂಬಿಕೆ ಇತ್ತು. ಆದರೆ ಇದರಲ್ಲೂ ಕಳ್ಳದಾರಿ ಕಂಡು ಹಿಡಿದುಕೊಂಡಿರುವವರಿದ್ದಾರೆ. ಅಂದರೆ ಎಫ್ಡಿಎ ಹಾಗೂ ಎಸ್ಡಿಎಗಳಂತಹ ಹುದ್ದೆಗಳ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.<br /> <br /> ಈ ನೇಮಕದ ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಿ, ಅದರಲ್ಲಿ ಒಂದನ್ನು ಆಯ್ಕೆ ಮಾಡಿ, ಓಎಮ್ಆರ್ ಶೀಟ್ನಲ್ಲಿ ಸಂಬಂಧಿಸಿದ ಪ್ರಶ್ನೆ ಸಂಖ್ಯೆಯ ಎದುರಿಗೆ ಕೊಟ್ಟಿರುವ ನಾಲ್ಕು ಖಾನೆಗಳಲ್ಲಿ ಒಂದನ್ನು ಗುರುತಿಸಬೇಕಾಗಿರುತ್ತದೆ. ನಾವು ಎಷ್ಟು ಸರಿ ಉತ್ತರಗಳನ್ನು ಗುರುತಿಸಿರುತ್ತೇವೆಯೋ ಅಷ್ಟು ಅಂಕಗಳು ಬರಬೇಕು. <br /> <br /> ಅದನ್ನು ಕಂಪ್ಯೂಟರ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲೇಬೇಕೆನ್ನುವ ನಿರ್ಬಂಧ ಇಲ್ಲ. ಇಲ್ಲಿಯೇ ಭ್ರಷ್ಟಾಚಾರಕ್ಕೆ ಅವಕಾಶ ಇರುವುದು. ಈ ಭ್ರಷ್ಟ ವ್ಯವಸ್ಥೆಯನ್ನು ತಿಳಿದಿರುವ ಅಭ್ಯರ್ಥಿ ತನಗೆ ನಿಖರವಾಗಿ ಗೊತ್ತಿರುವ ಕೆಲವೇ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸಿ ಉಳಿದ ಉತ್ತರಪತ್ರಿಕೆಯನ್ನು ಹಾಗೆಯೇ ಖಾಲಿಬಿಟ್ಟು ಕೊಟ್ಟು ಹೋಗುತ್ತಾನೆ. ನಂತರ ಕೆಪಿಎಸ್ಸಿಯಲ್ಲಿ ನಡೆಯಬೇಕಾದುದೆಲ್ಲ ನಡೆಯುತ್ತದೆ ಎನ್ನುವ ಮಾತುಗಳಿವೆ. <br /> <br /> ನಮಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಂದ ಹಿಡಿದು ಕಂಪ್ಯೂಟರ್ನಿಂದ ಆ ಓಎಮ್ಆರ್ ಶೀಟ್ ಮೌಲ್ಯಮಾಪನವಾಗುವವರೆಗೆ ಸಂಬಂಧಿಸಿದವರ ಚಮತ್ಕಾರದಿಂದ ಆ ಓಎಮ್ಆರ್ ಶೀಟ್ನ ಖಾಲಿ ಜಾಗದಲ್ಲಿ ಸರಿಯಾದ ಉತ್ತರ ಗುರುತಿಸಲಾಗುತ್ತದೆಯಂತೆ. ಈ ಅನೈತಿಕ ಕ್ರಮದಿಂದ ಆಯೋಗದಲ್ಲಿರುವ ಭ್ರಷ್ಟರು ತಮಗೆ ಬೇಕಾದವರಿಗೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುತ್ತಾರಂತೆ! <br /> <br /> ಈ ಭ್ರಷ್ಟ ವ್ಯವಸ್ಥೆಯನ್ನು ಒಳಹೊಕ್ಕಿ ನೋಡಿದರೆ ನಮ್ಮಂತಹ ಬಡವರಿಗೆ ದಾರಿಯೇ ಇಲ್ಲ ಎನಿಸುತ್ತದೆ. ಅಸಹಾಯಕರಾದ ನಾವೇನು ಮಾಡಬೇಕು ಎಂದು ತಿಳಿಯದಾಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>