<p>ಸಮಾಜದ ಅಂಕುಡೊಂಕುಗಳಿಗೆ ಭಕ್ತಿಯ ಖಚಿತ ತಳಹದಿಯ ಮೇಲೆ ಪರಿಣಾಮಕಾರಿ ಪರಿಹಾರಗಳನ್ನು ಕಾಣಿಸಿದವರು, ಆ ಮೂಲಕ ಜನಮಾನಸದಲ್ಲಿ ಉಳಿದವರು ಕೈವಾರ ನಾರೇಯಣರು.<br /> <br /> ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ ಹುಟ್ಟಿ ಕೈವಾರದಲ್ಲಿಯೇ ಜೀವಸಮಾಧಿಯಾದ (1730-1840) ನಾರೇಯಣರು ಬಳೆ ಮಾರಾಟದ ವೃತ್ತಿಯವರು. ಮಲ್ಲಾರ ಹೊತ್ತು ಹಳ್ಳಿ ಹಳ್ಳಿ ಸುತ್ತಿ ಮುತ್ತೈದೆಯರಿಗೆ ಬಳೆ ತೊಡಿಸುವುದು ಅವರ ಕಾಯಕ.<br /> <br /> ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಎದುರಾದ ಅನೇಕ ಘಟನೆಗಳ ನಂತರ ಅಧ್ಯಾತ್ಮದತ್ತ ಹೊರಳಿದ ನಾರೇಯಣರು ನಾನಾವಿಧಗಳಲ್ಲಿ ಭಕ್ತಿ ಪ್ರಕಟ ಮಾಡಿಕೊಂಡು ತಮ್ಮ ಹಾದಿಯನ್ನು ಪಕ್ವಗೊಳಿಸಿಕೊಂಡು, ತಾವು ಬದುಕುವ ಸಮಾಜಕ್ಕೂ ಒಂದು ಮಾರ್ಗವನ್ನು ಅಣಿಗೊಳಿಸಿಕೊಟ್ಟ ಮಾನವತಾವಾದಿ.<br /> <br /> ಈ ನೆಲದ ಸಾಮಾಜಿಕ ತಾರತಮ್ಯ, ಲೋಪದೋಷಗಳನ್ನು ಅವರು ತಮ್ಮ ರಚನೆಗಳಲ್ಲಿ ಬಿಂಬಿಸುತ್ತಾರೆ. ಎಲ್ಲಾ ಮತಗಳ ಡಂಭಾಚಾರಗಳನ್ನು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ವಿಡಂಬಿಸುತ್ತಾರೆ. ಆ ಮತ ಈ ಮತ ಎಂದು ಕಿತ್ತಾಡುವ ಸಮಾಜದಲ್ಲಿ, ನಾರೇಯಣರು ಯಾವುದೇ ಪರಂಪರೆಗಳಿಗೂ ಕಟ್ಟುಬಿದ್ದವರಲ್ಲ.<br /> <br /> `ಜಾತಿಯಲ್ಲಿ ಕೀಳಾದ ಜನರ್ಯಾರೂ ಇಲ್ಲ/ ಜಾತಿ ವಿಜಾತಿ ಭೇದ ತರವಲ್ಲ/ ಎಲ್ಲರೊಂದೇ ಜಾತಿ ಮತ್ತೆ ಇಲ್ಲವಯ್ಯ/ ನಾದ ಬ್ರಹ್ಮಾನಂದ ನಾರೇಯಣ~ ಎನ್ನುವುದು ಜಾತಿ ಕುರಿತು ನಾರೇಯಣರ ಖಚಿತ ನಿಲುವು.<br /> <br /> ಆಚಾರ ವಿಚಾರಗಳ ಬಗ್ಗೆ ತಮ್ಮ ರಚನೆಗಳಲ್ಲಿ ವಿವರಗಳನ್ನು ನೀಡುವ ಅವರು ಅವುಗಳಿಂದಾಗುವ ತಪ್ಪುಒಪ್ಪುಗಳನ್ನು ಹೇಳಲು ಜನಸಾಮಾನ್ಯರ ದೈನಂದಿನ ಮಾತುಗಳನ್ನೇ ಬಳಸುತ್ತಾರೆ. ಆದರೆ ಆಡುನುಡಿಯಲ್ಲೂ ಸೂಕ್ಷ್ಮ ಒಳನೋಟಗಳಿರುವುದು ನಾರೇಯಣರ ರಚನೆಗಳ ವೈಶಿಷ್ಟ್ಯ.<br /> <br /> ತಮ್ಮೆಲ್ಲರ ನೋವುಗಳಿಗೆ ಸಾಂತ್ವನ ಹೇಳುವ, ಬದುಕಿಗೆ ಧೈರ್ಯ ತುಂಬುವ ನಾರೇಯಣರು ಅಸಹಾಯಕ - ಗ್ರಾಮೀಣ ಜನರ ಪಾಲಿಗೆ ಪ್ರೀತಿಯರಿಗೆ ತಾತಯ್ಯ. <br /> <br /> ದೀನದಲಿತರ ಕೊರಳಾಗಿದ್ದ ತಾತಯ್ಯನವರು- ಜಾತಿ, ಪುರೋಹಿತವರ್ಗ, ರಾಜಕಾರಣ, ಅಧಿಕಾರಶಾಹಿ, ರಾಜ್ಯಾಡಳಿತ ಹುಳುಕುಗಳು, ರೈತಾಪಿ ಜನರ ಬವಣೆ ಸೇರಿದಂತೆ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ತಮ್ಮ ರಚನೆಗಳಲ್ಲಿ ಮಾಡಿದರು. ಪ್ರತಿಯೊಂದು ವಿಚಾರಕ್ಕೆ ತಮ್ಮ ಪರಿಹಾರವನ್ನೂ ಸೂಚಿಸಿದರು.<br /> <br /> ಅಧ್ಯಾತ್ಮದ ಜೊತೆಗೇ ಆತ್ಮವಿಮರ್ಶೆಯೂ ಬೇಕು ಎನ್ನುವುದು ಅವರ ನಿಲುವು.ಅವರು ತಮ್ಮ ಚಿಂತನೆಗಳನ್ನು ಪ್ರಕಟಿಸಲು ಕೀರ್ತನೆ, ವಚನ, ತತ್ವಪದ ಶತಕ, ಕೋಲಾಟಪದ, ಯಾಲಾಪ- ಹೀಗೆ, ಅನೇಕ ಪ್ರಕಾರಗಳನ್ನು ಬಳಸಿಕೊಂಡರು. <br /> <br /> ತೆಲುಗು ಭಾಷೆ ಪರಿಸರದಲ್ಲಿದ್ದು ತೆಲುಗು, ಕನ್ನಡ ಹಾಗೂ ತೆಲುಗನ್ನಡಗಳಲ್ಲಿ ಬರೆದ ಅವರು, ತಾವು ಬರೆದಿದ್ದನ್ನು ಜನರಿಗೆ ಅರ್ಥ ಮಾಡಿಸಬೇಕೆನ್ನುವ ಹೊತ್ತಿನಲ್ಲಿ ಯಾವುದೇ ಭಾಷೆಯ ಮಡಿ ಮೈಲಿಗೆಯನ್ನು ಪಾಲಿಸಲಿಲ್ಲ.<br /> <br /> ಜಾತಿ ಪದ್ಧತಿಯನ್ನು ಖಂಡಿಸುವಾಗ ಅವರು ಹೇಳುತ್ತಾರೆ:<br /> `ಉಚ್ಚೆಯ ದ್ವಾರದೊಳು ತೂರಿ ಬಂದವೇ ಈ ನರರು/ ಉತ್ತಮ ಕುಲದವರು ಯಾರಿಲ್ಲವಿಲ್ಲಿ/ ಉತ್ತಮ ಕುಲವೆಂಬುದು ಬರಿ ಸುಳ್ಳು/ ನಾದ ಬ್ರಹ್ಮಾನಂದ ನಾರೇಯಣ ಕವಿ~.<br /> <br /> ಎರಡೂ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಮೆರೆದ ನಾರೇಯಣರು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯುವಾಗಲೂ ಸಾಹಿತ್ಯಕ ಮೌಲ್ಯಗಳನ್ನು ಕಾಪಾಡಿಕೊಂಡು ಬಂದರು. ಆವರೆಗಿನ ಕೆಲವು ಕಟ್ಟುಪಾಡುಗಳನ್ನು ಕಿತ್ತೆಸೆದರು. ಎಂದೂ ಮಾಸದ ಮೌಲಿಕ ಅಂಶಗಳನ್ನು ತಮ್ಮ ರಚನೆಗಳಲ್ಲಿ ಅಳವಡಿಸಿಕೊಂಡರು. ಅವರ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತ.<br /> <br /> ಈಗಿನ ಕೃಷಿಕ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಾರೇಯಣರು `ಬೆಳೆ ಬೆಳೆದರೂ ಬರ/ ಬೆಳೆ ಒಣಗಿದರು ಬರ~ ಎನ್ನುವ ಮೂಲಕ ಗ್ರಹಿಸಿದ್ದರು. ಮುಂದೆ ಜನತೆ ಅನುಭವಿಸಬೇಕಾದ ಆತಂಕ, ಸಂಕಷ್ಟ, ಅದನ್ನು ಮೀರಿ ನಿಲ್ಲುವ ಬಗೆಯನ್ನು `ಕಾಲಜ್ಞಾನ~ದಲ್ಲಿ ವಿವರಿಸಿದ ತಾತಯ್ಯನವರು ಜನರೆದೆಯಲ್ಲಿ ಜೀವಂತವಾಗಿರುವುದು ಸಹಜ ಎನಿಸುತ್ತದೆ.<br /> <br /> ಯೋಗಿ ಹಾಗೂ ಸಮಾಜ ಪರಿವರ್ತಕ - ಈ ಎರಡೂ ವ್ಯಕ್ತಿತ್ವ ಹೊಂದಿದ್ದ ನಾರೇಯಣರು ಸದಾ ಜೀವಪರವಾದ ಧೋರಣೆ ಇಟ್ಟುಕೊಂಡಿದ್ದು, ಯಾವುದೇ ವಿಚಾರಗಳ ಬಗ್ಗೆ ದ್ವಂದ್ವ ನಿಲುವು ತಾಳದೆ ಹೇಳಬೇಕಾದ್ದನ್ನು ನೇರವಾಗಿ ತೀಕ್ಷ್ಣವಾಗಿ ಹೇಳಿದರು.<br /> <br /> ಒಂದೊಂದು ಸಲ ಓದಿದಾಗಲೂ ಭಿನ್ನ ಒಳನೋಟಗಳನ್ನು ಹೊರಹೊಮ್ಮಿಸುವ ತಾತಯ್ಯನವರ ರಚನೆಗಳು ಅನನ್ಯವಾದರೂ ಅವುಗಳಿಗೆ ಸಾಹಿತ್ಯಕವಾಗಿ ಸಹಜವಾಗಿ ಸಿಗಬೇಕಿದ್ದ ನ್ಯಾಯ ಇನ್ನೂ ಸಿಕ್ಕಿಲ್ಲ. <br /> <br /> ಇದು ನಾರೇಯಣರು ನಿರೂಪಿಸಿರುವ ಧಾರ್ಮಿಕ ಸಮನ್ವಯತೆಯ ಪರಂಪರೆಗೂ ಅನ್ವಯಿಸುತ್ತದೆ. ಸಮಾನತೆ, ಸಮನ್ವಯತೆ ಹಾದಿಯನ್ನು ಸಿದ್ಧಮಾಡಿಕೊಟ್ಟ ತಾತಯ್ಯನವರ ರಚನೆಗಳ ಬಗೆಗೆ ಇನ್ನೂ ಹೆಚ್ಚಿನ ಬೆಳಕು ಚೆಲ್ಲಬೇಕಾದ ಅನಿವಾರ್ಯ ಅಗತ್ಯ ಸನ್ನಿವೇಶ ಈಗಿದೆ ಎನ್ನಿಸುತ್ತಿದೆ.</p>.<p>(ನಾರೇಯಣರ ಸ್ಮರಣಾರ್ಥ ಜೂನ್ 6ರಂದು ಕೈವಾರದಲ್ಲಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ನಡೆಯಲಿದೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಮಾಜದ ಅಂಕುಡೊಂಕುಗಳಿಗೆ ಭಕ್ತಿಯ ಖಚಿತ ತಳಹದಿಯ ಮೇಲೆ ಪರಿಣಾಮಕಾರಿ ಪರಿಹಾರಗಳನ್ನು ಕಾಣಿಸಿದವರು, ಆ ಮೂಲಕ ಜನಮಾನಸದಲ್ಲಿ ಉಳಿದವರು ಕೈವಾರ ನಾರೇಯಣರು.<br /> <br /> ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ ಹುಟ್ಟಿ ಕೈವಾರದಲ್ಲಿಯೇ ಜೀವಸಮಾಧಿಯಾದ (1730-1840) ನಾರೇಯಣರು ಬಳೆ ಮಾರಾಟದ ವೃತ್ತಿಯವರು. ಮಲ್ಲಾರ ಹೊತ್ತು ಹಳ್ಳಿ ಹಳ್ಳಿ ಸುತ್ತಿ ಮುತ್ತೈದೆಯರಿಗೆ ಬಳೆ ತೊಡಿಸುವುದು ಅವರ ಕಾಯಕ.<br /> <br /> ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಎದುರಾದ ಅನೇಕ ಘಟನೆಗಳ ನಂತರ ಅಧ್ಯಾತ್ಮದತ್ತ ಹೊರಳಿದ ನಾರೇಯಣರು ನಾನಾವಿಧಗಳಲ್ಲಿ ಭಕ್ತಿ ಪ್ರಕಟ ಮಾಡಿಕೊಂಡು ತಮ್ಮ ಹಾದಿಯನ್ನು ಪಕ್ವಗೊಳಿಸಿಕೊಂಡು, ತಾವು ಬದುಕುವ ಸಮಾಜಕ್ಕೂ ಒಂದು ಮಾರ್ಗವನ್ನು ಅಣಿಗೊಳಿಸಿಕೊಟ್ಟ ಮಾನವತಾವಾದಿ.<br /> <br /> ಈ ನೆಲದ ಸಾಮಾಜಿಕ ತಾರತಮ್ಯ, ಲೋಪದೋಷಗಳನ್ನು ಅವರು ತಮ್ಮ ರಚನೆಗಳಲ್ಲಿ ಬಿಂಬಿಸುತ್ತಾರೆ. ಎಲ್ಲಾ ಮತಗಳ ಡಂಭಾಚಾರಗಳನ್ನು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ವಿಡಂಬಿಸುತ್ತಾರೆ. ಆ ಮತ ಈ ಮತ ಎಂದು ಕಿತ್ತಾಡುವ ಸಮಾಜದಲ್ಲಿ, ನಾರೇಯಣರು ಯಾವುದೇ ಪರಂಪರೆಗಳಿಗೂ ಕಟ್ಟುಬಿದ್ದವರಲ್ಲ.<br /> <br /> `ಜಾತಿಯಲ್ಲಿ ಕೀಳಾದ ಜನರ್ಯಾರೂ ಇಲ್ಲ/ ಜಾತಿ ವಿಜಾತಿ ಭೇದ ತರವಲ್ಲ/ ಎಲ್ಲರೊಂದೇ ಜಾತಿ ಮತ್ತೆ ಇಲ್ಲವಯ್ಯ/ ನಾದ ಬ್ರಹ್ಮಾನಂದ ನಾರೇಯಣ~ ಎನ್ನುವುದು ಜಾತಿ ಕುರಿತು ನಾರೇಯಣರ ಖಚಿತ ನಿಲುವು.<br /> <br /> ಆಚಾರ ವಿಚಾರಗಳ ಬಗ್ಗೆ ತಮ್ಮ ರಚನೆಗಳಲ್ಲಿ ವಿವರಗಳನ್ನು ನೀಡುವ ಅವರು ಅವುಗಳಿಂದಾಗುವ ತಪ್ಪುಒಪ್ಪುಗಳನ್ನು ಹೇಳಲು ಜನಸಾಮಾನ್ಯರ ದೈನಂದಿನ ಮಾತುಗಳನ್ನೇ ಬಳಸುತ್ತಾರೆ. ಆದರೆ ಆಡುನುಡಿಯಲ್ಲೂ ಸೂಕ್ಷ್ಮ ಒಳನೋಟಗಳಿರುವುದು ನಾರೇಯಣರ ರಚನೆಗಳ ವೈಶಿಷ್ಟ್ಯ.<br /> <br /> ತಮ್ಮೆಲ್ಲರ ನೋವುಗಳಿಗೆ ಸಾಂತ್ವನ ಹೇಳುವ, ಬದುಕಿಗೆ ಧೈರ್ಯ ತುಂಬುವ ನಾರೇಯಣರು ಅಸಹಾಯಕ - ಗ್ರಾಮೀಣ ಜನರ ಪಾಲಿಗೆ ಪ್ರೀತಿಯರಿಗೆ ತಾತಯ್ಯ. <br /> <br /> ದೀನದಲಿತರ ಕೊರಳಾಗಿದ್ದ ತಾತಯ್ಯನವರು- ಜಾತಿ, ಪುರೋಹಿತವರ್ಗ, ರಾಜಕಾರಣ, ಅಧಿಕಾರಶಾಹಿ, ರಾಜ್ಯಾಡಳಿತ ಹುಳುಕುಗಳು, ರೈತಾಪಿ ಜನರ ಬವಣೆ ಸೇರಿದಂತೆ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ತಮ್ಮ ರಚನೆಗಳಲ್ಲಿ ಮಾಡಿದರು. ಪ್ರತಿಯೊಂದು ವಿಚಾರಕ್ಕೆ ತಮ್ಮ ಪರಿಹಾರವನ್ನೂ ಸೂಚಿಸಿದರು.<br /> <br /> ಅಧ್ಯಾತ್ಮದ ಜೊತೆಗೇ ಆತ್ಮವಿಮರ್ಶೆಯೂ ಬೇಕು ಎನ್ನುವುದು ಅವರ ನಿಲುವು.ಅವರು ತಮ್ಮ ಚಿಂತನೆಗಳನ್ನು ಪ್ರಕಟಿಸಲು ಕೀರ್ತನೆ, ವಚನ, ತತ್ವಪದ ಶತಕ, ಕೋಲಾಟಪದ, ಯಾಲಾಪ- ಹೀಗೆ, ಅನೇಕ ಪ್ರಕಾರಗಳನ್ನು ಬಳಸಿಕೊಂಡರು. <br /> <br /> ತೆಲುಗು ಭಾಷೆ ಪರಿಸರದಲ್ಲಿದ್ದು ತೆಲುಗು, ಕನ್ನಡ ಹಾಗೂ ತೆಲುಗನ್ನಡಗಳಲ್ಲಿ ಬರೆದ ಅವರು, ತಾವು ಬರೆದಿದ್ದನ್ನು ಜನರಿಗೆ ಅರ್ಥ ಮಾಡಿಸಬೇಕೆನ್ನುವ ಹೊತ್ತಿನಲ್ಲಿ ಯಾವುದೇ ಭಾಷೆಯ ಮಡಿ ಮೈಲಿಗೆಯನ್ನು ಪಾಲಿಸಲಿಲ್ಲ.<br /> <br /> ಜಾತಿ ಪದ್ಧತಿಯನ್ನು ಖಂಡಿಸುವಾಗ ಅವರು ಹೇಳುತ್ತಾರೆ:<br /> `ಉಚ್ಚೆಯ ದ್ವಾರದೊಳು ತೂರಿ ಬಂದವೇ ಈ ನರರು/ ಉತ್ತಮ ಕುಲದವರು ಯಾರಿಲ್ಲವಿಲ್ಲಿ/ ಉತ್ತಮ ಕುಲವೆಂಬುದು ಬರಿ ಸುಳ್ಳು/ ನಾದ ಬ್ರಹ್ಮಾನಂದ ನಾರೇಯಣ ಕವಿ~.<br /> <br /> ಎರಡೂ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಮೆರೆದ ನಾರೇಯಣರು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯುವಾಗಲೂ ಸಾಹಿತ್ಯಕ ಮೌಲ್ಯಗಳನ್ನು ಕಾಪಾಡಿಕೊಂಡು ಬಂದರು. ಆವರೆಗಿನ ಕೆಲವು ಕಟ್ಟುಪಾಡುಗಳನ್ನು ಕಿತ್ತೆಸೆದರು. ಎಂದೂ ಮಾಸದ ಮೌಲಿಕ ಅಂಶಗಳನ್ನು ತಮ್ಮ ರಚನೆಗಳಲ್ಲಿ ಅಳವಡಿಸಿಕೊಂಡರು. ಅವರ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತ.<br /> <br /> ಈಗಿನ ಕೃಷಿಕ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಾರೇಯಣರು `ಬೆಳೆ ಬೆಳೆದರೂ ಬರ/ ಬೆಳೆ ಒಣಗಿದರು ಬರ~ ಎನ್ನುವ ಮೂಲಕ ಗ್ರಹಿಸಿದ್ದರು. ಮುಂದೆ ಜನತೆ ಅನುಭವಿಸಬೇಕಾದ ಆತಂಕ, ಸಂಕಷ್ಟ, ಅದನ್ನು ಮೀರಿ ನಿಲ್ಲುವ ಬಗೆಯನ್ನು `ಕಾಲಜ್ಞಾನ~ದಲ್ಲಿ ವಿವರಿಸಿದ ತಾತಯ್ಯನವರು ಜನರೆದೆಯಲ್ಲಿ ಜೀವಂತವಾಗಿರುವುದು ಸಹಜ ಎನಿಸುತ್ತದೆ.<br /> <br /> ಯೋಗಿ ಹಾಗೂ ಸಮಾಜ ಪರಿವರ್ತಕ - ಈ ಎರಡೂ ವ್ಯಕ್ತಿತ್ವ ಹೊಂದಿದ್ದ ನಾರೇಯಣರು ಸದಾ ಜೀವಪರವಾದ ಧೋರಣೆ ಇಟ್ಟುಕೊಂಡಿದ್ದು, ಯಾವುದೇ ವಿಚಾರಗಳ ಬಗ್ಗೆ ದ್ವಂದ್ವ ನಿಲುವು ತಾಳದೆ ಹೇಳಬೇಕಾದ್ದನ್ನು ನೇರವಾಗಿ ತೀಕ್ಷ್ಣವಾಗಿ ಹೇಳಿದರು.<br /> <br /> ಒಂದೊಂದು ಸಲ ಓದಿದಾಗಲೂ ಭಿನ್ನ ಒಳನೋಟಗಳನ್ನು ಹೊರಹೊಮ್ಮಿಸುವ ತಾತಯ್ಯನವರ ರಚನೆಗಳು ಅನನ್ಯವಾದರೂ ಅವುಗಳಿಗೆ ಸಾಹಿತ್ಯಕವಾಗಿ ಸಹಜವಾಗಿ ಸಿಗಬೇಕಿದ್ದ ನ್ಯಾಯ ಇನ್ನೂ ಸಿಕ್ಕಿಲ್ಲ. <br /> <br /> ಇದು ನಾರೇಯಣರು ನಿರೂಪಿಸಿರುವ ಧಾರ್ಮಿಕ ಸಮನ್ವಯತೆಯ ಪರಂಪರೆಗೂ ಅನ್ವಯಿಸುತ್ತದೆ. ಸಮಾನತೆ, ಸಮನ್ವಯತೆ ಹಾದಿಯನ್ನು ಸಿದ್ಧಮಾಡಿಕೊಟ್ಟ ತಾತಯ್ಯನವರ ರಚನೆಗಳ ಬಗೆಗೆ ಇನ್ನೂ ಹೆಚ್ಚಿನ ಬೆಳಕು ಚೆಲ್ಲಬೇಕಾದ ಅನಿವಾರ್ಯ ಅಗತ್ಯ ಸನ್ನಿವೇಶ ಈಗಿದೆ ಎನ್ನಿಸುತ್ತಿದೆ.</p>.<p>(ನಾರೇಯಣರ ಸ್ಮರಣಾರ್ಥ ಜೂನ್ 6ರಂದು ಕೈವಾರದಲ್ಲಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ನಡೆಯಲಿದೆ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>