<p><strong>ಚಿತ್ರದುರ್ಗ:</strong> ಹುಬ್ಬಳ್ಳಿಯ ಕಿಮ್ಸ ಕಾಲೇಜು ತಂಡದವರು ಇಲ್ಲಿ ಮುಕ್ತಾಯವಾದ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಕೊಕ್ಕೊ ಟೂರ್ನಿಯ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. <br /> <br /> ನಗರದ ಎಸ್ಜೆಎಂ ದಂತ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಅವರಣದಲ್ಲಿ ಶನಿವಾರ ಮತ್ತು ಭಾನುವಾರ ಪಂದ್ಯಗಳು ನಡೆದವು. <br /> <br /> ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಹುಬ್ಬಳಿಯ ಕಿಮ್ಸ ಕಾಲೇಜು ತಂಡ 10-9 ಪಾಯಿಂಟ್ಗಳಿಂದ ದಾವಣಗೆರೆಯ ಜೆಜೆಎಂ ಕಾಲೇಜಿನ ತಂಡವನ್ನು ಮಣಿಸಿ ಒಂದು ಪಾಯಿಂಟ್ನಿಂದ ರೋಚಕ ಗೆಲುವು ಸಾಧಿಸಿತು. <br /> <br /> <strong>ಡಿಜಿಎಂಎಎ ಕಾಲೇಜು ತಂಡ ಚಾಂಪಿಯನ್: </strong>ಇದೇ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಗದಗ ಡಿಜಿಎಂಎಎ ಕಾಲೇಜು ತಂಡ 9-6 ಪಾಯಿಂಟ್ಗಳಿಂದ ದಾವಣಗೆರೆ ಎಸ್ಎಸ್ಎಲ್ಎಂ ಕಾಲೇಜು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. <br /> <br /> ನಂತರ ನಡೆದ ಸಮಾರಂಭದಲ್ಲಿ ಎಸ್ಜೆಎಂ ದಂತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಆರ್. ಗೌರಮ್ಮ ಪ್ರಶಸ್ತಿ ವಿತರಿಸಿದರು. ಡಾ.ರಘುನಾಥ್ ರೆಡ್ಡಿ, ಪೂಜಾರ್, ಕುಮಾರಸ್ವಾಮಿ, ಎಸ್.ಕೆ. ಹರ್ತಿ ಉಪಸ್ಥಿತರಿದ್ದರು. ಬಿ.ಜಿ. ನಾಗರಾಜ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ಹುಬ್ಬಳ್ಳಿಯ ಕಿಮ್ಸ ಕಾಲೇಜು ತಂಡದವರು ಇಲ್ಲಿ ಮುಕ್ತಾಯವಾದ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಕೊಕ್ಕೊ ಟೂರ್ನಿಯ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. <br /> <br /> ನಗರದ ಎಸ್ಜೆಎಂ ದಂತ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಅವರಣದಲ್ಲಿ ಶನಿವಾರ ಮತ್ತು ಭಾನುವಾರ ಪಂದ್ಯಗಳು ನಡೆದವು. <br /> <br /> ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಹುಬ್ಬಳಿಯ ಕಿಮ್ಸ ಕಾಲೇಜು ತಂಡ 10-9 ಪಾಯಿಂಟ್ಗಳಿಂದ ದಾವಣಗೆರೆಯ ಜೆಜೆಎಂ ಕಾಲೇಜಿನ ತಂಡವನ್ನು ಮಣಿಸಿ ಒಂದು ಪಾಯಿಂಟ್ನಿಂದ ರೋಚಕ ಗೆಲುವು ಸಾಧಿಸಿತು. <br /> <br /> <strong>ಡಿಜಿಎಂಎಎ ಕಾಲೇಜು ತಂಡ ಚಾಂಪಿಯನ್: </strong>ಇದೇ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಗದಗ ಡಿಜಿಎಂಎಎ ಕಾಲೇಜು ತಂಡ 9-6 ಪಾಯಿಂಟ್ಗಳಿಂದ ದಾವಣಗೆರೆ ಎಸ್ಎಸ್ಎಲ್ಎಂ ಕಾಲೇಜು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. <br /> <br /> ನಂತರ ನಡೆದ ಸಮಾರಂಭದಲ್ಲಿ ಎಸ್ಜೆಎಂ ದಂತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಆರ್. ಗೌರಮ್ಮ ಪ್ರಶಸ್ತಿ ವಿತರಿಸಿದರು. ಡಾ.ರಘುನಾಥ್ ರೆಡ್ಡಿ, ಪೂಜಾರ್, ಕುಮಾರಸ್ವಾಮಿ, ಎಸ್.ಕೆ. ಹರ್ತಿ ಉಪಸ್ಥಿತರಿದ್ದರು. ಬಿ.ಜಿ. ನಾಗರಾಜ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>