<p><strong>ಹಾಸನ:</strong> ಕುಡಿಯುವ ಕೊಳವೆ ಬಾವಿಯ ಸಮೀಪ ನಗರದ ಕಸವನ್ನು ತಂದು ಸುರಿಯುತ್ತಿರುವುದನ್ನು ವಿರೋಧಿಸಿ ಇಲ್ಲಿನ ಸಿದ್ದೇಶ್ವರ ನಗರದ ನಾಗರಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ನಗರದಿಂದ ಕಸ ಹೊತ್ತು ತರುತ್ತಿದ್ದ ಟ್ರ್ಯಾಕ್ಟರ್ಗಳನ್ನು ತಡೆದು ನಿಲ್ಲಿಸುವ ಮೂಲಕ ಈ ಭಾಗದಲ್ಲಿ ಕಸ ಚೆಲ್ಲುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು.<br /> <br /> ಪ್ರತಿನಿತ್ಯ ನಗರ ಪ್ರದೇಶದಿಂದ ಬರುವ ಲೋಡುಗಟ್ಟಲೆ ಕಸವನ್ನು ಗೊರೂರು ರಸ್ತೆ ಸಮೀಪದ ಸಿದ್ದೇಶ್ವರ ನಗರದ ರಸ್ತೆಬದಿಯಲ್ಲೇ ಸುರಿಯಲಾಗುತ್ತಿದೆ. ಕಸ ಸುರಿಯಲು ಸಿದ್ದೇಶ್ವರ ನಗರದ ಪಕ್ಕದಲ್ಲೇ ಸಾಕಷ್ಟು ಜಾಗವಿದೆ ಆದರೆ ನಗರಸಭೆ ಸಿಬ್ಬಂದಿ ರಸ್ತೆ ಪಕ್ಕದಲ್ಲೇ ಕಸದ ಸುರಿಯುತಿದ್ದಾರೆ. ಈ ಕಸದಲ್ಲಿ ಗಾಜಿನ ಪದಾರ್ಥಗಳು, ವಿವಿಧ ಆಸ್ಪತ್ರೆಗಳಿಂದ ಬಂದ ಸಿರಿಂಜ್ಗಳು, ಮತ್ತಿತರ ಅಪಾಯಕಾರಿ ವಸ್ತುಗಳಿರುವುದರಿಂದ ಈ ರಸ್ತೆಯಲ್ಲಿ ಒಡಾಡಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ಹೊಗುವ ಮಕ್ಕಳು ಹಲವು ತೊಂದರೆ ಎದುರಿಸುವಂತಾಗಿದೆ.ಇಲ್ಲಿ ಸುರಿದ ಕಸಕ್ಕೆ ಬೆಂಕಿ ಹಾಕುವುದರಿಂದ ಅದರ ಹೊಗೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. <br /> <br /> ‘ಸಿದ್ದೇಶ್ವರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಇಲ್ಲಿಯೇ ಇದೆ. ಅದರ ಸುತ್ತ ಕಸದ ರಾಶಿ ಆವರಿಸಿರುವುದರಿಂದ ಕುಡಿಯುವ ನೀರು ಕಲುಷಿತಗೊಳ್ಳುವ ಭೀತಿ ಉಂಟಾಗಿದೆ. ಈ ಭಾಗದ ಸಮಸ್ಯೆ ಬಗ್ಗೆ ಗಮನಹರಿಸುವಂತೆ ಶಾಸಕ ಎಚ್.ಎಸ್. ಪ್ರಕಾಶ್ ಅವರನ್ನು ಹಲವುಬಾರಿ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.<br /> <br /> ‘ನಗರದ ತ್ಯಾಜವಿ ಲೇವಾರಿಗೆ ಸರ್ಕಾರ ಅನುದಾನ ನೀಡುತ್ತಿದೆ. ಅದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡು ನಮಗೆ ತೊಂದರೆಯಾಗದ ರೀತಿಯಲ್ಲಿ ಕಸ ನಿರ್ವಹಣೆ ಮಾಡಬೇಕು. ನಗರಸಭೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದೆ ನಗರಸಭೆಯ ಮುಂದೆಯೇ ಕಸದ ರಾಶಿ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಕುಡಿಯುವ ಕೊಳವೆ ಬಾವಿಯ ಸಮೀಪ ನಗರದ ಕಸವನ್ನು ತಂದು ಸುರಿಯುತ್ತಿರುವುದನ್ನು ವಿರೋಧಿಸಿ ಇಲ್ಲಿನ ಸಿದ್ದೇಶ್ವರ ನಗರದ ನಾಗರಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ನಗರದಿಂದ ಕಸ ಹೊತ್ತು ತರುತ್ತಿದ್ದ ಟ್ರ್ಯಾಕ್ಟರ್ಗಳನ್ನು ತಡೆದು ನಿಲ್ಲಿಸುವ ಮೂಲಕ ಈ ಭಾಗದಲ್ಲಿ ಕಸ ಚೆಲ್ಲುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು.<br /> <br /> ಪ್ರತಿನಿತ್ಯ ನಗರ ಪ್ರದೇಶದಿಂದ ಬರುವ ಲೋಡುಗಟ್ಟಲೆ ಕಸವನ್ನು ಗೊರೂರು ರಸ್ತೆ ಸಮೀಪದ ಸಿದ್ದೇಶ್ವರ ನಗರದ ರಸ್ತೆಬದಿಯಲ್ಲೇ ಸುರಿಯಲಾಗುತ್ತಿದೆ. ಕಸ ಸುರಿಯಲು ಸಿದ್ದೇಶ್ವರ ನಗರದ ಪಕ್ಕದಲ್ಲೇ ಸಾಕಷ್ಟು ಜಾಗವಿದೆ ಆದರೆ ನಗರಸಭೆ ಸಿಬ್ಬಂದಿ ರಸ್ತೆ ಪಕ್ಕದಲ್ಲೇ ಕಸದ ಸುರಿಯುತಿದ್ದಾರೆ. ಈ ಕಸದಲ್ಲಿ ಗಾಜಿನ ಪದಾರ್ಥಗಳು, ವಿವಿಧ ಆಸ್ಪತ್ರೆಗಳಿಂದ ಬಂದ ಸಿರಿಂಜ್ಗಳು, ಮತ್ತಿತರ ಅಪಾಯಕಾರಿ ವಸ್ತುಗಳಿರುವುದರಿಂದ ಈ ರಸ್ತೆಯಲ್ಲಿ ಒಡಾಡಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ಹೊಗುವ ಮಕ್ಕಳು ಹಲವು ತೊಂದರೆ ಎದುರಿಸುವಂತಾಗಿದೆ.ಇಲ್ಲಿ ಸುರಿದ ಕಸಕ್ಕೆ ಬೆಂಕಿ ಹಾಕುವುದರಿಂದ ಅದರ ಹೊಗೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. <br /> <br /> ‘ಸಿದ್ದೇಶ್ವರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಇಲ್ಲಿಯೇ ಇದೆ. ಅದರ ಸುತ್ತ ಕಸದ ರಾಶಿ ಆವರಿಸಿರುವುದರಿಂದ ಕುಡಿಯುವ ನೀರು ಕಲುಷಿತಗೊಳ್ಳುವ ಭೀತಿ ಉಂಟಾಗಿದೆ. ಈ ಭಾಗದ ಸಮಸ್ಯೆ ಬಗ್ಗೆ ಗಮನಹರಿಸುವಂತೆ ಶಾಸಕ ಎಚ್.ಎಸ್. ಪ್ರಕಾಶ್ ಅವರನ್ನು ಹಲವುಬಾರಿ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.<br /> <br /> ‘ನಗರದ ತ್ಯಾಜವಿ ಲೇವಾರಿಗೆ ಸರ್ಕಾರ ಅನುದಾನ ನೀಡುತ್ತಿದೆ. ಅದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡು ನಮಗೆ ತೊಂದರೆಯಾಗದ ರೀತಿಯಲ್ಲಿ ಕಸ ನಿರ್ವಹಣೆ ಮಾಡಬೇಕು. ನಗರಸಭೆ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದೆ ನಗರಸಭೆಯ ಮುಂದೆಯೇ ಕಸದ ರಾಶಿ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>