<p><strong>ಬೆಂಗಳೂರು: </strong>ಭಾರತಿನಗರ ನಿವಾಸಿಗಳ ಸಂಘದಿಂದ ಕಾಕ್ಸ್ಟೌನ್ ಕೊಳೆಗೇರಿ ನಿವಾಸಿಗಳಿಗೆ ಸೀರೆಯನ್ನು ವಿತರಿಸಲಾಯಿತು.<br /> <br /> ಸಂಘದ ವತಿಯಿಂದ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯೆ ತಾರಾ ಅವರು ವಿತರಿಸಿ ಮಾತನಾಡಿ, `ದೀಪಾವಳಿ ಎಲ್ಲರ ಬದುಕಿನಲ್ಲಿಯೂ ಬೆಳಗನ್ನು ತರಲಿ. ದೀಪಾವಳಿ ಹಬ್ಬದ ಪ್ರಯುಕ್ತ ಭಾರತಿನಗರ ನಿವಾಸಿಗಳ ಸಂಘವು ಈ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ~ ಎಂದರು.<br /> <br /> `ದೀಪಾವಳಿ ಹಬ್ಬದಲ್ಲಿ ಪಟಾಕಿಯನ್ನು ಹಾರಿಸದೆ, ದೀಪದಿಂದ ದೀಪವನ್ನು ಹಚ್ಚುವ ಮೂಲಕ ಆಚರಿಸಿ~ ಎಂದು ಕಿವಿ ಮಾತು ಹೇಳಿದರು.<br /> <br /> ಸಂಘದ ಅಧ್ಯಕ್ಷ ಎನ್.ಎಸ್.ರವಿ ಮಾತನಾಡಿ, `ಹತ್ತು ವರ್ಷಗಳಿಂದ ಅಗತ್ಯವಿರುವವರಿಗೆ ಏನಾದರೂ ಕೊಡುವುದು ನಮ್ಮ ಪದ್ಧತಿಯಾಗಿದೆ. ಕಳೆದ ವರ್ಷ ಮಕ್ಕಳಿಗೆ ಬಟ್ಟೆ, ಸ್ವೆಟರ್ ವಿತರಣೆ ಮಾಡಲಾಗಿತ್ತು. ಈ ವರ್ಷ ದೀಪಾವಳಿ ಹಬ್ಬವು ಬಂದಿದ್ದರಿಂದ ಕೊಳೆಗೇರಿಯ ಒಟ್ಟು ಮುನ್ನೂರು ಮಹಿಳೆಯರಿಗೆ ಒಟ್ಟು ಸೀರೆಯನ್ನು ವಿತರಿಸಲಾಗಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಭಾರತಿನಗರ ನಿವಾಸಿಗಳ ಸಂಘದಿಂದ ಕಾಕ್ಸ್ಟೌನ್ ಕೊಳೆಗೇರಿ ನಿವಾಸಿಗಳಿಗೆ ಸೀರೆಯನ್ನು ವಿತರಿಸಲಾಯಿತು.<br /> <br /> ಸಂಘದ ವತಿಯಿಂದ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯೆ ತಾರಾ ಅವರು ವಿತರಿಸಿ ಮಾತನಾಡಿ, `ದೀಪಾವಳಿ ಎಲ್ಲರ ಬದುಕಿನಲ್ಲಿಯೂ ಬೆಳಗನ್ನು ತರಲಿ. ದೀಪಾವಳಿ ಹಬ್ಬದ ಪ್ರಯುಕ್ತ ಭಾರತಿನಗರ ನಿವಾಸಿಗಳ ಸಂಘವು ಈ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ~ ಎಂದರು.<br /> <br /> `ದೀಪಾವಳಿ ಹಬ್ಬದಲ್ಲಿ ಪಟಾಕಿಯನ್ನು ಹಾರಿಸದೆ, ದೀಪದಿಂದ ದೀಪವನ್ನು ಹಚ್ಚುವ ಮೂಲಕ ಆಚರಿಸಿ~ ಎಂದು ಕಿವಿ ಮಾತು ಹೇಳಿದರು.<br /> <br /> ಸಂಘದ ಅಧ್ಯಕ್ಷ ಎನ್.ಎಸ್.ರವಿ ಮಾತನಾಡಿ, `ಹತ್ತು ವರ್ಷಗಳಿಂದ ಅಗತ್ಯವಿರುವವರಿಗೆ ಏನಾದರೂ ಕೊಡುವುದು ನಮ್ಮ ಪದ್ಧತಿಯಾಗಿದೆ. ಕಳೆದ ವರ್ಷ ಮಕ್ಕಳಿಗೆ ಬಟ್ಟೆ, ಸ್ವೆಟರ್ ವಿತರಣೆ ಮಾಡಲಾಗಿತ್ತು. ಈ ವರ್ಷ ದೀಪಾವಳಿ ಹಬ್ಬವು ಬಂದಿದ್ದರಿಂದ ಕೊಳೆಗೇರಿಯ ಒಟ್ಟು ಮುನ್ನೂರು ಮಹಿಳೆಯರಿಗೆ ಒಟ್ಟು ಸೀರೆಯನ್ನು ವಿತರಿಸಲಾಗಿದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>