<p>ಕೋಲಾರ: ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಕಾವು ಇಳಿದ ಬಳಿಕ ಸಂಕ್ರಾಂತಿ ಹಬ್ಬ ಎದುರಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಸಂಕ್ರಾಂತಿ ಜಿಲ್ಲೆಯ ರೈತರಿಗೆ ಸಮಾಧಾನ ತಂದಿದೆ.<br /> <br /> ಎರಡು ವರ್ಷದಿಂದ ಅಕಾಲಿಕ ಮಳೆ ಪರಿಣಾಮ ನಲುಗಿದ್ದ ರೈತರಿಗೆ ಈ ಬಾರಿಯೂ ಮುಂಗಾರು ಅಸಮರ್ಪಕವಾಗಿ ಸುರಿದು ಆತಂಕ ಮೂಡಿಸಿತ್ತು. ಆದರೆ ಅಂಥ ಸನ್ನಿವೇಶದಲ್ಲೂ ರಾಗಿ ರೈತರನ್ನು ಕೈ ಹಿಡಿದಿದೆ. ಸಮೃದ್ಧ ಇಳುವರಿಯೂ ದೊರಕಿದೆ. <br /> <br /> ತಡವಾಗಿ ಬಿತ್ತನೆ ಮಾಡಿದವರಿಗೂ ನಷ್ಟವಾಗಿಲ್ಲ. ನೆಲಗಡಲೆ ಬೆಳೆದವರಿಗೂ ನಷ್ಟವಾಗಿಲ್ಲ. ಅಂಗಮಾರಿಯ ಆತಂಕ ಎದುರಿಸಿದ್ದ ಆಲೂಗಡ್ಡೆ ಬೆಳೆಯೂ ಕಾಪಾಡಿದೆ ಎಂಬುದು ಹಲವು ರೈತರ ಅಭಿಪ್ರಾಯ.<br /> <br /> ಅಂತರ್ಜಲ ಮಟ್ಟ ಕುಸಿದಿರುವುದು ಮತ್ತು ಸಮರ್ಪಕ ಬೆಲೆ ದೊರಕದಿರುವುದರ ನಡುವೆಯೂ ರೈತರಲ್ಲಿ ಆಶಾವಾದ ಕಡಿಮೆಯಾಗಿಲ್ಲ. ಟ್ಯಾಂಕರ್ಗಳ ಮೂಲಕ ಟೊಮೆಟೊ ತೋಟಗಳಿಗೆ ನೀರು ಹರಿಸಿ ಕೆಲವರು ತೋಟಗಾರಿಕೆ ಕೃಷಿ ನಡೆಸಿದ್ದಾರೆ.<br /> <br /> ದುಬಾರಿ: ಈ ಬಾರಿ ಹಬ್ಬದ ಸಾಮಗ್ರಿ ದುಬಾರಿಯಾಗಿವೆ. ನಗರ, ಪಟ್ಟಣಗಳ ಮಾರುಕಟ್ಟೆಗಳಲ್ಲಿ ಕಬ್ಬು, ನೆಲಗಡಲೆ, ಅವರೆಕಾಯಿ ಹಾಗೂ ಸಿದ್ಧಪಡಿಸಿದ ಎಳ್ಳು-ಬೆಲ್ಲದ ಪ್ಯಾಕೆಟ್ಗಳ ಮಾರಾಟ ಶನಿವಾರ ಭರದಿಂದ ನಡೆದಿತ್ತು. <br /> <br /> ಒಂದು ಜಲ್ಲೆ ಕಬ್ಬಿಗೆ 20ರಿಂದ 25 ರೂಪಾಯಿ. ಅವರೆಕಾಯಿ ಕೆ.ಜಿ.ಗೆ 20-25, ಗೆಣಸು ಕೆ.ಜಿ.ಗೆ 20, ನೆಲಗಡಲೆ ಲೀಟರ್ಗೆ 30, ಎಳ್ಳು-ಬೆಲ್ಲ ಕೆ.ಜಿ.ಗೆ 100 ರೂಪಾಯಿ. ಚೆಂಡು ಹೂವು ಕೆ.ಜಿ.ಗೆ 50 ರೂಪಾಯಿ, ಬಾಳೆ ಹಣ್ಣು 25-30 ರೂಪಾಯಿ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಕಾವು ಇಳಿದ ಬಳಿಕ ಸಂಕ್ರಾಂತಿ ಹಬ್ಬ ಎದುರಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಸಂಕ್ರಾಂತಿ ಜಿಲ್ಲೆಯ ರೈತರಿಗೆ ಸಮಾಧಾನ ತಂದಿದೆ.<br /> <br /> ಎರಡು ವರ್ಷದಿಂದ ಅಕಾಲಿಕ ಮಳೆ ಪರಿಣಾಮ ನಲುಗಿದ್ದ ರೈತರಿಗೆ ಈ ಬಾರಿಯೂ ಮುಂಗಾರು ಅಸಮರ್ಪಕವಾಗಿ ಸುರಿದು ಆತಂಕ ಮೂಡಿಸಿತ್ತು. ಆದರೆ ಅಂಥ ಸನ್ನಿವೇಶದಲ್ಲೂ ರಾಗಿ ರೈತರನ್ನು ಕೈ ಹಿಡಿದಿದೆ. ಸಮೃದ್ಧ ಇಳುವರಿಯೂ ದೊರಕಿದೆ. <br /> <br /> ತಡವಾಗಿ ಬಿತ್ತನೆ ಮಾಡಿದವರಿಗೂ ನಷ್ಟವಾಗಿಲ್ಲ. ನೆಲಗಡಲೆ ಬೆಳೆದವರಿಗೂ ನಷ್ಟವಾಗಿಲ್ಲ. ಅಂಗಮಾರಿಯ ಆತಂಕ ಎದುರಿಸಿದ್ದ ಆಲೂಗಡ್ಡೆ ಬೆಳೆಯೂ ಕಾಪಾಡಿದೆ ಎಂಬುದು ಹಲವು ರೈತರ ಅಭಿಪ್ರಾಯ.<br /> <br /> ಅಂತರ್ಜಲ ಮಟ್ಟ ಕುಸಿದಿರುವುದು ಮತ್ತು ಸಮರ್ಪಕ ಬೆಲೆ ದೊರಕದಿರುವುದರ ನಡುವೆಯೂ ರೈತರಲ್ಲಿ ಆಶಾವಾದ ಕಡಿಮೆಯಾಗಿಲ್ಲ. ಟ್ಯಾಂಕರ್ಗಳ ಮೂಲಕ ಟೊಮೆಟೊ ತೋಟಗಳಿಗೆ ನೀರು ಹರಿಸಿ ಕೆಲವರು ತೋಟಗಾರಿಕೆ ಕೃಷಿ ನಡೆಸಿದ್ದಾರೆ.<br /> <br /> ದುಬಾರಿ: ಈ ಬಾರಿ ಹಬ್ಬದ ಸಾಮಗ್ರಿ ದುಬಾರಿಯಾಗಿವೆ. ನಗರ, ಪಟ್ಟಣಗಳ ಮಾರುಕಟ್ಟೆಗಳಲ್ಲಿ ಕಬ್ಬು, ನೆಲಗಡಲೆ, ಅವರೆಕಾಯಿ ಹಾಗೂ ಸಿದ್ಧಪಡಿಸಿದ ಎಳ್ಳು-ಬೆಲ್ಲದ ಪ್ಯಾಕೆಟ್ಗಳ ಮಾರಾಟ ಶನಿವಾರ ಭರದಿಂದ ನಡೆದಿತ್ತು. <br /> <br /> ಒಂದು ಜಲ್ಲೆ ಕಬ್ಬಿಗೆ 20ರಿಂದ 25 ರೂಪಾಯಿ. ಅವರೆಕಾಯಿ ಕೆ.ಜಿ.ಗೆ 20-25, ಗೆಣಸು ಕೆ.ಜಿ.ಗೆ 20, ನೆಲಗಡಲೆ ಲೀಟರ್ಗೆ 30, ಎಳ್ಳು-ಬೆಲ್ಲ ಕೆ.ಜಿ.ಗೆ 100 ರೂಪಾಯಿ. ಚೆಂಡು ಹೂವು ಕೆ.ಜಿ.ಗೆ 50 ರೂಪಾಯಿ, ಬಾಳೆ ಹಣ್ಣು 25-30 ರೂಪಾಯಿ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>