<p><strong>ಗಂಗಾವತಿ: </strong>ಗ್ರಾಂಥಿಕ ರೂಪದ ದಾಖಲೆಗಳಲ್ಲಿ ಕಳೆದು ಹೋದರೂ, ಜನಪದ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಹಲವು ತಲೆಮಾರುಗಳನ್ನು ಯಶಸ್ವಿಯಾಗಿ ದಾಟಿಕೊಂಡು ಬಂದ ಉತ್ತರ ಕರ್ನಾಟಕದ ವೀರ ಪುರುಷರ ಪಾತ್ರಗಳಲ್ಲಿ ಕುಮ್ಮಟದುರ್ಗದ ಕುಮಾರ ರಾಮನೂ ಒಬ್ಬ.<br /> <br /> ಕೇವಲ ಕುಮಾರರಾಮ ಎಂದರೆ ಸುಲಭವಾಗಿ ಯಾರ ಊಹೆಗೂ ನಿಲುಕದ ಪಾತ್ರ. ಆದರೆ ಕುಮಾರನ ಮುಂದೆ ‘ಗಂಡುಗಲಿ’ ಎಂಬ ಬಿರುದಾಂಕಿತ ವಿಶೇಷಣವೊಂದೇ ಸಾಕು. ಉತ್ತರ ಕರ್ನಾಟಕದ ಜನರ ಕಣ್ಣ ಮುಂದೆ 13ನೇ ಶತಮಾನದ ಸಾಂಸ್ಕೃತಿಕ ವೀರ ಪುರುಷನ ಪಾತ್ರವೊಂದು ಮಿಂಚಿಮರೆಯಾಗುತ್ತದೆ.<br /> <br /> ಗಂಗಾವತಿ ಸಮೀಪದಲ್ಲಿರುವ ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು 13ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಗಂಡುಗಲಿ ಕುಮಾರ ರಾಮ, ತನ್ನ ಶೌರ್ಯ, ತ್ಯಾಗ, ಜನಪರವಾದ ಆದರ್ಶ ಆಡಳಿತ, ಸಹೋದರತ್ವ ಮೊದಲಾದ ವಿಶೇಷಗಳಿಂದಲೇ ಇಂದಿಗೂ ಪ್ರಸಿದ್ಧಿ ಪಡೆದಿದ್ದಾನೆ.<br /> <br /> ಪ್ರತಿ ವರ್ಷ ಆಗಿ ಹುಣ್ಣಿಮೆ ಬಳಿಕ 8ನೇ ದಿನ (ಮೇ. 11ಸೋಮವಾರ) ರಾಮನ ಜಾತ್ರೆ ನಡೆಯುತ್ತದೆ. ಇಲ್ಲಿನ ಜಾತ್ರೆಯಲ್ಲಿ ಮಾಡಿದ ಅಕ್ಕಿಪಡಿ (ಅಕ್ಕಿ ಪಾಯಸ) ಹುಲುಗಿಗೆ ಒಯ್ದನಂತರವಷ್ಟೆ ಹುಲುಗಿ ಜಾತ್ರೆಗೆ ಶ್ರೀಕಾರ ಹಾಕುವ ಸಂಪ್ರದಾಯ ಏಳು ಶತಮಾನದಿಂದ ನಡೆದುಕೊಂಡು ಬಂದಿದೆ.<br /> <br /> ಕುಮ್ಮಟದದುರ್ಗದ ಕೋಟೆ ಅಥವಾ ಪಾಳು ಬಿದ್ದಿರುವ ದೇವಸ್ಥಾನದಲ್ಲಿರುವ ಕುಮಾರರಾಮ, ಹೋಲಿಕೆ ರಾಮ ಮತ್ತು ಇತರ 12 ಜನ ಸಹಚರರ ತಲೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಕ್ಕಿ ದೀಪ, ಬಲಿಪೂಜೆ, ನೀರಗೂಳಿ ತುಳಿಯುವ ಮೊದಲಾದ ಧಾರ್ಮಿಕ ಕಾರ್ಯ ನಡೆಯುತ್ತವೆ.<br /> <br /> ಕೊಪ್ಪಳ ಗಂಗಾವತಿ ಮಧ್ಯದ ಮುಖ್ಯರಸ್ತೆಯಿಂದ ಸುಮಾರು ನಾಲ್ಕು ಕಿ.ಮೀ. ಅಂತರದಲ್ಲಿರುವ ವಿಶಾಲ ತಳಹದಿ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ವಿಶೇಷವಾಗಿ ನಾಯಕ, ಬೇಡ ಜನಾಂಗದವರು ವಿವಿಧ ಜಿಲ್ಲೆಗಳಿಂದ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.<br /> <br /> ರಾಮನ ಐತಿಹಾಸಿಕ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಸಂಡೂರಿನ ಹೊಸಮಲಿ ದುರ್ಗವನ್ನು ಸಾಮ್ರಾಜ್ಯವನ್ನಾಗಿಸಿಕೊಂಡು 13ನೇ ಶತಮಾನದಲ್ಲಿ ಕಂಪಲಿರಾಯ ಆಳ್ವಿಕೆ ನಡೆಸುತ್ತಿದ್ದ. ಕಂಪಲಿರಾಯನ ಮಗನೇ ಈ ಕುಮಾರರಾಮ. ರಾಮ ಕುಮ್ಮಟದುರ್ಗ ವನ್ನು ಎರಡನೇ ರಾಜಧಾನಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದ.<br /> <br /> ಕಂಪಲಿರಾಯ ಮತ್ತು ಕುಮಾರರಾಮರು, ದೋರಸಮುದ್ರದ ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ದೇವಗಿರಿ ಸೇವಣರು ಮತ್ತು ಮಧುರೆ ಪಾಂಢ್ಯ ಅರಸರ ಸಮಕಾಲಿನರಾಗಿ ದಕ್ಷಿಣ ಭಾರತದಲ್ಲಿ ಹಿಂದು ಸಾಮ್ರಾಜ್ಯ ಸ್ಥಾಪಿಸಿದರು ಎಂಬ ಉಲ್ಲೇಖವಿದೆ.<br /> <br /> ಕ್ರಿ.ಶ. 1206ರಲ್ಲಿ ನವದೆಹಲಿಯಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಳಿಕ ಮೊದಲ ಬಾರಿಗೆ ಅವನಿಗೆ ದಕ್ಷಿಣ ಪ್ರಾಂತ್ಯಗಳತ್ತ ಕಣ್ಣುಬಿತ್ತು. ಮಂತ್ರಿ ಮಲ್ಲಿಕಾಪರ್ ನೇತೃತ್ವದಲ್ಲಿನ ಮೊಘಲ್ರ ಸೈನ್ಯವನ್ನು ಕುಮಾರರಾಮ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಮಾಹಿತಿ ಇದೆ.<br /> <br /> ರಾಮನಕಾಲದಲ್ಲಿ ಕಾವ್ಯ ಸಂಸ್ಕೃತಿ, ಜನಪದ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುವುದನ್ನು ಇತಿಹಾಸಕಾರರು ಒಪ್ಪುತ್ತಾರೆ. ಅಗಾಧಸಾಧನೆ ಇಲ್ಲವಾದರೂ, ಸಂಪನ್ನ, ಸದ್ಗುಣಗಳಿಂದಾಗಿಯೇ ಕುಮಾರರಾಮ ಬೇರೆ ಅರಸರಿಗಿಂತ ವಿಭಿನ್ನಸ್ಥಾನ ಪಡೆದು ಜನಮಾನಸದಲ್ಲಿ ಇಂದಿಗೂ ಶಾಶ್ವತವಾಗಿ ಉಳಿದಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಗ್ರಾಂಥಿಕ ರೂಪದ ದಾಖಲೆಗಳಲ್ಲಿ ಕಳೆದು ಹೋದರೂ, ಜನಪದ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಹಲವು ತಲೆಮಾರುಗಳನ್ನು ಯಶಸ್ವಿಯಾಗಿ ದಾಟಿಕೊಂಡು ಬಂದ ಉತ್ತರ ಕರ್ನಾಟಕದ ವೀರ ಪುರುಷರ ಪಾತ್ರಗಳಲ್ಲಿ ಕುಮ್ಮಟದುರ್ಗದ ಕುಮಾರ ರಾಮನೂ ಒಬ್ಬ.<br /> <br /> ಕೇವಲ ಕುಮಾರರಾಮ ಎಂದರೆ ಸುಲಭವಾಗಿ ಯಾರ ಊಹೆಗೂ ನಿಲುಕದ ಪಾತ್ರ. ಆದರೆ ಕುಮಾರನ ಮುಂದೆ ‘ಗಂಡುಗಲಿ’ ಎಂಬ ಬಿರುದಾಂಕಿತ ವಿಶೇಷಣವೊಂದೇ ಸಾಕು. ಉತ್ತರ ಕರ್ನಾಟಕದ ಜನರ ಕಣ್ಣ ಮುಂದೆ 13ನೇ ಶತಮಾನದ ಸಾಂಸ್ಕೃತಿಕ ವೀರ ಪುರುಷನ ಪಾತ್ರವೊಂದು ಮಿಂಚಿಮರೆಯಾಗುತ್ತದೆ.<br /> <br /> ಗಂಗಾವತಿ ಸಮೀಪದಲ್ಲಿರುವ ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು 13ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಗಂಡುಗಲಿ ಕುಮಾರ ರಾಮ, ತನ್ನ ಶೌರ್ಯ, ತ್ಯಾಗ, ಜನಪರವಾದ ಆದರ್ಶ ಆಡಳಿತ, ಸಹೋದರತ್ವ ಮೊದಲಾದ ವಿಶೇಷಗಳಿಂದಲೇ ಇಂದಿಗೂ ಪ್ರಸಿದ್ಧಿ ಪಡೆದಿದ್ದಾನೆ.<br /> <br /> ಪ್ರತಿ ವರ್ಷ ಆಗಿ ಹುಣ್ಣಿಮೆ ಬಳಿಕ 8ನೇ ದಿನ (ಮೇ. 11ಸೋಮವಾರ) ರಾಮನ ಜಾತ್ರೆ ನಡೆಯುತ್ತದೆ. ಇಲ್ಲಿನ ಜಾತ್ರೆಯಲ್ಲಿ ಮಾಡಿದ ಅಕ್ಕಿಪಡಿ (ಅಕ್ಕಿ ಪಾಯಸ) ಹುಲುಗಿಗೆ ಒಯ್ದನಂತರವಷ್ಟೆ ಹುಲುಗಿ ಜಾತ್ರೆಗೆ ಶ್ರೀಕಾರ ಹಾಕುವ ಸಂಪ್ರದಾಯ ಏಳು ಶತಮಾನದಿಂದ ನಡೆದುಕೊಂಡು ಬಂದಿದೆ.<br /> <br /> ಕುಮ್ಮಟದದುರ್ಗದ ಕೋಟೆ ಅಥವಾ ಪಾಳು ಬಿದ್ದಿರುವ ದೇವಸ್ಥಾನದಲ್ಲಿರುವ ಕುಮಾರರಾಮ, ಹೋಲಿಕೆ ರಾಮ ಮತ್ತು ಇತರ 12 ಜನ ಸಹಚರರ ತಲೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಕ್ಕಿ ದೀಪ, ಬಲಿಪೂಜೆ, ನೀರಗೂಳಿ ತುಳಿಯುವ ಮೊದಲಾದ ಧಾರ್ಮಿಕ ಕಾರ್ಯ ನಡೆಯುತ್ತವೆ.<br /> <br /> ಕೊಪ್ಪಳ ಗಂಗಾವತಿ ಮಧ್ಯದ ಮುಖ್ಯರಸ್ತೆಯಿಂದ ಸುಮಾರು ನಾಲ್ಕು ಕಿ.ಮೀ. ಅಂತರದಲ್ಲಿರುವ ವಿಶಾಲ ತಳಹದಿ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ವಿಶೇಷವಾಗಿ ನಾಯಕ, ಬೇಡ ಜನಾಂಗದವರು ವಿವಿಧ ಜಿಲ್ಲೆಗಳಿಂದ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.<br /> <br /> ರಾಮನ ಐತಿಹಾಸಿಕ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಸಂಡೂರಿನ ಹೊಸಮಲಿ ದುರ್ಗವನ್ನು ಸಾಮ್ರಾಜ್ಯವನ್ನಾಗಿಸಿಕೊಂಡು 13ನೇ ಶತಮಾನದಲ್ಲಿ ಕಂಪಲಿರಾಯ ಆಳ್ವಿಕೆ ನಡೆಸುತ್ತಿದ್ದ. ಕಂಪಲಿರಾಯನ ಮಗನೇ ಈ ಕುಮಾರರಾಮ. ರಾಮ ಕುಮ್ಮಟದುರ್ಗ ವನ್ನು ಎರಡನೇ ರಾಜಧಾನಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದ.<br /> <br /> ಕಂಪಲಿರಾಯ ಮತ್ತು ಕುಮಾರರಾಮರು, ದೋರಸಮುದ್ರದ ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ದೇವಗಿರಿ ಸೇವಣರು ಮತ್ತು ಮಧುರೆ ಪಾಂಢ್ಯ ಅರಸರ ಸಮಕಾಲಿನರಾಗಿ ದಕ್ಷಿಣ ಭಾರತದಲ್ಲಿ ಹಿಂದು ಸಾಮ್ರಾಜ್ಯ ಸ್ಥಾಪಿಸಿದರು ಎಂಬ ಉಲ್ಲೇಖವಿದೆ.<br /> <br /> ಕ್ರಿ.ಶ. 1206ರಲ್ಲಿ ನವದೆಹಲಿಯಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಳಿಕ ಮೊದಲ ಬಾರಿಗೆ ಅವನಿಗೆ ದಕ್ಷಿಣ ಪ್ರಾಂತ್ಯಗಳತ್ತ ಕಣ್ಣುಬಿತ್ತು. ಮಂತ್ರಿ ಮಲ್ಲಿಕಾಪರ್ ನೇತೃತ್ವದಲ್ಲಿನ ಮೊಘಲ್ರ ಸೈನ್ಯವನ್ನು ಕುಮಾರರಾಮ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಮಾಹಿತಿ ಇದೆ.<br /> <br /> ರಾಮನಕಾಲದಲ್ಲಿ ಕಾವ್ಯ ಸಂಸ್ಕೃತಿ, ಜನಪದ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುವುದನ್ನು ಇತಿಹಾಸಕಾರರು ಒಪ್ಪುತ್ತಾರೆ. ಅಗಾಧಸಾಧನೆ ಇಲ್ಲವಾದರೂ, ಸಂಪನ್ನ, ಸದ್ಗುಣಗಳಿಂದಾಗಿಯೇ ಕುಮಾರರಾಮ ಬೇರೆ ಅರಸರಿಗಿಂತ ವಿಭಿನ್ನಸ್ಥಾನ ಪಡೆದು ಜನಮಾನಸದಲ್ಲಿ ಇಂದಿಗೂ ಶಾಶ್ವತವಾಗಿ ಉಳಿದಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>