<p><strong>ನವದೆಹಲಿ:</strong> ಆಯ್ಕೆದಾರರ ನೇಮಕಾತಿಯಲ್ಲಿ, ವಿಶೇಷವಾಗಿ ದೇಶೀಯ ಮಟ್ಟದಲ್ಲಿ ಪ್ರಮುಖ ಬದಲಾವಣೆಗಳು ಆಗಬೇಕಿದೆ ಎಂದು ಭಾರತೀಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ..</p><p>ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತರಾವರು ಮಾತ್ರ ತಂಡಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಏಕೆಂದರೆ ಅವರು ಬದಲಾಗುತ್ತಿರುವ ಕ್ರಿಕೆಟ್ ಸ್ವರೂಪಕ್ಕೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.</p><p>ಪ್ರಸ್ತುತ, ಕನಿಷ್ಠ 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಯಾವುದೇ ಕ್ರಿಕೆಟಿಗ ರಾಜ್ಯ ತಂಡದ ಆಯ್ಕೆದಾರರಾಗಲು ಅರ್ಜಿ ಸಲ್ಲಿಸಬಹುದು. ಹಾಗೂ ಕನಿಷ್ಠ 5 ವರ್ಷಗಳ ಹಿಂದೆ ತಂಡದಿಂದ ನಿವೃತ್ತರಾದವರು ಎಂಬ ನಿಯಮವಿದೆ.</p><p>ಈ ನಿಯಮದ ಕುರಿತು ಮಾತನಾಡಿದ ಅಜಿಂಕ್ಯ ರಹಾನೆ, ನಿಗದಿಪಡಿಸಿದ ದಿನಾಂಕಗಳನ್ನು ಮೀರಿ ಆಯ್ಕೆದಾರರ ಮನಸ್ಥಿತಿ ಮತ್ತು ವಿಧಾನವು ಕ್ರಿಕೆಟ್ನ ಪ್ರಸ್ತುತ ವೇಗಕ್ಕೆ ಹೊಂದಿಕೆಯಾಗುವುದು ಮುಖ್ಯ ಎಂದರು.</p><p>ತಮ್ಮ ಮಾಜಿ ಸಹ ಆಟಗಾರ ಚೇತೇಶ್ವರ ಪೂಜಾರ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ರಹಾನೆ, ‘ಆಟಗಾರರು ಆಯ್ಕೆದಾರರಿಗೆ ಹೆದರಬಾರದು. ದೇಶೀಯ ಕ್ರಿಕೆಟ್ನ ಆಯ್ಕೆದಾರರ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಉನ್ನತ ಕ್ರಿಕೆಟ್ನಿಂದ ನಿವೃತ್ತರಾದವರು ಇರಬೇಕು. ಐದು-ಆರು ವರ್ಷ, ಏಳು-ಎಂಟು ವರ್ಷಗಳ ಹಿಂದೆ ನಿವೃತ್ತರಾದವರು ಇದ್ದರು ಆಗಬಹುದು‘ ಎಂದು ಅವರು ಹೇಳಿದರು. </p>.ಟೆಸ್ಟ್ ಚಾಂಪಿಯನ್ಷಿಪ್: ವಿಂಡೀಸ್ ಎದುರು ಗೆದ್ದ ಬಳಿಕ ಭಾರತದ ಸ್ಥಾನ ಯಾವುದು?.ವೈಭವ್ ಸೂರ್ಯವಂಶಿಗೆ ಶುಭ ಸುದ್ದಿ: ಬಿಹಾರ ರಣಜಿ ತಂಡಕ್ಕೆ ಉಪನಾಯಕನಾಗಿ ನೇಮಕ. <p>ಕ್ರಿಕೆಟ್ ಸ್ವರೂಪ ಬದಲಾದಂತೆ ಆಯ್ಕೆದಾರರ ಮನಸ್ಥಿತಿ ಅದಕ್ಕೆ ಹೊಂದಿಕೊಳ್ಳುವುದು ಮುಖ್ಯ. ಬದಲಾವಣೆಗೆ ಅನುಗುಣವಾಗಿರುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದರು.</p><p>ಕಳೆದ 20-30 ವರ್ಷಗಳ ಹಿಂದೆ ಕ್ರಿಕೆಟ್ ಹೇಗಿತ್ತು ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ. ಟಿ20 ಮತ್ತು ಐಪಿಎಲ್ನಂತಹ ಸ್ವರೂಪಗಳು ಬಂದಮೇಲೆ ಆಧುನಿಕ ಕ್ರಿಕೆಟ್ ಆಟಗಾರರ ಶೈಲಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು. ಪೂಜಾರ ಕೂಡ ರಹಾನೆ ಅವರ ಹೇಳಿಕೆಗೆ ಸಹಮತ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಆಯ್ಕೆದಾರರ ನೇಮಕಾತಿಯಲ್ಲಿ, ವಿಶೇಷವಾಗಿ ದೇಶೀಯ ಮಟ್ಟದಲ್ಲಿ ಪ್ರಮುಖ ಬದಲಾವಣೆಗಳು ಆಗಬೇಕಿದೆ ಎಂದು ಭಾರತೀಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ..</p><p>ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತರಾವರು ಮಾತ್ರ ತಂಡಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಏಕೆಂದರೆ ಅವರು ಬದಲಾಗುತ್ತಿರುವ ಕ್ರಿಕೆಟ್ ಸ್ವರೂಪಕ್ಕೆ ತಕ್ಕಂತೆ ಆಟಗಾರರನ್ನು ಆಯ್ಕೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.</p><p>ಪ್ರಸ್ತುತ, ಕನಿಷ್ಠ 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಯಾವುದೇ ಕ್ರಿಕೆಟಿಗ ರಾಜ್ಯ ತಂಡದ ಆಯ್ಕೆದಾರರಾಗಲು ಅರ್ಜಿ ಸಲ್ಲಿಸಬಹುದು. ಹಾಗೂ ಕನಿಷ್ಠ 5 ವರ್ಷಗಳ ಹಿಂದೆ ತಂಡದಿಂದ ನಿವೃತ್ತರಾದವರು ಎಂಬ ನಿಯಮವಿದೆ.</p><p>ಈ ನಿಯಮದ ಕುರಿತು ಮಾತನಾಡಿದ ಅಜಿಂಕ್ಯ ರಹಾನೆ, ನಿಗದಿಪಡಿಸಿದ ದಿನಾಂಕಗಳನ್ನು ಮೀರಿ ಆಯ್ಕೆದಾರರ ಮನಸ್ಥಿತಿ ಮತ್ತು ವಿಧಾನವು ಕ್ರಿಕೆಟ್ನ ಪ್ರಸ್ತುತ ವೇಗಕ್ಕೆ ಹೊಂದಿಕೆಯಾಗುವುದು ಮುಖ್ಯ ಎಂದರು.</p><p>ತಮ್ಮ ಮಾಜಿ ಸಹ ಆಟಗಾರ ಚೇತೇಶ್ವರ ಪೂಜಾರ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿದ ರಹಾನೆ, ‘ಆಟಗಾರರು ಆಯ್ಕೆದಾರರಿಗೆ ಹೆದರಬಾರದು. ದೇಶೀಯ ಕ್ರಿಕೆಟ್ನ ಆಯ್ಕೆದಾರರ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಉನ್ನತ ಕ್ರಿಕೆಟ್ನಿಂದ ನಿವೃತ್ತರಾದವರು ಇರಬೇಕು. ಐದು-ಆರು ವರ್ಷ, ಏಳು-ಎಂಟು ವರ್ಷಗಳ ಹಿಂದೆ ನಿವೃತ್ತರಾದವರು ಇದ್ದರು ಆಗಬಹುದು‘ ಎಂದು ಅವರು ಹೇಳಿದರು. </p>.ಟೆಸ್ಟ್ ಚಾಂಪಿಯನ್ಷಿಪ್: ವಿಂಡೀಸ್ ಎದುರು ಗೆದ್ದ ಬಳಿಕ ಭಾರತದ ಸ್ಥಾನ ಯಾವುದು?.ವೈಭವ್ ಸೂರ್ಯವಂಶಿಗೆ ಶುಭ ಸುದ್ದಿ: ಬಿಹಾರ ರಣಜಿ ತಂಡಕ್ಕೆ ಉಪನಾಯಕನಾಗಿ ನೇಮಕ. <p>ಕ್ರಿಕೆಟ್ ಸ್ವರೂಪ ಬದಲಾದಂತೆ ಆಯ್ಕೆದಾರರ ಮನಸ್ಥಿತಿ ಅದಕ್ಕೆ ಹೊಂದಿಕೊಳ್ಳುವುದು ಮುಖ್ಯ. ಬದಲಾವಣೆಗೆ ಅನುಗುಣವಾಗಿರುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದರು.</p><p>ಕಳೆದ 20-30 ವರ್ಷಗಳ ಹಿಂದೆ ಕ್ರಿಕೆಟ್ ಹೇಗಿತ್ತು ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ. ಟಿ20 ಮತ್ತು ಐಪಿಎಲ್ನಂತಹ ಸ್ವರೂಪಗಳು ಬಂದಮೇಲೆ ಆಧುನಿಕ ಕ್ರಿಕೆಟ್ ಆಟಗಾರರ ಶೈಲಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು. ಪೂಜಾರ ಕೂಡ ರಹಾನೆ ಅವರ ಹೇಳಿಕೆಗೆ ಸಹಮತ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>