<p><strong>ಪೋರ್ಟ್ ಆಫ್ ಸ್ಪೇನ್ (ಪಿಟಿಐ</strong>): ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದ್ದ ಭಾರತ ತಂಡ ಕಡೆಗೂ ಶ್ರೀಲಂಕಾವನ್ನು 81 ರನ್ಗಳ ಅಂತರದಿಂದ ಸೆದೆಬಡಿದು ತ್ರಿಕೋನ ಏಕದಿನ ಸರಣಿಯ ಫೈನಲ್ ಪ್ರವೇಶಿಸಿತು.<br /> <br /> 6 ಓವರ್ಗಳಲ್ಲಿ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದ ಭುವನೇಶ್ವರಕುಮಾರ್ ಅವರ ಪರಿಣಾಮಕಾರಿ ಬೌಲಿಂಗ್ ಭಾರತದ ಭರ್ಜರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.<br /> <br /> ಮೊದಲಿಗೆ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಮಳೆರಾಯನ ಕಾಟ ಎದುರಾಯಿತು. ಪರಿಣಾಮ ಭಾರತಕ್ಕೆ ದಕ್ಕಿದ್ದು ಬರೇ 29 ಓವರ್ ಮಾತ್ರ. 3 ವಿಕೆಟ್ ಕಳೆದುಕೊಂಡು 119 ರನ್ನಷ್ಟೆ ಭಾರತ ಗಳಿಸಲು ಶಕ್ತವಾಯಿತು. ಭಾರತದ ಪರ ರೋಹಿತ್ ಶರ್ಮಾ 48ರನ್ ಗಳಿಸಿ ಅಜೇಯರಾಗುಳಿದರೆ, ವಿರಾಟ್ ಕೊಹ್ಲಿ 31 ರನ್ ಗಳಿಸಿದರು.<br /> <br /> ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡಕ್ಕೆ ಡಿ/ಎಲ್ ನಿಯಮದ ಪ್ರಕಾರ 26 ಓವರ್ಗಳಲ್ಲಿ 178 ರನ್ ಗುರಿ ನೀಡಲಾಯಿತು.<br /> <br /> ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡಕ್ಕೆ ಕಾಡಿದ್ದು ಭಾರತದ ಭುವನೇಶ್ವರ ಕುಮಾರ್. ಅವರ ಕರಾರುವಕ್ಕಾದ ಬೌಲಿಂಗ್ಗೆ ತರಗುಟ್ಟಿದ ಲಂಕಾ ಬ್ಯಾಟ್ಸ್ಮನ್ಗಳು ರನ್ ಗಳಿಸಲು ತಿಣುಕಾಡತೊಡಗಿದರು.<br /> <br /> ಪರಿಣಾಮ ಭಾರತ ತಂಡವು 24.4 ಓವರ್ಗಳಲ್ಲಿ ಬರೇ 96 ರನ್ನಿಗೆ ಲಂಕಾ ತಂಡದ ಎಲ್ಲಾ ಬ್ಯಾಟ್ಸಮನ್ಗಳನ್ನು ಪೆವಿಲಿಯನ್ಗೆ ಅಟ್ಟಿ ವಿಜಯದ ನಗೆ ಬೀರಿತು.<br /> <br /> ಭಾರತದ ಪರ ಭುವನೇಶ್ವರ ಕುಮಾರ್ 4, ಇಶಾಂತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ತಲಾ 2 ಉಮೇಶ್ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಅವರು ತಲಾ ಒಂದೊಂದು ವಿಕೆಟ್ ಪಡೆದರು.<br /> <br /> ಈ ಜಯದೊಂದಿಗೆ ಒಟ್ಟಾರೆ 10 ಪಾಯಿಂಟ್ಗಳನ್ನು ಕಲೆ ಹಾಕಿದ ಭಾರತ ತಂಡ ಫೈನಲ್ಗೆ ಅರ್ಹತೆ ಗಿಟ್ಟಿಸಿತಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೋರ್ಟ್ ಆಫ್ ಸ್ಪೇನ್ (ಪಿಟಿಐ</strong>): ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿದ್ದ ಭಾರತ ತಂಡ ಕಡೆಗೂ ಶ್ರೀಲಂಕಾವನ್ನು 81 ರನ್ಗಳ ಅಂತರದಿಂದ ಸೆದೆಬಡಿದು ತ್ರಿಕೋನ ಏಕದಿನ ಸರಣಿಯ ಫೈನಲ್ ಪ್ರವೇಶಿಸಿತು.<br /> <br /> 6 ಓವರ್ಗಳಲ್ಲಿ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದ ಭುವನೇಶ್ವರಕುಮಾರ್ ಅವರ ಪರಿಣಾಮಕಾರಿ ಬೌಲಿಂಗ್ ಭಾರತದ ಭರ್ಜರಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.<br /> <br /> ಮೊದಲಿಗೆ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಮಳೆರಾಯನ ಕಾಟ ಎದುರಾಯಿತು. ಪರಿಣಾಮ ಭಾರತಕ್ಕೆ ದಕ್ಕಿದ್ದು ಬರೇ 29 ಓವರ್ ಮಾತ್ರ. 3 ವಿಕೆಟ್ ಕಳೆದುಕೊಂಡು 119 ರನ್ನಷ್ಟೆ ಭಾರತ ಗಳಿಸಲು ಶಕ್ತವಾಯಿತು. ಭಾರತದ ಪರ ರೋಹಿತ್ ಶರ್ಮಾ 48ರನ್ ಗಳಿಸಿ ಅಜೇಯರಾಗುಳಿದರೆ, ವಿರಾಟ್ ಕೊಹ್ಲಿ 31 ರನ್ ಗಳಿಸಿದರು.<br /> <br /> ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡಕ್ಕೆ ಡಿ/ಎಲ್ ನಿಯಮದ ಪ್ರಕಾರ 26 ಓವರ್ಗಳಲ್ಲಿ 178 ರನ್ ಗುರಿ ನೀಡಲಾಯಿತು.<br /> <br /> ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡಕ್ಕೆ ಕಾಡಿದ್ದು ಭಾರತದ ಭುವನೇಶ್ವರ ಕುಮಾರ್. ಅವರ ಕರಾರುವಕ್ಕಾದ ಬೌಲಿಂಗ್ಗೆ ತರಗುಟ್ಟಿದ ಲಂಕಾ ಬ್ಯಾಟ್ಸ್ಮನ್ಗಳು ರನ್ ಗಳಿಸಲು ತಿಣುಕಾಡತೊಡಗಿದರು.<br /> <br /> ಪರಿಣಾಮ ಭಾರತ ತಂಡವು 24.4 ಓವರ್ಗಳಲ್ಲಿ ಬರೇ 96 ರನ್ನಿಗೆ ಲಂಕಾ ತಂಡದ ಎಲ್ಲಾ ಬ್ಯಾಟ್ಸಮನ್ಗಳನ್ನು ಪೆವಿಲಿಯನ್ಗೆ ಅಟ್ಟಿ ವಿಜಯದ ನಗೆ ಬೀರಿತು.<br /> <br /> ಭಾರತದ ಪರ ಭುವನೇಶ್ವರ ಕುಮಾರ್ 4, ಇಶಾಂತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ತಲಾ 2 ಉಮೇಶ್ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಅವರು ತಲಾ ಒಂದೊಂದು ವಿಕೆಟ್ ಪಡೆದರು.<br /> <br /> ಈ ಜಯದೊಂದಿಗೆ ಒಟ್ಟಾರೆ 10 ಪಾಯಿಂಟ್ಗಳನ್ನು ಕಲೆ ಹಾಕಿದ ಭಾರತ ತಂಡ ಫೈನಲ್ಗೆ ಅರ್ಹತೆ ಗಿಟ್ಟಿಸಿತಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>