<p>ಮಳವಳ್ಳಿ: ಕ್ಷೌರ ಮಾಡಿಸಲು ಕಟಿಂಗ್ ಸಲೂನ್ಗೆ ಹೋದ ದಲಿತ ವ್ಯಕ್ತಿಯೊಬ್ಬನ ಮೇಲೆ ರೇಜರ್ನಿಂದ ಹಲ್ಲೆ ಮಾಡಿದ ಪರಿಣಾಮ ಮೂಗು ಮತ್ತು ಹಣೆಗೆ ಪೆಟ್ಟಾಗಿರುವ ಅಮಾನವೀಯ ಘಟನೆ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. <br /> <br /> ಗ್ರಾಮದ ಚಿಕ್ಕಮಂಚಯ್ಯ ಎಂಬವರು ಈ ಸಂಬಂಧ ಕಿರುಗಾವಲು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಭಾನುವಾರ ಸಂಜೆ ಗ್ರಾಮದ ಶೃಂಗಾರ್ ಹೇರ್ ಡ್ರೆಸ್ಸರ್ಗೆ ಹೋಗಿ ಕ್ಷೌರ ಮಾಡಲು ಕೇಳಿದ ಸಂದರ್ಭದಲ್ಲಿ ಅಂಗಡಿ ಮಾಲೀಕ ಮಹದೇವ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.<br /> <br /> `ಅಂಗಡಿ ಮಾಲೀಕ ಮಹದೇವ ಗಿರಾಕಿ ಇದ್ದಾರೆ ಆಮೇಲೆ ಕ್ಷೌರ ಮಾಡುವುದಾಗಿ ಹೇಳಿ ಸತಾಯಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮತ್ತೆ ಕ್ಷೌರ ಮಾಡಲು ಕೇಳಿದಾಗ ಕ್ಷೌರ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. <br /> ರೊಚ್ಚಿಗೆದ್ದ ತಾವು ನಾನು ದುಡ್ಡು ಕೊಡುವುದಿಲ್ಲವೇ ಎಂದು ಪ್ರಶ್ನಿಸಿದ್ದೆ~ ಎಂದು ಹೇಳಿದ್ದಾರೆ.<br /> <br /> ಇದು ಮಾತಿಗೆ ಮಾತು ಬೆಳೆದು ಕೈಯಲ್ಲಿದ್ದ ರೇಜರ್ನಿಂದ ಹಲ್ಲೆ ನಡೆಸಿದರು. ಮೂಗಿಗೆ ಹಾಗೂ ಹಣೆಗೆ ಏಟು ಬಿದ್ದು ಗಾಯವಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದ್ದು, ನಂತರ ಹೆಚ್ಚಿನಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ <br /> <br /> ಈ ಸಂಬಂಧ ಚಿಕ್ಕಮಂಚಯ್ಯ ಅವರೇ ಅಂಗಡಿ ಮಾಲೀಕ ಮಹದೇವ ಹಾಗೂ ಅವರ ತಂದೆ ಮರಿ ಎಂಬುವರ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದು ಕಿರುಗಾವಲು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.<br /> <br /> <strong>ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ</strong><br /> ಮಂಡ್ಯ: ಮಳವಳ್ಳಿ ತಾಲ್ಲೂಕು ಕಿರುಗಾವಲು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಕ್ಷೌರ ಮಾಡಲು ನಿರಾಕರಿಸಿ, ಸಲೂನ್ ಮಾಲೀಕರು ಹಲ್ಲೆ ಮಾಡಿದ್ದಾರೆಎಂಬ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಬಿಎಸ್ಪಿ ಮತ್ತು ಎಸ್ಎಫ್ಐ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿವೆ.<br /> <br /> ಈ ಘಟನೆ ಅಮಾನವೀಯ. ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಎಸ್ಪಿ ಜಿಲ್ಲಾ ಸಂಯೋಜಕ ಎಂ. ಕೃಷ್ಣಮೂರ್ತಿ ಮಂಗಳವಾರ ಆಗ್ರಹಪಡಿಸಿದರು.<br /> <br /> ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲೆಯ ಕೆಲವೆಡೆ ಈಗಲೂ ಪರಿಶಿಷ್ಟ ವರ್ಗಕ್ಕೆ ಸೇರಿದವರಿಗೆ ಕ್ಷೌರ ಮಾಡದ ಸ್ಥಿತಿ ಇದೆ. ಕ್ಷೌರ ಮಾಡಲು ನಿರಾಕರಿಸುವ ಅಂಗಡಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಾಚಹಳ್ಳಿ ಮಹೇಶ್, ವೇಣುಗೋಪಾಲ್, ಸುಂದರ್ರಾಜ್ ಇದ್ದರು. <br /> <br /> <strong>ಎಸ್ಎಫ್ಐ ಪ್ರತಿಭಟನೆ <br /> </strong> ಕ್ಷೌರ ಮಾಡಲು ನಿರಾಕರಿಸಿ ಹಲ್ಲೆ ಮಾಡಿರುವ ಘಟನೆಯನ್ನು ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಮಂಗಳವಾರ ಮಂಡ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿರು.<br /> <br /> ಇದೊಂದು ತಲೆತಗ್ಗಿಸುವ ಘಟನೆ. ಹಲ್ಲೆಗೆ ಕಾರಣರಾದ ಅಂಗಡಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.<br /> <br /> ಎಸ್ಎಫ್ಐನ ಜಿಲ್ಲಾಕಾರ್ಯದರ್ಶಿ ವಿನಯ್ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಸಹ ಕಾರ್ಯದರ್ಶಿ ನಾಗೇಶ್ ಮತ್ತು ಇತರರು ಪ್ರತಿಭಟನೆಯ ಮುಂಚೂಣಿಯಲ್ಲಿ ಇದ್ದರು.<br /> <br /> <strong>ಭೇಟಿ, ಸಾಂತ್ವನ</strong><br /> ಈ ನಡುವೆ, ಕಾಂಗ್ರೆಸ್ ಮುಖಂಡ ಯಮದೂರು ಸಿದ್ಧರಾಜು ಅವರು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಚಿಕ್ಕತಮ್ಮಯ್ಯ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.<br /> <br /> ಘಟನೆಯ ವಿವರವನ್ನು ಪಡೆದ ಅವರು ಘಟನೆಯ ಬಗೆಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಪಡಿಸಿದರು. ಈ ಸಂದರ್ಭದಲ್ಲಿ ದೀಪಕ್, ಸುಂಡಹಳ್ಳಿ ನಾಗರಾಜು, ಆನಂದ್ ಅವರೂ ಹಾಜರಿದ್ದರು.<br /> <br /> <strong>ಶಾಸಕರ ಭೇಟಿ; ಪರಿಶೀಲನೆ</strong><br /> ಮಳವಳ್ಳಿ: ದಲಿತ ವ್ಯಕ್ತಿಯೊಬ್ಬರು ಕ್ಷೌರ ಮಾಡಿಸಲು ಹೋದಾಗ ಕ್ಷೌರ ಮಾಡದೆ ಹಲ್ಲೆ ಮಾಡಿ ಗಾಯಗೊಳಿಸಿದ್ದ ಹಿನ್ನಲೆಯಲ್ಲಿ ಮಂಗಳವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಮುಖಂಡರ ಜೊತೆ ಚರ್ಚಿಸಿದರು.<br /> <br /> ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಜೊತೆಗೆ ಚರ್ಚೆ ನಡೆಸಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಇದನ್ನು ರಾಜಕಾರಣಗೊಳಿಸುವುದು ಬೇಡ ಎಂದು ಶಾಸಕರು ಪ್ರತಿಕ್ರಿಯಿಸಿದರು.<br /> <br /> ಚಿಕ್ಕಮಂಚಯ್ಯ ಅವರಿಗೆ ಸರ್ಕಾರದಿಂದ ದೊರೆಯುವ ಸೂಕ್ತ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿ, ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಚ್ಚರವಹಿಸುವಂತೆ ಮುಖಂಡರಿಗೆ ಮನವಿ ಮಾಡಿದರು.<br /> <br /> ಕಾನೂನು ರೀತಿ ಆರೋಪಿಗಳನ್ನು ಪೊಲೀಸರು ಬಂಧಿಸುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಎನ್.ವಿಶ್ವಾಸ್, ದಸಂಸದ ಎಂ.ಬಿ.ಶ್ರೀನಿವಾಸ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಳವಳ್ಳಿ: ಕ್ಷೌರ ಮಾಡಿಸಲು ಕಟಿಂಗ್ ಸಲೂನ್ಗೆ ಹೋದ ದಲಿತ ವ್ಯಕ್ತಿಯೊಬ್ಬನ ಮೇಲೆ ರೇಜರ್ನಿಂದ ಹಲ್ಲೆ ಮಾಡಿದ ಪರಿಣಾಮ ಮೂಗು ಮತ್ತು ಹಣೆಗೆ ಪೆಟ್ಟಾಗಿರುವ ಅಮಾನವೀಯ ಘಟನೆ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. <br /> <br /> ಗ್ರಾಮದ ಚಿಕ್ಕಮಂಚಯ್ಯ ಎಂಬವರು ಈ ಸಂಬಂಧ ಕಿರುಗಾವಲು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಭಾನುವಾರ ಸಂಜೆ ಗ್ರಾಮದ ಶೃಂಗಾರ್ ಹೇರ್ ಡ್ರೆಸ್ಸರ್ಗೆ ಹೋಗಿ ಕ್ಷೌರ ಮಾಡಲು ಕೇಳಿದ ಸಂದರ್ಭದಲ್ಲಿ ಅಂಗಡಿ ಮಾಲೀಕ ಮಹದೇವ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.<br /> <br /> `ಅಂಗಡಿ ಮಾಲೀಕ ಮಹದೇವ ಗಿರಾಕಿ ಇದ್ದಾರೆ ಆಮೇಲೆ ಕ್ಷೌರ ಮಾಡುವುದಾಗಿ ಹೇಳಿ ಸತಾಯಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮತ್ತೆ ಕ್ಷೌರ ಮಾಡಲು ಕೇಳಿದಾಗ ಕ್ಷೌರ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. <br /> ರೊಚ್ಚಿಗೆದ್ದ ತಾವು ನಾನು ದುಡ್ಡು ಕೊಡುವುದಿಲ್ಲವೇ ಎಂದು ಪ್ರಶ್ನಿಸಿದ್ದೆ~ ಎಂದು ಹೇಳಿದ್ದಾರೆ.<br /> <br /> ಇದು ಮಾತಿಗೆ ಮಾತು ಬೆಳೆದು ಕೈಯಲ್ಲಿದ್ದ ರೇಜರ್ನಿಂದ ಹಲ್ಲೆ ನಡೆಸಿದರು. ಮೂಗಿಗೆ ಹಾಗೂ ಹಣೆಗೆ ಏಟು ಬಿದ್ದು ಗಾಯವಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದ್ದು, ನಂತರ ಹೆಚ್ಚಿನಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ <br /> <br /> ಈ ಸಂಬಂಧ ಚಿಕ್ಕಮಂಚಯ್ಯ ಅವರೇ ಅಂಗಡಿ ಮಾಲೀಕ ಮಹದೇವ ಹಾಗೂ ಅವರ ತಂದೆ ಮರಿ ಎಂಬುವರ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದು ಕಿರುಗಾವಲು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.<br /> <br /> <strong>ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ</strong><br /> ಮಂಡ್ಯ: ಮಳವಳ್ಳಿ ತಾಲ್ಲೂಕು ಕಿರುಗಾವಲು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಕ್ಷೌರ ಮಾಡಲು ನಿರಾಕರಿಸಿ, ಸಲೂನ್ ಮಾಲೀಕರು ಹಲ್ಲೆ ಮಾಡಿದ್ದಾರೆಎಂಬ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಬಿಎಸ್ಪಿ ಮತ್ತು ಎಸ್ಎಫ್ಐ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿವೆ.<br /> <br /> ಈ ಘಟನೆ ಅಮಾನವೀಯ. ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಎಸ್ಪಿ ಜಿಲ್ಲಾ ಸಂಯೋಜಕ ಎಂ. ಕೃಷ್ಣಮೂರ್ತಿ ಮಂಗಳವಾರ ಆಗ್ರಹಪಡಿಸಿದರು.<br /> <br /> ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲೆಯ ಕೆಲವೆಡೆ ಈಗಲೂ ಪರಿಶಿಷ್ಟ ವರ್ಗಕ್ಕೆ ಸೇರಿದವರಿಗೆ ಕ್ಷೌರ ಮಾಡದ ಸ್ಥಿತಿ ಇದೆ. ಕ್ಷೌರ ಮಾಡಲು ನಿರಾಕರಿಸುವ ಅಂಗಡಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಾಚಹಳ್ಳಿ ಮಹೇಶ್, ವೇಣುಗೋಪಾಲ್, ಸುಂದರ್ರಾಜ್ ಇದ್ದರು. <br /> <br /> <strong>ಎಸ್ಎಫ್ಐ ಪ್ರತಿಭಟನೆ <br /> </strong> ಕ್ಷೌರ ಮಾಡಲು ನಿರಾಕರಿಸಿ ಹಲ್ಲೆ ಮಾಡಿರುವ ಘಟನೆಯನ್ನು ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಮಂಗಳವಾರ ಮಂಡ್ಯದಲ್ಲಿ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿರು.<br /> <br /> ಇದೊಂದು ತಲೆತಗ್ಗಿಸುವ ಘಟನೆ. ಹಲ್ಲೆಗೆ ಕಾರಣರಾದ ಅಂಗಡಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.<br /> <br /> ಎಸ್ಎಫ್ಐನ ಜಿಲ್ಲಾಕಾರ್ಯದರ್ಶಿ ವಿನಯ್ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಸಹ ಕಾರ್ಯದರ್ಶಿ ನಾಗೇಶ್ ಮತ್ತು ಇತರರು ಪ್ರತಿಭಟನೆಯ ಮುಂಚೂಣಿಯಲ್ಲಿ ಇದ್ದರು.<br /> <br /> <strong>ಭೇಟಿ, ಸಾಂತ್ವನ</strong><br /> ಈ ನಡುವೆ, ಕಾಂಗ್ರೆಸ್ ಮುಖಂಡ ಯಮದೂರು ಸಿದ್ಧರಾಜು ಅವರು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಚಿಕ್ಕತಮ್ಮಯ್ಯ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.<br /> <br /> ಘಟನೆಯ ವಿವರವನ್ನು ಪಡೆದ ಅವರು ಘಟನೆಯ ಬಗೆಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಪಡಿಸಿದರು. ಈ ಸಂದರ್ಭದಲ್ಲಿ ದೀಪಕ್, ಸುಂಡಹಳ್ಳಿ ನಾಗರಾಜು, ಆನಂದ್ ಅವರೂ ಹಾಜರಿದ್ದರು.<br /> <br /> <strong>ಶಾಸಕರ ಭೇಟಿ; ಪರಿಶೀಲನೆ</strong><br /> ಮಳವಳ್ಳಿ: ದಲಿತ ವ್ಯಕ್ತಿಯೊಬ್ಬರು ಕ್ಷೌರ ಮಾಡಿಸಲು ಹೋದಾಗ ಕ್ಷೌರ ಮಾಡದೆ ಹಲ್ಲೆ ಮಾಡಿ ಗಾಯಗೊಳಿಸಿದ್ದ ಹಿನ್ನಲೆಯಲ್ಲಿ ಮಂಗಳವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಮುಖಂಡರ ಜೊತೆ ಚರ್ಚಿಸಿದರು.<br /> <br /> ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಜೊತೆಗೆ ಚರ್ಚೆ ನಡೆಸಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಇದನ್ನು ರಾಜಕಾರಣಗೊಳಿಸುವುದು ಬೇಡ ಎಂದು ಶಾಸಕರು ಪ್ರತಿಕ್ರಿಯಿಸಿದರು.<br /> <br /> ಚಿಕ್ಕಮಂಚಯ್ಯ ಅವರಿಗೆ ಸರ್ಕಾರದಿಂದ ದೊರೆಯುವ ಸೂಕ್ತ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿ, ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಚ್ಚರವಹಿಸುವಂತೆ ಮುಖಂಡರಿಗೆ ಮನವಿ ಮಾಡಿದರು.<br /> <br /> ಕಾನೂನು ರೀತಿ ಆರೋಪಿಗಳನ್ನು ಪೊಲೀಸರು ಬಂಧಿಸುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಎನ್.ವಿಶ್ವಾಸ್, ದಸಂಸದ ಎಂ.ಬಿ.ಶ್ರೀನಿವಾಸ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>