<p><strong>ಬೆಳಗಾವಿ:</strong> `ದೇಶದ ಗಡಿ ಪ್ರದೇಶ ಹಾಗೂ ಜನರನ್ನು ರಕ್ಷಿಸಲು ಭಾರತೀಯ ಭೂಸೇನೆಯು ಸಶಕ್ತವಾಗಿದೆ' ಎಂದು ಭೂಸೇನೆಯ ನಿವೃತ್ತ ಮುಖ್ಯಸ್ಥ ಜೆ.ಜೆ. ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ಮರಾಠಾ ಲಘು ಪದಾತಿದಳ ಕೇಂದ್ರದ ವೈ.ಜಿ. ಸಭಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ತಮ್ಮ `ಸೋಲ್ಜರ್ ಟು ಜನರಲ್' ಆತ್ಮಕಥೆಯ ಮರಾಠಿ ಅನುವಾದಿತ ಕೃತಿ ಬಿಡುಗಡೆ ಸಮಾರಂಭದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಬಾಹ್ಯ ದಾಳಿಯನ್ನು ಎದುರಿಸುವ ಎಲ್ಲ ಸಾಮರ್ಥ್ಯವು ಭಾರತೀಯ ಭೂಸೇನೆಗೆ ಇದೆ. ಈ ಬಗ್ಗೆ ಯಾವುದೇ ರೀತಿ ಭೀತಿ ಪಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.<br /> <br /> `ಚೀನಾ ಹಾಗೂ ಭಾರತದ ನಡುವಿನ ಗಡಿ ಪ್ರದೇಶದ ಬಗ್ಗೆ ಮೊದಲೇ ಗುರುತು ನಿರ್ಮಾಣ ಆಗದೇ ಇರುವುದರಿಂದ ಇಂದು ಗಡಿ ಸಮಸ್ಯೆ ಕಾಡುತ್ತಿದೆ. ಎರಡೂ ದೇಶಗಳ ಪ್ರಧಾನಿಗಳು ದ್ವಿಪಕ್ಷೀಯ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು' ಎಂದು ಅವರು ಅಭಿಪ್ರಾಯಪಟ್ಟರು.<br /> <br /> `ದ್ವಿಪಕ್ಷೀಯ ಮಾತುಕತೆಯ ಮೂಲಕ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಉತ್ತಮಗೊಳಿಸಬೇಕು. ಇದರಿಂದ ಎರಡೂ ದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗಲಿದೆ' ಎಂದು ಅವರು ತಿಳಿಸಿದರು.<br /> <br /> ಇದಕ್ಕೂ ಮೊದಲು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿಂಗ್, `ಸೇನೆಯಲ್ಲಿರುವ ಯೋಧರು ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧರಿರುತ್ತಾರೆ. ಭಾರತವನ್ನು ಸೂಪರ್ ಪವರ್ ಆಗಿ ಮಾಡಲು ಸಾಧ್ಯವಿದೆ ಎಂಬ ಅಂಶವನ್ನು ದೇಶದ ಜನರಿಗೆ ತಿಳಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಕೃತಿಯನ್ನು ಬರೆದಿದ್ದೇನೆ' ಎಂದು ತಿಳಿಸಿದರು.<br /> <br /> `ಗುರಿಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮ ಪಟ್ಟರೆ, ಸಾಧಿಸಲು ಸಾಧ್ಯವಿದೆ. ನನ್ನ ಅಜ್ಜ ಒಬ್ಬ ಸಾಮಾನ್ಯ ಯೋಧನಾಗಿದ್ದ. ಸಾಮಾನ್ಯ ಸಿಪಾಯಿಯ ಮೊಮ್ಮಗನೂ ಸೇನೆಯ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯವಿದೆ ಎಂಬುದಕ್ಕೆ ನಾನೇ ಜೀವಂತ ನಿದರ್ಶನವಾಗಿದ್ದೇನೆ' ಎಂದು ಗದ್ಗದಿತರಾದರು.<br /> <br /> `ಮರಾಠಾ ರೆಜಿಮೆಂಟ್ ಜೊತೆಗೆ ನನಗೆ ಆತ್ಮೀಯ ಸಂಬಂಧ ಇದೆ. ಸೇನೆಯ ಹಿರಿಯ ಅಧಿಕಾರಿಗಳು ಕೆಳಗಿನ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ, ಸಾಮಾನ್ಯ ಯೋಧರಲ್ಲೂ ನಾಯಕತ್ವ ಗುಣ ಬೆಳೆಯಲು ಸಾಧ್ಯವಿದೆ' ಎಂದು ತಿಳಿಸಿದರು.<br /> <br /> `ನನ್ನ ಆತ್ಮಕಥೆಯಲ್ಲಿ ಭೂಸೇನೆ ಇತಿಹಾಸ, ಭಾರತದ ಇತಿಹಾಸ ಒಳಗೊಂಡಿದೆ. ದೇಶಕ್ಕೆ ಸಂಬಂಧಿಸಿದ ಹಲವು ಯುದ್ಧಗಳ ಮಾಹಿತಿ ಇದರಲ್ಲಿದೆ.<br /> <br /> ಇದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ವಿಜಯಾ ದೇವ್ ಅವರು ಸಾಹಿತ್ಯಪೂರ್ಣವಾಗಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ' ಎಂದು ಸಿಂಗ್ ತಿಳಿಸಿದರು.<br /> <br /> ಮರಾಠಾ ಲಘು ಪದಾತಿದಳ ಕೇಂದ್ರದ ಕಮಾಂಡಂಟ್ ಸಂತೋಷ ಕುರುಪ್, ಅಮೇಯ್ ಪ್ರಕಾಶನದ ಉಲ್ಲಾಸ ಹಾಜರಿದ್ದರು.<br /> <br /> ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಜೆ.ಜೆ. ಸಿಂಗ್ ಅವರನ್ನು ಅರುಣಾಚಲ ಪ್ರದೇಶದ ಸಾಂಪ್ರದಾಯಿಕ ಪದ್ಧತಿಯಲ್ಲಿ ಸ್ವಾಗತಿಸಲಾಯಿತು. ಬಳಿಕ ಜೆ.ಜೆ. ಸಿಂಗ್ ಅವರ ಕೊಡುಗೆಯನ್ನು ವಿವರಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> `ದೇಶದ ಗಡಿ ಪ್ರದೇಶ ಹಾಗೂ ಜನರನ್ನು ರಕ್ಷಿಸಲು ಭಾರತೀಯ ಭೂಸೇನೆಯು ಸಶಕ್ತವಾಗಿದೆ' ಎಂದು ಭೂಸೇನೆಯ ನಿವೃತ್ತ ಮುಖ್ಯಸ್ಥ ಜೆ.ಜೆ. ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ಮರಾಠಾ ಲಘು ಪದಾತಿದಳ ಕೇಂದ್ರದ ವೈ.ಜಿ. ಸಭಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ತಮ್ಮ `ಸೋಲ್ಜರ್ ಟು ಜನರಲ್' ಆತ್ಮಕಥೆಯ ಮರಾಠಿ ಅನುವಾದಿತ ಕೃತಿ ಬಿಡುಗಡೆ ಸಮಾರಂಭದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಬಾಹ್ಯ ದಾಳಿಯನ್ನು ಎದುರಿಸುವ ಎಲ್ಲ ಸಾಮರ್ಥ್ಯವು ಭಾರತೀಯ ಭೂಸೇನೆಗೆ ಇದೆ. ಈ ಬಗ್ಗೆ ಯಾವುದೇ ರೀತಿ ಭೀತಿ ಪಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.<br /> <br /> `ಚೀನಾ ಹಾಗೂ ಭಾರತದ ನಡುವಿನ ಗಡಿ ಪ್ರದೇಶದ ಬಗ್ಗೆ ಮೊದಲೇ ಗುರುತು ನಿರ್ಮಾಣ ಆಗದೇ ಇರುವುದರಿಂದ ಇಂದು ಗಡಿ ಸಮಸ್ಯೆ ಕಾಡುತ್ತಿದೆ. ಎರಡೂ ದೇಶಗಳ ಪ್ರಧಾನಿಗಳು ದ್ವಿಪಕ್ಷೀಯ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು' ಎಂದು ಅವರು ಅಭಿಪ್ರಾಯಪಟ್ಟರು.<br /> <br /> `ದ್ವಿಪಕ್ಷೀಯ ಮಾತುಕತೆಯ ಮೂಲಕ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಉತ್ತಮಗೊಳಿಸಬೇಕು. ಇದರಿಂದ ಎರಡೂ ದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗಲಿದೆ' ಎಂದು ಅವರು ತಿಳಿಸಿದರು.<br /> <br /> ಇದಕ್ಕೂ ಮೊದಲು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿಂಗ್, `ಸೇನೆಯಲ್ಲಿರುವ ಯೋಧರು ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧರಿರುತ್ತಾರೆ. ಭಾರತವನ್ನು ಸೂಪರ್ ಪವರ್ ಆಗಿ ಮಾಡಲು ಸಾಧ್ಯವಿದೆ ಎಂಬ ಅಂಶವನ್ನು ದೇಶದ ಜನರಿಗೆ ತಿಳಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಕೃತಿಯನ್ನು ಬರೆದಿದ್ದೇನೆ' ಎಂದು ತಿಳಿಸಿದರು.<br /> <br /> `ಗುರಿಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮ ಪಟ್ಟರೆ, ಸಾಧಿಸಲು ಸಾಧ್ಯವಿದೆ. ನನ್ನ ಅಜ್ಜ ಒಬ್ಬ ಸಾಮಾನ್ಯ ಯೋಧನಾಗಿದ್ದ. ಸಾಮಾನ್ಯ ಸಿಪಾಯಿಯ ಮೊಮ್ಮಗನೂ ಸೇನೆಯ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯವಿದೆ ಎಂಬುದಕ್ಕೆ ನಾನೇ ಜೀವಂತ ನಿದರ್ಶನವಾಗಿದ್ದೇನೆ' ಎಂದು ಗದ್ಗದಿತರಾದರು.<br /> <br /> `ಮರಾಠಾ ರೆಜಿಮೆಂಟ್ ಜೊತೆಗೆ ನನಗೆ ಆತ್ಮೀಯ ಸಂಬಂಧ ಇದೆ. ಸೇನೆಯ ಹಿರಿಯ ಅಧಿಕಾರಿಗಳು ಕೆಳಗಿನ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ, ಸಾಮಾನ್ಯ ಯೋಧರಲ್ಲೂ ನಾಯಕತ್ವ ಗುಣ ಬೆಳೆಯಲು ಸಾಧ್ಯವಿದೆ' ಎಂದು ತಿಳಿಸಿದರು.<br /> <br /> `ನನ್ನ ಆತ್ಮಕಥೆಯಲ್ಲಿ ಭೂಸೇನೆ ಇತಿಹಾಸ, ಭಾರತದ ಇತಿಹಾಸ ಒಳಗೊಂಡಿದೆ. ದೇಶಕ್ಕೆ ಸಂಬಂಧಿಸಿದ ಹಲವು ಯುದ್ಧಗಳ ಮಾಹಿತಿ ಇದರಲ್ಲಿದೆ.<br /> <br /> ಇದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ವಿಜಯಾ ದೇವ್ ಅವರು ಸಾಹಿತ್ಯಪೂರ್ಣವಾಗಿ ಮರಾಠಿ ಭಾಷೆಗೆ ಅನುವಾದಿಸಿದ್ದಾರೆ' ಎಂದು ಸಿಂಗ್ ತಿಳಿಸಿದರು.<br /> <br /> ಮರಾಠಾ ಲಘು ಪದಾತಿದಳ ಕೇಂದ್ರದ ಕಮಾಂಡಂಟ್ ಸಂತೋಷ ಕುರುಪ್, ಅಮೇಯ್ ಪ್ರಕಾಶನದ ಉಲ್ಲಾಸ ಹಾಜರಿದ್ದರು.<br /> <br /> ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಜೆ.ಜೆ. ಸಿಂಗ್ ಅವರನ್ನು ಅರುಣಾಚಲ ಪ್ರದೇಶದ ಸಾಂಪ್ರದಾಯಿಕ ಪದ್ಧತಿಯಲ್ಲಿ ಸ್ವಾಗತಿಸಲಾಯಿತು. ಬಳಿಕ ಜೆ.ಜೆ. ಸಿಂಗ್ ಅವರ ಕೊಡುಗೆಯನ್ನು ವಿವರಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>