<p><span style="font-size: 48px;">ಕ</span>ಳೆದ ವಾರ ಕೃಷಿ ದರ್ಶನದಲ್ಲಿ ಪ್ರಕಟಗೊಂಡ ಬಹುಪಯೋಗಿ `ಕಾರ್ಚಿಕಾಯಿ' ಬೆಳೆಯನ್ನು ಬೆಳೆಯುವ ಕುರಿತಾಗಿ ಅನೇಕ ರೈತರು ಆಸಕ್ತಿ ವಹಿಸಿರುವ ಕಾರಣ, ಅವರಿಗಾಗಿ ಇನ್ನಷ್ಟು ಮಾಹಿತಿ ಇಲ್ಲಿದೆ...</p>.<p>ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ, ಮಳೆಯಾಶ್ರಿತ ಕಪ್ಪು ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾರ್ಚಿಕಾಯಿ ಬಳ್ಳಿಯ ಅಡಿಯಲ್ಲಿರುವ, ಆಲೂಗಡ್ಡೆ ಗಾತ್ರದ ಗಡ್ಡೆಯನ್ನೇ ಬಿತ್ತನೆಗೆ ಬಳಸಲಾಗುತ್ತದೆ.<br /> <br /> ರೈತರು ಬಿತ್ತನೆ ವೇಳೆ ಕಾರ್ಚಿಕಾಯಿ ಬಳ್ಳಿಯನ್ನು ಬುಡಸಮೇತ ಕಿತ್ತು ಬದುವಿನಲ್ಲಿ ಎಸೆದರೂ ಮತ್ತೆ ಅಲ್ಲೇ ಚಿಗಿತು ಅಲ್ಲಲ್ಲಿ ಬೇರು ಬಿಡುತ್ತದೆ. ಆ ಬೇರುಗಳಿಗೆ ಅಂಟಿಕೊಂಡಂತೆಯೇ ಇರುವ ಗಡ್ಡೆಯೇ ಮಳೆ ಸುರಿದ ನಂತರ ಹೊಸದಾಗಿ ಮೊಳಕೆ ಒಡೆಯುತ್ತದೆ.<br /> <br /> ತಮ್ಮ ಜಮೀನಿನಲ್ಲಿ ಕಾರ್ಚಿಕಾಯಿ ಬೆಳೆಯಲು ಬಯಸುವ ರೈತರು, ಬೇರೆ ಜಮೀನುಗಳಲ್ಲಿ ದೊರೆಯುವ ಈ ಗಡ್ಡೆಯನ್ನು ತಂದು ಎಸೆದರೂ ಸಾಕು ಅಲ್ಲೇ ಹುಟ್ಟಿಕೊಂಡು, ಎರಡರಿಂದ ಎರಡೂವರೆ ತಿಂಗಳಲ್ಲೇ ಕಾಯಿ ನೀಡುತ್ತದೆ.<br /> <br /> </p>.<p>ಗಡ್ಡೆಯನ್ನು ಹಸಿಯಾಗಿ ಇರಿಸುವ ಅಗತ್ಯವೂ ಇಲ್ಲ. ಒಣಗಿದ ಗಡ್ಡೆಯನ್ನೇ ಹೊಲದಲ್ಲಿ ಎಸೆದರೂ ಸಾಕು, ಮಳೆಗಾಲದಲ್ಲಿ ಮಣ್ಣಿನಲ್ಲಿನ ತೇವಾಂಶದ ಸಹಾಯದೊಂದಿಗೆ ಮೊಳಕೆ ಒಡೆದು, ನಾಲ್ಕು ದಿನಗಳಲ್ಲೇ ಹಚ್ಚಹಸಿರಿನಿಂದ ಕಂಗೊಳಿಸುವ ಚಿಕ್ಕ ಎಲೆಗಳ ಬಳ್ಳಿ ಹಬ್ಬುತ್ತ ಸಾಗುತ್ತದೆ.</p>.<p>ಒಂದು ಗಡ್ಡೆಯಲ್ಲೇ ಏಳೆಂಟು ಟಿಸಿಲೊಡೆದು ಹೊರಬರುವ ಬಳ್ಳಿಯನ್ನು ಬಹುತೇಕ ರೈತರು, `ಬೆಳೆಗೆ ಅಡ್ಡಿಪಡಿಸುವ ಕಳೆ' ಎಂದೇ ಭಾವಿಸಿ ಬೇರು ಸಮೇತ ಕಿತ್ತು ಎಸೆದರೂ ಮತ್ತೆಮತ್ತೆ ಬೆಳೆಯುತ್ತದೆ.<br /> <strong>- ಸಿದ್ದು .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 48px;">ಕ</span>ಳೆದ ವಾರ ಕೃಷಿ ದರ್ಶನದಲ್ಲಿ ಪ್ರಕಟಗೊಂಡ ಬಹುಪಯೋಗಿ `ಕಾರ್ಚಿಕಾಯಿ' ಬೆಳೆಯನ್ನು ಬೆಳೆಯುವ ಕುರಿತಾಗಿ ಅನೇಕ ರೈತರು ಆಸಕ್ತಿ ವಹಿಸಿರುವ ಕಾರಣ, ಅವರಿಗಾಗಿ ಇನ್ನಷ್ಟು ಮಾಹಿತಿ ಇಲ್ಲಿದೆ...</p>.<p>ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ, ಮಳೆಯಾಶ್ರಿತ ಕಪ್ಪು ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾರ್ಚಿಕಾಯಿ ಬಳ್ಳಿಯ ಅಡಿಯಲ್ಲಿರುವ, ಆಲೂಗಡ್ಡೆ ಗಾತ್ರದ ಗಡ್ಡೆಯನ್ನೇ ಬಿತ್ತನೆಗೆ ಬಳಸಲಾಗುತ್ತದೆ.<br /> <br /> ರೈತರು ಬಿತ್ತನೆ ವೇಳೆ ಕಾರ್ಚಿಕಾಯಿ ಬಳ್ಳಿಯನ್ನು ಬುಡಸಮೇತ ಕಿತ್ತು ಬದುವಿನಲ್ಲಿ ಎಸೆದರೂ ಮತ್ತೆ ಅಲ್ಲೇ ಚಿಗಿತು ಅಲ್ಲಲ್ಲಿ ಬೇರು ಬಿಡುತ್ತದೆ. ಆ ಬೇರುಗಳಿಗೆ ಅಂಟಿಕೊಂಡಂತೆಯೇ ಇರುವ ಗಡ್ಡೆಯೇ ಮಳೆ ಸುರಿದ ನಂತರ ಹೊಸದಾಗಿ ಮೊಳಕೆ ಒಡೆಯುತ್ತದೆ.<br /> <br /> ತಮ್ಮ ಜಮೀನಿನಲ್ಲಿ ಕಾರ್ಚಿಕಾಯಿ ಬೆಳೆಯಲು ಬಯಸುವ ರೈತರು, ಬೇರೆ ಜಮೀನುಗಳಲ್ಲಿ ದೊರೆಯುವ ಈ ಗಡ್ಡೆಯನ್ನು ತಂದು ಎಸೆದರೂ ಸಾಕು ಅಲ್ಲೇ ಹುಟ್ಟಿಕೊಂಡು, ಎರಡರಿಂದ ಎರಡೂವರೆ ತಿಂಗಳಲ್ಲೇ ಕಾಯಿ ನೀಡುತ್ತದೆ.<br /> <br /> </p>.<p>ಗಡ್ಡೆಯನ್ನು ಹಸಿಯಾಗಿ ಇರಿಸುವ ಅಗತ್ಯವೂ ಇಲ್ಲ. ಒಣಗಿದ ಗಡ್ಡೆಯನ್ನೇ ಹೊಲದಲ್ಲಿ ಎಸೆದರೂ ಸಾಕು, ಮಳೆಗಾಲದಲ್ಲಿ ಮಣ್ಣಿನಲ್ಲಿನ ತೇವಾಂಶದ ಸಹಾಯದೊಂದಿಗೆ ಮೊಳಕೆ ಒಡೆದು, ನಾಲ್ಕು ದಿನಗಳಲ್ಲೇ ಹಚ್ಚಹಸಿರಿನಿಂದ ಕಂಗೊಳಿಸುವ ಚಿಕ್ಕ ಎಲೆಗಳ ಬಳ್ಳಿ ಹಬ್ಬುತ್ತ ಸಾಗುತ್ತದೆ.</p>.<p>ಒಂದು ಗಡ್ಡೆಯಲ್ಲೇ ಏಳೆಂಟು ಟಿಸಿಲೊಡೆದು ಹೊರಬರುವ ಬಳ್ಳಿಯನ್ನು ಬಹುತೇಕ ರೈತರು, `ಬೆಳೆಗೆ ಅಡ್ಡಿಪಡಿಸುವ ಕಳೆ' ಎಂದೇ ಭಾವಿಸಿ ಬೇರು ಸಮೇತ ಕಿತ್ತು ಎಸೆದರೂ ಮತ್ತೆಮತ್ತೆ ಬೆಳೆಯುತ್ತದೆ.<br /> <strong>- ಸಿದ್ದು .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>